• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮಲ್ಟಿಪ್ಲೆಕ್ಸ್ ಟಿಕೆಟ್ ದರ ಗರಿಷ್ಟ 200 ರೂಗೆ ಫಿಕ್ಸ್ ಯಾವಾಗ?

Tulunadu News Posted On March 14, 2025
0


0
Shares
  • Share On Facebook
  • Tweet It

ರಾಜ್ಯ ಸರಕಾರವೇನೋ ಬಜೆಟಿನಲ್ಲಿ ಜನಪ್ರಿಯ ಘೋಷಣೆಗಳನ್ನು ಮಾಡುತ್ತದೆ, ಅದನ್ನು ನೋಡಿ ಜನ ಅಂದು, ಮರುದಿನ, ಹೆಚ್ಚೆಂದರೆ ವಾರ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ನಂತರ ಇವರ ಹಣೆಬರಹವೇ ಇಷ್ಟು ಎಂದು ಅದನ್ನು ಪಕ್ಕಕ್ಕೆ ಇಟ್ಟು ಮರೆತುಬಿಡುತ್ತಾರೆ. ಮಲ್ಟಿಫ್ಲೆಕ್ಸ್ ನ ವಿಷಯದಲ್ಲಿಯೂ ಹೀಗೆ ಆಗಬಾರದು ಎಂದಾದರೆ ಬಜೆಟಿನಲ್ಲಿ ಘೋಷಣೆ ಮಾಡಿದ್ದನ್ನು ಸರಕಾರ ಶೀಘ್ರ ಈಡೇರಿಕೆಗೆ ಇಚ್ಚಾಶಕ್ತಿ ತೋರಿಸಬೇಕು.

ಮಲ್ಟಿಫ್ಲೆಕ್ಸ್ ನಲ್ಲಿ ಆರಾಮ ಆಸೀನದಲ್ಲಿ ಕುಳಿತು ತಣ್ಣನೆಯ ವಾತಾವರಣದಲ್ಲಿ ಸಿನೆಮಾ ನೋಡಬೇಕು ಎನ್ನುವುದು ಪ್ರತಿಯೊಬ್ಬರ ಕನಸು. ಆದರೆ ಮಲ್ಟಿಫ್ಲೆಕ್ಸ್ ಟಿಕೆಟ್ ದರ ಮಧ್ಯಮ ವರ್ಗದವರ ಕೈಗೆ ಎಟಕುವುದೇ ಕಷ್ಟವಾಗಿತ್ತು. ಒಂದೊಂದು ಸಿನೆಮಾದ ಟಿಕೆಟ್ ದರ ನೋಡಿದರೆ ಸಾಮಾನ್ಯ ಜನ ಮಲ್ಟಿಫ್ಲೆಕ್ಸ್ ನಲ್ಲಿ ಸಿನೆಮಾ ನೋಡುವ ಆಸೆಯನ್ನೇ ಕೈಬಿಡುತ್ತಿದ್ದರು. ಆದರೆ ಇಲ್ಲಿನ ಜನರ ಹಣ ಕೊಳ್ಳೆ ಹೊಡೆದು ಪರಭಾಷಿಗರು ಬೆಳೆಯುವುದಕ್ಕೆ ಕಡಿವಾಣ ಹಾಕಬೇಕು ಎನ್ನುವ ಉದ್ದೇಶದಿಂದ ರಾಜ್ಯ ಸರಕಾರ ಬಜೆಟಿನಲ್ಲಿ ಟಿಕೆಟ್ ದರ ಗರಿಷ್ಟ 200 ರೂ ಮೀರುವಂತಿಲ್ಲ ಎಂದು ಘೋಷಿಸಿದೆ. ಆದರೆ ಘೋಷಿಸಿದ ಕೂಡಲೇ ಅದು ಜಾರಿಗೆ ಬರುವುದಿಲ್ಲ.

ಅದನ್ನು ಕ್ಯಾಬಿನೆಟ್ ನಲ್ಲಿ ಮಂಡಿಸಿ ಅಲ್ಲಿ ಮಂಜೂರಾತಿ ಸಿಕ್ಕಿದ ನಂತರ ಸಂಬಂಧಪಟ್ಟ ಇಲಾಖೆಯು ಆ ಯೋಜನೆಯ ಅನುಷ್ಠಾನಕ್ಕೆ ಬೇಕಾದ ನಿಯಮಗಳನ್ನು ರೂಪಿಸಬೇಕಾಗುತ್ತದೆ. ಈ ಪ್ರಕ್ರಿಯೆ ಮುಗಿದ ನಂತರ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸುತ್ತದೆ. ನಂತರ ಇದು ನಿಯಮವಾಗಿ ಜಾರಿಗೆ ಬರುತ್ತದೆ. ಈ ಅಧಿಸೂಚನೆಯ ಬಳಿಕ ಯಾರಾದರೂ ನ್ಯಾಯಾಲಯಕ್ಕೆ ಹೋದರೆ ಆಗ ಪ್ರಕ್ರಿಯೆಗೆ ತಡೆ ಬಿದ್ದರೂ ಆಶ್ಚರ್ಯವಿಲ್ಲ.
ಕೆಲವು ನಿರ್ಮಾಪಕರು ನಮ್ಮ ಸಿನೆಮಾಗೆ ದೊಡ್ಡ ಬಜೆಟ್ ತಗುಲಿದೆ. ಹಾಗಿರುವಾಗ ನಾವು ಕಡಿಮೆ ರೇಟ್ ಇಟ್ಟರೆ ಅಸಲು ಬರುವುದಿಲ್ಲ ಎಂದು ಹೇಳುತ್ತಾರೆ. ಆದರೆ ಅಂತವರ ವಾದದಲ್ಲಿ ಹುರುಳಿರುವುದಿಲ್ಲ. ಯಾಕೆಂದರೆ ಅಂತಹ ಸಿನೆಮಾಗಳಿಗೆ ಕಡಿಮೆ ದರ ಇದ್ದಲ್ಲಿ ಪ್ರೇಕ್ಷಕರ ಸಂಖ್ಯೆ ಐದು ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ. ಆಗ ಖಂಡಿತವಾಗಿ ಲಾಭ ಬರುತ್ತದೆ. ಆದರೆ ಸಿನೆಮಾದ ಮೇಲೆ ನಂಬಿಕೆ ಇಲ್ಲದೇ ಮೊದಲ ವಾರ ಸಿಕ್ಕಿದ್ದನ್ನು ಬಾಚುವ ಐಡಿಯಾದೊಂದಿಗೆ ಸಿನೆಮಾ ಮಾಡುವ ನಿರ್ಮಾಪಕರಿಗೆ ಸರಕಾರದ ನಿರ್ಧಾರ ಕಸಿವಿಸಿ ಉಂಟುಮಾಡುತ್ತಿದೆ.

0
Shares
  • Share On Facebook
  • Tweet It




Trending Now
ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
Tulunadu News February 4, 2026
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Tulunadu News January 30, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
  • Popular Posts

    • 1
      ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • 2
      ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!

  • Privacy Policy
  • Contact
© Tulunadu Infomedia.

Press enter/return to begin your search