• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪಾಲಿಕೆಯಲ್ಲಿ ಬಿಜೆಪಿ ಎತ್ತ ಸಾಗುತ್ತಿದೆ? ಕೇಳುವವರು ಇಲ್ವಾ!

Tulunadu News Posted On August 28, 2020


  • Share On Facebook
  • Tweet It

ಇವತ್ತಿನ ಜಾಗೃತ ಅಂಕಣದ ಮೊದಲ ವಾಕ್ಯವೇ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಭಾರತೀಯ ಜನತಾ ಪಾರ್ಟಿಯ ಆಡಳಿತ ಎತ್ತ ಸಾಗುತ್ತಿದೆ. ನಾನು ಈಗಲೇ ಹೇಳ್ತಾ ಇದ್ದೇನೆ. ಇದನ್ನು ಮಂಗಳೂರು ನಗರ ದಕ್ಷಿಣ ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಉತ್ತರ ಶಾಸಕರಾದ ಡಾ.ಭರತ್ ಶೆಟ್ಟಿಯವರು ಕೂಡಲೇ ನೋಡದೇ ಹೋದರೆ ಪಾಲಿಕೆಯ ಬಿಜೆಪಿ ಹೇಗೂ ಮುಳುಗಿಹೋಗಲಿದೆ ಅದರೊಂದಿಗೆ ನಿಮ್ಮನ್ನು ಕೂಡ ಮುಳುಗಿಸಲಿದ್ದಾರೆ. ಅದು ಹೇಗೆ? ನಾನು ಈಗಾಗಲೇ ಮೊನ್ನೆ ಒಮ್ಮೆ ಬರೆದ ಅಂಕಣದ ಒಂದು ವಾಕ್ಯವನ್ನು ಫ್ಲಾಶ್ ಬ್ಯಾಕ್ ಆಗಿ ತೆಗೆದುಕೊಂಡು ನಂತರ ಸ್ಟೋರಿ ಆರಂಭಿಸುತ್ತೇನೆ. ಇತ್ತೀಚಿನ ತನಕ ನಮ್ಮ ಪಾಲಿಕೆಯ ಆಯುಕ್ತರಾಗಿದ್ದ ಅಜಿತ್ ಕುಮಾರ್ ಹೆಗ್ಡೆಯವರು ತಮಗೆ ಮಂಗಳೂರಿನಿಂದ ಮುಕ್ತಿಗೊಳಿಸಿ ಎಂದು ಸ್ವಯಂ ಬಯಸಿ ಇಲ್ಲಿಂದ ಬೇರೆಡೆ ಟ್ರಾನ್ಸಫರ್ ಗೊಂಡಿದ್ದರು. ಸಾಮಾನ್ಯವಾಗಿ ಟ್ರಾನ್ಸಫರ್ ಆಗುವ ಅಧಿಕಾರಿಗಳು ತಮ್ಮ ಉತ್ತರಾಧಿಕಾರಿಯಾಗಿ ಬರುವವರಿಗೆ ಅಧಿಕಾರ ಹಸ್ತಾಂತರಿಸಿ ಹೋಗುವುದು ವಾಡಿಕೆ. ಹಾಗೆ ಅಧಿಕಾರ ಹಸ್ತಾಂತರಿಸದೇ ಹೋದರೆ ಯಾವುದೇ ಬೇರೆ ಇಲಾಖೆಯ ಅಧಿಕಾರಿಗೆ ಪ್ರಭಾರ ಹೊಣೆ ಕೊಡುವುದು ಸಂಪ್ರದಾಯ. ಹಾಗೇ ಪ್ರಭಾರ ಆಯುಕ್ತರಾಗಿ ಬಂದವರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿರುವ ದಿನೇಶ್. 