• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಅಯೋಧ್ಯೆಯಲ್ಲಿ ರಾಮ ಪ್ರತಿಷ್ಟೆಗೆ ಜನವರಿ 22 ಯಾಕೆ?

Tulunadu News Posted On January 3, 2024


  • Share On Facebook
  • Tweet It

2024 ರ ಜನವರಿ 22 ನೇ ತಾರೀಕನ್ನೇ ಅಯೋಧ್ಯೆಯಲ್ಲಿ ಶ್ರೀರಾಮ ದೇವರ ಪ್ರಾಣ ಪ್ರತಿಷ್ಟೆ ಮಾಡಲು ನಿಗದಿಗೊಳಿಸಿದ್ದು ಯಾಕೆ ಎನ್ನುವ ಪ್ರಶ್ನೆ ಹಲವರ ಮನಸ್ಸಿನಲ್ಲಿ ಬಂದಿರಬಹುದು. ಇದರಲ್ಲಿ ಏನೋ ವಿಶೇಷ ಇರಬಹುದು ಎಂದು ಅನಿಸಿದ್ದರೂ ಏನು ಎಂದು ಗೊತ್ತಿರಲಿಲ್ಲ. ಆದರೆ ಕೊನೆಗೂ ಅದಕ್ಕೆ ಈಗ ಉತ್ತರ ಸಿಕ್ಕಿದೆ.
ಯಾವುದೇ ಒಂದು ಶುಭ ಕೆಲಸ ಮಾಡುವಾಗ ಅದಕ್ಕೆ ಯೋಗ್ಯವಾದ ದಿನವನ್ನು ವೈದಿಕರು ಆಯ್ದುಕೊಳ್ಳುತ್ತಾರೆ. ಆ ದಿನದಂದು ಇರುವ ಮುಹೂರ್ತ ಮತ್ತು ಅದು ಶುಭ ಕಾರ್ಯ ಕೈಗೊಂಡವರ ಗ್ರಹಗತಿಗೆ ಹೊಂದಾಣಿಕೆ ಆಗುತ್ತಾ ಮತ್ತು ಎಷ್ಟು ಗಂಟೆಯ ಎಷ್ಟು ನಿಮಿಷದಿಂದ ಎಷ್ಟು ನಿಮಿಷಕ್ಕೆ ಇದನ್ನು ಮುಗಿಸಬೇಕು ಎಲ್ಲವನ್ನು ಪರಿಗಣಿಸಿ ಶುಭಕಾರ್ಯವನ್ನು ಖಾತ್ರಿಗೊಳಿಸಲಾಗುತ್ತದೆ. ಒಟ್ಟಿನಲ್ಲಿ ದೈವಿಕ ಕ್ಷಣಗಳನ್ನು ವಿಶೇಷವಾಗಿ ಗಮನದಲ್ಲಿಟ್ಟುಕೊಂಡು ಮುಹೂರ್ತದ ದಿನವನ್ನು ನಿಗದಿಗೊಳಿಸಲಾಗುತ್ತದೆ.

ಜನವರಿ 22, 2024 ರ ಮಧ್ಯಾಹ್ನ 12.20 ನಿಮಿಷಕ್ಕೆ ಇಡೀ ಜಗತ್ತಿನ ಶ್ರೀ ರಾಮಭಕ್ತರು ಕಾತರದಿಂದ ಕಾಯುವ ಘಳಿಗೆ ಸಾಕ್ಷಾತ್ಕಾರವಾಗಲಿದೆ. ಆವತ್ತಿನ ಅಭಿಜಿತ್ ಮುಹೂರ್ತಕ್ಕೆ ಗರ್ಭಗುಡಿಯಲ್ಲಿ ಪ್ರಾಣಪ್ರತಿಷ್ಟೆ ನಡೆಯಲಿದೆ. ಆ ಮುಹೂರ್ತ ಶ್ರೀ ರಾಮ ದೇವರಿಗೆ ಸುಮೂರ್ತವಾಗಿದ್ದರೂ ಇಡೀ ಪ್ರಪಂಚದ ಮಟ್ಟಿಗೆ ಅದು ಉತ್ತಮ ಕಾಲ ಎಂದು ಹೇಳಬಹುದಾಗಿದೆ. ಈ ಮಂಗಳಕರ ಮುಹೂರ್ತ ಮೃಗಶಿರ ನಕ್ಷತ್ರ ಜನವರಿ 22 ರ ಸೋಮವಾರ ಪ್ರಾತ: ಕಾಲ 3.52 ನಿಮಿಷಕ್ಕೆ ಆರಂಭವಾಗಿ ಮರುದಿನ ಬೆಳಗ್ಗಿನ ಜಾವ 4: 58 ರ ತನಕ ನಡೆಯಲಿದೆ. ಇಷ್ಟು ಸಮಯ ಕೂಡ ಬಹಳ ಪವಿತ್ರವಾಗಿರುವುದು ಎಂದು ಹೇಳಲಾಗುತ್ತದೆ. ಜನವರಿ 22 ರಂದು ಅಭಿಜಿತ್ ಮುಹೂರ್ತ ಬೆಳಿಗ್ಗೆ 11.51 ರಿಂದ 12.33 ರ ತನಕ ನಡೆಯಲಿದೆ.

