• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪಾಲಿಕೆಗೆ ತಗುಲಿದ ಗ್ರಹಣ ಬಿಡಲು ಶಾಸಕರಿಬ್ಬರು ಪಾಲಿಕೆಯಲ್ಲಿ ಹೋಮ ಮಾಡಿಸಬೇಕೆನೊ??

Hanumantha Kamath Posted On December 30, 2019


  • Share On Facebook
  • Tweet It

ಯಾಕೋ ಮಂಗಳೂರು ಮಹಾನಗರ ಪಾಲಿಕೆಗೆ ಗ್ರಹಣ ಹಿಡಿದು ಬಿಟ್ಟಿದೆ. ಕೆಲವು ರಾಶಿಯವರಿಗೆ ಮೊನ್ನೆ ಗ್ರಹಣದ ಎಫೆಕ್ಟ್ ಆಗಿರಬಹುದು. ಆದರೆ ನಮ್ಮ ಪಾಲಿಕೆಗೆ ಗ್ರಹಣ ಹಿಡಿದು ತುಂಬಾ ಸಮಯವಾಗಿದೆ. ಮೊದಲು 5 ವರ್ಷ ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರದ ಗ್ರಹಣ ಹಿಡಿದಿತ್ತು. ಅದರ ನಂತರ ವಾರ್ಡ್ ಮೀಸಲಾತಿಯಲ್ಲಿ ತಾರತಮ್ಯವಾಗಿದೆ ಎಂದು ಕೆಲವರು ನ್ಯಾಯಾಲಯದ ಮೊರೆ ಹೋದರು. ಹಾಗೆ 9 ತಿಂಗಳು ಗ್ರಹಣ ಮುಂದುವರೆಯಿತು. ನಂತರ ಚುನಾವಣೆ ನಡೆದು ರಿಸಲ್ಟ್ ಬಂದು ಇನ್ನೇನೂ ಗ್ರಹಣ ಬಿಡುತ್ತೆ ಎಂದ ಕೂಡಲೇ ರಾಜ್ಯ ಸರಕಾರದ ಅಳಿವು ಉಳಿವಿನ ಉಪಚುನಾವಣೆ ಬಂತು. ಅದು ಮುಗಿದು ಒಂದೂವರೆ ತಿಂಗಳು ಕಳೆದು ಮೇಯರ್ ಮೀಸಲಾತಿ ಹೊರಗೆ ಬಂದು ಮೇಯರ್ ಪಟ್ಟಾಭಿಷೇಕಕ್ಕೆ ರೆಡಿ ಎಂದು ನಾವೆಲ್ಲ ಯೋಚಿಸ್ತಾ ಇರಬೇಕಾದರೆ ಮತ್ತೆ ಸಮಸ್ಯೆ ಮುಂದುವರೆದಿದೆ. ಮೇಯರ್ ಮೀಸಲಾತಿಯಲ್ಲಿ ರಾಜ್ಯ ಸರಕಾರ ಘೋಷಿಸಿದ ಪಟ್ಟಿ ನಮಗೆ ಈ ವರ್ಷ ಅನ್ವಯವಾಗುವುದಿಲ್ಲ ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ಅಲ್ಲಿಗೆ ಸದ್ಯ ಗ್ರಹಣ ಮುಗಿಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ.

ಪಾಲಿಕೆಯ ಮೊದಲ ಅವಧಿಗೆ ಜನರಲ್ ಮೇಲ್ ಘೋಷಣೆ ಆಗಿದೆ ಎಂದುಕೊಂಡು ನಾವೆಲ್ಲ ನಿರೀಕ್ಷೆಯಂತೆ ಪಾಲಿಕೆಯ ಬಿಜೆಪಿ ಪಾಳಯದ ಅತ್ಯಂತ ಅನುಭವಿ ಪ್ರೇಮಾನಂದ ಶೆಟ್ಟಿಯವರು ಮೇಯರ್ ಆಗುತ್ತಾರೆ ಎಂದು ಅಂದುಕೊಂಡಿದ್ದೇವು. ಆದರೆ ಈಗ ಅದು ಎರಡನೇ ಅವಧಿಗೆ ಎಂದು ಗೊತ್ತಾಗಿದೆ. ಪ್ರೇಮಾನಂದ ಶೆಟ್ಟಿಯವರು ಮೇಯರ್ ಆದರೆ ಪಾಲಿಕೆ ವ್ಯಾಪ್ತಿಯ ಇಬ್ಬರು ಶಾಸಕರಿಗೆ ಒಂದಿಷ್ಟು ನಿರಾಳತೆ ಸಿಗುತ್ತಿತ್ತು. ಪ್ರೇಮಾನಂದ ಶೆಟ್ಟಿ ಮೇಯರ್ ಆಗಲು ಅರ್ಹ ಮತ್ತು ಅವರು ಮೇಯರ್ ಆಗುವುದಾದರೆ ಯಾವುದೇ ಸ್ಪರ್ಧೆ ಇರಲು ಚಾನ್ಸೆ ಇಲ್ಲ. ಯಾಕೆಂದರೆ ಪಾಲಿಕೆಯ ಒಳಹೊರ ಅವರಿಗೆ ಗೊತ್ತಿದ್ದಷ್ಟು ಹಾಲಿ ಬೇರೆ ಸದಸ್ಯರಿಗೆ ಗೊತ್ತಿರಲು ಸಾಧ್ಯವೇ ಇಲ್ಲ. ಆದರೆ ಈಗ ಆಗಿರುವ ಡೆವಲಪಮೆಂಟ್ ಪ್ರಕಾರ ಮೊದಲ ಅವಧಿ ಹಿಂದುಳಿದ ವರ್ಗ ಎ ಮೇಲ್ ಗೆ ಹೋಗಿರುವ ಸಾಧ್ಯತೆ ಸ್ಪಷ್ಟ. ಹಾಗಾದರೆ ಇರುವುದರಲ್ಲಿ ಒಳ್ಳೆಯ ದಾಳವನ್ನು ಉರುಳಿಸುವ ಅವಶ್ಯಕತೆ ಬಿಜೆಪಿಗೆ ಇದೆ.
ಹಾಗಾದರೆ ಆ ಅದೃಷ್ಟ ಯಾರಿಗೆ ಹೋಗಲಿದೆ. ಸದ್ಯ ಹಿರಿತನವನ್ನೇ ಆಧಾರವಾಗಿ ಇಟ್ಟುಕೊಂಡರೆ ಹಿಂದುಳಿದ ವರ್ಗ ಎ ಪುರುಷರಲ್ಲಿ ದಿವಾಕರ್ ಪಾಂಡೇಶ್ವರ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಮೂರು ಬಾರಿ ಗೆದ್ದಿದ್ದಾರೆ. ಯುವಕರ ಪಡೆ ಇದೆ. ಕಾರ್ಯಕರ್ತರನ್ನು ಒಂದೇ ಕರೆಗೆ ಒಗ್ಗೂಡಿಸುವ ತಾಕತ್ ಇದೆ. ಬಿಜೆಪಿಯಲ್ಲಿ ಪದಾಧಿಕಾರಿ ಸ್ಥಾನಮಾನ ಕೊಡಬೇಕಾದರೆ ಯಾವೆಲ್ಲ ಸಾಮರ್ಥ್ಯ ನೋಡಲಾಗುತ್ತದೆಯೋ ಅದೆಲ್ಲ ಇದೆ. ಸಂಘ ಪರಿವಾರದ ಹಿರಿಯರು ಮೇಯರ್ ಸ್ಥಾನದ ಜವಾಬ್ದಾರಿಯನ್ನು ಇಡೀ ವರ್ಷ 365*24 ಹೇಗೆ ನಿರ್ವಹಿಸಬೇಕಾಗುತ್ತದೆ ಎಂದು ಕಟ್ಟುನಿಟ್ಟಾಗಿ ಹೇಳಿಕೊಟ್ಟು ಅವಕಾಶ ಕೊಟ್ಟರೆ ದಿವಾಕರ್ ಕೂಡ ಉತ್ತಮ ಆಯ್ಕೆ. ಹೇಗೂ ಸಲಹೆ, ಮಾರ್ಗದರ್ಶನ ಬೇಕಾದರೆ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿಯಂತವರ ಬಳಿ ಅಥವಾ ಗಣೇಶ್ ಹೊಸಬೆಟ್ಟು, ರೂಪಾ ಡಿ ಬಂಗೇರಾ ಅವರ ಬಳಿ ಕೇಳಿ ತಿಳಿದುಕೊಂಡರೆ ದಿವಾಕರ್ ಉತ್ತಮ ಕೆಲಸ ಮಾಡಬಲ್ಲರು. ಎಲ್ಲಕ್ಕಿಂತ ಹೆಚ್ಚಾಗಿ ದಕ್ಷಿಣ ಮತ್ತು ಉತ್ತರದ ಶಾಸಕರ ನಿರ್ದೇಶನದಂತೆ ನಡೆದರೆ ದಿವಾಕರ್ ಈ ವರ್ಷ ಪಾಲಿಕೆಯನ್ನು ದಡಮುಟ್ಟಿಸಬಲ್ಲರು. ಹಾಗಂತ ಹಿಂದುಳಿದ ವರ್ಗ ಎ ಯಲ್ಲಿ ಅವರನ್ನು ಬಿಟ್ಟರೆ ಎರಡು ಬಾರಿ ಗೆದ್ದಿರುವ ಇನ್ನಿಬ್ಬರು, ಮೊದಲನೇ ಬಾರಿ ಗೆದ್ದಿರುವ ಕೆಲವು ಯುವ ಮುಖಗಳಿವೆ. ಪಕ್ಷ ಯಾರಿಗೆ ತಯಾರಾಗಲು ಸೂಚನೆ ಕೊಟ್ಟಿದೆ ಎಂದು ಗೊತ್ತಾಗಲು 2019 ಕಳೆಯಬೇಕು. ಅದರೊಂದಿಗೆ ಪಾಲಿಕೆಯ ಗ್ರಹಣ ಮುಂದುವರೆಯದಂತೆ ಇಬ್ಬರು ದಕ್ಷಿಣ ಮತ್ತು ಉತ್ತರದ ಶಾಸಕರು ಪಾಲಿಕೆಯಲ್ಲಿ ಒಂದು ಹೋಮ ಇಟ್ಟುಕೊಂಡರೆ ಒಳ್ಳೆಯದೇನೊ!!

