• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ವೃತ್ತಕ್ಕೆ ನಾರಾಯಣ ಗುರುಗಳ ಹೆಸರು ವಿರೋಧಿಸಿದವರಿಗೆ ಈಗ ಮಾತನಾಡುವ ನೈತಿಕತೆ ಇದೆಯಾ?

Hanumantha Kamath Posted On January 25, 2022
0


0
Shares
  • Share On Facebook
  • Tweet It

ರಾಜ್ಯ ಕಾಂಗ್ರೆಸ್ಸಿಗರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ಸಿಗರಿಗೆ ಸುಲಭವಾಗಲಿ ಎಂದು ಎಸೆದ ಟ್ರಿಕ್ ಒಂದು ಇವರಿಗೆ ಲಾಭವಾಗುವುದು ಬಿಡಿ, ನೇರವಾಗಿ ತಮ್ಮ ಕಾಲ ಕೆಳಗಿನ ನೆಲವೇ ಜಾರುವಂತೆ ಮಾಡಿದೆ. ಮುಂದೊಂದು ದಿನ ಹೀಗೆ ಆಗುತ್ತೆ ಎಂದು ಮಾಜಿ ಶಾಸಕರೊಬ್ಬರಿಗೆ ಈ ಹಿಂದೆನೆ ಗೊತ್ತಿದ್ದರೆ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಹಸರನ್ನು ವೃತ್ತವೊಂದಕ್ಕೆ ಇಡಲು ವಿರೋಧಿಸುತ್ತಿರುತ್ತಿರಲಿಲ್ಲವೋ ಏನೋ. ಆದರೆ ಏನು ಮಾಡುವುದು, ಸ್ವಜಾತಿಧರ್ಮದವರ ಪ್ರೀತಿಗೆ ಹೋಗಿ, ಅವರನ್ನು ಎದುರು ಹಾಕಿಕೊಂಡರೆ ಉಳಿಗಾಲವಿಲ್ಲ ಎಂದು ಅಂದುಕೊಂಡು ಲೇಡಿಹಿಲ್ ಎನ್ನುವ ಪ್ರದೇಶದಲ್ಲಿರುವ ವೃತ್ತವೊಂದಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಇಡಲು ಸಾಧ್ಯವೇ ಇಲ್ಲ ಎಂದು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಹಟಕ್ಕೆ ಕುಳಿತುಕೊಂಡಿತು. ವಿಷಯ ಏನೇ ಇರಲಿ, ಕಾಂಗ್ರೆಸ್ಸಿಗರು ತಮ್ಮ ವೋಟ್ ಬ್ಯಾಂಕಿನ ವಿಷಯ ಬಂದಾಗ ಅವರು ಯಾವತ್ತೂ ಅಲ್ಪಸಂಖ್ಯಾತರನ್ನು ಬಿಟ್ಟು ಕೊಡುವುದಿಲ್ಲ. ನಮ್ಮ ವೋಟ್ ನಮಗೆ ಪ್ರಥಮ ಆದ್ಯತೆ ಎನ್ನುವುದು ಕಾಂಗ್ರೆಸ್ಸಿಗರ ರಕ್ತದಲ್ಲಿಯೇ ಇದೆ.

ಲೇಡಿಹಿಲ್ ಪ್ರದೇಶದಲ್ಲಿರುವ ವೃತ್ತಕ್ಕೆ ಸರಿಯಾಗಿ ನೋಡಿದರೆ ಅಧಿಕೃತವಾಗಿ ಯಾವುದೇ ಹೆಸರಿಲ್ಲ. ಎಲ್ಲರೂ ಲೇಡಿಹಿಲ್ ವೃತ್ತ ಎಂದು ಕರೆಯುತ್ತಿದ್ದ ಕಾರಣ ಅದು ರೂಢಿಯಾಗಿದೆಯೇ ವಿನ: ದಾಖಲೆಗಳಲ್ಲಿ ಇರುವ ಹೆಸರು ಅಲ್ಲ. ಇನ್ನು ಲೇಡಿಹಿಲ್ ಯಾರು? ಅವಳ ಕೊಡುಗೆ ಏನು? ಮತಾಂತರ ಮಾಡಲು ಬಂದಿದ್ದ ಹೆಂಗಸಾ ಅಥವಾ ಗಂಡಸಾ ಯಾರಿಗೆ ಗೊತ್ತು. ಅವಳನ್ನು ತಮ್ಮವಳೆಂದು ಕ್ರಿಶ್ಚಿಯನ್ನರು ಅಂದುಕೊಂಡರೆ ಅದಕ್ಕಿಂತ ಮುಠಾಳತನ ಬೇರೆ ಇಲ್ಲ. ಹಾಗಿರುವಾಗ ಅಂತಹ ಒಂದು ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರು ಇಡಬಹುದಿತ್ತು. ಯಾಕೆಂದರೆ ನಾರಾಯಣ ಗುರುಗಳು ಕಟ್ಟಿಸಿದ ಕರ್ನಾಟಕದ ಏಕೈಕ ದೇವಾಲಯ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ರಾಜಬೀದಿಯಂತೆ ಕಂಗೊಳಿಸುತ್ತಿರುವ ಪ್ರದೇಶದಲ್ಲಿರುವ ವೃತ್ತಕ್ಕೆ ನಾರಾಯಣ ಗುರುಗಳ ಹೆಸರು ಸೂಕ್ತವಾಗುತ್ತಿತ್ತು. ಅದರಂತೆ ಬಿರುವೆರ್ ಕುಡ್ಲ ಎನ್ನುವ ಸಂಘಟನೆ ಮಾಡಿದ ಮನವಿಯಂತೆ ಪಾಲಿಕೆಯ ಭಾರತೀಯ ಜನತಾ ಪಾರ್ಟಿಯ ಆಡಳಿತ ಈ ಕುರಿತು ನಿರ್ಣಯವನ್ನು ಮಂಡಿಸಿತು. ಆದರೆ ಯಾವ ಕಾರಣಕ್ಕೂ ಇದನ್ನು ಒಪ್ಪಬಾರದು ಎಂದು ಸೂಚನೆ ನೀಡಿದವರು ಕಾಂಗ್ರೆಸ್ಸಿನ ಮಾಜಿ ಶಾಸಕರೊಬ್ಬರು ಮತ್ತು ಅವರೊಂದಿಗೆ ಸೇರಿದವರು