• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕಾಂಗ್ರೆಸ್ ತನ್ನ ಸುಖವನ್ನು ಬಿಡಲಿ!

Hanumantha Kamath Posted On June 23, 2023


  • Share On Facebook
  • Tweet It

ಸಿದ್ದು ಹಾಗೂ ಡಿಕೆಶಿ ಕರ್ನಾಟಕದಲ್ಲಿ ರಾಬಿನ್ ಹುಡ್ ನ ಅಪರಾವತಾರವನ್ನು ತೋರಿಸುವ ಉಮ್ಮೇದಿನಲ್ಲಿದ್ದಾರೆ. ರಾಬಿನ್ ಹುಡ್ ಅಂದರೆ ಉಳ್ಳವರಿಂದ ಕಿತ್ತುಕೊಂಡು ಬಡವರಿಗೆ ಹಂಚುವ ಕೆಲಸವನ್ನು ಮಾಡುವವನಿಗೆ ಪರ್ಯಾಯವಾಗಿ ಬಳಸುವ ಹೆಸರು. ಆದರೆ ಈ ಕರ್ನಾಟಕದ ಈ ರಾಬಿನ್ ಹುಡ್ ಗಳು ಮಧ್ಯಮ ವರ್ಗದವರಿಂದ ಕಿತ್ತು ಇದ್ದವರಿಗೆ, ಇಲ್ಲದವರಿಗೆ ಎಲ್ಲರಿಗೂ ಹಂಚುವ ಕೆಲಸವನ್ನು ಮಾಡುತ್ತಿದ್ದಾರೆ. ಇವರು ಹೀಗೆ ಮಾಡುವುದರಿಂದ ಎಲ್ಲವೂ ಅಲ್ಲೋಲ ಕಲ್ಲೋಲವಾಗಿ ಕೊನೆಗೆ ಕಾಂಗ್ರೆಸ್ ಸರಕಾರಕ್ಕೆ ಮಹಾಮಂಗಳಾರತಿಯೊಂದಿಗೆ ಮುಕ್ತಾಯವಾಗಲಿದೆ. ಇದರ ಅರಿವು ಕಾಂಗ್ರೆಸ್ಸಿಗೆ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಡಿಕೆಶಿಗೆ ಇದೆ. ಆದರೆ ರಾಜಕೀಯದ ಕೊನೆಯ ಆಟದ ಸ್ಲೋಗ್ ಓವರ್ ನಲ್ಲಿ ತಾನು ಮಾತ್ರ ಮಿಂಚಿದರೆ ಸಾಕು ಎನ್ನುವ ಹಪಾಹಪಿಯೊಂದಿಗೆ ಸಿದ್ದು ಇನ್ನಿಂಗ್ಸ್ ಮುಗಿಸುವ ಧಾವಂತದಲ್ಲಿದ್ದಾರೆ. ಕಾಂಗ್ರೆಸ್ಸಿನ ಭವಿಷ್ಯ ಹೇಗೆ ಬೇಕಾದರೂ ಹಾಳಾಗಿ ಹೋಗಲಿ, ತಾನು ಮಾತ್ರ ದೇವರಾಜ್ ಅರಸು ಅವರಂತವರ ಲೆವೆಲ್ಲಿಗೆ ಹೋಗಬೇಕು ಎನ್ನುವುದು ಸಿದ್ದು ಗುರಿ. ನಾಯಕನಾದವನಿಗೆ ಹಡಗು ಮುಳುಗಿ ಹೋದರೂ ಪರವಾಗಿಲ್ಲ, ನಾನೇ ನಾವಿಕನಾಗಿ ಮಿಂಚಬೇಕು ಎನ್ನುವ ಏಕೈಕ ಉದ್ದೇಶ ಇದ್ದರೆ ಅವನತಿಗೆ ಅವನೇ ಮುನ್ನುಡಿ ಬರೆದಂತೆ. ಇದು ತನ್ನ ಕೊನೆಯ ಚುನಾವಣೆ ಎನ್ನುವುದು ಗೊತ್ತಿರುವುದರಿಂದ ರಾಜ್ಯ ಸರಕಾರದ ಖಜಾನೆಯಲ್ಲಿ ಇದ್ದಬದ್ದ ಹಣವನ್ನು ಮುಗಿಸಿ ತಾವು ರಾಜಕೀಯದ ವಾನಪ್ರಸ್ಥಕ್ಕೆ ಹೋಗುವ ಮನಸ್ಥಿತಿ ಸಿದ್ದುಜಿದು.

ಯಾವುದಕ್ಕೆಲ್ಲಾ ಬೆಲೆ ಜಾಸ್ತಿಯಾಗಿದೆ?