4.07.20 ರಿಂದ 15.07.20 ರ ವರೆಗೆ ಅಜಿತ್ ಹೆಗ್ಡೆ ಅವರು ರಜೆ ಮೇಲೆ ತೆರಳಿದ್ದರು ಆಗ ಜಂಟಿ ಆಯುಕ್ತರಾಗಿದ್ದ ಸಂತೋಷ್ ಕುಮಾರ್ ಅವರು  ತಮಗೆ ಅಧಿಕಾರ ಇಲ್ಲದಿದ್ದರೂ ನೀರಿನ ಕಾಮಗಾರಿಗೆಂದು ನಾಲ್ಕೂವರೆ ಕೋಟಿ ರೂಪಾಯಿ ಅನುದಾನದ ಮಂಜೂರಾತಿಗೆ ಸಹಿ ಹಾಕಿಬಿಟ್ಟರು. ನಂತರ ಆ ಬಗ್ಗೆ ಕಂಪ್ಲೇಟ್ ಎಲ್ಲಾ ಆಗಿ ಆ ಮಂಜೂರಾತಿ ಕ್ಯಾನ್ಸಲ್ ಆಯಿತು. ನಂತರ ಅವರು ತಾವು 4/7/2020 ರಿಂದ 15/7/2020 ಕೊಟ್ಟ ಮಂಜೂರಾತಿಗಳನ್ನು ರದ್ದುಗೊಳಿಸಿದರು. ಆಗ ಪಾಲಿಕೆಯ ಮೇಯರ್ ದಿವಾಕರ್ ಪಾಂಡೇಶ್ವರ್ ಅವರು ಕಾಮಗಾರಿಗಳಿಗೆ ಸಂಬಂಧಿಸಿದ ಎಲ್ಲಾ ಫೈಲ್ ಗಳನ್ನು ಗಂಟುಮೂಟೆ ಕಟ್ಟಿಸಿ ತಮ್ಮ ಚೇಂಬರ್ ಒಳಗೆ ಇಟ್ಟುಬಿಟ್ಟರು. ಅಲ್ಲಿಗೆ ಎಲ್ಲಾ ಮುಗಿಯಿತು ಎಂದು ಅಂದುಕೊಳ್ಳಬೇಡಿ.

ಶುಕ್ರವಾರ ಪಾಲಿಕೆಯಲ್ಲಿ ನಗರ ಯೋಜನಾ ಸ್ಥಾಯಿ ಸಮಿತಿಯ ಮೀಟಿಂಗ್ ನಡೆಯಲಿದೆ. ಅಲ್ಲಿ ಕ್ರಮಸಂಖ್ಯೆ 1 ರಿಂದ 33 ರತನಕ ಒಟ್ಟು 147 ಕಾಮಗಾರಿಗಳ ತನಕ ಅನುಮತಿ ಕೊಡಲು ಬರಲಿದೆ. ಆದರೆ ಈ ಕಾಮಗಾರಿಗಳಿಗೆ ನಗರ ಯೋಜನಾ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷರು ಈಗಾಗಲೇ ಪೂರ್ವಭಾವಿಯಾಗಿ ಅನುಮತಿ ಕೊಟ್ಟು ಆಗಿದೆ. ಕರ್ನಾಟಕ ಮುನ್ಸಿಪಲ್ ಆಕ್ಟ್ 1976ರ ಪ್ರಕಾರ ಸ್ಥಾಯಿ ಸಮಿತಿ ಅಧ್ಯಕ್ಷರು ಪೂರ್ವಭಾವಿ ಅನುಮತಿ ಕೊಡಲು ಅಧಿಕಾರ ಇಲ್ಲ. ಆದರೆ ಇವರು ಕೊಟ್ಟುಬಿಟ್ಟಿದ್ದಾರೆ. ಇಲ್ಲಿ ಈಗ ಇರುವ ಪ್ರಶ್ನೆ ಏನೆಂದರೆ ಮೇಯರ್ ಅವರು ಆ ಕಾಮಗಾರಿಗಳಿಗೆ ಸಂಬಂಧಿಸಿದ ಫೈಲುಗಳನ್ನು ತಮ್ಮ ಚೇಂಬರ್ ನ ಕಪಾಟಿನಲ್ಲಿ ಇಟ್ಟ ಬಳಿಕ ಅದು ಹೇಗೆ ಗಾಳಿಯಲ್ಲಿ ಹಾರಿ ಹೊರಗೆ ಬಂತು ಎನ್ನುವುದೇ ಈಗ ಎದ್ದಿರುವ ಪ್ರಶ್ನೆ. ಇದು ಸಾಮಾನ್ಯ ವಿಷಯವೇ ಅಲ್ಲ. ಇದೊಂದು ದೊಡ್ಡ ಹಗರಣ. ಆದರೆ ನಮ್ಮ ಅದೃಷ್ಟಕ್ಕೆ ದಿವಾಕರ ಪಾಂಡೇಶ್ವರ್ ಅವರು ಮೇಯರ್ ಆಗಿ ಇರುವುದರಿಂದ ಅವರಿಗೆ ಈ ಹಗರಣದ ವಾಸನೆ ಗೊತ್ತಾದ ತಕ್ಷಣ ಅವರು ಅದರ ಜಾಡು ಹಿಡಿದು ಹೊರಟಿದ್ದಾರೆ. ಆ ಕಾಮಗಾರಿಗಳ ಅಂದಾಜುಪಟ್ಟಿಗಳನ್ನು ಒಟ್ಟು ಮಾಡಿ ತಮ್ಮ ಚೇಂಬರ್ ನಲ್ಲಿ ಇಟ್ಟ ನಂತರ ಅದು ಹೇಗೆ ಹೊರಗೆ ಬಂತು ಎಂದು ಅವರಿಗೆ ಶಾಕ್ ಆಗಿದೆ.

ಇದೊಂದು ಅಪ್ಪಟ ಲಫಡಾ ವ್ಯವಹಾರ. ಅದಕ್ಕೆ ನಾನು ಮೊದಲೇ ಹೇಳಿದ್ದು. ಶಾಸಕದ್ವಯರು ಪಾಲಿಕೆಗೆ ಆಯ್ಕೆಯಾಗಿ ಬಂದಿರುವ ಹೊಸ ಪಟಾಲಾಂ ಅನ್ನು ನಿಯಂತ್ರಿಸದೇ ಹೋದರೆ ಅವರು ಮುಂದಿನ ಒಂದು ವರ್ಷದ ಒಳಗೆ ಪಾಲಿಕೆಯನ್ನು ಕಡಿಮೆ ರೇಟಿಗೆ ಯಾವುದಾದರೂ ಗುಜರಿಯ ಸಾಬಿಗೆ ಮಾರಿ ಹೊರಟು ಹೋಗಲಿದ್ದಾರೆ. ಸದ್ಯ ಪಾಲಿಕೆಯೆಂಬ ಚಕ್ರವ್ಯೂಹದ ಒಳಗೆ ದಿವಾಕರ ಪಾಂಡೇಶ್ವರ್ ಒಬ್ಬರೇ ಅಭಿಮನ್ಯುವಿನಂತೆ ಹೋರಾಡುತ್ತಿದ್ದಾರೆ. ಅವರು ಕಾಂಗ್ರೆಸ್ ಕಾರ್ಪೋರೇಟರ್ ಗಳ ವಿರುದ್ಧ ಮಾತ್ರವಲ್ಲ, ವಾಂತಿಯಾಗುವ ಮಟ್ಟಿಗೆ ಬಹುಮತ ಬಂದಿರುವ ತಮ್ಮದೇ ಪಕ್ಷದ ಕಾರ್ಪೋರೇಟರ್ ಗಳು ಯಾವಾಗ ಹಗರಣ ಮಾಡಿ ಪಕ್ಷಕ್ಕೆ ಮರಳು ತಿನ್ನಿಸುತ್ತಾರೆ ಎಂದು ಕೂಡ ನೋಡಬೇಕಾಗಿರುವ ಪರಿಸ್ಥಿತಿ ಬಂದಿದೆ. ಇದ್ಯಾವುದಕ್ಕೂ ಸ್ಯಾಂಕ್ಷನ್ ಕೊಡಬಾರದು