• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಕಾಂಗ್ರೆಸ್ಸಿಗೆ ಮುಸ್ಲಿಂ ಹಾಗೂ ದಲಿತರಲ್ಲಿ ಆಯ್ಕೆ ಯಾರು?

Hanumantha Kamath Posted On July 27, 2023
0


0
Shares
  • Share On Facebook
  • Tweet It

ಕೆಜಿ ಹಳ್ಳಿ – ಡಿಜೆ ಹಳ್ಳಿಯನ್ನು ಯಾರು ತಾನೆ ಮರೆಯಲು ಸಾಧ್ಯ. ಕಾಂಗ್ರೆಸ್ಸಿನ ದಲಿತ ಶಾಸಕನ ಮನೆಯನ್ನು ಮತಾಂಧರು ಸುಟ್ಟು ಹಾಕಿದ್ದರಲ್ಲ, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿದರಲ್ಲ, ಅಕ್ಷರಶ: ದೊಂಬಿ, ಗಲಭೆ ನಡೆಸಿ ಭಯೋತ್ಪಾದಕರಂತೆ ವರ್ತಿಸಿದವರನ್ನು ಏನು ಮಾಡಬೇಕು ಎಂದು ಯಾವುದೇ ವ್ಯಕ್ತಿಯ ಬಳಿ ಕೇಳಿದರೂ ಅಂತವರಿಗೆ ಮರೆಯಬಾರದ ಶಿಕ್ಷೆಯನ್ನು ನೀಡಬೇಕು ಎಂದು ಹೇಳಿಯಾರು? ಆದರೆ ಕಾಂಗ್ರೆಸ್ ಸರಕಾರ ಅಂತಹ ಮೂಲಭೂತವಾದಿ ಯುವಕರನ್ನು ಕೆಲವೇ ದಿನಗಳ ಒಳಗೆ ಬಿಡುಗಡೆ ಮಾಡಿದರೂ ಯಾರೂ ಆಶ್ಚರ್ಯಪಡಬೇಕಾಗಿಲ್ಲ. ಯಾಕೆಂದರೆ ಈಗ ರಾಜ್ಯದಲ್ಲಿ ಇರುವುದು ಕಾಂಗ್ರೆಸ್ ಸರಕಾರ. ಅಲ್ಪಸಂಖ್ಯಾತರ ಋಣದ ಮೇಲೆ ಅಕ್ಷರಶ: ನಿಂತಿರುವ ಸರಕಾರಕ್ಕೆ ಮುಸ್ಲಿಮರನ್ನು ಸಂತೃಪ್ತಿಗೊಳಿಸುವ ಅನಿವಾರ್ಯತೆ ಇದೆ. ಅದರ ಇನ್ನೊಂದು ಭಾಗವೇ ಕೆಜೆ ಹಳ್ಳಿ, ಡಿಜಿ ಹಳ್ಳಿಯಲ್ಲಿ ಅಕ್ಷರಶ: ದೊಂಬಿ ನಡೆಸಿದ ಅಷ್ಟೂ ಆರೋಪಿಗಳನ್ನು ಬಿಡುಗಡೆಗೊಳಿಸಬೇಕು ಎನ್ನುವ ಚಿಂತನೆ ನಡೆದಿದೆ. ಇಂತಹ ಯೋಚನೆ ಕಾಂಗ್ರೆಸ್ಸಿಗೆ ಬರುತ್ತದೆಯಲ್ಲ ಎನ್ನುವ ಆಶ್ಚರ್ಯ ಯಾರಿಗೂ ಆಗಬೇಕಾಗಿಲ್ಲ. ಅಧಿಕಾರಕ್ಕೆ ಬಂದರೆ ಉಚಿತ ಘೋಷಣೆ ಮಾತ್ರವಲ್ಲ, ಇಂತಹುಗಳನ್ನು ಕೂಡ ಮಾಡುತ್ತೇವೆ ಎಂದು ಕೂಡ ಭರವಸೆ ನೀಡಿರಬಹುದು.

ಕಾಂಗ್ರೆಸ್ಸಿಗೆ ಮುಸ್ಲಿಂ ಹಾಗೂ ದಲಿತರಲ್ಲಿ ಆಯ್ಕೆ ಯಾರು?

