• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕಾಂತಾರಾ – 1 ತುಳು ಭಾಷೆಗೆ ಡಬ್ ಆಗಲ್ವಾ?

Tulunadu News Posted On November 28, 2023
0


0
Shares
  • Share On Facebook
  • Tweet It

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ಕಾಂತಾರಾ ಅದ್ಭುತ ಯಶಸ್ಸು ಕಂಡು ಅದರ ಪ್ರಿಕ್ವೇಲ್ ಕಾಂತಾರಾ – 1 ಚಿತ್ರೀಕರಣಕ್ಕೆ ಮುಹೂರ್ತ ಆಗಿರುವುದು ರಾಷ್ಟ್ರವ್ಯಾಪಿ ಈಗಾಗಲೇ ಸುದ್ದಿಯಾಗಿದೆ. ಕಾಂತಾರ ಕನ್ನಡದಲ್ಲಿ ಯಶಸ್ಸುಗಳಿಸಿದ ಬಳಿಕ ಅದನ್ನು ಬೇರೆ ಭಾಷೆಗೂ ಡಬ್ ಮಾಡಿ ಸಿನೆಮಾ ಪ್ಯಾನ್ ಆಗಿ ಎಲ್ಲಾ ಕಡೆಗೂ ಯಶಸ್ಸು ಹೊಂದಿರುವುದು ಹೊಂಬಾಳೆ ಫಿಲಂ ಬ್ಯಾನರ್ ಇದಕ್ಕೆ ಹೊಸ ಶಕ್ತಿಯನ್ನು ತುಂಬಿರುವುದು ನಿಜ. ಆದ್ದರಿಂದ ಈ ಬಾರಿ ಕಾಂತಾರಾ – 1 ಆರಂಭದಲ್ಲಿಯೇ ಪ್ಯಾನ್ ಇಂಡಿಯಾ ಸಿನೆಮಾವಾಗಲಿದೆ ಎಂದು ಈಗಾಗಲೇ ಸಿನೆಮಾ ತಂಡ ಘೋಷಣೆ ಮಾಡಿದೆ. ಕನ್ನಡ ಭಾಷೆಯ ಜೊತೆ ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಳಿ ಸೇರಿ ಇಂಗ್ಲೀಷ್ ಭಾಷೆಯಲ್ಲಿಯೂ ಸಿನೆಮಾ ಮೂಡಿಬರಲಿದೆ. ಆದರೆ ಕಾಂತಾರಾ -1 ಏಕಕಾಲದಲ್ಲಿ ತುಳುವಿನಲ್ಲಿಯೂ ಬರುತ್ತಾ ಎನ್ನುವುದು ಈಗ ಇರುವ ಪ್ರಶ್ನೆ.

ಕಾಂತಾರಾ ಹಿಂದಿನ ಬಾರಿ ಕನ್ನಡದಲ್ಲಿ ದೊಡ್ಡ ಹಿಟ್ ಆದ ನಂತರ ತುಳು ಭಾಷೆಗೆ ಡಬ್ ಆಗಿ ಎರಡು ತಿಂಗಳ ಬಳಿಕ ತುಳುವಿನಲ್ಲಿ ಬಿಡುಗಡೆಗೊಂಡಿತು. ಆದರೆ ಆಗ ಬಹುತೇಕ ತುಳುವರು ಕನ್ನಡದಲ್ಲಿ ಬಂದಿದ್ದ ಕಾಂತಾರಾವನ್ನು ಒಂದಕ್ಕಿಂತ ಹೆಚ್ಚು ಬಾರಿ ಥಿಯೇಟರ್ ಗೆ ಹೋಗಿ ನೋಡಿಯಾಗಿತ್ತು. ಆದ್ದರಿಂದ ತುಳುವಿಗೆ ಡಬ್ ಆಗಿದ್ದ ಕಾಂತಾರಾ ಹೌಸ್ ಫುಲ್ ಪ್ರದರ್ಶನ ಕಂಡಿರಲಿಲ್ಲ. ಹಾಗಂತ ಏಕಕಾಲದಲ್ಲಿ ಕನ್ನಡ ಮತ್ತು ತುಳುವಿನಲ್ಲಿ ಬಿಡುಗಡೆಗೊಳಿಸಿದರೆ ದಕ್ಷಿಣ ಕನ್ನಡದ ಜನ ಹಾಗೂ ತುಳು ಭಾಷಿಕರು ಎಲ್ಲೆಲ್ಲಿ ಇದ್ದಾರೋ ಅವರೆಲ್ಲ ಖಂಡಿತವಾಗಿ ತುಳುವಿನಲ್ಲಿಯೇ ನೋಡಲು ಇಷ್ಟಪಡುತ್ತಾರೆ ಎನ್ನುವುದು ನೂರಕ್ಕೆ ನೂರರಷ್ಟು ನಿಜ. ಆದ್ದರಿಂದ ಕನ್ನಡದಲ್ಲಿ ರಿಲೀಸ್ ಆಗಿ ಬಹಳ ದಿನಗಳ ನಂತರ ತುಳುವಿನಲ್ಲಿ ಲೇಟಾಗಿ ಬಿಡುಗಡೆಗೊಳಿಸಿದರೆ ಜನರ ಸ್ಪಂದನೆ ಕಡಿಮೆಯಾಗಿ ತುಳುವಿಗೆ ಡಬ್ ಮಾಡಿದ್ದಕ್ಕೆ ಲಾಭ ಆಗಲಿಲ್ಲ ಎನ್ನುವ ಅಪವಾದ ಬರುವುದಕ್ಕಿಂತ ಏಕಕಾಲದಲ್ಲಿ ಬಿಡುಗಡೆಗೊಳಿಸುವುದು ಉತ್ತಮ. ಹಾಗೆ ಹೊಂಬಾಳೆ ಫಿಲಂ ಬ್ಯಾನರ್ ಮಾಡಲಿ ಎನ್ನುವುದು ಸಿನೆಮಾ ಪ್ರಿಯರ ಅದರಲ್ಲಿಯೂ ತುಳುವರ ಆಶಯ.

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Tulunadu News October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Tulunadu News October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search