• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ವೈಟ್ ಮನಿಯಾದರೆ ತಿರುಗಿ ಬರುತ್ತೆ ಹೆದರಿಕೆ ಯಾಕೆ?

Hanumantha Kamath Posted On October 17, 2023


  • Share On Facebook
  • Tweet It

ಕಾಂಗ್ರೆಸ್, ಆಪ್ ಮುಖಂಡರು ಈ ಆದಾಯ ತೆರಿಗೆ ಇಲಾಖೆಯ ದಾಳಿಗಳ ಬಗ್ಗೆ ಹೇಳುವ ಏಕೈಕ ಮಾತು ಎಂದರೆ ಭಾರತೀಯ ಜನತಾ ಪಾರ್ಟಿಯವರು ಐಟಿ ಇಲಾಖೆಯನ್ನು ಬಳಸುತ್ತಿದ್ದಾರೆ. ಓಕೆ, ಕಾಂಗ್ರೆಸ್ ಮತ್ತು ಆಪ್ ಹೇಳಿದ್ದರಲ್ಲಿ ಸತ್ಯ ಇದೆ ಎಂದೇ ಇಟ್ಟುಕೊಳ್ಳೋಣ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಬಳಸಿಕೊಂಡಿರಬಹುದು. ಆದರೆ ಎಲ್ಲೆಲ್ಲಿ ದಾಳಿ ನಡೆದಿದೆಯಲ್ಲ, ಅಲ್ಲೆಲ್ಲಾ ಸಿಕ್ಕಿರುವುದು ಚಿಲ್ಲರೆ ಹಣವಲ್ಲವಲ್ಲ. ನಲ್ವತ್ತು ಕೋಟಿ, ಐವತ್ತು ಕೋಟಿ. ಎಲ್ಲಿ ಕೈ ಹಾಕಿದರೂ ಕೋಟಿಗಟ್ಟಲೆ ಹಣ. ಹಾಗಾದರೆ ಆ ಹಣ ಎಲ್ಲಿಂದ ಮತ್ತು ಹೇಗೆ ಬಂತು ಎನ್ನುವುದರ ಬಗ್ಗೆ ಯಾಕೆ ಯಾರೂ ಉತ್ತರ ಕೊಡುತ್ತಿಲ್ಲ. ಐಟಿ ಇಲಾಖೆಯನ್ನು ಕೇಂದ್ರ ಸರಕಾರ ಬಳಸಿರುವುದರ ಬಗ್ಗೆ ಯಾವುದೇ ದಾಖಲೆ ಕಾಂಗ್ರೆಸ್ ಬಳಿ ಇಲ್ಲ. ಆದರೆ ಕಾಂಗ್ರೆಸ್ಸಿಗರ ಆಪ್ತರ ಮನೆಗಳಲ್ಲಿ ಸಿಗುತ್ತಿರುವ ಕೋಟ್ಯಾಂತರ ರೂಪಾಯಿ ಮಾತ್ರ ಎಲ್ಲರ ಕಣ್ಣಿಗೆ ರಾಚುವಂತೆ ಕಾಣುತ್ತಿದೆಯಲ್ಲ. ಇದು ಸತ್ಯವಲ್ಲವೇ? ಇದರಲ್ಲಿ ಯಾವ ಅನುಮಾನವೂ ಇಲ್ಲವಲ್ಲ. ಒಂದು ಫೋಟೋದಲ್ಲಿ ಬರಲಾಗದಷ್ಟು ಕಂತೆ ಕಂತೆ ಹಣ ಸಿಗುತ್ತಿದೆ. ಮೂರು ನಿಮಿಷದ ವಿಡಿಯೋದೊಳಗೆ ತೋರಿಸಲು ಸಾಧ್ಯವಾಗದಷ್ಟು ಹಣದ ಬಂಡಲ್ ಗಳು ದೊರಕುತ್ತಿವೆ. ಲೆಕ್ಕ ಮಾಡಲು ಒಂದೆರಡು ಮಿಶಿನ್ ಗಳು ಸಾಕಾಗುತ್ತಿಲ್ಲ. ಮಿಶಿನ್ ನಲ್ಲಿ ಲೆಕ್ಕ ಮಾಡುತ್ತಾ ಅಧಿಕಾರಿಗಳ ಕೈ ನೋಯುತ್ತಿದೆ. ಹಣವನ್ನು ಬಾಕ್ಸಿನಲ್ಲಿ ಪ್ಯಾಕ್ ಮಾಡಲು ಹೆಚ್ಚುವರಿ ಜನ ಬೇಕಾಗುತ್ತಿದ್ದಾರೆ. ಹಣವನ್ನು ಬ್ಯಾಂಕಿನಲ್ಲಿ ಡೆಪಾಸಿಟ್ ಮಾಡಲು ತೆಗೆದುಕೊಂಡು ಹೋಗುವಾಗ ಅಲ್ಲಿನ ಲಾಕರ್ ಗಳು ಸಾಕಾಗುತ್ತಿಲ್ಲ. ಇದೆಲ್ಲವನ್ನು ಟಿವಿಗಳು ದಿನಗಟ್ಟಲೆ ತೋರಿಸುತ್ತಾ ಇದ್ದಾರೆ. ನಿರೂಪಕರು ಗಂಟಲು ಹರಿದುಕೊಂಡು ಮಾತನಾಡುತ್ತಿದ್ದಾರೆ. ಇಷ್ಟೆಲ್ಲಾ ಆಗುತ್ತಿದ್ದರೂ ಕಾಂಗ್ರೆಸ್ಸಿಗರು ಶಬ್ದ ತೆಗೆಯುತ್ತಿಲ್ಲ. ಇಷ್ಟೆಲ್ಲಾ ನೋಡಿದ ಮೇಲೆ ಅವರು ಹೇಳುವ ಕಟ್ಟಕಡೆಯ ಮಾತು ” ಬಿಜೆಪಿ ಐಟಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ”

