ಕಾಯ್ದೆಯ ಪರ ಮಾತನಾಡುವವರನ್ನು ಸ್ಕೆಚ್ ಹಾಕಿ ಕೊಲ್ಲಲು ನಾವಿದ್ದೇವೆ!!
Posted On January 17, 2020

- Advertisement -
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ದಮನಿಸಲು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರನ್ನು, ಬಿಜೆಪಿ ನಾಯಕರನ್ನು ಹತ್ಯೆ ಮಾಡಿದರೆ ಸಮಸ್ಯೆ ಪರಿಹಾರವಾಗುತ್ತಾ ಎನ್ನುವುದು ಪ್ರಶ್ನೆ. ಅಷ್ಟಕ್ಕೂ ಭಾರತೀಯ ಮುಸಲ್ಮಾನರಿಗೆ ಸಿಎಎ, ಎನ್ ಆರ್ ಸಿಯಿಂದ ಯಾವ ತೊಂದರೆಯೂ ಇಲ್ಲ ಎಂದು ಈ ಬಗ್ಗೆ ನಿಜವಾಗಿ ಗೊತ್ತಿರುವವರು ಸಾವಿರ ಸಲ ಹೇಳಿದರೂ ದೇಶವನ್ನು ಒಡೆಯಲೇಬೇಕು ಎಂದು ನಿಶ್ಚಯಿಸಿದವರು ಅದನ್ನು ಕೇಳುತ್ತಿಲ್ಲ. ಅದಕ್ಕೆ ಸರಿಯಾಗಿ ಕಾಂಗ್ರೆಸ್ ಮುಖಂಡರಲ್ಲಿ ಜಮೀರ್, ಸಿದ್ದು ಅಂತವರು ನಮ್ಮ ತಂದೆ ಯಾರೆಂದು ಹೇಳುವುದಿಲ್ಲ, ನನ್ನ ತಾಯಿಗೆ ನಾಲ್ಕು ಜನ ತಲಾಕ್ ಕೊಟ್ಟಿದ್ದಾರೆ, ತಂದೆ ಯಾರು ಎಂದು ಹೇಳಲಿ ಎಂದು ಬೊಬ್ಬೆ ಹೊಡೆದು ಅನಗತ್ಯವಾಗಿ ಮುಸ್ಲಿಮರಲ್ಲಿ ಹೆದರಿಕೆ ಹುಟ್ಟಿಸುತ್ತಿದ್ದಾರೆ. ಅವರು ಹಾಗೆ ಮಾತನಾಡುತ್ತಿರುವುದರಿಂದ ಈ ಕಾಯ್ದೆ ತರುವವರನ್ನೇ ಮುಗಿಸಲು ಕೆಲವು ದುಷ್ಟ ಶಕ್ತಿಗಳು ಪ್ರಯತ್ನ ಮಾಡುತ್ತಿವೆ. ಇದಕ್ಕೆ ಬಹುಶ: ಹೊರ ದೇಶದಲ್ಲಿ ಕುಳಿತುಕೊಂಡಿರುವ ಭಾರತ ವಿರೋಧಿಗಳು ಹಣ ಹೊಂದಿಸಿ ಇಲ್ಲಿ ಕಳುಹಿಸಿಕೊಟ್ಟು ಭಾರತದ ಒಳಗೆ ಆಂತರಿಕ ಗಲಭೆಗೆ ಷಡ್ಯಂತ್ರ ಮಾಡುತ್ತಿರಬಹುದು. ವಿದೇಶದಲ್ಲಿ ಕುಳಿತುಕೊಂಡವರು ಕಳುಹಿಸಿಕೊಡುವ ಹಣದಿಂದ ಇಲ್ಲಿ ಗಲಾಟೆ ನಡೆದರೆ ಅದನ್ನು ನೋಡಿ ಖುಷಿ ಪಡುವವರು ಗಲ್ಫ್ ರಾಷ್ಟ್ರದಲ್ಲಿ ತುಂಬಾ ಜನರಿದ್ದಾರೆ. ಒಂದು ವೇಳೆ ಭಾರತದಲ್ಲಿ ಗಲಾಟೆ ಆಗಿ ಸಾವು-ನೋವು ಸಂಭವಿಸಿದರೆ ಅದಕ್ಕೆ ಕಾರಣರಾದವರ ಪರ ಕಾಂಗ್ರೆಸ್ ನಿಲ್ಲುತ್ತದೆಯಾ? ಇನ್ನು ಚಕ್ರವರ್ತಿ, ತೇಜಸ್ವಿಯಂತವರ ಮೇಲೆ ಹಲ್ಲೆ ನಡೆದು ಏನಾದರೂ ಹೆಚ್ಚು ಕಡಿಮೆ ಆದರೆ ಆಗ ಕಾಂಗ್ರೆಸ್ ಯಾರ ಪರವಾಗಿ ನಿಲ್ಲಲಿದೆ.