ಪುರಾಣದ ಪ್ರಕಾರ ಅಭಿಜಿತ್ ಮುಹೂರ್ತದಲ್ಲಿಯೇ ಭಗವಂತ ಶಿವನಿಂದ ತ್ರಿಪುರಾಸುರನ ಸಂಹಾರವಾಗಿತ್ತು ಎನ್ನಲಾಗುತ್ತಿದೆ. ಈ ಮುಹೂರ್ತ ನಮ್ಮ ಎಲ್ಲಾ ದೋಷಗಳನ್ನು ಪರಿಹರಿಸಲು ಯೋಗ್ಯ ಕಾಲ ಎಂದು ಕರೆಯಲಾಗುತ್ತದೆ. ಈ ಅವಧಿ ನಮ್ಮ ಮನಸ್ಸಿನ ನಕರಾತ್ಮಕ ಶಕ್ತಿಗಳನ್ನು ಹೊಡೆದುಹಾಕಲು ಮತ್ತು ಯಾವುದೇ ಯೋಗ್ಯ ಕಾರ್ಯಗಳನ್ನು ಆರಂಭಿಸಲು ಸೂಕ್ತ ಅವಧಿ ಎನ್ನಲಾಗಿದೆ. ಅದು ಹೊಸ ಉದ್ಯೋಗ, ವ್ಯವಹಾರ, ಹೂಡಿಕೆ, ಗೃಹ ಪ್ರವೇಶ, ಪೂಜೆ ಪುನಸ್ಕಾರಗಳಿಗೆ ಉತ್ತಮ ಸಮಯ ಎಂದು ಕೂಡ ಹೇಳಲಾಗುತ್ತದೆ. ಅಭಿಜಿತ್ ಮುಹೂರ್ತದಲ್ಲಿ ಮಾಡಿದ ಕಾರ್ಯಗಳಿಗೆ ಸಕರಾತ್ಮಕ ಶಕ್ತಿಯ ಬೆಂಬಲ ಇದೆ ಎಂದು ಹೇಳಲಾಗಿದೆ.
ಇನ್ನು ಜನವರಿ 22 ರಂದು ಅಮೃತ ಸಿದ್ಧಿ ಯಾಗ ಮತ್ತು ಸರ್ವತ ಸಿದ್ಧಿ ಯೋಗ ಸಮ್ಮಿಳಿತವಾಗಿ ಮೃಗಶಿರ ನಕ್ಷತ್ರದ ಅವಧಿಗೆ ಇನ್ನಷ್ಟು ಶಕ್ತಿ ನೀಡುತ್ತದೆ. ಒಟ್ಟಿನಲ್ಲಿ ಇದೆಲ್ಲವನ್ನು ಪರಿಶೀಲಿಸಿ ಜನವರಿ 22 ರಂದೇ ಶ್ರೀರಾಮ ಮಂದಿರ ಉದ್ಘಾಟನೆಗೆ ದಿನ ನಿಗದಿಗೊಳಿಸಲಾಗಿದೆ.

