• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪೂಜಾರಿ ಅನುಭವದ ಕಣದಷ್ಟು ಇಲ್ಲದವರು ಕಾಂಗ್ರೆಸ್ಸನ್ನು ಮಂಗಳೂರಿನ ಪಾಲಿಕೆಯಲ್ಲಿ ಮುಳುಗಿಸಿಬಿಟ್ಟರು!!

Hanumantha Kamath Posted On November 22, 2019


  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯ ಬಳಿಕ ಕಾಂಗ್ರೆಸ್ಸಿಗರು ಕಣ್ಣೀರು ಹಾಕಬೇಕಾಗುತ್ತದೆ ಎಂದು ಚುನಾವಣೆಗೆ ನಾಲ್ಕೈದು ದಿನಗಳು ಇರುವಾಗ ಕಾಂಗ್ರೆಸ್ಸಿನ ಒಂದು ಕಾಲದ ಜಿಲ್ಲಾ ಹೈಕಮಾಂಡ್ ಜನಾರ್ದನ ಪೂಜಾರಿ ಪೂಜಾರಿ ಹೇಳಿದ್ದರು. ಕಾಂಗ್ರೆಸ್ಸಿಗರು ಕಣ್ಣೀರು ಹಾಕಿದ್ರಾ, ಬಿಟ್ಟರಾ ನಾನು ನೋಡಿಲ್ಲ. ಆದರೆ ಫಲಿತಾಂಶ ನಿಮ್ಮ ಮುಂದೆ ಇರುವುದರಿಂದ ಸೋತವರು ಕೆಲವರು ಹಾಕಿರಬಹುದು. ಹಿಂದಿನಿಂದ ಚೂರಿ ಹಾಕಿದವರು ಖುಷಿ ಪಟ್ಟಿರಬಹುದು. ಏನೂ ಸಂಬಂಧ ಇಲ್ಲದ ಕಾಂಗ್ರೆಸ್ಸಿಗರು ಹೋಗ್ಲಿ ಒಳ್ಳೆಯದಾಯಿತು ಎಂದು ಕೂಡ ಹೇಳಿರಬಹುದು. ಆದರೆ ಕಾಂಗ್ರೆಸ್ಸನ್ನೇ ಉಸಿರಾಡುವ, ಕಾಂಗ್ರೆಸ್ಸನ್ನೇ ಉಂಡು ಮಲಗುವ, ಇಂದಿರಾಗಾಂಧಿಯ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದ, ಮನಮೋಹನ್ ಸಿಂಗ್ ಜೊತೆ ಸಂಜೆಯ ಚಾ ಒಟ್ಟಿಗೆ ಕುಡಿಯುತ್ತಿದ್ದ, ರಾಜೀವ್ ಗಾಂಧಿಯನ್ನು ದೆಹಲಿಯಿಂದ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಕರೆಸುವ ಸಾಮರ್ತ್ಯ ಹೊಂದಿದ್ದ ಒಬ್ಬ ವ್ಯಕ್ತಿಯನ್ನು ಕಾಂಗ್ರೆಸ್ಸಿಗರು ಪಾಲಿಕೆ ಚುನಾವಣೆಯಲ್ಲಿ ನಡೆಸಿಕೊಂಡ ರೀತಿಯಿಂದ ಹಿರಿಯ ಕಾಂಗ್ರೆಸ್ ನಾಯಕರು ಬಿಡಿ, ಪೂಜಾರಿ ಅಭಿಮಾನಿಗಳಿಗೆ ಸಾಕಷ್ಟು ಬೇಸರ ತಂದದ್ದು ನಿಜ.

