• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಯಾರನ್ನು ಎಷ್ಟು ಹತ್ತಿರ ಬಿಟ್ಟುಕೊಳ್ಳುತ್ತಾರೆ ಎನ್ನುವ ಮೇಲೆ ಬಿಎಸ್ ವೈ ಅಧಿಕಾರ ಉಳಿಯಲಿದೆ!!

Hanumantha Kamath Posted On July 26, 2019
0


0
Shares
  • Share On Facebook
  • Tweet It

ಬಿ.ಎಸ್.ಯೂಡಿಯೂರಪ್ಪ ಮತ್ತೊಮ್ಮೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಗೊಂಡಿದ್ದಾರೆ. ಬಹುಶ: ಇದು ಅವರ ಪಾಲಿನ ನಿರ್ಣಾಯಕ ಹೋರಾಟ. ಇದು ಅವರ ಪಾಲಿನ ಕೊನೆಯ ಅವಕಾಶವೂ ಆಗಲಿದೆ. ಕೈಗೆ ಬಂದ ಅಧಿಕಾರವನ್ನು ಬಿಎಸ್ ವೈ ಎಷ್ಟು ದಿನ ತಮ್ಮ ಕೈಯಲ್ಲಿ ಉಳಿಸಿಕೊಳ್ಳಲಿದ್ದಾರೆ ಎನ್ನುವುದು ಅವರ ಮೇಲೆ ಬಿಟ್ಟಿದ್ದು. ಸರಿಯಾಗಿ ನೋಡಿದರೆ ಯಡಿಯೂರಪ್ಪ ನಿಜಕ್ಕೂ ಜನಪರ ಕಾಳಜಿ ಉಳ್ಳ ಆಡಳಿತಾಧಿಕಾರಿ. ಅವರು ಹಿಂದಿನ ಬಾರಿ ಬಿಜೆಪಿಯ ಐದು ವರ್ಷಗಳ ಆಡಳಿತಾವಧಿಯಲ್ಲಿ ಮೂರು ವರ್ಷ ನಾಲ್ಕು ತಿಂಗಳು ಮುಖ್ಯಮಂತ್ರಿಯಾಗಿದ್ದರಲ್ಲ, ಆಗ ನಿಜಕ್ಕೂ ಉತ್ತಮ ಜನವಿಶ್ವಾಸ ಗಳಿಸಿಕೊಂಡಿದ್ದರು. ಮಣ್ಣಿನ ಮಗ, ಅಹಿಂದ ನಾಯಕ ಎಂದು ಯಾರ್ಯಾರೋ ಏನೇನೋ ಬಿರುದು ಬಾವಲಿಗಳನ್ನು ಇಟ್ಟುಕೊಂಡಿದ್ದರೂ ನಿಜವಾದ ಅರ್ಥದಲ್ಲಿ ರೈತರಿಗೆ ಮತ್ತು ಹಿಂದುಳಿದ ವರ್ಗದವರಿಗೆ ಆಸರೆಯಾದವರು ಯಡಿಯೂರಪ್ಪ.

