• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮೀನುಗಾರ ಮಹಿಳೆಯರಿಗೆ ಹಣ ಕೊಟ್ಟು ಸಮಾವೇಶಕ್ಕೆ ಕರೆತಂದಿದ್ದರು ಎನ್ನುವ ವದಂತಿ!!

Hanumantha Kamath Posted On January 28, 2020
0


0
Shares
  • Share On Facebook
  • Tweet It

ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಪರ ಮತ್ತು ವಿರೋಧದ ಪ್ರತಿಭಟನೆಗಳು ನಡೆಯುತ್ತಿವೆ. ಎರಡೂ ಕಡೆ ಶಕ್ತಿ ಪ್ರದರ್ಶನದ ರೀತಿಯಲ್ಲಿ ಜನರನ್ನು ಸಮಾವೇಶಕ್ಕೆ ಕರೆತರಲಾಗುತ್ತಿದೆ. ಅದೇ ರೀತಿ ಸೋಮವಾರ ಕೂಡ ಕುಳೂರಿನಲ್ಲಿ ನಡೆದ ಸಿಎಎ ಪರ ಜನಜಾಗೃತಿ ಸಮಾವೇಶದಲ್ಲಿ ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಲು ಆಗಮಿಸಿದ ನಾಗರಿಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದರು. ಸೆಂಟ್ರಲ್ ಮೀನು ಮಾರುಕಟ್ಟೆ ಅಕ್ಷರಶ: ಕರ್ಫೂ ವಾತಾವರಣವನ್ನು ನೆನಪಿಸುತ್ತಿತ್ತು. ಮೀನುಗಾರ ಮಹಿಳೆಯರು ಬೆಳಗ್ಗಿನಿಂದಲೇ ತಮ್ಮ ಬುಟ್ಟಿಗಳನ್ನು ಮಡಚಿ ಹಾಕಿ ವ್ಯಾಪಾರಕ್ಕೆ ರಜೆ ಘೋಷಿಸಿದ್ದರು. ಆದರೆ ಕೆಲವರು ಏನು ಸುದ್ದಿ ಹಬ್ಬಿಸಿದ್ದಾರೆ ಎಂದರೆ ಮೀನುಗಾರ ಮಹಿಳೆಯರಿಗೆ ವ್ಯಾಪಾರ ಬಂದ್ ಮಾಡಿದರೆ ಆಗುವ ನಷ್ಟವನ್ನು ತಾನು ಕೊಡುತ್ತೇನೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಭರವಸೆ ಕೊಟ್ಟಿದ್ದರು, ನಷ್ಟವನ್ನು ತುಂಬಿಸಿಕೊಟ್ಟಿದ್ದರು, ಆದ್ದರಿಂದ ಹಣ ತೆಗೆದುಕೊಂಡು ಮೀನುಗಾರ ಮಹಿಳೆಯರು ಹಾಗೆ ಮಾಡಿದ್ದಾರೆ ಎಂದು ಹೇಳಿಕೊಂಡು ಬರುತ್ತಿದ್ದಾರೆ.