ಈಗ ಮಾಜಿ ವಿಧಾನಪರಿಷತ್ ಸದಸ್ಯರಾಗಿರುವ ಐವನ್. ಪಾಲಿಕೆಯ ಕಾಂಗ್ರೆಸ್ಸಿನಲ್ಲಿರುವ ಅನೇಕರು ಅಲ್ಪಸಂಖ್ಯಾತರೂ ಆಗಿರುವ ಕಾರಣ ಅವರು ಕೂಡ ಇದನ್ನು ಸವಾಲಾಗಿ ಸ್ವೀಕರಿಸಿದರು. ಯಾವಾಗ ಆಕ್ಷೇಪಗಳು ಬಂತೋ ಬಿಜೆಪಿಯವರಿಗೂ ಏನೂ ಮಾಡಲು ಆಗಲಿಲ್ಲ. ಅದರೊಂದಿಗೆ ಕೆಲವರಿಂದ ಮನವಿಯನ್ನು ಕೂಡ ಕೊಡಿಸಿ ಕಾಂಗ್ರೆಸ್ಸಿಗರು ಈ ವಿಷಯದಲ್ಲಿ ಪಾಲಿಕೆಯ ಬಿಜೆಪಿಗೆ ಪ್ಲಸ್ ಆಗದಂತೆ ನೋಡಿಕೊಂಡರು. ಆ ಮೂಲಕ ತಾವು ಅನೈತಿಕವಾಗಿ ಗೆಲುವು ಸಾಧಿಸುವಂತೆ ನೋಡಿಕೊಂಡರು. ಮಾತನಾಡಿದರೆ ತಾವು ಮಂಗಳೂರು ರೈಲ್ವೆ ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರು ಇಡಲು ಹೇಳಿದ್ವಿ ಎನ್ನುತ್ತಾರೆ. ವೃತ್ತಕ್ಕೆ ಹೆಸರು ಇಡಲು ಪ್ರಕ್ರಿಯೆ ಸುಲಭ. ಆದರೆ ರೈಲ್ವೆ ನಿಲ್ದಾಣಗಳಿಗೆ ಹೆಸರು ಇಡಲು ಕೇಂದ್ರ ಸರಕಾರದ ನಿಯಮಗಳು ಅಷ್ಟು ಸರಳೀಕೃತವಾಗಿಲ್ಲ. ಅದು ಕಷ್ಟಸಾಧ್ಯ ಎಂದು ಗೊತ್ತಿದ್ದ ಕಾರಣ ಮತ್ತು ಸಿಕ್ಕಿದರೆ ಮೈಲೇಜ್ ತಮಗೆ ಸಿಗಲಿ ಎನ್ನುವ ಕಾರಣಕ್ಕೆ ಕಾಂಗ್ರೆಸ್ ಹೊಸ ದಾಳ ಉರುಳಿಸಿತ್ತು. ಆದ್ದರಿಂದ ಅತ್ತ ವೃತ್ತಕ್ಕೂ ಹೆಸರಿಡಲು ಬಿಡದೆ, ಇತ್ತ ರೈಲ್ವೆ ನಿಲ್ದಾಣಕ್ಕೂ ಹೆಸರಿಡಲು ಆಗದೆ ಕಾಂಗ್ರೆಸ್ ಆವತ್ತು ಗೆದ್ದಿತ್ತು. ಈಗ ಅದೇ ಕಾಂಗ್ರೆಸ್ಸಿಗೆ ತಿರುಗುಬಾಣವಾಗಿದೆ.