ಹೀಗೆ ಈ ಪ್ರಕರಣವನ್ನು ಮತ್ತೆ ಜನರಿಗೆ ನೆನಪಿಸಿದ ಮಹಾನುಭಾವನ ಹೆಸರು ಶಾಸಕ ತನ್ವೀರ್ ಸೇಠ್. ಯಾರಿಗೆಲ್ಲಾ ಈ ಬಾರಿ ಸಚಿವ ಸ್ಥಾನ ಸಿಗಲಿಲ್ಲವೋ ಅಂತವರೆಲ್ಲ ಸರಕಾರದ ಬುಡಕ್ಕೆ ಬತ್ತಿ ಇಡಲು ಬೇರೆ ಬೇರೆ ಬೇಡಿಕೆಗಳನ್ನು ಸರಕಾರದ ಮುಂದೆ ಇಡುತ್ತಿದ್ದಾರೆ. ಹೀಗೆ ಗೃಹ ಸಚಿವ ಪರಮೇಶ್ವರ್ ಮುಂದೆ ಪ್ರಸ್ತಾಪ ಇಟ್ಟ ತನ್ವೀರ್ ಸೇಠ್ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಒಂದು ವೇಳೆ ಕೇಸುಗಳನ್ನು ಹಿಂದಕ್ಕೆ ಪಡೆದರೆ ಕಾಂಗ್ರೆಸ್ ಪಕ್ಕಾ ಅಲ್ಪಸಂಖ್ಯಾತರ ಪರ ಎನ್ನುವುದು ಸಾಬೀತಾಗುತ್ತದೆ. ಅಷ್ಟೇ ಆಗಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಬೇಸರ ಇಲ್ಲ. ಹೌದು, ನಾವು ಮುಸ್ಲಿಮರ ಬಗ್ಗೆ ಕಮಿಟೆಡ್ ಆಗಿದ್ದೇವೆ. ನಮ್ಮ ಪಕ್ಷದ ತತ್ವ, ಸಿದ್ಧಾಂತದಂತೆ ನಡೆಯುತ್ತೇವೆ ಎಂದು ಹೇಳಿಬಿಡಬಹುದು. ಆದರೆ ಈ ನಡುವೆ ದಲಿತ ಶಾಸಕನ ಮನೆಗೆ ಬೆಂಕಿ ಹಾಕಿದವರನ್ನು ಹಾಗೆ ಬಿಡುವುದು ಸರಿನಾ ಎನ್ನುವ ಪ್ರಶ್ನೆ ಸರಕಾರದ ಮುಂದಿದೆ. ಬೆಂಕಿ ಕೊಟ್ಟವರು ಮುಸ್ಲಿಮರು ಎನ್ನುವ ಕಾರಣಕ್ಕೆ ದಲಿತರಿಗಿಂತ ಕಾಂಗ್ರೆಸ್ಸಿಗೆ ಅಲ್ಪಸಂಖ್ಯಾತರ ಮೇಲೆ ಹೆಚ್ಚು ಪ್ರೀತಿ ಎನ್ನುವ ವಾತಾವರಣ ಸೃಷ್ಟಿಯಾದರೆ ಏನು ಮಾಡುವುದು? ಇದನ್ನು ಕಾಂಗ್ರೆಸ್ ಜೀರ್ಣಿಸಿಕೊಳ್ಳುತ್ತದಾ ಎನ್ನುವುದು ಮೊದಲ ಪ್ರಶ್ನೆ.
ಯಾಕೆಂದರೆ ಮೊನ್ನೆ ವಿಧಾನಸಭೆಯಲ್ಲಿ ಭಾರತೀಯ ಜನತಾ ಪಾರ್ಟಿಯವರು ದಲಿತ ಉಪಸಭಾಧ್ಯಕ್ಷರ ಮೇಲೆ ಕಾಗದ ಹರಿದು ಚೂರು ಎಸೆದರು. ಡೆಪ್ಯೂಟಿ ಸ್ಪೀಕರ್ ದಲಿತರಾಗಿರುವುದರಿಂದ ಹೀಗೆ ಮಾಡಿದರು ಎಂದು ಕಾಂಗ್ರೆಸ್ ಇಡೀ ದಿನ ಎಲ್ಲೆಡೆ ಕೂಗೆಬ್ಬಿಸಿತ್ತು. ಅದನ್ನೇ ಮರು ಟೀಕಾಸ್ತ್ರವಾಗಿ ಎಸೆಯಲಿರುವ ಬಿಜೆಪಿ ಒಬ್ಬ ದಲಿತ ಶಾಸಕನ ಮನೆಗೆ ಬೆಂಕಿ ಕೊಟ್ಟರೂ ಕಾಂಗ್ರೆಸ್ ಆವತ್ತು ತಮ್ಮದೇ ಪಕ್ಷದ ಶಾಸಕನ ಬೆನ್ನಿಗೆ ನಿಂತಿರಲಿಲ್ಲ. ಈಗಲೂ ಆ ಮಾಜಿ ದಲಿತ ಶಾಸಕನ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಇವರಿಗೆ ದಲಿತರ ಮೇಲೆ ಗೌರವ ಇಲ್ಲ ಎಂದು ಹೇಳುವ ಸಾಧ್ಯತೆ ಇದೆ.