ನಿಮಗೆ ನೆನಪಿರಬಹುದು, ಸಂಧ್ಯಾ ಸುರಕ್ಷ ಯೋಜನಾ. ಯಾರಿಗೆ ಗಂಡು ಮಕ್ಕಳಿಲ್ಲ, ಕೇವಲ ಹೆಣ್ಣುಮಕ್ಕಳು ಮಾತ್ರ ಇದ್ದಾರೋ ಅವರಿಗೆ ಇಳಿಗಾಲದಲ್ಲಿ ಅವಶ್ಯಕತೆ ಬರುತ್ತೆ ಎನ್ನುವ ಕಾರಣಕ್ಕೆ ಅಂತಹ ಕುಟುಂಬಕ್ಕೆ ಒಂದು ಸಾವಿರ ರೂಪಾಯಿ ಸರಕಾರದಿಂದ ಕೊಡುವ ಯೋಜನೆ ಯಡಿಯೂರಪ್ಪರದ್ದು. ಅದರ ನಂತರ ವೃದ್ಧಾಪ್ಯ ಯೋಜನೆಯಲ್ಲಿ 60 ವರ್ಷದ ಹಿರಿಯ ನಾಗರಿಕರಿಗೆ 400 ರೂಪಾಯಿ ಇದ್ದದ್ದು ಒಂದು ಸಾವಿರ ರೂಪಾಯಿ ಮಾಡಿದ್ದು ಇದೇ ಯಡಿಯೂರಪ್ಪ. ಹೀಗೆ ಬಿಎಸ್ ವೈ ಹಲವು ಯೋಜನೆಗಳನ್ನು ಜಾರಿಗೆ ತರುವ ಹುಮ್ಮಸ್ಸಿನಲ್ಲಿದ್ದರು. ಒಂದು ಕಡೆ ಕೂತು ಕೆಲಸ ಮಾಡಿದರೆ ಯಡಿಯೂರಪ್ಪ ರಾಷ್ಟ್ರದಲ್ಲಿ ಪ್ರಭಾವಿ ನಾಯಕರಾಗಬಹುದಿತ್ತು. ಅವರಿಗೆ ಆ ಸಾಮರ್ತ್ಯ ಮತ್ತು ಛಲ ಎರಡೂ ಇತ್ತು.

ಆದರೆ ಅಷ್ಟಾಗುವಾಗ ಯಡಿಯೂರಪ್ಪನವರ ವರ್ಚಸ್ಸು ಬಳಸಿಕೊಂಡ ಅವರ ಹಿಂದು ಮುಂದು ಸುತ್ತು ಇರುವವರು ಬಿಎಸ್ ವೈ ದಾರಿ ತಪ್ಪಿಸಿಬಿಟ್ಟರು. ರಾಜಮಾರ್ಗದಲ್ಲಿ ಹೋಗುತ್ತಿದ್ದ ಬಿಎಸ್ ವೈಯವರನ್ನು ಅಡ್ಡದಾರಿಯಲ್ಲಿ ಕರೆದುಕೊಂಡು ಹೋಗಿಬಿಟ್ಟರು. ಕುಟುಂಬ ಪ್ರೀತಿ, ತನ್ನೊಂದಿಗೆ ಕಷ್ಟಪಟ್ಟು ಪಕ್ಷ ಕಟ್ಟಿದವರು ಎನ್ನುವುದಕ್ಕೂ, ಅನೇಕ ಕಾರಣಗಳಿಂದ ಯಡಿಯೂರಪ್ಪನವರು ತಮ್ಮವರು ಮಾಡಿದ್ದ ಎಲ್ಲದಕ್ಕೂ ಸುಮ್ಮನೆ ಕುಳಿತುಬಿಟ್ಟರು. ಅದು ಅವರನ್ನು ಎಲ್ಲಿಗೆ ಕರೆದುಕೊಂಡು ಹೋಗಿತ್ತು ಎಂದರೆ ಯಡಿಯೂರಪ್ಪನವರು ತಮಗೆ ಗೊತ್ತೇ ಆಗದೇ ಜೈಲಿನ ತಳಬಾಗಿನ ತನಕ ಹೋಗಿ ಬರಬೇಕಾಯಿತು. ಅಕ್ಷರಶ: ಜನರ ಮಧ್ಯದಲ್ಲಿ ಇದ್ದ ನಾಯಕನೊಬ್ಬನನ್ನು ಅವರ ಹೊಗಳುಭಟ್ಟರು ತಾವು ತಿಂದು ಬಿಎಸ್ ವೈ ಸಫಾರಿಗೆ ಒರೆಸಿಬಿಟ್ಟಿದ್ದರು. ಯಡ್ಯೂರಪ್ಪ ಎಚ್ಚರಗೊಳ್ಳುವ ಹೊತ್ತಿಗೆ ರಾಜ್ಯ ಬಿಜೆಪಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿ ಜಗದೀಶ್ ಶೆಟ್ಟರ್ ಅವರಿಗೆ ಪಟ್ಟ ಕಟ್ಟಿಬಿಟ್ಟಿತ್ತು. ಆಗಿನ್ನೂ ಅಮಿತ್ ಶಾ-ಮೋದಿ ಮುಷ್ಟಿಗೆ ರಾಷ್ಟ್ರೀಯ ಬಿಜೆಪಿ ಬಂದಿರಲಿಲ್ಲ. ಬಿಜೆಪಿ ಹೈಕಮಾಂಡ್ ಇವತ್ತಿನಷ್ಟು ಬಲಶಾಲಿಯಾಗಲಿಲ್ಲ. ಕಾಂಗ್ರೆಸ್ ಹೈಕಮಾಂಡ್ ಎಷ್ಟು ಸ್ಟ್ರಾಂಗ್ ಇತ್ತು ಎಂದರೆ ಸೋನಿಯಾ ಗಾಂಧಿ ಬೆರಳು ತೋರಿಸಿದ ಕಡೆ ಕಾಂಗ್ರೆಸ್ ನಾಯಕರು ಕುಳಿತುಕೊಳ್ಳುವ ಸ್ಥಿತಿಯಲ್ಲಿದ್ದರು.

