• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಸ್ವತ್ತಃ ಬ್ರಿಟೀಷರೇ ತಮ್ಮ Survey ಯಲ್ಲಿ ಉಲ್ಲೇಖಿಸಿದ ನಗ್ನಸತ್ಯ?

Subhash Bangarpete Posted On August 31, 2023
0


0
Shares
  • Share On Facebook
  • Tweet It

ಬ್ರಾಹ್ಮಣರು ತಾವು ಮಾತ್ರ ಶಿಕ್ಷಣ ಪಡೆದು ಇತರೆ ಜನಾಂಗಗಳನ್ನು ಶಿಕ್ಷಣದಿಂದ ದೂರ ಇಟ್ಟರು ಅನ್ನೋ ಭ್ರಮೆಯನ್ನು ಯಾರೋ ಹುಟ್ಟು ಹಾಕಿದರು ಮತ್ತು ಇಂದಿಗೂ ಅದನ್ನು ಕೆಲವರು ನಂಬುತ್ತಾರೆ.

ಇನ್ನೂ ಮಜವಾದ ವಿಷಯಗಳನ್ನು ಹೇಳ್ತೀನಿ ಕೇಳಿ…..

ಭಾರತದಲ್ಲಿ ಇಂಗ್ಲಿಷ್ ಶಿಕ್ಷಣ ಜಾರಿಗೆ ಬಂದಿದ್ದು 1835 ರ English Education Act ನ ಮೂಲಕ….

ನಿಮಗೆಲ್ಲ ತಿಳಿದಿರುವಂತೆ 1947 ರಲ್ಲಿ ಈ ದೇಶಕ್ಕೆ ಸ್ವಾತಂತ್ರ್ಯ ಬಂತು….ಅಂದ್ರೆ English ಶಿಕ್ಷಣ ಜಾರಿಯಾಗಿ ಕೇವಲ 112 ವರ್ಷಗಳ ನಂತರ ಬ್ರಿಟಿಷರೇ ಭಾರತ ಬಿಟ್ಟು ಹೋದರು…..

English ಭಾಷೆ, ಅಥವಾ ಅವರ ಶಿಕ್ಷಣ ಪದ್ದತಿ ಇಡೀ ಭಾರತೀಯ ಸಮುದಾಯಕ್ಕೇ ಹೊಸತು….. ಹಾಗಾಗಿ ಅವಶ್ಯಕತೆ ಇದ್ದವರು ಮಾತ್ರ ಆ ಶಿಕ್ಷಣ ಕಲಿತರು ಮತ್ತು ಉಳಿದವರು ಅದರಿಂದ ದೂರವೇ ಉಳಿದರು…..

ನಿಜ ಹೇಳಬೇಕು ಅಂದ್ರೆ ಬ್ರಿಟಿಷರು ಇಡೀ ಭಾರತದ ಮೂಲ ಶಿಕ್ಷಣ ಪದ್ದತಿಯನ್ನು ನಾಶ ಮಾಡಿ ಅದರ ಜಾಗಕ್ಕೆ ತಮ್ಮ ಶಿಕ್ಷಣ ಪದ್ದತಿಯನ್ನು ತುರುಕಿ ಇಡೀ ದೇಶದಾದ್ಯಂತ Industrialisation ಮಾಡಿ‌ ಭಾರತೀರರೆಲ್ಲರೂ ತಮ್ಮ ಮೂಲ ಕಸುಬುಗಳನ್ನು ಬಿಟ್ಟು ಇಂಗ್ಲಿಷ್ ಶಿಕ್ಷಣ ಪದ್ದತಿಯ ಪ್ರಕಾರ ಶಿಕ್ಷಣ ಪಡೆಯುವಂತೆ ಮತ್ತು ಹೊಸದಾಗಿ ಶುರುವಾದ Industry ಗಳಲ್ಲಿ ಕಾರ್ಮಿಕರಾಗಿ ದುಡಿಯುವಂತೆ ಮಾಡಿದರು… ಇದರ ಜೊತೆಗೆ ಭಾರತೀಯ ಭಾಷೆಗಳನ್ನು ಕೊಂದು English ಅನ್ನು ಭಾರತದ ಆಡಳಿತ ಭಾಷೆ ಮಾಡಿದರು.

ಇನ್ನೂ Blunt ಆಗಿ ಹೇಳಬೇಕು ಅಂದ್ರೆ ಇಷ್ಟೊಂದು ವೈವಿಧ್ಯತೆ ಇದ್ದ ಭಾರತವನ್ನು ಅರ್ಥ ಮಾಡಿಕೊಳ್ಳಲು, ಆಳಲು ಬ್ರಿಟೀಷರಿಗೆ ಭಾರತೀಯ ನೌಕರರು, ಮತ್ತವರ ಸಹಕಾರ ಬೇಕಿತ್ತು…. ಅವೆರಡೂ ಗುರಿ ಸಾಧಿಸಲು ಅವರು ತಮ್ಮ ಶಿಕ್ಷಣವನ್ನು ಭಾರತದಲ್ಲಿ ಜಾರಿ ಮಾಡಿದರು.