ನನ್ನ ಪ್ರಕಾರ ನಮ್ಮ ದೇಶದಲ್ಲಿ ಏನಾಗಿದೆ ಎಂದರೆ ಇದು ಜಾತ್ಯಾತೀತ ರಾಷ್ಟ್ರ ಎನ್ನುವ ಕಾರಣಕ್ಕೆ ಇಷ್ಟು ವರ್ಷ ನಮ್ಮನ್ನು ಆಳಿದ ಸರಕಾರಗಳು ಕೆಲವು ಧರ್ಮಗಳನ್ನು ವಿಪರೀತ ಒಲೈಕೆ ಮಾಡಿದ ಕಾರಣಕ್ಕೆ ಅಂತಹ ಧರ್ಮದವರು ಸರಕಾರದ ತಲೆಯ ಮೇಲೆ ಕುಳಿತು ಉಚ್ಚೆ ಹೊಯ್ಯುತ್ತಿದ್ದಾರೆ. ಏಪ್ಪತ್ತು ವರ್ಷಗಳ ಸ್ವತಂತ್ರ್ಯ ಭಾರತದಲ್ಲಿ ತಮ್ಮ ಸ್ವಾರ್ಥಕ್ಕಾಗಿ ಮುಸ್ಲಿಮರನ್ನು ಕಾಂಗ್ರೆಸ್ ಅತೀ ಹೆಚ್ಚು ಒಲೈಕೆ ಕಾರಣದಿಂದ ಇವತ್ತು ಈ ಎಲ್ಲಾ ಸಮಸ್ಯೆಗೂ ಕಾರಣವಾಗಿದೆ. ಬೇಕಾದರೆ ಚೀನಾವನ್ನೇ ತೆಗೆದುಕೊಳ್ಳಿ. ಅಲ್ಲಿ ಉದ್ದನೆಯ ಗಡ್ಡ ಬಿಡುವುದಕ್ಕೆ ಅಲ್ಲಿನ ಸರಕಾರ ವಿರೋಧ ಇದೆ. ಆತ ಮುಸ್ಲಿಮನೇ ಆಗಿರಲಿ, ಬೇರೆ ಯಾರಾದರೂ ಆಗಿರಲಿ. ಗಡ್ಡ ಬಿಡಬಾರದು ಅಂದರೆ ಬಿಡಬಾರದು. ಮುಸ್ಲಿಮರು ನಾವು ಗಡ್ಡ ಬಿಡುತ್ತೇವೆ ಎಂದು ಗಲಾಟೆ ಮಾಡಿದರೆ ಎಲ್ಲಿ ಹೊಡೆಯಬೇಕೋ ಅಲ್ಲಿ ಹೊಡೆದು ಒಳಗೆ ಹಾಕುತ್ತಾರೆ. ಬಾಲ ಮುದುಡಿ ಶೇವ್ ಮಾಡಿಕೊಳ್ಳಬೇಕು. ಹಾಗೆ ಮಾಡಿ ಬಿಡುತ್ತಾರೆ. ಇನ್ನು ಶ್ರೀಲಂಕಾದಲ್ಲಿ ಬುರ್ಖಾ ಹಾಕುವುದಕ್ಕೆ ನಿಷೇಧ ಹೇರಲಾಗಿದೆ. ಮುಸ್ಲಿಮರು ಬುರ್ಖಾ ಹಾಕಲೇಬೇಕು ಎಂದು ಪ್ರತಿಭಟನೆ ಮಾಡಿದರೆ ಪ್ರತಿಭಟನೆ ಮಾಡಿದವರನ್ನು ಪಕ್ಕದ ಕಡಲಿಗೆ ಬಿಸಾಡಿ ಕೈ ಒರೆಸಿಕೊಳ್ಳುತ್ತಾರೆ. ಹಾಗೆ ಅನೇಕ ರಾಷ್ಟ್ರಗಳು ತಮಗೆ ಬೇಕಾದ ರೀತಿಯಲ್ಲಿ ಕಾನೂನು ಮಾಡಿಕೊಂಡಿವೆ. ನಾವು ಮಾತ್ರ ಅವರು ಕೊಲ್ಲಲು ಸ್ಕೆಚ್ ಹಾಕಿದರೂ ಆ ಧರ್ಮದವರಿಗೆ ಬೇಸರವಾಗುತ್ತೆ ಎನ್ನುವ ಕಾರಣಕ್ಕೆ ಆರೋಪಿಗಳ ಧರ್ಮ ಮರೆಮಾಚಿ ಒಳ್ಳೆಯವರಾಗುತ್ತಿದ್ದೇವೆ!!
Leave A Reply