• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?

Tulunadu News Posted On October 29, 2025
0


0
Shares
  • Share On Facebook
  • Tweet It

ಹೈಕಮಾಂಡ್ ತೀರ್ಮಾನಿಸಿದರೆ ಐದು ವರ್ಷ ನಾನೇ ಮುಖ್ಯಮಂತ್ರಿ – ಎಂದು ಹೇಳುವ ಮೂಲಕ ನಾಯಕತ್ವ ಬದಲಾವಂಣೆ ಕುರಿತ ಚರ್ಚೆಗೆ ಸಿದ್ಧರಾಮಯ್ಯ ಹೊಸ ಆಯಾಮ ನೀಡಿರಬಹುದು. ಆದರೆ ಒಂದು ವೇಳೆ ಹೈಕಮಾಂಡ್ ಸಿಎಂ ಬದಲಾಯಿಸುವ ತೀರ್ಮಾನ ಮಾಡಿದರೆ ಆಗ ಡಿಕೆ ಶಿವಕುಮಾರ್ ಅವರೊಬ್ಬರೇ ಪರ್ಯಾಯ ಆಯ್ಕೆಯಾಗಬಾರದು ಎಂದು ಅಂದುಕೊಂಡಿರುವ ರಾಜ್ಯ ಸರಕಾರದ ಹಿರಿಯ ಸಚಿವರು ತಾವೇ ಒಂದು ದಾಳ ಉರುಳಿಸಿದ್ದಾರೆ. ಅದೇ ದಲಿತ ಸಿಎಂ.

ಒಂದು ವೇಳೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ದಲಿತರಿಗೆ ಸಿಎಂ ಮಾಡುವ ಸಂಕಲ್ಪ ಮಾಡಿದರೆ ಅದು ರಾಜಕೀಯ ಇತಿಹಾಸದಲ್ಲಿ ಬಹುದೊಡ್ಡ ನಿರ್ಧಾರವಾಗಲಿದೆ. ಯಾಕೆಂದರೆ ಇಲ್ಲಿಯವರೆಗೆ ದಲಿತ ಸಿಎಂ ಮಾಡುವ ಚಿಂತನೆ ಅಧಿಕಾರಕ್ಕೆ ಏರಿದ ಪಕ್ಷಗಳ ಹೈಕಮಾಂಡಿನ ಮುಂದೆ ಆಗಾಗ ಚರ್ಚೆಗೆ ಬಂದಿದ್ದರೂ ಯಾವುದೇ ಪಕ್ಷದ ದಲಿತರಿಗೆ ಅಂತಹ ಅವಕಾಶ ಸಿಕ್ಕಿರಲಿಲ್ಲ. ಮಲ್ಲಿಕಾರ್ಜುನ ಖರ್ಗೆಯವರಿಗೆ ಆ ಅವಕಾಶ ಕೊನೆಯ ಕ್ಷಣದಲ್ಲಿ ಮಿಸ್ ಆಗಿ ಧರಂ ಸಿಂಗ್ ಅವರಿಗೆ ಆವತ್ತು ಒಲಿಯದಿದ್ದಿದ್ದರೆ ಈಗಾಗಲೇ ಮೊದಲ ದಲಿತ ಸಿಎಂ ಎನ್ನುವ ಪಟ್ಟ ಖರ್ಗೆಯವರಿಗೆ ಸಿಗುತ್ತಿತ್ತು. ಆದರೆ ರಾಜಕೀಯದಲ್ಲಿ ಎಲ್ಲವೂ ಅಂದುಕೊಂಡಂತೆ ಆಗುವುದಿಲ್ಲ. ಯಾವಾಗ ಯಾವ ಟ್ವಿಸ್ಟ್ ಸಿಗುತ್ತದೆ ಎಂಬ ಐಡಿಯಾ ಯಾರೂ ಊಹಿಸಲು ಆಗುವುದಿಲ್ಲ. ಹಾಗೇ ಸಿದ್ಧರಾಮಯ್ಯ ಬಿಟ್ಟುಕೊಟ್ಟರೆ ಖಾಲಿಯಾಗುವ ಸೀಟಿಗೆ ಶಿವಕುಮಾರ್ ಕುಳಿತುಕೊಳ್ಳುತ್ತಾರೆ ಎನ್ನುವುದು 2+2=4 ಎನ್ನುವಷ್ಟೇ ಸರಿಯಾದ ಲೆಕ್ಕಾಚಾರ ಆಗಿದ್ದರೂ ಇದು ರಾಜಕೀಯವಾಗಿರುವುದರಿಂದ ಅವರೇ ಆಗುತ್ತಾರೆ ಎನ್ನುವುದು ಈಗ ಗೋಡೆಯಲ್ಲಿ ಬರೆದಷ್ಟೇ ಸ್ಪಷ್ಟ ಅಲ್ಲ. ಆದ್ದರಿಂದ ಇನ್ನೊಂದು ಬದಿಯಿಂದ ಪ್ರಯತ್ನ ಮಾಡೋಣ ಎಂದು ದಲಿತ ಸಚಿವರ ಗುಂಪು ತಯಾರಾಗಿದೆ. ಅದರ ಚುಕ್ಕಾಣಿಯಲ್ಲಿ ಡಾ| ಪರಮೇಶ್ವರ್ ಹಾಗೂ ಎಚ್ ಸಿ ಮಹದೇವಪ್ಪ ಇದ್ದಾರೇನೋ ಎನ್ನುವ ಭಾವನೆ ಬರಲು ಮುಖ್ಯ ಕಾರಣ ಮಹದೇವಪ್ಪ ಅವರ ನಿವಾಸಕ್ಕೆ ತೆರಳಿದ ಪರಮೇಶ್ವರ್ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ಮಾಡಿರುವುದು.