ಹಾಗಾದರೆ ಭಾರತದಲ್ಲಿ ಇಂಗ್ಲಿಷ್ ಶಿಕ್ಷಣ ಪದ್ದತಿ ಜಾರಿ ಆಗೋದಕ್ಕೂ ಮುನ್ನ ಭಾರತದಲ್ಲಿ ಶಿಕ್ಷಣ ವ್ಯವಸ್ಥೆ ಹೇಗಿತ್ತು ಅನ್ನೋದಕ್ಕೂ ಬ್ರಿಟೀಷರೇ Maintain ಮಾಡಿದ್ದ ದಾಖಲಾತಿಗಳು ಮತ್ತು ಕಡತಗಳೇ ಉತ್ತರ ಕೊಡುತ್ತವೆ.

ಇಲ್ಲಿ ಪ್ರತಿ ಗ್ರಾಮದಲ್ಲೂ ಒಂದು ಪಾಠಶಾಲೆ ಇತ್ತು….‌!

ಅಲ್ಲಿ ಸಂಸ್ಸೃತ ಮತ್ತು ಸ್ಥಳೀಯ ಭಾಷೆಗಳಲ್ಲಿ ರಾಮಾಯಣ, ಮಹಾಭಾರತ ಸೇರಿದಂತೆ ನಮ್ಮ ಪುರಾತನ ಪಠ್ಯವನ್ನು ಕಲಿಸಲಾಗುತ್ತಿತ್ತು…. ಇದರ ಜೊತೆಗೆ ಗಣಿತ ಮತ್ತು ವಿಜ್ಞಾನಗಳನ್ನೂ ಪುರುಷ ಮತ್ತು ಮಹಿಳೆ ಇಬ್ಬರಿಗೂ ಕಲಿಸಲಾಗುತ್ತಿತ್ತು…… ಆ ಶಾಲೆಗಳಲ್ಲಿ ವೈಶ್ಯ ಮತ್ತು ಶೂದ್ರ ವರ್ಣಕ್ಕೆ ಸೇರಿದವರೇ ಹೆಚ್ಚಾಗಿ ಕಲಿಯುತ್ತಿದ್ದರು ಅವರ ಸಂಖ್ಯೆ ಬ್ರಾಹ್ಮಣರಿಗಿಂತ ಜಾಸ್ತಿ ಇತ್ತು.

ಈ ದೇಶದ Almost ಪ್ರತಿ ವ್ಯಕ್ತಿಗೂ ತನ್ನ ಸ್ಥಳೀಯ ಭಾಷೆ ಅಥವಾ ಸಂಸ್ಕೃತದಲ್ಲಿ ಓದಲು, ಬರೆಯಲು ಬರುತ್ತಿತ್ತು…. ಆ ಪಾಠಶಾಲೆಗಳಿಗೆ ಆ ಊರಿನ ದೇವಾಲಯಗಳು ಧನಸಹಾಯ ಮಾಡುತ್ತಿದ್ದವು……

ಹೀಗಿತ್ತು ನಮ್ಮ ಶಿಕ್ಷಣ ವ್ಯವಸ್ಥೆ….

ಇದು ನಾನು ಬರೆದ ಕಲ್ಪಿತ ಕಥೆ ಅಲ್ಲ…‌ ಬದಲಿಗೆ ಇದು ಸ್ವತ್ತಃ ಬ್ರಿಟೀಷರೇ ತಮ್ಮ Survey ಯಲ್ಲಿ ಉಲ್ಲೇಖಿಸಿದ ನಗ್ನಸತ್ಯ…

ಈ ನಗ್ನಸತ್ಯ London ನಲ್ಲಿ ಇದ್ದ #ಧರಂಪಾಲ್ ಜಿ ಅವರಿಗೆ ಕಂಡಿತು ಮತ್ತು ಅವರ ಮೂಲಕ ನಮ್ಮೆಲ್ಲರಿಗೂ ತಲುಪಿತು. ಬ್ರಿಟೀಷರೇ ಹೇಳುವಂತೆ ಇಲ್ಲಿ ಮಹಿಳೆಯರೂ ಸೇರಿದಂತೆ ಎಲ್ಲ ವರ್ಗದ ಜನರಿಗೂ ಶಿಕ್ಷಣ ದೊರೆಯುತ್ತಿತ್ತು….. ಮತ್ತು ಭಾರತದ Literacy rate almost 100% ಇತ್ತು….. ಇಲ್ಲಿ ನೆನಪಿಡಬೇಕಾದ ಇನ್ನೊಂದು ಅಂಶವೆಂದರೆ ನಮ್ಮ ಸಂಸ್ಕೃತಿಯಲ್ಲಿ ಶಿಕ್ಷಣ ಎಂದಿಗೂ ವ್ಯಾಪಾರ ಆಗಿರಲ್ಲ…. ಯಾಕೆಂದರೆ ಸಮಾಜಕ್ಕೆ ಶಿಕ್ಷಣ ನೀಡುವ ಜವಾಬ್ದಾರಿ ದೇವಾಲಯಗಳದಾಗಿತ್ತು……