ಅದೆಲ್ಲ ಆಗಿ ಈಗ ಕಾಲ ಬದಲಾಗಿದೆ. ಕಾವೇರಿಯಿಂದ ನೇತ್ರಾವತಿಯ ತನಕ ಸಾಕಷ್ಟು ನೀರು ಹರಿದುಹೋಗಿದೆ. ಮೇಲೆ ಅಮಿತಾ ಶಾ ಇದ್ದಾರೆ. ಒಮ್ಮೆ ಕೆಮ್ಮಬಹುದಾ ಎಂದು ಅವರನ್ನು ಕೇಳಿಯೇ ಇಲ್ಲಿ ಮುಖ್ಯಮಂತ್ರಿ ಕೆಮ್ಮುವ ಸ್ಥಿತಿಯಿದೆ. ಕುಟುಂಬದ ಸದಸ್ಯರು ಮುಖ್ಯಮಂತ್ರಿ ಕಚೇರಿಯಲ್ಲಿ ಆಗಾಗ ಕಾಣಿಸಿಕೊಂಡರೂ ಅದು ಸಿಎಂಗೆ ಡೆಂಜರ್ ಸಿಗ್ನಲ್. ಭ್ರಷ್ಟಾಚಾರದ ವಾಸನೆ ಬೆಂಗಳೂರಿನ ಗಲ್ಲಿಯಿಂದ ಬಂದರೂ ಸಾಕು, ಅದು ಮುಖ್ಯಮಂತ್ರಿಯ ಪಾಲಿಗೆ ಕಂಟಕವೇ ಆಗಲಿದೆ. ಆದ್ದರಿಂದ ಬಿಎಸ್ ವೈ ಇನ್ನು ಹಿಂದಿಗಿಂತ ಹೆಚ್ಚು ಎಚ್ಚರಿಕೆಯಿಂದ ಈ ಬಾರಿ ಇರಬೇಕಾಗುತ್ತದೆ. ಅವರ ಹೊಗಳುಭಟ್ಟರು, ಕುಟುಂಬ ಸದಸ್ಯರು, ಆಪ್ತರು, ಆಪ್ತೆಯರು ಎಷ್ಟು ದಿನ ಯಡ್ಯೂರಪ್ಪನವರಿಂದ ದೂರ ಇದ್ದು, ಬಿಎಸ್ ವೈಯನ್ನು ಅವರ ಪಾಲಿಗೆ ಆಡಳಿತ ಮಾಡಿಕೊಡಲು ಬಿಟ್ಟಷ್ಟು ರಾಜ್ಯ ಬಿಜೆಪಿಗೂ ಒಳ್ಳೆಯದು. ಇಲ್ಲದೇ ಹೋದರೆ ಯಡಿಯೂರಪ್ಪನವರಿಗೂ ಇದು ಕೊನೆಯ ಮುಖ್ಯಮಂತ್ರಿ ಅವಕಾಶ ಮತ್ತು ಬಿಜೆಪಿಗೂ ಕೊನೆಯ ಅಧಿಕಾರದ ಅವಕಾಶ ಆಗಲಿದೆ. ಒಟ್ಟಿನಲ್ಲಿ ಎಲ್ಲವೂ ಯಡಿಯೂರಪ್ಪನವರು ಯಾರನ್ನು ಎಷ್ಟು ಹತ್ತಿರ ಬಿಟ್ಟುಕೊಡುತ್ತಾರೆ ಎನ್ನುವ ಮೇಲೆ ಅವಲಂಬಿತವಾಗಿದೆ. ಹಿಂದಿನ ತಪ್ಪು ಬಿಎಸ್ ವೈ ಮಾಡಲಿಕ್ಕಿಲ್ಲ, ಯಾಕೆಂದರೆ ಅವರು ನುರಿತ ರಾಜಕಾರಣಿ!