ಯಾಕೆ ಅಷ್ಟು ಕ್ಯಾಶ್ ಇಟ್ಟುಕೊಳ್ಳಬೇಕು!

ಒಬ್ಬ ಗುತ್ತಿಗೆದಾರನ ಮನೆಯಿಂದ 42 ಕೋಟಿ ರೂಪಾಯಿ ಸಿಗುತ್ತದೆ ಎಂದರೆ ಅದು ಲಂಚದ ಹಣ ಅಥವಾ ಅದನ್ನು ಕಣ್ಣುಮುಚ್ಚಿ ಕಪ್ಪು ಹಣ ಎಂದು ಹೇಳಬಹುದು. ಯಾಕೆಂದರೆ ಯಾವ ಉದ್ಯಮಿ ಕೂಡ ಇವತ್ತಿನ ಆಧುನಿಕ ಕಾಲದಲ್ಲಿ ಅಷ್ಟು ಹಣವನ್ನು ವೈಟ್ ರೂಪದಲ್ಲಿ ಮನೆಯಲ್ಲಿ ಇಡಲು ಹೋಗುವುದಿಲ್ಲ. ಯಾಕೆಂದರೆ ಅದು ಸಾಧ್ಯವೂ ಇಲ್ಲ. ಯಾಕೆಂದರೆ 50 ಸಾವಿರ ರೂಪಾಯಿಗಳಿಗಿಂತಲೂ ಹೆಚ್ಚು ಹಣವನ್ನು ಕ್ಯಾಶ್ ವ್ಯವಹಾರದಲ್ಲಿ ಚಲಾಯಿಸುವ ಮೊದಲು ಇವತ್ತಿನ ಕಾಲಘಟ್ಟದಲ್ಲಿ ಉದ್ಯಮಿಗಳು ಹಿಂದೆ ಮುಂದೆ ನೋಡುತ್ತಾರೆ. ಹಾಗಿರುವಾಗ 42 ಕೋಟಿ ಕ್ಯಾಶ್ ಹೊರಗೆ ಬಂದಿದೆ ಎಂದರೆ ನಮ್ಮ ರಾಜ್ಯವನ್ನು ಲೂಟಲು ಸಂಚು ನಡೆಯುತ್ತಿದೆ ಎಂದೇ ಅರ್ಥ. ಇನ್ನು ಕೆಲವು ಕಾಂಗ್ರೆಸ್ಸಿಗರು ಒಂದು ಹೆಜ್ಜೆ ಮುಂದೆ ಹೋಗಿ ” ಅವರು ಉದ್ಯಮಿಗಳು, ಅವರ ಮನೆಯಲ್ಲಿ ಅಷ್ಟು ಹಣ ಇರಬಾರದಾ?” ಎಂದು ಕೇಳುತ್ತಾರೆ. ಬೇಕಾದರೆ ಅಂಬಾನಿ, ಅದಾನಿ ಮನೆಯಲ್ಲಿಯೇ ಈ ಕಾಂಗ್ರೆಸ್ಸಿಗರು ಹೋಗಿ ನೋಡಿ ಬರಲಿ. ಆ ಉದ್ಯಮಿಗಳು ವಿಶ್ವದ ಟಾಪ್ ಸ್ಥಾನದಲ್ಲಿ ಇದ್ದಾರೆ. ಯಾವುದೋ ಸಣ್ಣ ಗುತ್ತಿಗೆದಾರನೊಬ್ಬ ತನ್ನ ಮನೆಯಲ್ಲಿ 42 ಕೋಟಿ ಇಟ್ಟುಕೊಳ್ಳುವುದು ಸಕ್ರಮವಾದರೆ ಅಂಬಾನಿ, ಅದಾನಿಗಳ ಮನೆಯಲ್ಲಿ ಸಾವಿರಾರು ಕೋಟಿ ಹಾಗೆ ಬಿದ್ದುಕೊಂಡಿರಬೇಕು. ಆದರೆ ಇರತ್ತಾ, ಇರಲ್ಲ. ಯಾಕೆಂದರೆ ಯಾರೂ ಆ ಪ್ರಮಾಣದಲ್ಲಿ ಹಣವನ್ನು ಮನೆಯಲ್ಲಿ ಇಟ್ಟುಕೊಳ್ಳುವ ಸಾಧ್ಯತೆ ಇಲ್ಲ. ಆದರೂ ಯಾವುದೇ ನಾಚಿಕೆ ಇಲ್ಲದೇ ಆ ಕಪ್ಪು ಹಣವನ್ನು ವಹಿಸಿಕೊಂಡು ಬಿಜೆಪಿ ಐಟಿ ದುರ್ಬಳಕೆ ಮಾಡಿಕೊಳ್ಳುತ್ತದೆ ಎಂದು ಹೇಳುತ್ತಾರಲ್ಲ, ಅದೇ ದುರ್ದೈವ.

ಸರಕಾರ ನಿಯಮ ಮಾಡಲಿ!

ಸದ್ಯ ಕೇಂದ್ರ ಸರಕಾರ ಒಂದು ಕಾನೂನು ಮಾಡಬೇಕು. ಅದೇನೆಂದರೆ ಮನೆಗಳಲ್ಲಿ ಇಷ್ಟೇ ಪ್ರಮಾಣದಲ್ಲಿ ಕ್ಯಾಶ್ ಇಟ್ಟುಕೊಳ್ಳಬೇಕು. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇಟ್ಟುಕೊಂಡರೆ ಐಟಿಗೆ ಸಿಕ್ಕಿಬಿದ್ದರೆ ಆ ಹಣ ಸರಕಾರ ವಶಪಡಿಸಿಕೊಳ್ಳುತ್ತದೆ ಎನ್ನುವ ನಿಯಮ ಮಾಡಬೇಕು. ಆಗ ಎಲ್ಲರೂ ಸರಿದಾರಿಗೆ ಬರುತ್ತಾರೆ, ವಿಶೇಷವಾಗಿ ದುರ್ಬಳಕೆ ಎಂದು ಕಿರುಚುವ ಜನ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search