ಒಂದು ವೃತ್ತಕ್ಕೆ ಕ್ರೈಸ್ತ ಮತಗಳ ಆಸೆಯಿಂದ ಬಿಲ್ಲವರ ವಿರುದ್ಧ ಹೋದವರು ಈಗ ದೆಹಲಿಯ ಪ್ರಜಾಪ್ರಭುತ್ವದ ಪೆರೇಡ್ ನಲ್ಲಿ ಕೇರಳದ ಸ್ತಬ್ಧಚಿತ್ರ ರದ್ದಾಗಿರುವುದಕ್ಕೆ ಇಷ್ಟು ಅಳುವಂತಹ ಅಗತ್ಯ ಏನಿತ್ತು ಎಲ್ಲರೂ ಕೇಳುತ್ತಿದ್ದಾರೆ. ಅಷ್ಟು ನಾರಾಯಣ ಗುರುಗಳ ಮೇಲೆ ಪ್ರೀತಿ ಇದ್ದರೆ ಇಷ್ಟು ವರ್ಷ ಕಾಂಗ್ರೆಸ್ ಇತ್ತಲ್ಲ, ಈಡಿಗ ಸಮುದಾಯದವರೇ ಆಗಿರುವ ಬಂಗಾರಪ್ಪನವರಾಗಲಿ, ಹಿಂದುಳಿದ ಸಮಾಜದ ಮೊಯಿಲಿಯವರಾಗಲಿ ಯಾಕೆ ಪ್ರಯತ್ನ ಪಟ್ಟಿಲ್ಲ. ಈ ವಿಷಯವನ್ನು ಮೊದಲ ಬಾರಿ ಎತ್ತಿ ವಿವಾದ ಮಾಡಿದ ಸಿದ್ದುವೇ ಯಾಕೆ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕರ್ನಾಟಕದಿಂದ ಕಳುಹಿಸಲಿಲ್ಲ. ಇನ್ನು ಜನಾರ್ಧನ ಪೂಜಾರಿ, ಆಸ್ಕರ್ ಕೂಡ ಕರಾವಳಿಯವರೇ ಅಲ್ವೇ? ಇವರು ಕೂಡ ಕೆಪಿಸಿಸಿ ಅಧ್ಯಕ್ಷರೂ, ಕೇಂದ್ರ ಸಚಿವರೂ ಆಗಿದ್ದರಲ್ಲವೇ ಅವರು ಯಾಕೆ ಯಾವತ್ತೂ ಈ ಪ್ರಯತ್ನ ಮಾಡಿಲ್ಲ. ಯಾಕೆಂದರೆ ನಾರಾಯಣ ಗುರುಗಳ ಬಗ್ಗೆ ಕೇರಳದ ಕಮ್ಯೂನಿಸ್ಟರು ರಾಜಕೀಯ ಮಾಡಿ ಲಾಭ ಗಳಿಸುವ ಕೆಟ್ಟ ಉದ್ದೇಶವನ್ನು ಇವರ ತಲೆಯಲ್ಲಿ ತುಂಬಿರಲಿಲ್ಲ. ಆವತ್ತು ನಾರಾಯಣ ಗುರುಗಳನ್ನು ಯೇಸುಕ್ರಿಸ್ತರಂತೆ ಶಿಲುಬೆಗೆ ಏರಿಸಿ ಮೊಳೆ ಹೊಡೆದ ಕಮ್ಯೂನಿಸ್ಟರ ಕೃತ್ಯವನ್ನು ವಿರೋಧಿಸದ ದಕ್ಷಿಣ ಕನ್ನಡ ಕಾಂಗ್ರೆಸ್ಸಿಗರು ಈಗ ಕೇರಳದ ಸ್ತಬ್ಧಚಿತ್ರ ರದ್ದಾಗಿರುವುದಕ್ಕೆ ತಮ್ಮದೇ ಮನೆಗೆ ಬೆಂಕಿ ಬಿದ್ದಂತೆ ಒದ್ದಾಡುತ್ತಿದ್ದಾರೆ. ಅಲ್ಲಿನ ಅರೆಬೆಂದ ಕಮ್ಯೂನಿಸ್ಟರು ಏನು ಬೇಕಾದರೂ ಮಾಡಬಲ್ಲರು. ಏಕೆಂದರೆ ಅವರಿಗೆ ಮೋದಿ ಬದ್ಧ ವೈರಿ. ಒಟ್ಟಿನಲ್ಲಿ ಕಮ್ಯೂನಿಸ್ಟರು ಅರ್ಧ ರಾತ್ರಿಯಲ್ಲಿ ಕೊಡೆ ಕಳುಹಿಸಿದ್ದಕ್ಕೆ ಅರೆನಗ್ನರಾಗಿ ಕಾಂಗ್ರೆಸ್ಸಿಗರು ಕುಣಿಯುತ್ತಿರುವುದು ಮಾತ್ರ ಹುಚ್ಚರ ಜಾತ್ರೆಯಲ್ಲಿ ಉಂಡವನೇ ಜಾಣ ಎನ್ನುವಂತಾಗಿದೆ!

0
Shares
  • Share On Facebook
  • Tweet It


- Advertisement -


Trending Now
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Hanumantha Kamath June 18, 2025
ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
Hanumantha Kamath June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
    • 114 ಮುಸ್ಲಿಮರು ಸೇರಿ ದೇಗುಲದ 167 ಸಿಬ್ಬಂದಿ ವಜಾ ಮಾಡಿ ಆದೇಶ!
  • Popular Posts

    • 1
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 2
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 3
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 4
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • 5
      ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search