• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮೋದಿ ಹಾಕಿಕೊಂಡಿರುವ ಕ್ಯಾಶ್ ಲೆಸ್ ಭಾರತಕ್ಕೆ ಇನ್ನೊಂದು ಹೆಜ್ಜೆ!

TNN Correspondent Posted On July 29, 2017
0


0
Shares
  • Share On Facebook
  • Tweet It

ಭಾರತೀಯ ರಿಸರ್ವ್ ಬ್ಯಾಂಕ್ ಮುಂದಿನ ತಿಂಗಳ ಅಂತ್ಯದಿಂದ ಹೊಸ 200 ರೂಪಾಯಿ ನೋಟನ್ನು ಚಲಾವಣೆಗೆ ತರಲು ಸಂಪೂರ್ಣ ಸಿದ್ಧತೆ ನಡೆಸಿದೆ. ಈ ಮೂಲಕ ಬರುವ ದಿನಗಳಲ್ಲಿ ನೀವು 200 ರೂಪಾಯಿ ನೋಟನ್ನು ನಿಮ್ಮ ವ್ಯವಹಾರದಲ್ಲಿ ಬಳಸಬಹುದು. ಅಷ್ಟಕ್ಕೂ 200 ರೂಪಾಯಿ ನೋಟ್ ಜಾರಿಗೆ ತರುವ ಉದ್ದೇಶ ಏನು? ಸಿಂಪಲ್, ಬ್ಯಾಂಕುಗಳಲ್ಲಿ ಕೊರತೆ ಇರುವ ನೋಟುಗಳನ್ನು ಪೂರೈಸುವ ಅನಿವಾರ್ಯ ಒತ್ತಡ ಆರ್. ಬಿ.ಐ ಮೇಲಿದೆ. ಇದರೊಂದಿಗೆ ಆರ್. ಬಿ.ಐ 2000 ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣವನ್ನು ಈ ವರ್ಷದ ಆದಿಯಲ್ಲಿಯೇ ನಿಲ್ಲಿಸಿದೆ.

2000 ನೋಟು ಮುದ್ರಣ ನಿಲ್ಲಿಸಿ 200 ರೂಪಾಯಿ ಪ್ರಿಂಟ್ ಮಾಡುವ ಉದ್ದೇಶ ಏನು? ಭ್ರಷ್ಟ್ರಾಚಾರಕ್ಕೆ ಅಂಕಿತ ಹಾಕುವುದು. ಅದು ಹೇಗೆ? ಭವಿಷ್ಯದ ಭಾರತದಲ್ಲಿ ಹೆಚ್ಚೆಚ್ಚು ಆರ್ಥಿಕ ಸಂವಹನಗಳು ಕ್ರೆಡಿಟ್ ಕಾರ್ಡ್ ಮೂಲಕವೇ ಆಗಬೇಕು ಎನ್ನುವುದು ಕೇಂದ್ರ ಸರಕಾರದ ತೀರ್ಮಾನ. ಅದಕ್ಕಾಗಿ ದೊಡ್ಡ ದೊಡ್ಡ ಮುಖಬೆಲೆಯ ನೋಟುಗಳನ್ನು ಮುಖ್ಯ ವಾಹಿನಿಯಿಂದ ನಿಧಾನವಾಗಿ ಹಿಂದಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಶುರು ಮಾಡುವುದು ಕೇಂದ್ರ ಸರಕಾರದ ಚಿಂತನೆ. ಆದರೆ ಏಕಾಏಕಿ ನಾಳೆಯಿಂದ 2000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂದಕ್ಕೆ ಪಡೆದು 200 ರೂಪಾಯಿ ಅಥವಾ 100 ರೂಪಾಯಿ ಮುಖಬೆಲೆಯ ನೋಟುಗಳನ್ನು ತೆಗೆದುಕೊಳ್ಳಿ ಎಂದು ಘೋಷಿಸಿದರೆ ಮತ್ತೊಮ್ಮೆ ಜನರಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಬಹುದು ಮತ್ತು ಇದನ್ನೇ ಪ್ರತಿಪಕ್ಷಗಳು ಕೇಂದ್ರದ ವಿರುದ್ಧ ರಣಾಸ್ತ್ರವನ್ನಾಗಿ ಬಳಸಬಹುದು ಎಂದು ಕೇಂದ್ರದ ಬಿಜೆಪಿ ನಾಯಕರಿಗೆ ಗೊತ್ತಿದೆ. ಅದಕ್ಕೆ ಅವರು ಈ ಬಾರಿ ಹೆಜ್ಜೆ ಹೆಜ್ಜೆಯಾಗಿ 2000 ಮತ್ತು 500 ರೂಪಾಯಿ ನೋಟುಗಳನ್ನು ಹಿಂದಕ್ಕೆ ಪಡೆದುಕೊಳ್ಳುತ್ತಾರೆ. ಅದಕ್ಕೆ 200 ರೂಪಾಯಿ ನೋಟು ಪ್ರಾರಂಭಿಕ ಹೆಜ್ಜೆ. ಒಂದೆರಡು ವರ್ಷದ ನಂತರ 200 ರೂಪಾಯಿ ನೋಟುಗಳು ಕೂಡ ಹಿಂದಕ್ಕೆ ಸರಿದು ಕೊನೆಗೆ ಕೇವಲ ನೂರು ರೂಪಾಯಿ ಮಾತ್ರ ಉಳಿಯಲಿದೆ. ಅದು ಕೂಡ ಒಂದೆರಡು ವರ್ಷ ಅಷ್ಟೇ. ಅಂತಿಮವಾಗಿ 50 ರೂಪಾಯಿ ನೋಟನ್ನು ಮಾತ್ರ ಉಳಿಸಿಕೊಂಡು ಉಳಿದ ಎಲ್ಲ ವ್ಯವಹಾರಗಳು ಕ್ಯಾಶ್ ಲೆಸ್ ಆಗಿ ನಡೆಯಬೇಕು ಎಂದು ಆರ್ಥಿಕ ಪಂಡಿತರು ಹೇಳಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಅನುಷ್ಟಾನಕ್ಕೆ ತರಲು ಸಿದ್ಧತೆ ನಡೆಸಿದ್ದಾರೆ.

