• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮಂಗಳೂರು ವಿವಿಯಲ್ಲಿ ಖಾನ್ ಕೊನೆಯ ಹೈಡ್ರಾಮಾ!!

Hanumantha Kamath Posted On April 27, 2020
0


0
Shares
  • Share On Facebook
  • Tweet It

ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾಗಿದ್ದ ಪ್ರೋ.ಎ.ಎಂ.ಖಾನ್ ತಾವು ಅಧಿಕಾರದಲ್ಲಿದಷ್ಟು ದಿನ ಇಡೀ ವಿಶ್ವವಿದ್ಯಾನಿಲಯಕ್ಕೆ ತಲೆನೋವಾಗಿದ್ದು ನಮಗೆ ಗೊತ್ತೆ ಇದೆ. ಭ್ರಷ್ಟಾಚಾರದ ಆರೋಪ ಅವರನ್ನು ಸುತ್ತುವರೆದು ಅದು ವಿಧಾನಸೌಧದ ಮೆಟ್ಟಿಲು ಹತ್ತಿರುವುದು ವಿದ್ಯಾರ್ಥಿ ಸಂಘಟನೆಗಳ ಯಶಸ್ಸು.
ಸಿಂಡಿಕೇಟ್ ಸದಸ್ಯರಿಂದಲೇ ಇವರ ವಿರುದ್ಧ ಸಿಂಡಿಕೇಟ್ ನಿರ್ಣಯವನ್ನು ತಿರುಚಿದ ಆರೋಪ ಕೂಡ ಇರುವುದು ಎಲ್ಲರಿಗೂ ಗೊತ್ತೆ ಇದೆ. ತಮ್ಮ ಅಧಿಕಾರ ಚಲಾಯಿಸಿ ಮಡದಿ ವಾಜಿದ ಬಾನು ಅವರ ಹುದ್ದೆ ಸಹಿತ ವರ್ಗಾವಣೆ ನಡೆಸಿದ್ದು, ವಿವಿ ಸಿಂಡಿಕೇಟ್ ಸಭೆಯಲ್ಲಿ ತನಿಖೆಗೆ ಆದೇಶವಾಗಿತ್ತು. ಆದರೆ ಆ ನಿರ್ಣಯವನ್ನು ಖಾನ್ ತಿರುಚಿದ್ದರು ಎನ್ನುವ ಆರೋಪ ಇದೆ. ರಾಜ್ಯದಲ್ಲಿ ಸರಕಾರ ಬದಲಾಗುತ್ತಿದ್ದಂತೆ ಖಾನ್ ಅದೃಷ್ಟವೂ ಕೊನೆಗೊಂಡಿತ್ತು. ಕೊನೆಗೂ ಅವರನ್ನು ಉಳಿಸಲು ಕಾಂಗ್ರೆಸ್ಸಿನ ಶಾಸಕರುಗಳಿಗೆ ಸಾಧ್ಯವಾಗಿಲ್ಲ. ಖಾನ್ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರ ಹುದ್ದೆಯಿಂದ ಎತ್ತಂಗಡಿಯಾಗುವ ಮುಹೂರ್ತ ಕೊನೆಗೂ ಬಂದಿದೆ. ಆದರೆ ಬಂಗಾರದ ಗಣಿಯಿಂದ ಎದ್ದು ಹೋಗಲು ಖಾನ್ ಅವರಿಗೆ ಮನಸ್ಸಿಲ್ಲ. ಅದಕ್ಕಾಗಿ ಅವರು ಆಡಿದ ಕೊನೆಯಾಟ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಸ್ಥಾನಕ್ಕೆ ತಕ್ಕುದ್ದಲ್ಲ.
ಖಾನ್ ಅವರ ಸ್ಥಾನಕ್ಕೆ ಕೆಎಎಸ್ ಅಧಿಕಾರಿ, ಮಂಗಳೂರು ಮಹಾನಗರ ಪಾಲಿಕೆಯ ಅಸಿಸ್ಟೆಂಟ್ ಕಮೀಷನರ್ ಆಗಿದ್ದ ರಾಜು ಮೊಗವೀರ ಅವರು ನೇಮಕವಾಗಿದ್ದಾರೆ. ಅವರು ಇವತ್ತು ಬೆಳಿಗ್ಗೆ 11 ಗಂಟೆಗೆ ಅಧಿಕಾರ ವಹಿಸಿಕೊಳ್ಳಲು ಕಚೇರಿಗೆ ಹೋಗಿದ್ದಾಗ ಖಾನ್ ಅಲ್ಲಿಂದ ಓಡಿಹೋಗಿದ್ದಾರೆ. ಸೀದಾ ಆಸ್ಪತ್ರೆಗೆ ಹೋಗಿ ಹುಶಾರಿಲ್ಲದ ನಾಟಕ ಆಡಿದ್ದಾರೆ. ಆದಷ್ಟು ದಿನದೂಡಿ ತಮ್ಮ ಸ್ಥಾನ ಉಳಿಸಿಕೊಳ್ಳುವ ಕೊನೆಯ ಪ್ರಯತ್ನ ಮಾಡಿದ್ದಾರೆ. ನಂತರ ಖಾನ್ ಅವರ ಈ ಹೈಡ್ರಾಮದಿಂದ ಬೇಸತ್ತ ಕುಲಪತಿ ಎಡಪಡಿತ್ತಾಯ ಅವರು ತಮ್ಮ ಪರಮಾಧಿಕಾರವನ್ನು ಬಳಸಿ ಸುಗ್ರೀವಾಜ್ಞೆಯ ಮೂಲಕ ನೂತನ ಕುಲಸಚಿವರಿಗೆ ಅಧಿಕಾರ ಹಸ್ತಾಂತರಿಸಿದ್ದಾರೆ. ಈ ಮೂಲಕ ಖಾನ್ ಅವರು ಅಧಿಕಾರದಿಂದ ನಿರ್ಗಮಿಸುವಾಗಲೂ ತಮ್ಮ ವರ್ಚಸ್ಸಿಗೆ ಕಪ್ಪುಚುಕ್ಕೆ ಉಳಿಸಿ ಹೋಗಬೇಕಾಗಿದೆ. ಈ ಪರಿಸ್ಥಿತಿ ಮಂಗಳೂರು ವಿವಿಯಲ್ಲಿ ಯಾರಿಗೂ ಬರಬಾರದು. ಅಸಹ್ಯದ ಪರಾಕಾಷ್ಟೆ ಇದು!
0
Shares
  • Share On Facebook
  • Tweet It




