• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ನಂದಿನಿ ಹಾಲಿನ ದರ 3 ರೂ ಹೆಚ್ಚಿಸಲು ಬಹುತೇಕ ನಿರ್ಧಾರ?

Tulunadu News Posted On March 25, 2025
0


0
Shares
  • Share On Facebook
  • Tweet It

ಕರ್ನಾಟಕದಲ್ಲಿ ಈಗ ದರ ಹೆಚ್ಚಳದ ಪರ್ವ ಆರಂಭವಾಗಿರುವುದು ಜನಸಾಮಾನ್ಯರಿಗೆ ಗೊತ್ತಿಲ್ಲದ ವಿಷಯವೇನಿಲ್ಲ. ಈಗಾಗಲೇ ಮೆಟ್ರೋ, ಸಾರಿಗೆ ದರ ಹೆಚ್ಚಳದ ಬಳಿಕ ಈಗ ನಂದಿನಿ ಹಾಲಿಗೂ ಬೆಲೆ ಹೆಚ್ಚಳ ಮಾಡುವ ಮೂಲಕ ಪಾಪದವರ ಜೇಬಿಗೆ ಹೊರೆ ಹಾಕಿ ಭವಿಷ್ಯದಲ್ಲಿ ಹೋಟೇಲುಗಳಲ್ಲಿ ಕಾಫಿ, ಟೀ ಕುಡಿಯುವವರಿಗೂ ಸಂಕಟ ತರಲು ರಾಜ್ಯ ಸರಕಾರ ಸಜ್ಜಾಗಿದೆ.

ಹಾಲು ಒಕ್ಕೂಟಗಳು ಲೀಟರಿಗೆ 5 ರೂ ಹೆಚ್ಚಳ ಮಾಡಲು ಮುಖ್ಯಮಂತ್ರಿಯವರನ್ನು ಈಗಾಗಲೇ ಕೋರಿವೆ. ಆದರೆ ಸಿದ್ಧರಾಮಯ್ಯ ಮೂರು ರೂ ಹೆಚ್ಚಳ ಮಾಡಲು ಒಪ್ಪಿದ್ದಾರೆ. ಸಾಮಾನ್ಯವಾಗಿ ನಡೆಯುವುದೇ ಹೀಗೆ. ಹಾಲು ಒಕ್ಕೂಟಗಳಿಗೂ ಅದು ಗೊತ್ತಿದೆ. ಆದ್ದರಿಂದ ಅವರು ಮೊದಲೇ ಜಾಸ್ತಿ ದರ ಹೆಚ್ಚಳ ಮಾಡಲು ವಿನಂತಿಸುತ್ತವೆ. ಐದು ರೂ ಹೆಚ್ಚಳ ಕೇಳಿದ್ರೆ ಮೂರು ರೂಪಾಯಿ ಆದ್ರೂ ಹೆಚ್ಚಳ ಆಗುತ್ತದೆ ಎನ್ನುವ ನಂಬಿಕೆ ಇದೆ. ಈಗಲೂ ಹಾಗೆ ಆಗಿದೆ. ಅದರಂತೆ ಈಗ ಮೂರು ರೂ ಹೆಚ್ಚಳ ಆಗಲು ಸಮಯ ನಿಗದಿಯಾಗಿದೆ. ಆದರೆ ಸಿಎಂ ಒಂದು ಷರತ್ತು ಮಾತ್ರ ಬೆಲೆ ಹೆಚ್ಚಳ ಯಾವತ್ತು ಆಗುತ್ತದೆ ಎನ್ನುವುದನ್ನು ನಿಗದಿಪಡಿಸಿಲ್ಲ.

ಸಿಎಂ ಪ್ರಕಾರ ಹೆಚ್ಚಿಸಲಿರುವ ಮೂರು ರೂಪಾಯಿ ಕೂಡ ರೈತರಿಗೆ ಹೋಗಬೇಕು ಎಂದಿದ್ದಾರೆ. ಆದರೆ ಒಕ್ಕೂಟಗಳು ಅದನ್ನು ಒಪ್ಪುತ್ತಿಲ್ಲ. ಒಂದಿಷ್ಟು ಭಾಗ ಒಕ್ಕೂಟಗಳಿಗೆ ಹೋಗಬೇಕು ಎನ್ನುವುದು ಅವರ ಹಟ. ಇದರಿಂದ ಈ ವಿಷಯ ಈಗ ಕ್ಯಾಬಿನೆಟ್ ಅಂಗಳದಲ್ಲಿದೆ.