ಸಿದ್ದು ಹಿಂದಿನ ಬಾರಿ ಏನು ಮಾಡಿದ್ದರು!

ಇನ್ನು ಗೃಹಸಚಿವರಾಗಿರುವ ಪರಮೇಶ್ವರ್ ದಲಿತರು. ತಮ್ಮದೇ ಪಾರ್ಟಿಯಲ್ಲಿದ್ದ ದಲಿತ ಶಾಸಕನ ಮನೆಗೆ ಆ ಪರಿ ಬೆಂಕಿ ಕೊಟ್ಟವರನ್ನು ಹಾಗೆ ಬಿಟ್ಟರೆ ದಲಿತರು ಪರಮೇಶ್ವರ್ ಅವರನ್ನು ಕ್ಷಮಿಸುತ್ತಾರಾ? ತನ್ವೀರ್ ಆದರೆ ಹೋಗಲಿ ಬಿಡಿ, ಅವರಿಗೆ ತಮ್ಮ ಮುಸ್ಲಿಂ ಸಮುದಾಯದವರನ್ನು ಖುಷಿಗೊಳಿಸುವ ಅನಿವಾರ್ಯತೆ ಇದೆ. ಅವರು ಕಳೆದ ಬಾರಿ ಮುಸ್ಲಿಮರನ್ನು ಸರಿಯಾಗಿ ಗಮನಿಸಲಿಲ್ಲ, ಕ್ಯಾರ್ ಲೆಸ್ ಗುಣ ಹೊಂದಿದ್ದರು ಎನ್ನುವ ಕಾರಣಕ್ಕೆ ಅವರಿಗೆ ಮತಾಂಧರು ಚೂರಿ ಹಾಕಿದ್ದರು. ಆದ್ದರಿಂದ ಈ ಬಾರಿ ತನ್ವೀರ್ ನಿರೀಕ್ಷೆಗಿಂತ ಹೆಚ್ಚೇ ಮತ್ತು ಬಹಳ ಬೇಗ ಮುಸ್ಲಿಮರ ಮೇಲೆ ಪ್ರೀತಿ ತೋರಿಸುತ್ತಿದ್ದಾರೆ. ಆದರೆ ಮುಸ್ಲಿಮರು ಬೆಂಕಿ ಹಚ್ಚಿದ್ದು ದಲಿತ ಶಾಸಕನಾಗಿದ್ದವರ ಮನೆಗೆ. ಆದರೆ ಕಾಂಗ್ರೆಸ್ ತನ್ನ ಸ್ವಭಾವದಂತೆ ಆ ಪ್ರಕರಣದಲ್ಲಿರುವ ಮುಸ್ಲಿಮರನ್ನು ಬಿಡುಗಡೆ ಮಾಡಲೂ ಬಹುದು. ಸಿದ್ದು ಹಿಂದಿನ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಪಿಎಫ್ ಐ ಗೂಂಡಾಗಳ ಮೇಲಿದ್ದ ಪ್ರಕರಣವನ್ನು ಹಿಂದಕ್ಕೆ ಪಡೆದುಕೊಂಡಿದ್ದರು. ಅದರ ನಂತರ ರಾಜ್ಯದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾಗಿತ್ತು. ಅಂತಹ ಇತಿಹಾಸ ಮತ್ತೆ ಮರುಕಳಿಸಿದರೂ ಆಶ್ಚರ್ಯ ಇಲ್ಲ. ಯಾಕೆಂದರೆ ಕಾಂಗ್ರೆಸ್ ಇರುವುದೇ ಹಾಗೆ. ಅವರು ಹೇಳಿದ ಹಾಗೆ ಮುಸ್ಲಿಮರ ಪರ ಇರುತ್ತಾರೆ. ಆದರೆ ಬಿಜೆಪಿ ಎದೆ ತಟ್ಟಿ ಹಿಂದೂಪರ ಎನ್ನುತ್ತದೆ. ಆದರೆ ಹಿಂದೂಗಳಿಗೆ ಕಷ್ಟ ಬಂದಾಗ??

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Hanumantha Kamath October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Hanumantha Kamath October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search