0
Shares
  • Share On Facebook
  • Tweet It




Trending Now
20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
Hanumantha Kamath July 5, 2025
20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
Hanumantha Kamath July 5, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
    • ಭಾರತದ ಇತಿಹಾಸದಲ್ಲಿ 2025ರ ಹಜ್ ಯಾತ್ರಾ ಆಯೋಜನೆ ಅತ್ಯಂತ ಯಶಸ್ವಿ - ಕೇಂದ್ರ ಸಚಿವ ಕಿರಣ್ ರಿಜ್ಜು
    • ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಮಹಿಳೆಗೆ ಪಟ್ಟ?
    • ರೇಪ್ ಕೇಸಿನಲ್ಲಿ ಕಾಂಪ್ರಮೈಸ್ ಆದರೆ ಸಂತ್ರಸ್ತೆಯ ವಿರುದ್ಧವೇ ದೂರು ದಾಖಲು - ಬಾಂಬೆ ಹೈಕೋರ್ಟ್ ಪೀಠ!
    • ದೆಹಲಿಯಲ್ಲಿ 10 ವರ್ಷ ದಾಟಿದ ಕಾರುಗಳು ಕಡಿಮೆ ದರದಲ್ಲಿ ಸಿಗಲಿವೆ! ಯಾಕ್ ಗೊತ್ತಾ?
    • ಟಾಯ್ಲೆಟಲ್ಲಿ ಮಹಿಳಾ ಉದ್ಯೋಗಿಗಳ ವಿಡಿಯೋ ರೆಕಾರ್ಡ್... ಇನ್ಫೋಸಿಸ್ ಉದ್ಯೋಗಿ ಬಂಧನ!
    • ದಕ್ಷಿಣ ಕನ್ನಡ ಜಿಲ್ಲೆಯನ್ನು ಮಂಗಳೂರು ಜಿಲ್ಲೆ ಎಂದು ನಾಮಕರಣ ಮಾಡಬೇಕಾ?
  • Popular Posts

    • 1
      20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 2
      20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • 3
      ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • 4
      ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
    • 5
      ಭಾರತದ ಇತಿಹಾಸದಲ್ಲಿ 2025ರ ಹಜ್ ಯಾತ್ರಾ ಆಯೋಜನೆ ಅತ್ಯಂತ ಯಶಸ್ವಿ - ಕೇಂದ್ರ ಸಚಿವ ಕಿರಣ್ ರಿಜ್ಜು

  • Privacy Policy
  • Contact
© Tulunadu Infomedia.

Press enter/return to begin your search