ಮುಖ್ಯಮಂತ್ರಿಯವರ ಅಧಿಕೃತ ನಿವಾಸ ಕಾವೇರಿಯಲ್ಲಿ ಕೆಎಂಎಫ್ ಅಧ್ಯಕ್ಷರು ಹಾಗೂ ಜಿಲ್ಲಾ ಒಕ್ಕೂಟದ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರ ಸಭೆಯಲ್ಲಿ ದರ ಏರಿಕೆಯ ಬಗ್ಗೆ ಸಮಾಲೋಚನೆ ನಡೆದಿದೆ. ಇಲ್ಲಿ ಹಾಲಿನ ದರವನ್ನು ಹೆಚ್ಚಳ ಮಾಡಲು ಸಿಎಂ ಒಪ್ಪಿದರೂ ಈ ಹೆಚ್ಚುವರಿ ಹಣ ರೈತರಿಗೆ ಹೋಗುವ ವಿಷಯದಲ್ಲಿ ಎರಡೂ ಕಡೆ ಒಮ್ಮತ ಬರಲು ಅಸಾಧ್ಯವಾಗಿದೆ. ಒಕ್ಕೂಟಗಳ ವಿಚಾರ ಏನೆಂದರೆ ರೈತರಿಂದ ಖರೀದಿಸಿದ ಅಷ್ಟೂ ಹಾಲನ್ನು ಮಾರಾಟ ಮಾಡುವುದಿಲ್ಲ. ಎಷ್ಟು ಬೇಡಿಕೆ ಇದೆಯೋ ಅಷ್ಟು ಮಾತ್ರ ಮಾರಾಟ ಮಾಡಿ ಉಳಿದದ್ದನ್ನು ಹಾಲಿನ ಪುಡಿಯಾಗಿ ಮಾಡುತ್ತೇವೆ ಎಂದಿದ್ದಾರೆ.

ಒಕ್ಕೂಟಗಳ ಪ್ರಕಾರ ನಮಗೂ ಆಡಳಿತಾತ್ಮಕ ನಿರ್ವಹಣೆಗೆ ಸಾಕಷ್ಟು ಖರ್ಚು ಇದೆ. ಅದನ್ನು ಇದರಿಂದಲೇ ಪಡೆಯಬೇಕು. ಏರಿಸಿದ ಅಷ್ಟೂ ದರವನ್ನು ಎಲ್ಲವನ್ನು ರೈತರಿಗೆ ನೀಡಿದರೆ ನಾವು ಏನು ಮಾಡುವುದು ಎಂದು ಹೇಳಿರುವುದು ಸಿದ್ಧರಾಮಯ್ಯನವರಿಗೆ ಸರಿ ಕಾಣಲಿಲ್ಲ. ಅದಕ್ಕೆ ಮರು ಪ್ರತಿಕ್ರಿಯಿಸಿದ ಸಿಎಂ, ಹಾಲು ಒಕ್ಕೂಟಗಳು ಖರ್ಚು, ವೆಚ್ಚವನ್ನು ಕಡಿಮೆ ಮಾಡಬೇಕು. ಪಾರದರ್ಶಕತೆ ಪಾಲಿಸಬೇಕು. ಕೆಲ ಒಕ್ಕೂಟಗಳಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಕೆಲಸದವರನ್ನು ಗುತ್ತಿಗೆ ಆಧಾರದಲ್ಲಿ ನೇಮಿಸಲಾಗಿದೆ. ಅದು ಬೇಕಾಗಿಲ್ಲ. ಅನಗತ್ಯ ಆಡಳಿತಾತ್ಮಕ ವೆಚ್ಚಗಳಿಂದ ಖರ್ಚು ಹೆಚ್ಚಿದೆಯೇ ವಿನ: ಬೇರೆ ಏನೂ ಅಲ್ಲ. ಆಡಳಿತಾತ್ಮಕ ವೆಚ್ಚ 2% ಮೀರಬಾರದು. ಮುಂದಿನ ಆರು ತಿಂಗಳೊಳಗೆ ಆಡಳಿತಾತ್ಮಕ ವೆಚ್ಚವನ್ನು 2% ಕ್ಕೂ ಕಡಿಮೆ ಇಳಿಸಬೇಕು ಎಂದು ಹೇಳಿದರು.

ಒಟ್ಟಿನಲ್ಲಿ ಹಾಲಿನ ದರ ಹೆಚ್ಚಳ ಮಾಡುವ ಪ್ರಕ್ರಿಯೆಗೆ ಚಾಲನೆ ದೊರಕಿರುವುದು ನಿಜ. ಒಕ್ಕೂಟಗಳ ಖರ್ಚು, ವೆಚ್ಚವನ್ನು ಕಡಿಮೆ ಮಾಡಿ ಜನಸಾಮಾನ್ಯರ ಮೇಲೆ ದರ ಹೆಚ್ಚಳದ ಬರೆ ಹಾಕುವ ಕೆಲಸವನ್ನು ಸರಕಾರ ನಿಲ್ಲಿಸುವುದಾ ಅಥವಾ ಒಕ್ಕೂಟಗಳನ್ನು ಬಿಳಿಯಾನೆಯಂತೆ ಸಾಕಿ ಅವುಗಳ ಹೊರೆಯನ್ನು ಪಾಪದವರ ಮೇಲೆ ಹಾಕುವ ಪ್ರಕ್ರಿಯೆ ಮುಂದುವರೆಯುತ್ತಾ ನೋಡಬೇಕು.

 

0
Shares
  • Share On Facebook
  • Tweet It




Trending Now
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Tulunadu News January 30, 2026
ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
Tulunadu News January 28, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
  • Popular Posts

    • 1
      ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • 2
      ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search