ಆದರೆ ಇದು ಎಷ್ಟರಮಟ್ಟಿಗೆ ಸುಳ್ಳು ಎನ್ನುವುದು ನಿಮಗೆ ಗೊತ್ತಿರಬಹುದು. ಯಾಕೆಂದರೆ ಮೀನುಗಾರ ಮಹಿಳೆಯರು ಎಂದರೆ ಅವರು ಮೊಗವೀರ ಸಮುದಾಯದವರು. ಮೊಗವೀರರು ಅಪ್ಪಟ ಹಿಂದೂತ್ವವಾದಿಗಳು. ಅವರಲ್ಲಿ ಕೆಲವರು ಸ್ವಂತ ಬೋಟ್ ಹೊಂದಿರುವವರನ್ನು ಬಿಟ್ಟರೆ ಹೆಚ್ಚಿನವರು ಮಧ್ಯಮ ವರ್ಗದವರು. ಇತ್ತೀಚೆಗೆ ಅಡ್ಯಾರ್ ನಲ್ಲಿ ಸಿಎಎ ವಿರುದ್ಧ ಮುಸಲ್ಮಾನ ಸಮುದಾಯದವರು ಪ್ರತಿಭಟನೆ ಮಾಡಿದರಲ್ಲ, ಅದರಲ್ಲಿ ಅನೇಕರು ಮೀನು ವ್ಯಾಪಾರಿಗಳು ಅಂದರೆ ಮೊಗವೀರರು ಬೋಟಿನಲ್ಲಿ ಹೋಗಿ ಮೀನು ಹಿಡಿದು ತಂದು ಈ ಮುಸಲ್ಮಾನ ವ್ಯಾಪಾರಿಗಳಿಗೆ ಮಾರಿದ ಬಳಿಕ ಈ ಮುಸಲ್ಮಾನ ವ್ಯಾಪಾರಿಗಳಿಂದ ಮೊಗವೀರ ಮಹಿಳೆಯರು ಮೀನು ಖರೀದಿಸಿ ಅದನ್ನು ಮಾರ್ಕೆಟಿಗೆ ತಂದು ಮಾರಾಟ ಮಾಡುವುದು ನಡೆದುಕೊಂಡು ಬಂದಿರುವ ಸಂಪ್ರದಾಯ. ಇಲ್ಲಿ ಮುಸಲ್ಮಾನ ಮೀನು ವ್ಯಾಪಾರಿಗಳು ಮತ್ತು ಮೊಗವೀರ ಸಮುದಾಯದವರು ವ್ಯಾಪಾರ ವಹಿವಾಟಿನ ಕಾರಣದಿಂದ ಒಟ್ಟಾಗಿ ಇದ್ದಾರೆ. ಇತ್ತೀಚೆಗೆ ಏನಾಗಿತ್ತು ಎಂದರೆ ಸಿಎಎ ವಿರುದ್ಧ ಪ್ರತಿಭಟನೆಯ ನಿಮಿತ್ತ ಮುಸ್ಲಿಮರು ವ್ಯಾಪಾರ ಬಂದ್ ಮಾಡಿ ತೆರಳಿದ್ದರು. ಇದು ಮೊಗವೀರ ಮೀನು ವ್ಯಾಪಾರಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು.