  • Share On Facebook
  • Tweet It


- Advertisement -


Trending Now
ಕನ್ನಡ ಮಾತಾಡಲ್ಲ ಎಂದು ದರ್ಪ ತೋರಿದ ಬ್ಯಾಂಕ್ ಮ್ಯಾನೇಜರ್ ಟ್ರಾನ್ಫರ್! ಉಳಿದವರಿಗೆ ಎಚ್ಚರಿಕೆ ಗಂಟೆ..
Tulunadu News May 21, 2025
ಲಷ್ಕರ್ ಈ ತೈಬಾ ಸಹಸಂಸ್ಥಾಪಕನಿಗೆ ಮನೆಯಲ್ಲಿಯೇ ಭೀಕರ ದಾಳಿ, ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲು!
Tulunadu News May 21, 2025
Leave A Reply

  • Recent Posts

    • ಕನ್ನಡ ಮಾತಾಡಲ್ಲ ಎಂದು ದರ್ಪ ತೋರಿದ ಬ್ಯಾಂಕ್ ಮ್ಯಾನೇಜರ್ ಟ್ರಾನ್ಫರ್! ಉಳಿದವರಿಗೆ ಎಚ್ಚರಿಕೆ ಗಂಟೆ..
    • ಲಷ್ಕರ್ ಈ ತೈಬಾ ಸಹಸಂಸ್ಥಾಪಕನಿಗೆ ಮನೆಯಲ್ಲಿಯೇ ಭೀಕರ ದಾಳಿ, ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲು!
    • ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಕೊಡುತ್ತೇವೆ ಎಂದು ಹೇಳಿರಲಿಲ್ಲ - ಡಿಸಿಎಂ
    • ಮದರಸಾ ಪಠ್ಯದಲ್ಲಿ ಆಪರೇಶನ್ ಸಿಂಧೂರ್ ಅಳವಡಿಕೆ!
    • ಕೂದಲು ಉದುರುವ ಸಮಸ್ಯೆ; ಮಂಗಳೂರಿನ ಯುವಕ ಆತ್ಮಹತ್ಯೆ!
    • ಬೆಂಗಳೂರಿನ ಹಲವೆಡೆ ಮಳೆಯಿಂದ ಮನೆಗಳಿಗೆ ನುಗ್ಗಿದ ನೀರು.. ಇದು ಹೊಸದಲ್ಲ - ಡಿಕೆಶಿ
    • ಭಯೋತ್ಪಾದಕತೆಯ ವಿರುದ್ಧ ವಿದೇಶಕ್ಕೆ ತೆರಳುವ ಭಾರತದ ನಿಯೋಗದಲ್ಲಿ ಓವೈಸಿ! ಹೇಳಿದ್ದೇನು?
    • ಧರ್ಮಸ್ಥಳದ ಆಕಾಂಕ್ಷ ಆತ್ಮಹತ್ಯೆಯ ಬಗ್ಗೆ ಅನುಮಾನ ಎಂದ ಹೆತ್ತವರು!
    • RSS ಕಚೇರಿ ದಾಳಿಯ ಮಾಸ್ಟರ್ ಮೈಂಡ್ ಫಿನಿಶ್.. ಅಬು ಸೈಫುಲ್ಲಾ ಹತ್ಯೆ!
    • ನಂದಿನಿ ನದಿ ಮಾಲಿನ್ಯ ಮಾಡುವವರಿಗೆ ಕಾದಿದೆ ಶಿಕ್ಷೆ: ಉಳ್ಳಾಯ ದೈವ ಅಭಯ
  • Popular Posts

    • 1
      ಕನ್ನಡ ಮಾತಾಡಲ್ಲ ಎಂದು ದರ್ಪ ತೋರಿದ ಬ್ಯಾಂಕ್ ಮ್ಯಾನೇಜರ್ ಟ್ರಾನ್ಫರ್! ಉಳಿದವರಿಗೆ ಎಚ್ಚರಿಕೆ ಗಂಟೆ..
    • 2
      ಲಷ್ಕರ್ ಈ ತೈಬಾ ಸಹಸಂಸ್ಥಾಪಕನಿಗೆ ಮನೆಯಲ್ಲಿಯೇ ಭೀಕರ ದಾಳಿ, ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲು!
    • 3
      ಪ್ರತಿ ತಿಂಗಳು ಗೃಹಲಕ್ಷ್ಮಿ ಹಣ ಕೊಡುತ್ತೇವೆ ಎಂದು ಹೇಳಿರಲಿಲ್ಲ - ಡಿಸಿಎಂ
    • 4
      ಮದರಸಾ ಪಠ್ಯದಲ್ಲಿ ಆಪರೇಶನ್ ಸಿಂಧೂರ್ ಅಳವಡಿಕೆ!
    • 5
      ಕೂದಲು ಉದುರುವ ಸಮಸ್ಯೆ; ಮಂಗಳೂರಿನ ಯುವಕ ಆತ್ಮಹತ್ಯೆ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search