ಜನಾರ್ದನ ಪೂಜಾರಿಯವರ ಒಟ್ಟು ಅನುಭವದ ನೂರನೇ ಒಂದು ಕಣದಷ್ಟು ಅನುಭವವೂ ಇಲ್ಲದ ಎಳಸುಗಳು ಪಾಲಿಕೆ ಚುನಾವಣೆಯನ್ನು ನಡೆಸಿಕೊಂಡು ಹೋದದ್ದೇ ಸೋಲಿಗೆ ಇರುವ ಮುಖ್ಯ ಕಾರಣಗಳಲ್ಲಿ ಒಂದು. ಈ ಚುನಾವಣೆಯ ಮೊದಲು ಕಾಂಗ್ರೆಸ್ಸನ್ನು ಯಾವ ಮತದಾರ ಕೂಡ ನಂಬುವ ಸ್ಥಿತಿಯಲ್ಲಿರಲಿಲ್ಲ. ಇದೇ ಪರಿಸ್ಥಿತಿ ಇವರಿಗೆ 2013 ರಲ್ಲಿ ಕೂಡ ಇತ್ತು. ಆವಾಗಲೂ ಕೂಡ ಜನ ಕಾಂಗ್ರೆಸ್ಸನ್ನು ತಿರಸ್ಕರಿಸಲು ತಯಾರಾಗಿದ್ದರು. ಆದರೆ ಆಗ ಕಾಂಗ್ರೆಸ್ಸಿನಲ್ಲಿದ್ದ ಒಂದು ಟೀಮು ತಮ್ಮ ಭತ್ತಳಿಕೆಯಲ್ಲಿದ್ದ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲು ತೀರ್ಮಾನಿಸಿಬಿಟ್ಟಿದ್ದರು. ಆ ಬ್ರಹ್ಮಾಸ್ತ್ರ ಬೇರೆ ಯಾರೂ ಅಲ್ಲ, ಜನಾರ್ದನ ಪೂಜಾರಿ. ಪೂಜಾರಿಯವರ ಮನೆಗೆ ಹೋಗಿ ಅವರ ಕೈ ಕಾಲು ಹಿಡಿದು ನೀವೆ ನಮ್ಮ ದೇವರು, ದಯವಿಟ್ಟು ಕಾಪಾಡಬೇಕು ಎಂದು ಗೋಗರೆದರು. ಪೂಜಾರಿಯವರ ಕೈಯಲ್ಲಿ ಪಕ್ಷದ ಜುಟ್ಟು ನೀಡಿದರು. ಅದರ ನಂತರವೇ ಕಾಂಗ್ರೆಸ್ಸಿಗೆ ನಿಜವಾದ ಜೀವ ಬಂದಿತ್ತು. ಪೂಜಾರಿಯವರ ಬಾಯಿಂದ ಏನೆಲ್ಲಾ ಭರವಸೆ ಕೊಡಿಸಲಾಯಿತು. ನನ್ನನ್ನು ನಂಬಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ ಎನ್ನುವ ಮಟ್ಟಿಗೆ ಪೂಜಾರಿ ಆಖಾಡಕ್ಕೆ ಇಳಿದುಬಿಟ್ಟಿದ್ದರು. ಅವರ ಅಕ್ಕಪಕ್ಕದಲ್ಲಿ ಆವತ್ತೂ ಜಿಲ್ಲೆಯ ಒಂದಿಷ್ಟು ಪ್ರಬುದ್ಧ ರಾಜಕಾರಣಿಗಳು ಇದ್ದರು. ಪಕ್ಷದ ಬಗ್ಗೆ ಪ್ರೀತಿ ಇದ್ದವರಿದ್ದರು. ಪಕ್ಷ ತಮಗೆ ಕೊಟ್ಟ ಸ್ಥಾನಮಾನದ ಋಣ ಇದ್ದವರು ಇದ್ದರು. ಪೂಜಾರಿ ಕಾಂಗ್ರೆಸ್ಸಿನ ಅಷ್ಟು ಹುಳುಕುಗಳ ಮೇಲೆ ತಮ್ಮ ಶಾಲನ್ನು ಹಾಕಿ ಕಾಂಗ್ರೆಸ್ಸನ್ನು ದಡ ಸೇರಿಸಿಬಿಟ್ಟರು. ಅದು ಪೂಜಾರಿ ಕ್ಯಾಪೆಸಿಟಿ.

ಆದರೆ ಈ ಬಾರಿ ಪಕ್ಷಕ್ಕೆ ಬಂದ ಆರು ತಿಂಗಳೊಳಗೆ ಟಿಕೆಟ್ ಸಿಕ್ಕಿ ಶಾಸಕರಾದವರು, ಹಣದ ಥೈಲಿ ಹಿಡಿದು ಪಕ್ಷದಲ್ಲಿ ಉನ್ನತ ಸ್ಥಾನಮಾನ ಪಡೆದು ನಂತರ ಶಾಸಕರಾದವರು ಕಾಂಗ್ರೆಸ್ಸಿನ ಪಾಲಿಕೆ ಚುನಾವಣೆಯ ಸಾರಥ್ಯ ವಹಿಸಿಕೊಂಡು ಬಿಟ್ಟಿದ್ದರು. ಅವರಿಗೆ ಪಕ್ಷ ಗೆಲ್ಲಬೇಕು ಎನ್ನುವುದಕ್ಕಿಂತ ಕೆಲವರಿಗೆ ಬುದ್ಧಿ ಕಲಿಸಬೇಕು ಎನ್ನುವ ಧೋರಣೆ ಇತ್ತು. ತಮಗೆ ಬೇಕಾದವರಿಗೆ ಟಿಕೆಟ್ ಕೊಟ್ಟರು, ಬೇಡದವರಿಗೆ ನಡುಬೀದಿಯಲ್ಲಿ ನಿಲ್ಲಿಸಿದರು. ಸಿಟಿ ಬಸ್ಸಿನಲ್ಲಿ ರಶ್ ಇದ್ದಾಗ ಕಂಡಕ್ಟರ್ ಟಿಕೆಟ್ ಕೊಡುವ ಶೈಲಿ ಇರುತ್ತಲ್ಲ, ಅದಕ್ಕಿಂತಲೂ ನಿಕೃಷ್ಟವಾಗಿ ಕಾಂಗ್ರೆಸ್ ಟಿಕೆಟ್ ಹಂಚಲಾಯಿತು. ಇವರಿಗೆ ಪೂಜಾರಿಯವರ ಸ್ಥಾನಮಾನ ಗೊತ್ತಿಲ್ಲದಿದ್ದರೆ ಬಿಡಿ, ಅವರ ವಯಸ್ಸಿಗಾದರೂ ಮರ್ಯಾದೆ ಕೊಟ್ಟು ಒಮ್ಮೆ ಕಾಲು ಹಿಡಿದು ಆರ್ಶೀವಾದ ಪಡೆದು ಬರೋಣ ಎಂದು ಅನಿಸಲೇ ಇಲ್ಲ. ಒಂದು ಕಡೆಯಲ್ಲಿ ಕ್ರೈಸ್ತ ಮತಗಳು ಕಾಂಗ್ರೆಸ್ಸಿಗೆ ಬೀಳದ ಹಾಗೆ ನೋಡಿಕೊಳ್ಳಲಾಯಿತು, ಮತ್ತೊಂದೆಡೆ ಪೂಜಾರಿಯವರು ತಾವು ಅಧಿಕಾರದಲ್ಲಿದ್ದಾಗ ಅನೇಕ ಮುಸ್ಲಿಂ ಹುಡುಗರನ್ನು ಬೆಳೆಸಿದ್ದರು, ಅಂತವರನ್ನು ಕೂಡ ಮೂಲೆಗುಂಪು ಮಾಡಲಾಯಿತು. ಹೀಗೆ ಬ್ಯಾನರ್, ಬಟ್ಟಿಂಗ್ ಕಟ್ಟುವುದು ಬಿಡಿ, ಮುಟ್ಟಿ ಕೂಡ ನೋಡಿ ಗೊತ್ತಿಲ್ಲದವರ ಕೈಯಲ್ಲಿ ಪಕ್ಷವನ್ನು ಕೊಟ್ಟ ಕಾರಣ ಕಾಂಗ್ರೆಸ್ ಈ ಬಾರಿ ಐತಿಹಾಸಿಕ ಸೋಲನ್ನು ಕಾಣಬೇಕಾಯಿತು. ಅಲ್ಲಿ ಮಂಗಳೂರು ನಗರ ಉತ್ತರದಲ್ಲಿ ಹಿರಿಯ ಕಾಂಗ್ರೆಸ್ಸಿಗ ವಿಜಯ ಕುಮಾರ್ ಶೆಟ್ಟಿಯವರು ಎರಡು ಬಾರಿ ಶಾಸಕರಾಗಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರನ್ನು ಕೂಡ ಕೇವಲವಾಗಿ ಕಂಡ ಮಾಜಿ ಶಾಸಕರುಗಳು ತಮಗಾಗದವರು ಗೆಲ್ಲಬಾರದು ಎಂದು ಚುನಾವಣೆಗೆ ಹೊರಟರೆ ವಿನ: ಈ ಬಾರಿ ಅಧಿಕಾರಕ್ಕೆ ಬರಬೇಕು ಎನ್ನುವ ಯಾವ ಹಪಾಹಪಿಯೂ ಇರಲಿಲ್ಲ. ಅದರೊಂದಿಗೆ ಇವರಿಗೆ ಬುದ್ಧಿ ಬರಲಿ ಎಂದು ಪೂಜಾರಿಯವರು ಮಾಡಿದ ಎರಡು ಸುದ್ದಿಗೋಷ್ಟಿಗಳು ದಡ ಸೇರಲು ಕೈ ಕಾಲು ಬಿಡುತ್ತಿದ್ದ ಕಾಂಗ್ರೆಸ್ಸಿನ ಸೋಲನ್ನು ಖಚಿತಪಡಿಸಿದವು. ಬಹುಶ: ಈ ತಪ್ಪನ್ನು ತಿದ್ದಿಕೊಳ್ಳುವ ಅವಕಾಶ ಸದ್ಯಕ್ಕಂತೂ ಜಿಲ್ಲಾ ಕಾಂಗ್ರೆಸ್ಸಿನ ಮುಂದೆ ಇಲ್ಲ. ಆದರೆ ಹಿರಿಯರನ್ನು ಕಡೆಗಣಿಸಿದರೆ ಏನಾಗುತ್ತೆ ಎನ್ನುವ ಪಾಠ ಮರಿ ಕಾಂಗ್ರೆಸ್ಸಿಗರು ಕಲಿತರೆ ಮುಂದೆ ಉಪಯೋಗ ಆಗಬಹುದು!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search