ಕಾಂಗ್ರೆಸ್ ಘೋಷಿಸಿರುವ ಎಲ್ಲಾ ಉಚಿತಗಳನ್ನು ಕೊಡಬೇಕಾದರೆ ಅದಕ್ಕೆ ಬೇರೆಡೆಯಿಂದ ಹಣವನ್ನು ಹೊಂದಿಸಬೇಕಾಗುತ್ತದೆ. ಆ ಬೇರೆಡೆಯಿಂದ ಹಣ ಹೊಂದಿಸುವುದು ಹೇಗೆ? ಇದ್ದಬದ್ದ ವಸ್ತುಗಳಿಗೆಲ್ಲ ಬೆಲೆ ಹೆಚ್ಚಿಸಬೇಕಾಗುತ್ತದೆ. ಅವುಗಳಿಗೆಲ್ಲಾ ಎಂಟಾಣೆ, ಎಪ್ಪತ್ತೈದು ಪೈಸೆ ಹೆಚ್ಚು ಮಾಡಿದರೆ ಸಾಕಾಗುವುದಿಲ್ಲ. ಭರ್ತಿ ಹಣ ಹೆಚ್ಚು ಮಾಡಬೇಕಾಗುತ್ತದೆ. ಹಾಗೇ ಹೆಚ್ಚು ಮಾಡಿಸಿಕೊಂಡ ಕ್ಷೇತ್ರಗಳಲ್ಲಿ ಒಂದು ಸಾರಿಗೆ. ಒಂದು ಕಡೆಯಲ್ಲಿ ಮಹಿಳೆಯರಿಗೆ ಕೆಂಪು ಬಸ್ಸುಗಳಲ್ಲಿ ಪ್ರಯಾಣ ಫ್ರೀ ಮಾಡಿರಬಹುದು. ಇನ್ನೊಂದು ಕಡೆಯಲ್ಲಿ ಸರಕಾರದ ಬೇರೆ ಬಸ್ಸುಗಳಿಗೆ (ಕೆಂಪು ಬಿಟ್ಟು) ದರ ಜಾಸ್ತಿ ಮಾಡಲಾಗಿದೆ. ರಾಜಹಂಸ, ಸ್ಲೀಪರ್ ಎಸಿ/ನಾನ್ ಎಸಿ, ವೋಲ್ವೋಗಳಾದ ಐರಾವತ, ಅಂಬಾರಿ, ಉತ್ಸವ್ ಹೀಗೆ ಬಸ್ಸುಗಳ ಟಿಕೆಟ್ ದರ ಮಂಗಳೂರು- ಬೆಂಗಳೂರು ಸರಾಸರಿ ಪ್ರತಿ ಟಿಕೆಟಿಗೆ ಇನ್ನೂರು ರೂಪಾಯಿಗೂ ಹೆಚ್ಚಿಗೆ ವಸೂಲಿ ಮಾಡಲಾಗುತ್ತಿದೆ. ಒಂದು ಕಡೆಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವುದು ಎಂದರೆ ಇದು. ಇಷ್ಟೇ ಅಲ್ಲ, ಹಾಲಿನ ದರವನ್ನು ಲೀಟರಿಗೆ ಐದು ರೂಪಾಯಿ ಹೆಚ್ಚಿಸುವ ಪ್ರಸ್ತಾಪವೂ ಸರಕಾರದ ಮುಂದೆ ಇದೆ. ಈಗ ಕಾಂಗ್ರೆಸ್ ಸರಕಾರ ಇದಕ್ಕೆ ಅಸ್ತು ಎಂದರೆ ಹಾಲಿನ ಬೆಲೆ ಕೂಡ ಹೆಚ್ಚಳವಾಗುತ್ತದೆ. ನಂತರ ನಾವು ಹೆಚ್ಚಿಸಿದ್ದಲ್ಲ. ಹಾಲು ಉತ್ಪಾದಕ ಮಹಾಮಂಡಲದವರು ಎಂದು ಸಿದ್ದು ಹೇಳಿದರೂ ಹೇಳಬಹುದು. ಈಗ ವಿದ್ಯುತ್ ದರದ ವಿಷಯದಲ್ಲಿ ನಾವು ಹೆಚ್ಚಿಸಿದ್ದಲ್ಲ, ವಿದ್ಯುತ್ ಬೋರ್ಡಿನವರು ಎಂದು ಹೇಳುತ್ತಿದ್ದಾರಲ್ಲ, ಹಾಗೆ ಹೈನುಗಾರರಿಗೆ ನೀಡುವ ಪ್ರೋತ್ಸಾಹಧನವನ್ನು ಕೂಡ ಸರಕಾರ ಒಂದೂವರೆ ರೂಪಾಯಿ ಇಳಿಸಿದೆ. ಕೇಳಿದರೆ ಅದು ಬೇಸಿಗೆ ಸಮಯದಲ್ಲಿ ಮಾತ್ರ ನೀಡುವ ಕ್ರಮ ಎನ್ನುವ ಅರ್ಥದ ಮಾತುಗಳನ್ನು ಹೇಳುತ್ತಿದೆ. ಸಾರಿಗೆ, ಹಾಲು ನಂತರ ವಿದ್ಯುತ್ ದರದ ವಿಷಯಕ್ಕೆ ಬರುವುದಾದರೆ ಅದು ಈಗಾಗಲೇ ಹೆಚ್ಚಳವಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದೆ. 11 ಜಿಲ್ಲೆಗಳ ಕೈಗಾರಿಕೆಗಳು ಮುಷ್ಕರ ಹೂಡಿವೆ. ರಾಜ್ಯದಲ್ಲಿ ಇದು ಹೀಗೆ ಮುಂದುವರೆದರೆ ಅಭಿವೃದ್ಧಿ ಕುಂಠಿತವಾಗುವುದರಲ್ಲಿ ಸಂಶಯವಿಲ್ಲ. ಹಿಂದೆ ವಿದ್ಯುತ್ ದರ ಇದ್ದ ಸ್ಲ್ಯಾಬ್ ಪದ್ಧತಿಯಲ್ಲಿ ಮಧ್ಯಮ ವರ್ಗದವರಿಗೆ ಅನುಕೂಲವಾಗುತ್ತಿತ್ತು. ಈಗ ಹಿಂದಿನ ಸ್ಲ್ಯಾಬ್ ದರ ತೆಗೆದುಹಾಕಿ ಹೊಸ ಸ್ಲ್ಯಾಬ್ ದರ ಅನುಷ್ಟಾನಕ್ಕೆ ತರಲಾಗಿದೆ. ಇದರಿಂದ ಮಧ್ಯಮ ವರ್ಗದವರಿಗೆ ತುಂಬಾ ತೊಂದರೆಯಾಗಿದೆ.

