• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕಾಂತಾರಾ – 1 ತುಳು ಭಾಷೆಗೆ ಡಬ್ ಆಗಲ್ವಾ?

Tulunadu News Posted On November 28, 2023
0


0
Shares
  • Share On Facebook
  • Tweet It

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರಾ ಅದ್ಭುತ ಯಶಸ್ಸು ಕಂಡು ಅದರ ಪ್ರಿಕ್ವೇಲ್ ಕಾಂತಾರಾ – 1 ಚಿತ್ರೀಕರಣಕ್ಕೆ ಮುಹೂರ್ತ ಆಗಿರುವುದು ರಾಷ್ಟ್ರವ್ಯಾಪಿ ಈಗಾಗಲೇ ಸುದ್ದಿಯಾಗಿದೆ. ಕಾಂತಾರ ಕನ್ನಡದಲ್ಲಿ ಯಶಸ್ಸುಗಳಿಸಿದ ಬಳಿಕ ಅದನ್ನು ಬೇರೆ ಭಾಷೆಗೂ ಡಬ್ ಮಾಡಿ ಸಿನೆಮಾ ಪ್ಯಾನ್ ಆಗಿ ಎಲ್ಲಾ ಕಡೆಗೂ ಯಶಸ್ಸು ಹೊಂದಿರುವುದು ಹೊಂಬಾಳೆ ಫಿಲಂ ಬ್ಯಾನರ್ ಇದಕ್ಕೆ ಹೊಸ ಶಕ್ತಿಯನ್ನು ತುಂಬಿರುವುದು ನಿಜ. ಆದ್ದರಿಂದ ಈ ಬಾರಿ ಕಾಂತಾರಾ – 1 ಆರಂಭದಲ್ಲಿಯೇ ಪ್ಯಾನ್ ಇಂಡಿಯಾ ಸಿನೆಮಾವಾಗಲಿದೆ ಎಂದು ಈಗಾಗಲೇ ಸಿನೆಮಾ ತಂಡ ಘೋಷಣೆ ಮಾಡಿದೆ. ಕನ್ನಡ ಭಾಷೆಯ ಜೊತೆ ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಳಿ ಸೇರಿ ಇಂಗ್ಲೀಷ್ ಭಾಷೆಯಲ್ಲಿಯೂ ಸಿನೆಮಾ ಮೂಡಿಬರಲಿದೆ. ಆದರೆ ಕಾಂತಾರಾ -1 ಏಕಕಾಲದಲ್ಲಿ ತುಳುವಿನಲ್ಲಿಯೂ ಬರುತ್ತಾ ಎನ್ನುವುದು ಈಗ ಇರುವ ಪ್ರಶ್ನೆ.

ಕಾಂತಾರಾ ಹಿಂದಿನ ಬಾರಿ ಕನ್ನಡದಲ್ಲಿ ದೊಡ್ಡ ಹಿಟ್ ಆದ ನಂತರ ತುಳು ಭಾಷೆಗೆ ಡಬ್ ಆಗಿ ಎರಡು ತಿಂಗಳ ಬಳಿಕ ತುಳುವಿನಲ್ಲಿ ಬಿಡುಗಡೆಗೊಂಡಿತು. ಆದರೆ ಆಗ ಬಹುತೇಕ ತುಳುವರು ಕನ್ನಡದಲ್ಲಿ ಬಂದಿದ್ದ ಕಾಂತಾರಾವನ್ನು ಒಂದಕ್ಕಿಂತ ಹೆಚ್ಚು ಬಾರಿ ಥಿಯೇಟರ್ ಗೆ ಹೋಗಿ ನೋಡಿಯಾಗಿತ್ತು. ಆದ್ದರಿಂದ ತುಳುವಿಗೆ ಡಬ್ ಆಗಿದ್ದ ಕಾಂತಾರಾ ಹೌಸ್ ಫುಲ್ ಪ್ರದರ್ಶನ ಕಂಡಿರಲಿಲ್ಲ. ಹಾಗಂತ ಏಕಕಾಲದಲ್ಲಿ ಕನ್ನಡ ಮತ್ತು ತುಳುವಿನಲ್ಲಿ ಬಿಡುಗಡೆಗೊಳಿಸಿದರೆ ದಕ್ಷಿಣ ಕನ್ನಡದ ಜನ ಹಾಗೂ ತುಳು ಭಾಷಿಕರು ಎಲ್ಲೆಲ್ಲಿ ಇದ್ದಾರೋ ಅವರೆಲ್ಲ ಖಂಡಿತವಾಗಿ ತುಳುವಿನಲ್ಲಿಯೇ ನೋಡಲು ಇಷ್ಟಪಡುತ್ತಾರೆ ಎನ್ನುವುದು ನೂರಕ್ಕೆ ನೂರರಷ್ಟು ನಿಜ. ಆದ್ದರಿಂದ ಕನ್ನಡದಲ್ಲಿ ರಿಲೀಸ್ ಆಗಿ ಬಹಳ ದಿನಗಳ ನಂತರ ತುಳುವಿನಲ್ಲಿ ಲೇಟಾಗಿ ಬಿಡುಗಡೆಗೊಳಿಸಿದರೆ ಜನರ ಸ್ಪಂದನೆ ಕಡಿಮೆಯಾಗಿ ತುಳುವಿಗೆ ಡಬ್ ಮಾಡಿದ್ದಕ್ಕೆ ಲಾಭ ಆಗಲಿಲ್ಲ ಎನ್ನುವ ಅಪವಾದ ಬರುವುದಕ್ಕಿಂತ ಏಕಕಾಲದಲ್ಲಿ ಬಿಡುಗಡೆಗೊಳಿಸುವುದು ಉತ್ತಮ. ಹಾಗೆ ಹೊಂಬಾಳೆ ಫಿಲಂ ಬ್ಯಾನರ್ ಮಾಡಲಿ ಎನ್ನುವುದು ಸಿನೆಮಾ ಪ್ರಿಯರ ಅದರಲ್ಲಿಯೂ ತುಳುವರ ಆಶಯ.

0
Shares
  • Share On Facebook
  • Tweet It




Trending Now
ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
Tulunadu News February 4, 2026
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Tulunadu News January 30, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
  • Popular Posts

    • 1
      ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • 2
      ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!

  • Privacy Policy
  • Contact
© Tulunadu Infomedia.

Press enter/return to begin your search