ಇದು ರಾಜಕೀಯ ಸಭೆ ಅಲ್ಲ ಎಂದು ಇಬ್ಬರೂ ಸಮಾಲೋಚನೆ ನಡೆಸಿ ಬಂದ ಬಳಿಕ ಹೇಳಿದರಾದರೂ ಇಂತಹ ಕಾಲಘಟ್ಟದಲ್ಲಿ ಅವರು ರಾಜಕೀಯ ಮಾತನಾಡುವುದಿಲ್ಲ ಎಂದು ಅವರು ಹೇಳಿದರೂ ಯಾರೂ ನಂಬುವ ಸ್ಥಿತಿಯಲ್ಲಿ ಇಲ್ಲ. ಆದರೂ ದಲಿತ ಶಕ್ತಿ ಪ್ರದರ್ಶನಕ್ಕೆ ರಾಜ್ಯದ ಕೆಲ ದಲಿತ ಸಚಿವರು ಮುಂದಾಗಿರುವುದು ನಿಜ. ಆ ಮೂಲಕ ದಲಿತರ ಸಮಸ್ಯೆಗಳನ್ನು ರಾಜ್ಯ ಸರಕಾರದ ಮುಂದಿಟ್ಟು ಪರಿಹಾರ ದೊರಕಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಅಂತವರು ಹೇಳುತ್ತಿದ್ದರಾದರೂ ಅದರ ನೈಜ ಉದ್ದೇಶ ಏನೆಂಬುದು ಎಲ್ಲರಿಗೂ ಗೊತ್ತಿದೆ. ಇಲ್ಲಿ ಸಿದ್ಧರಾಮಯ್ಯ ಬಣದ ಸಚಿವರು ಹಾಗೂ ತಟಸ್ಥ ಬಣದ ಸಚಿವರು ಒಂದಾಗುತ್ತಿದ್ದಾರೆ ಎಂದರೆ ಡಿಕೆಶಿವಕುಮಾರ್ ಅವರಿಗೆ ಕಂಟಕ ತರಲು ಸಜ್ಜಾಗುತ್ತಿದ್ದಾರೆ ಎಂದೇ ಅರ್ಥ. ಆದರೆ ಡಿಕೆಶಿ ಯಾರನ್ನೂ ನಂಬಿ ರಾಜಕಾರಣ ಮಾಡುವವರಲ್ಲ. ಅವರದ್ದೇನಿದ್ದರೂ ತಮ್ಮ ಶ್ರಮಕ್ಕೆ ಕೂಲಿ ಕೊಡಿ ಎನ್ನುವ ಸಿದ್ಧಾಂತ, ಪಕ್ಷವನ್ನು ಅಧಿಕಾರಕ್ಕೆ ಬರಲು ಎಲ್ಲವನ್ನು ಸುರಿದಿರುವುದರಿಂದ ಸಹಜವಾಗಿ ತಮಗೆ ಮುಂದಿನ ಎರಡೂವರೆ ವರ್ಷ ಸಿಎಂ ಮಾಡಿ ಎನ್ನುವುದೇ ಅವರ ಏಕಮಾತ್ರ ಬೇಡಿಕೆ. ಅದು ಈಡೇರುತ್ತಾ ಎನ್ನುವುದಕ್ಕೆ ಇನ್ನು ಒಂದು ತಿಂಗಳು ಕಾಯಬೇಕು.

0
Shares
  • Share On Facebook
  • Tweet It




Trending Now
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
Tulunadu News January 19, 2026
ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
Tulunadu News January 19, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
    • ರಾಜ್ಯ ರಾಜಕೀಯಕ್ಕೆ ಧುಮುಕಿದ ಪ್ರತಾಪ್ ಸಿಂಹ! ಕ್ಷೇತ್ರ ಯಾವುದು ಗೊತ್ತಾ?
    • ಕೊರಗಜ್ಜ ಸಿನೆಮಾದ ಹಾಡುಗಳಿಗೆ ರೀಲ್ಸ್ ಮಾಡಿ ಕೋಟಿ ಗೆಲ್ಲಿ ಎನ್ನುವ ಆಫರ್ ನೀಡಿದ ಚಿತ್ರತಂಡ! ದೈವ ನರ್ತಕರಿಂದ ಆಕ್ರೋಶ...
    • ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನ ಭೇಟಿ: ನಟಿ ನುಶ್ರತ್ ಭರುಚ್ಚಾ ವಿರುದ್ಧ ಫತ್ವಾ – ಭಾರೀ ವಿವಾದ
  • Popular Posts

    • 1
      ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • 2
      ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • 3
      ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..

  • Privacy Policy
  • Contact
© Tulunadu Infomedia.

Press enter/return to begin your search