ಕಾಂಗ್ರೆಸ್ ತನ್ನ ಸುಖವನ್ನು ಬಿಡಲಿ!

ನೀವು ಉಚಿತ ಘೋಷಣೆಗಳನ್ನು ಅನುಷ್ಠಾನ ಮಾಡುವಾಗ ಅದರ ಸೈಡ್ ಎಫೆಕ್ಟ್ ಗಳ ಬಗ್ಗೆನೂ ಗಮನಿಸಬೇಕು. ಯಾಕೆಂದರೆ ಈ ದೇಶದ ಒಬ್ಬ ಮಧ್ಯಮ ವರ್ಗದ ಉದ್ಯೋಗಿಯ ಸರಾಸರಿ ವರಮಾನ ಹೆಚ್ಚು ಕಡಿಮೆ ಅನೇಕ ವರ್ಷಗಳ ತನಕ ಒಂದೇ ಇರುತ್ತದೆ. ಒಬ್ಬ ತಿಂಗಳಿಗೆ ಇಪ್ಪತ್ತು ಸಾವಿರ ದುಡಿಯುತ್ತಿದ್ದರೆ ನೀವು ಮಹಿಳೆಯರಿಗೆ ಕೆಲವು ಬಸ್ ಗಳಲ್ಲಿ ಫ್ರೀ ಟಿಕೆಟ್ ಮಾಡಿ ಇತ್ತ ಹಾಲಿನ ದರ 5 ರೂ ಹೆಚ್ಚಿಸಿದರೆ ಅದರ ಹೊರೆ ಕಡಿಮೆ ಏನಲ್ಲ. ಅತ್ತ ಕೆಲವು ಮನೆಗಳಿಗೆ 200 ಯೂನಿಟ್ ತನಕ ವಿದ್ಯುತ್ ಫ್ರೀ ಮಾಡಿ ಬೇರೆ ಕಡೆ ಅವೈಜ್ಞಾನಿಕವಾಗಿ ವಿದ್ಯುತ್ ದರ ಏರಿಸಿದರೆ ಅದರಿಂದ ಮಧ್ಯಮ ವರ್ಗದವನಿಗೆ ಆಗುವ ನಷ್ಟ ಬೇರೆಯದ್ದೇ ಆಯಾಮ ಪಡೆದುಕೊಂಡಿರುತ್ತದೆ. ರಾಜ್ಯ ಹೋಟೇಲ್ ಮಾಲೀಕರ ಸಂಘದ ಅಧ್ಯಕ್ಷರು ಈಗಾಗಲೇ ಮಾಧ್ಯಮಗಳಿಗೆ ತಮ್ಮ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದು, ತಾವು ಕಾಫಿ, ಟೀ ಮತ್ತು ಆಹಾರ ವಸ್ತುಗಳ ಬೆಲೆಯನ್ನು ಹೆಚ್ಚಿಸುವ ಅನಿವಾರ್ಯತೆಯನ್ನು ರಾಜ್ಯ ಸರಕಾರ ತಂದಿಟ್ಟಿದೆ ಎಂದು ಹೇಳಿದೆ. ಯಾಕೆಂದರೆ ಹೋಟೇಲುಗಳಿಗೆ ಕರೆಂಟ್ ಬಿಲ್ ಜಾಸ್ತಿ ಬರುತ್ತಿದೆ. ಹಾಲಿನ ದರ ಜಾಸ್ತಿಯಾಗಲಿದೆ. ಇದರೊಂದಿಗೆ ನಿತ್ಯದ ವಸ್ತುಗಳ ಬೆಲೆ ಕೂಡ ಜಾಸ್ತಿಯಾಗುತ್ತಿದೆ. ಮಧ್ಯಮ ವರ್ಗದವರ ಸಂಬಳ ಮಾತ್ರ ಇಷ್ಟೇ ಇದೆ. ಯಾರನ್ನೋ ಖುಷಿ ಮಾಡಲು ಇನ್ಯಾರನ್ನೋ ಬೋಳಿಸುವುದು ಸರಿಯಲ್ಲ. ಇದರ ಬದಲಿಗೆ ಕಾಂಗ್ರೆಸ್ ಸರಕಾರ ಒಂದು ಮಾಡಬಹುದು. ಹೇಗೂ ತಾವು ರಾಜ್ಯದ ಜನರ ಉದ್ಧಾರಕ್ಕಾಗಿ ಅಧಿಕಾರಕ್ಕೆ ಬಂದವರು. ನಿಮ್ಮ ವಿಧಾನಸಭೆ, ವಿಧಾನಪರಿಷತ್ ಅಷ್ಟೂ ಶಾಸಕರುಗಳ ವೇತನದಿಂದ ಹಿಡಿದು ಅಷ್ಟೂ ಭತ್ಯೆಗಳನ್ನು ಕೈಬಿಡಲಿ. ಮಾಜಿ ಕಾಂಗ್ರೆಸ್ ಶಾಸಕರುಗಳು ಕೂಡ ಇದನ್ನು ಅನುಸರಿಸಲಿ. ಆಗ ಸ್ವಲ್ಪ ಹೊರೆ ರಾಜ್ಯದ ಮೇಲೆ ಕಡಿಮೆಯಾಗುತ್ತದೆ. ಆಗುತ್ತಾ