Trending Now
ಕೇರಳದ ಸನ್ಯಾನಿಸಿಯರಿಗೆ ಜಾಮೀನು ಇಲ್ಲ; ಕಾಂಗ್ರೆಸ್ ಪ್ರತಿಭಟನೆ
Hanumantha Kamath July 31, 2025
ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
Hanumantha Kamath July 30, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕೇರಳದ ಸನ್ಯಾನಿಸಿಯರಿಗೆ ಜಾಮೀನು ಇಲ್ಲ; ಕಾಂಗ್ರೆಸ್ ಪ್ರತಿಭಟನೆ
    • ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!
    • ಚಕ್ರವರ್ತಿ ವಿರುದ್ಧದ FIR ರದ್ದು! ಸುಪ್ರೀಂ ಕೋರ್ಟಿನಲ್ಲಿ ಅರುಣ್ ಶ್ಯಾಮ್ ವಾದ
    • 6 ಡ್ರೋನ್ ಗಳಲ್ಲಿ ಪಾಕ್ ನಿಂದ ಪಿಸ್ತೂಲ್, ಹೆರಾಯಿನ್ ಸಾಗಾಟ: ಧರೆಗುರುಳಿಸಿದ ಬಿಎಸ್ ಎಫ್..
    • ಶಿವದೂತ ಗುಳಿಗೆ ನಾಟಕದ "ಭೀಮರಾವ್" ರಮೇಶ್ ಕಲ್ಲಡ್ಕ ನಿಧನ!
    • ನೂರಾರು ಜನರಿಗೆ ಸಾಲಕೊಡಿಸುವ ನೆಪದಲ್ಲಿ ವಂಚನೆ: ರೋಶನ್ ಸಲ್ದಾನಾ ಪ್ರಕರಣ ಸಿಐಡಿಗೆ
  • Popular Posts

    • 1
      ಕೇರಳದ ಸನ್ಯಾನಿಸಿಯರಿಗೆ ಜಾಮೀನು ಇಲ್ಲ; ಕಾಂಗ್ರೆಸ್ ಪ್ರತಿಭಟನೆ
    • 2
      ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • 3
      ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • 4
      ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • 5
      SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!

  • Privacy Policy
  • Contact
© Tulunadu Infomedia.

Press enter/return to begin your search