• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಸಲ್ಮಾನ್ ವಾಚ್ ನಲ್ಲಿ ರಾಮ ಮಂದಿರ, ಬೆಲೆ 34 ಲಕ್ಷ ರೂ!

Tulunadu News Posted On March 27, 2025


  • Share On Facebook
  • Tweet It

ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ ತಮ್ಮ ನೂತನ ಸಿನೆಮಾ ಸಿಕಂದರ್ ಪ್ರಮೋಶನ್ ನಲ್ಲಿ ಬಿಝಿಯಾಗಿದ್ದಾರೆ. ಹೀಗೆ ಎಲ್ಲಾ ಕಡೆ ಪ್ರಚಾರದ ಅಂಗವಾಗಿ ಭೇಟಿ ನೀಡುತ್ತಿರುವ ಸಲ್ಮಾನ್ ಖಾನ್ ಕೈಯಲ್ಲಿರುವ ವಾಚ್ ಜನರ ಗಮನ ಸೆಳೆಯುತ್ತಿದೆ. ಅಷ್ಟಕ್ಕೂ ಆ ವಾಚಿನಲ್ಲಿ ಏನಿದೆ ಎಂದು ನಿಮಗೆ ಅನಿಸಬಹುದು. ಅದರಲ್ಲಿ ರಾಮ ಮಂದಿರ ಇದೆ. ಹೌದು ರಾಮ ಜನ್ಮಭೂಮಿ ವಾಚ್ ಎಂದೇ ಇದನ್ನು ಕರೆಯಲಾಗುತ್ತದೆ. ಇದರ ಬೆಲೆ ಕೇವಲ 34 ಲಕ್ಷ ರೂಪಾಯಿಗಳು.

 

ಸಲ್ಮಾನ್ ಖಾನ್ ಈ ವಾಚ್ ತಯಾರಿಕಾ ಕಂಪೆನಿ ಜಾಕಬ್ ಅಂಡ್ ಕಂ ಇದರ ಮಾಲೀಕರೂ, ಚೇರ್ ಮೆನ್ ಕೂಡ ಆಗಿರುವ ಜಾಕಬ್ ಅರಬೋ ಅವರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಈ ಸಂಸ್ಥೆ ಅನೇಕ ಐಷಾರಾಮಿ ವಾಚುಗಳನ್ನು ತಯಾರಿಸುತ್ತದೆ. ಈ ಕಂಪೆನಿಯ ವಾಚುಗಳನ್ನು ಸಲ್ಮಾನ್ ಖಾನ್ ಈ ಹಿಂದೆನೂ ಹಲವಾರು ಕಾರ್ಯಕ್ರಮಗಳಲ್ಲಿ ಧರಿಸಿದ್ದಾರೆ. ಈ ನೂತನ ಬ್ರಾಂಡನ್ನು ಜಾಕಬ್ ಕಂಪೆನಿ ರಾಮ ಮಂದಿರ ಲೋಕಾರ್ಪಣೆ ಆದ ಸಂದರ್ಭದಲ್ಲಿ ಬಿಡುಗಡೆಗೆ ಉದ್ದೇಶಿಸಿತು. ಈ ವಾಚ್ ಈಥೋಸ್ ಮತ್ತು ಜಾಕೋಬ್ ಅಂಡ್ ಕಂಪೆನಿ ಜಂಟಿಯಾಗಿ ಸೇರಿ ನಿರ್ಮಿಸಲಾಗಿದೆ.

ಈ ವಾಚನ್ನು ಎರಡು ತಿಂಗಳ ಹಿಂದೆ ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (ಐಎಸ್ ಪಿಎಲ್) ಲಾಂಚ್ ಸಂದರ್ಭದಲ್ಲಿ ಅಭಿಷೇಕ್ ಬಚ್ಚನ್ ಧರಿಸಿದ್ದರು. ಈ ವಾಚಿನಲ್ಲಿ ರಾಮ ಜನ್ಮಭೂಮಿಯ ಟೈಟಾನಿಯಂ 2 ಸಾಂಸ್ಕೃತಿಕ ಪ್ರಭಾವಳಿ ಮೂಡಿಬಂದಿದೆ. ಈ ವಾಚ್ ಎರಡು ಎಡಿಶನ್ ನಲ್ಲಿ ಹೊರಗೆ ಬಂದಿದ್ದು, ರಾಮ ಮಂದಿರ, ರಾಮ ದೇವರು ಮತ್ತು ಹನುಮಂತ ದೇವರನ್ನು ಕೂಡ ಕಾಣಬಹುದು. ಈ ವಾಚ್ ಬೆಲ್ಟ್ ಕೇಸರಿ ವರ್ಣದಲ್ಲಿ ಮೂಡಿ ಬಂದಿದ್ದು, ಧರಿಸುವವರಿಗೆ ದೈವಿಕವಾಗಿರುವ ಭಾವನೆಯನ್ನು ನೀಡುತ್ತದೆ.

ಸಂಸ್ಥೆಯ ಪ್ರಕಾರ ಕೇಸರಿ ವರ್ಣ ಆಧ್ಯಾತ್ಮಿಕತೆ, ಶುದ್ಧತೆ, ಪ್ರಾರ್ತನೆಯ ಫಲ ಸೇರಿ ಹಿಂದೂತ್ವದ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಸಲ್ಮಾನ್ ಈ ವಾಚ್ ಧರಿಸಿ ಸಿಕಂದರ್ ಪ್ರಚಾರ ಮಾಡುತ್ತಿರುವುದು ಮತ್ತು ಅದು ಕೂಡ ರಮ್ಜಾನ್ ಮಾಸದಲ್ಲಿ ಹಲವರ ಹುಬ್ಬು ಏರುವಂತೆ ಮಾಡಿದೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search