ದೇಶದ ಕಾನೂನಿನ ವಿರುದ್ಧದ ಪ್ರತಿಭಟನೆಯಲ್ಲಿ ಮುಸ್ಲಿಮರು ವ್ಯಾಪಾರ ಬಂದ್ ಮಾಡಿ ಹೋಗಲು ತಯಾರಿದ್ದಾರೆ ಎಂದಾದರೆ ನಾವು ದೇಶದ ಪರ ಇರುವ ಕಾನೂನಿಗೆ ಯಾಕೆ ಬೆಂಬಲ ಕೊಡಬಾರದು ಎಂದು ಅಂದುಕೊಂಡು ಇಡೀ ಮೀನು ಮಾರುಕಟ್ಟೆಯ ಮೊಗವೀರ ಮಹಿಳೆಯರು ವ್ಯಾಪಾರ ಬಂದ್ ಮಾಡಿ ಕುಳೂರು ಕಡೆ ಹೋಗಿದ್ದಾರೆ. ಅಂತವರಿಗೆ ಹಣ ಕೊಟ್ಟು ಪ್ರತಿಭಟನೆಗೆ ಕರೆದಿದ್ದಾರೆ ಎಂದು ಹೇಳುವುದೇ ಮೊಗವೀರರಿಗೆ ಮಾಡುವ ಅವಮಾನ. ಅವರು ಎಂದೂ ಹಣಕ್ಕಾಗಿ ತಮ್ಮ ನಿಷ್ಟೆಯನ್ನು ಮಾರಿದವರಲ್ಲ. ಅವರು ಎಷ್ಟು ಕಷ್ಟಜೀವಿಗಳೋ ಅಷ್ಟೇ ಸ್ವಾಭಿಮಾನಿಗಳು. ಅವರ ರಾಷ್ಟ್ರಪ್ರೇಮವನ್ನು ಅಳೆಯಲು ಸಾಧ್ಯವಿಲ್ಲ. ಇನ್ನು ಹಣ ಕೊಟ್ಟು ಬಂದ್ ಮಾಡಿಸಿದರೂ ಅವರೆಲ್ಲ ಕುಳೂರಿಗೆ ಬರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಹಾಗಿರುವಾಗ ಜನರನ್ನು ಸೇರಿಸಲು ಹೀಗೆ ಹಣ ಹಂಚಲಾಗಿದೆ ಎನ್ನುವುದೇ ಹಾಸ್ಯಾಸ್ಪದ. ಇನ್ನು ಮೀನು ಮಾರುಕಟ್ಟೆ ಮಾತ್ರವಲ್ಲ, ರಥಬೀದಿ ಹೂವಿನ ಮಾರುಕಟ್ಟೆ ಕೂಡ ಬಂದಾಗಿತ್ತು. ಮಂಗಳೂರಿನ ರಥಬೀದಿ ಕೂಡ ಬಹುತೇಕ ಬಂದಾಗಿತ್ತು. ಅಷ್ಟೇ ಅಲ್ಲ, ಕುಳೂರಿನ ಸಮಾವೇಶಕ್ಕೆ ಒಂದೂವರೆ ಲಕ್ಷದಷ್ಟು ಜನ ಬಂದಿದ್ದಾರೆ ಎಂದರೆ ಎಷ್ಟು ಅಂಗಡಿಗಳು, ಆಫೀಸ್ ಗಳು ಬಂದಾಗಿದ್ದವು ಎನ್ನುವುದನ್ನು ನೀವೆ ಯೋಚಿಸಿ. ಅವರನ್ನೆಲ್ಲಾ ಹಣ ಕೊಟ್ಟು ತರಲು ಸಾಧ್ಯವೇ? ಹಣ ಕೊಡಲು ಹೊರಟರೆ ಕುಬೇರನೇ ಬ್ರಾಂಚ್ ಒಪನ್ ಮಾಡಿ ಕುತ್ಕೋಬೇಕಾಗಬಹುದು.
ಹಾಗಾದರೆ ಕುಳೂರು ಸಮಾವೇಶ ಅಷ್ಟು ಯಶಸ್ವಿಯಾಗಲು ಕಾರಣವೇನು? ಸಂಶಯವೇ ಇಲ್ಲ, ಹಿಂದೂತ್ವ. ರಾಜನಾಥ ಸಿಂಗ್ ಅವರೇ ಹೇಳಿರುವಂತೆ ನಾವು ಯಾರನ್ನು ಕೆಣಕಲ್ಲ, ಕೆಣಕಿದವರನ್ಬು ಸುಮ್ಮನೆ ಬಿಡುವುದಿಲ್ಲ. ಅವರು ಅದನ್ಬು ಪಾಕಿಸ್ತಾನವನ್ನು ದೃಷ್ಟಿಯಲ್ಲಿ ಇಟ್ಟು ಹೇಳಿರಬಹುದು. ಆದರೆ ಅದು ಕರಾವಳಿಗೂ ಅನ್ವಯವಾಗುತ್ತದೆ ಎಂದು ಅನಿಸುತ್ತಿದೆ. ಸಿಎಎ ಕಾಯ್ದೆಯಿಂದ ಭಾರತೀಯ ಮುಸ್ಲಿಮರಿಗೆ ಯಾವುದೇ ತೊಂದರೆ ಇಲ್ಲ ಎಂದು ಗೊತ್ತಿದ್ದರೂ ಪ್ರತಿಭಟನೆ ಮಾಡುತ್ತಿರುವ ಈ ಹಂತದಲ್ಲಿ ಅದಕ್ಕೆ ಉತ್ತರ ಕೊಟ್ಟು ದೇಶದ ಸರಕಾರದ ನೈತಿಕ ಬೆಂಬಲ ಹೆಚ್ಚಿಸುವ ಕೆಲಸಕ್ಜೆ ನಾವು ಕೈ ಜೋಡಿಸದಿದ್ದರೆ ಹೇಗೆ ಎಂದು ಅಂದುಕೊಳ್ಳುತ್ತಲೇ ಜನ ಸೇರಿದ್ದಾರೆ.

0
Shares
  • Share On Facebook
  • Tweet It




Trending Now
ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
Hanumantha Kamath June 30, 2025
ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
Hanumantha Kamath June 30, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
    • ಬೊಮ್ಮಾಯಿ 40% ಲಂಚದ ಆರೋಪ ಬಂದಾಗ ಸುಮ್ಮನೆ ಕುಳಿತು ತಪ್ಪು ಮಾಡಿದ್ರು - ಮೋಹನದಾಸ್ ಪೈ
    • ನಿಜವಾಯ್ತು ದೈವದ ನುಡಿ: 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಹಿರಿಮಗ
  • Popular Posts

    • 1
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 2
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 3
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • 4
      ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • 5
      PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...

  • Privacy Policy
  • Contact
© Tulunadu Infomedia.

Press enter/return to begin your search