ಎಂದು ಮೇಯರ್ ಆದೇಶ ಮಾಡಿದ ಕಾರಣ ಸದ್ಯ ಪರಿಸ್ಥಿತಿ ಓಕೆ. ಆದರೆ ಇದನ್ನು ಹೀಗೆ ಬಿಡಬಾರದು. ಸೂಕ್ತ ತನಿಖೆ ಮಾಡಬೇಕು. ತನಿಖೆ ಮಾಡಿದರೆ ಅವರಿಗೆ ಬೇಜಾರಾಗುತ್ತದೆ, ಇವರ ಮುಖ ಸಣ್ಣದಾಗುತ್ತದೆ ಎಂದು ಸ್ವಯಂ ಬುದ್ಧಿವಂತರೆನಿಸಿಕೊಂಡವರು ಹಿಂದೆ ಸರಿಯಬಾರದು. ಹಿಂದೆ ಕಾಂಗ್ರೆಸ್ ಅಷ್ಟು ವರ್ಷ ಅಧಿಕಾರದಲ್ಲಿದ್ದಾಗ ಕಾರ್ಫೋರೇಟರ್ಸ್, ಗುತ್ತಿಗೆದಾರರರ ಮತ್ತು ಅಧಿಕಾರಿಗಳ ನಡುವೆ ಸಮಥಿಂಗ್ ಜೋರಾಗಿಯೇ ಇತ್ತು. ಈಗ ಬಿಜೆಪಿ ಬಂದ ಬಳಿಕವೂ ಇದೇ ಮುಂದುವರೆದರೆ ಕಾಂಗ್ರೆಸ್ಸಾದರೂ ಅಷ್ಟು ವರ್ಷ ಮಾಡಿದ ನಂತರ ಜನರು ತಿರಸ್ಕರಿಸಿದ್ದರು. ಬಿಜೆಪಿ ಪಾಲಿಕೆಯಿಂದ ಆಚೆಗೆ ಒಮ್ಮೆ ಕಿಕ್ ಔಟ್ ಆದರೆ ನಂತರ ಎಂಟ್ರಿ ಕಷ್ಟ. ಅಂದ ಹಾಗೆ ನಗರ ಯೋಜನಾ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವವರು ಶರತ್ ಕುಮಾರ್. ಕರೆದು ವಿಚಾರಣೆ ಮಾಡುವ ಅಧಿಕಾರ ಇಬ್ಬರೂ ಶಾಸಕರಿಗೆ ಇದೆ. ಮಾಡದೇ ಹೋಗಿ ಇದು ಮುಂದುವರೆದು ಅಥವಾ ಬಿಜೆಪಿಯವರು ಮೇಯರ್ ದಿವಾಕರ್ ಪಾಂಡೇಶ್ವರ್ ಅವರಿಗೆನೆ ಒತ್ತಡ ಹಾಕಿ ಕೈಕಟ್ಟಿ ಮೂಲೆಗೆ ತಳ್ಳಿದರೆ ಸಂಶಯವೇ ಇಲ್ಲ ಬಿಜೆಪಿಯ ಮಟ್ಟಿಗೆ ಮುಂದಿನ ಒಂದೊಂದು ದಿನವೂ ನಿದ್ರೆ ಇಲ್ಲದೇ ಮಾಡಿಬಿಡಲಿದ್ದೇನೆ. ಅಂದ ಹಾಗೆ ನನಗೆ ಟೆಕ್ಷಿಕಲ್ ಜ್ಞಾನ ಸ್ವಲ್ಪ ಕಡಿಮೆ, ಆದರೆ ಪ್ರಾಕ್ಟಿಕಲ್ ಜ್ಞಾನ ಚೆನ್ನಾಗಿಯೇ ಇದೆ. ಅದಕ್ಕೆ ಬರಿ ಕಣ್ಣುಗಳಲ್ಲಿ ಕೂಡ ಇಂತಹ ಭ್ರಷ್ಟತೆ ಎದ್ದು ಕಾಣುತ್ತದೆ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search