ಈಗಾಗಲೇ 15 ಲಕ್ಷ ಕೋಟಿ ರುಪಾಯಿಗಳನ್ನು ಹಿಂದಕ್ಕೆ ಪಡೆದುಕೊಂಡು ನಂತರ ಈಗ 14.5 ಲಕ್ಷ ಕೋಟಿ ರೂಪಾಯಿಗಳನ್ನು ಮತ್ತೆ ಮುಖ್ಯ ವಾಹಿನಿಯಲ್ಲಿ ಸೇರುವಂತೆ ನೋಡಿಕೊಂಡಿರುವ ಆರ್. ಬಿ.ಐ ಗೆ ಈ ಹೊಸ ಐನೂರು ಮತ್ತು 2000 ರೂಪಾಯಿ ನೋಟನ್ನು ಕೂಡ ಕಳ್ಳನೋಟನ್ನಾಗಿ ಮಾಡಲು ಕೆಲವರು ಸಂಚು ಹೂಡಿದ್ದು ಗಮನಕ್ಕೆ ಬಂದಿದೆ. ಅದರಿಂದ ತಪ್ಪಿಸಿಕೊಳ್ಳಲು ಈ ಬಾರಿ 200 ರೂಪಾಯಿ ನೋಟಿಗೆ ಹೆಚ್ಚುವರಿ ಜಾಗ್ರತೆ ತೆಗೆದುಕೊಂಡು ಪ್ರಿಂಟ್ ಮಾಡುವ ಪ್ರಕ್ರಿಯೆಗಳು ನಡೆದಿವೆ. ಭ್ರಷ್ಟಾಚಾರವನ್ನು ನಿಲ್ಲಿಸಲು ಕಡಿಮೆ ಡಿನೋಮಿನೇಶನ್ ನೋಟುಗಳು ಜಾರಿಗೆ ಬರುವುದು ಅಗತ್ಯ ಯಾಕೆ? ಚುನಾವಣೆಯ ಸಂದರ್ಭದಲ್ಲಿ ದೊಡ್ಡ ಮುಖಬೆಲೆಯ ನೋಟುಗಳಿದ್ರೆ ಹಂಚುವುದು ಸುಲಭ. ಅದೇ ಕಡಿಮೆ ಮೌಲ್ಯದ ನೋಟಿದ್ದರೆ ಸಿಕ್ಕಿಬೀಳುವುದು ಸುಲಭ. ಹಾಗೆ ಅಧಿಕಾರಿಗಳಿಗೆ ಲಂಚ ಕೊಡುವಾಗಲು ಎಲ್ಲಾ ಕಡೆ ಕಡಿಮೆ ಮುಖಬೆಲೆಯ ನೋಟುಗಳು ಇದ್ದರೆ ಅದರಿಂದ ಲಂಚಾವತಾರಕ್ಕೆ ಅಂಕುಶ ಬೀಳಲಿದೆ. ಮೋದಿ ಹಾಕಿಕೊಂಡಿರುವ ಮುಂದಿನ ಏಳೆಂಟು ವರ್ಷದ ಯೋಜನೆಯಲ್ಲಿ ಕಪ್ಪು ಹಣವುಳ್ಳವರು ಕಂಬಳಿ ಹೊದ್ದು ಮಲಗುವುದು ಲೇಸು.

0
Shares
  • Share On Facebook
  • Tweet It




Trending Now
ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
Tulunadu News January 3, 2026
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
Tulunadu News January 3, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
  • Popular Posts

    • 1
      ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • 2
      ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
    • 3
      ಐದು ದಿನಗಳಲ್ಲಿ ಏಳುನೂರಕ್ಕೂ ಹೆಚ್ಚು ಕಿ.ಮೀ. ಸೈಕಲ್ ತುಳಿದ 70 ರ ಹರೆಯದ ಶಾಸಕ!
    • 4
      ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ

  • Privacy Policy
  • Contact
© Tulunadu Infomedia.

Press enter/return to begin your search