  • Share On Facebook
  • Tweet It


- Advertisement -


Trending Now
ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
Hanumantha Kamath May 23, 2025
ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
Hanumantha Kamath May 23, 2025
Leave A Reply

  • Recent Posts

    • ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
    • ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
    • ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!
    • ಜಯಂ ರವಿಯಿಂದ ಪ್ರತಿ ತಿಂಗಳು 40 ಲಕ್ಷ ರೂ ಪರಿಹಾರ ಕೇಳಿದ ಪತ್ನಿ!
    • ಮಾವೋವಾದಿ ರಾಷ್ಟ್ರೀಯ ನಾಯಕ, 1.5 ಕೋಟಿ ಘೋಷಿತ ನಕ್ಸಲ್ ಬಸವರಾಜ್ ಫಿನಿಶ್!
    • ಜೂನ್ 5 ಕ್ಕೆ ಅಯೋಧ್ಯೆ ರಾಮ ದರ್ಬಾರ್ ಪ್ರಾಣ ಪ್ರತಿಷ್ಟೆಗೆ ದಿನ ನಿಗದಿ... ಕೆಲಸಕಾರ್ಯಗಳು ಅಂತಿಮ ಹಂತಕ್ಕೆ!
    • ಕನ್ನಡತಿಯ ಮುಸ್ಲಿಂ ಹೆಣ್ಣುಮಕ್ಕಳ ದೈನಂದಿನ ಬದುಕಿನ ಕತೆಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ!
    • ಕನ್ನಡ ಮಾತಾಡಲ್ಲ ಎಂದು ದರ್ಪ ತೋರಿದ ಬ್ಯಾಂಕ್ ಮ್ಯಾನೇಜರ್ ಟ್ರಾನ್ಫರ್! ಉಳಿದವರಿಗೆ ಎಚ್ಚರಿಕೆ ಗಂಟೆ..
    • ಲಷ್ಕರ್ ಈ ತೈಬಾ ಸಹಸಂಸ್ಥಾಪಕನಿಗೆ ಮನೆಯಲ್ಲಿಯೇ ಭೀಕರ ದಾಳಿ, ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲು!
  • Popular Posts

    • 1
      ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
    • 2
      ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
    • 3
      ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • 4
      ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!
    • 5
      ಜಯಂ ರವಿಯಿಂದ ಪ್ರತಿ ತಿಂಗಳು 40 ಲಕ್ಷ ರೂ ಪರಿಹಾರ ಕೇಳಿದ ಪತ್ನಿ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search