  • Share On Facebook
  • Tweet It


- Advertisement -


Trending Now
ಬೆಂಗಳೂರಿನ ಹಲವೆಡೆ ಮಳೆಯಿಂದ ಮನೆಗಳಿಗೆ ನುಗ್ಗಿದ ನೀರು.. ಇದು ಹೊಸದಲ್ಲ - ಡಿಕೆಶಿ
Hanumantha Kamath May 19, 2025
ಭಯೋತ್ಪಾದಕತೆಯ ವಿರುದ್ಧ ವಿದೇಶಕ್ಕೆ ತೆರಳುವ ಭಾರತದ ನಿಯೋಗದಲ್ಲಿ ಓವೈಸಿ! ಹೇಳಿದ್ದೇನು?
Hanumantha Kamath May 19, 2025
Leave A Reply

  • Recent Posts

    • ಬೆಂಗಳೂರಿನ ಹಲವೆಡೆ ಮಳೆಯಿಂದ ಮನೆಗಳಿಗೆ ನುಗ್ಗಿದ ನೀರು.. ಇದು ಹೊಸದಲ್ಲ - ಡಿಕೆಶಿ
    • ಭಯೋತ್ಪಾದಕತೆಯ ವಿರುದ್ಧ ವಿದೇಶಕ್ಕೆ ತೆರಳುವ ಭಾರತದ ನಿಯೋಗದಲ್ಲಿ ಓವೈಸಿ! ಹೇಳಿದ್ದೇನು?
    • ಧರ್ಮಸ್ಥಳದ ಆಕಾಂಕ್ಷ ಆತ್ಮಹತ್ಯೆಯ ಬಗ್ಗೆ ಅನುಮಾನ ಎಂದ ಹೆತ್ತವರು!
    • RSS ಕಚೇರಿ ದಾಳಿಯ ಮಾಸ್ಟರ್ ಮೈಂಡ್ ಫಿನಿಶ್.. ಅಬು ಸೈಫುಲ್ಲಾ ಹತ್ಯೆ!
    • ನಂದಿನಿ ನದಿ ಮಾಲಿನ್ಯ ಮಾಡುವವರಿಗೆ ಕಾದಿದೆ ಶಿಕ್ಷೆ: ಉಳ್ಳಾಯ ದೈವ ಅಭಯ
    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
  • Popular Posts

    • 1
      ಬೆಂಗಳೂರಿನ ಹಲವೆಡೆ ಮಳೆಯಿಂದ ಮನೆಗಳಿಗೆ ನುಗ್ಗಿದ ನೀರು.. ಇದು ಹೊಸದಲ್ಲ - ಡಿಕೆಶಿ
    • 2
      ಭಯೋತ್ಪಾದಕತೆಯ ವಿರುದ್ಧ ವಿದೇಶಕ್ಕೆ ತೆರಳುವ ಭಾರತದ ನಿಯೋಗದಲ್ಲಿ ಓವೈಸಿ! ಹೇಳಿದ್ದೇನು?
    • 3
      ಧರ್ಮಸ್ಥಳದ ಆಕಾಂಕ್ಷ ಆತ್ಮಹತ್ಯೆಯ ಬಗ್ಗೆ ಅನುಮಾನ ಎಂದ ಹೆತ್ತವರು!
    • 4
      RSS ಕಚೇರಿ ದಾಳಿಯ ಮಾಸ್ಟರ್ ಮೈಂಡ್ ಫಿನಿಶ್.. ಅಬು ಸೈಫುಲ್ಲಾ ಹತ್ಯೆ!
    • 5
      ನಂದಿನಿ ನದಿ ಮಾಲಿನ್ಯ ಮಾಡುವವರಿಗೆ ಕಾದಿದೆ ಶಿಕ್ಷೆ: ಉಳ್ಳಾಯ ದೈವ ಅಭಯ


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search