ಹೀಗಾಗಿ ಬ್ರಿಟೀಷರೇ ಹೇಳುವಂತೆ ಹಿಂದೆ ಜಾರಿ ಇದ್ದ ಶಿಕ್ಷಣ ಪದ್ದತಿಯಲ್ಲಿ ಎಲ್ಲರಿಗೂ ಶಿಕ್ಷಣ ದೊರೆಯುತ್ತಿತ್ತು…. ಅವರ ಶಿಕ್ಷಣ ಪದ್ದತಿ ಜಾರಿಯಾದ ನಂತರ ಬ್ರಾಹ್ಮಣರೇ ಅವರ ಶಿಕ್ಷಣವನ್ನು ಪಡೆದಿರಲಿಲ್ಲ…. ಮತ್ತು ಬ್ರಾಹ್ಮಣರಿಗೂ English ಶಿಕ್ಷಣ ಹೊಸದಾಗಿತ್ತು…..‌

ಇದೆಲ್ಲದರ ಜೊತೆಗೆ ” ಕೆಲವರು ” ಹೇಳುವ ಪ್ರಕಾರ ಕೇವಲ ಬ್ರಾಹ್ಮಣರಿಗೆ ಮೀಸಲಾಗಿದ್ದ ಶಿಕ್ಷಣವನ್ನು ಬ್ರಿಟೀಷರು ಎಲ್ಲರಿಗೂ ಸಮಾನವಾಗಿ ನೀಡಿದರು….‌ ಹೀಗಾಗಿ ಆಳುವ ಬ್ರಿಟೀಷರೇ ಎಲ್ಲರಿಗೂ ಶಿಕ್ಷಣ ನೀಡುವ ತೀರ್ಮಾನ ಮಾಡಿದಾಗ ಬ್ರಾಹ್ಮಣರು ಅದನ್ನು ಹೇಗೆ ತಡೆಯಲು ಸಾಧ್ಯ….?

ಹೀಗಾಗಿ ಒಟ್ಟಾರೆ ಬ್ರಾಹ್ಮಣರು ಇತರ ಸಮುದಾಯಗಳನ್ನು ಶಿಕ್ಷಣದಿಂದ ವಂಚಿಸಿದರು ಅನ್ನೋದೇ ಒಂದು‌ ಭ್ರಮೆ ಮತ್ತು ಅದೇ ಭ್ರಮೆಯಲ್ಲಿ ಇಂದಿಗೂ ಅನೇಕರು ಬದುಕುತ್ತಿದ್ದಾರೆ ಅನ್ನೋದೇ ಸತ್ಯ.

0
Shares
  • Share On Facebook
  • Tweet It




Trending Now
ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
Subhash Bangarpete February 27, 2026
ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
Subhash Bangarpete February 25, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!
    • ಕೇರಳ ಇನ್ನು ಮುಂದೆ ಕೇರಳಂ!
    • ಐರ್ಲೆಂಡ್‌ನಲ್ಲಿ ಕಡಬದ ಯುವಕ ನಿಗೂಢ ಸಾವು!
    • ಮೀಟರ್ ರೀಡಿಂಗಾಗಿ ಬಂದ ನೌಕರರ ಮೇಲೆ ಸಾಕು ನಾಯಿ ದಾಳಿ!
    • ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
  • Popular Posts

    • 1
      ಅಪ್ರಾಪ್ತ ವಯಸ್ಸಿನವರ ಮೇಲೆ ಅನೈತಿಕ ಪೊಲೀಸ್ ಗಿರಿ: ತಂದೆ, ಮಗನ ಬಂಧನ
    • 2
      ಪಾಲಿಕೆಯಲ್ಲಿ ಅಧಿಕಾರಿಗಳ ಆಡಳಿತಕ್ಕೆ ಒಂದು ವರ್ಷ , ಪಾಲಿಕೆಗೆ ಚುನಾವಣೆ ಸದ್ಯಕ್ಕೆ ಅನುಮಾನ!
    • 3
      ಖಾಸಗಿ ವೀಡಿಯೋ ಮುಂದಿಟ್ಟು ಮಾಲೀಕನಿಗೆ ಬ್ಲ್ಯಾಕ್‌ಮೇಲ್: ಹೆಂಡತಿ ಅಕೌಂಟ್‌ಗೆ ಹಣ ಕೇಳಿದ್ದ ಅಭಿಷೇಕ್ ಸುರೇಂದ್ರ ಪೂಜಾರಿ!
    • 4
      ಕೇರಳ ಇನ್ನು ಮುಂದೆ ಕೇರಳಂ!

  • Privacy Policy
  • Contact
© Tulunadu Infomedia.

Press enter/return to begin your search