• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಸಾಮಾಜಿಕ ತಾಣಗಳ ಪತ್ರಕರ್ತರು ಮುಖ್ಯವಾಹಿನಿ ಪತ್ರಕರ್ತರ ಮುಖಕ್ಕೆ ಸತ್ಯ ತೋರಿಸಬೇಕು- ಬಗ್ಗಾ

TNN Correspondent Posted On September 10, 2017
0


0
Shares
  • Share On Facebook
  • Tweet It

Special Coverage from Belgavi:

ಯಾವಾಗ ಸಮಾಜದ ಮುಖ್ಯವಾಹಿನಿಯ ಪತ್ರಕರ್ತರು ದೇಶದ ಅಭಿವೃದ್ಧಿಗೆ ಪೂರಕವಲ್ಲದ ಸುದ್ದಿಗಳನ್ನು ಹೆಚ್ಚೆಚ್ಚು ಪ್ರಚಾರ ಮಾಡುತ್ತಾರೋ ಆವಾಗ ನಾವು ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಿ ಅದಕ್ಕೆ ಸೂಕ್ತ ಉತ್ತರ ಕೊಟ್ಟು ದೇಶದ ಹೆಸರು ಹಾಳಾಗದಂತೆ ತಡೆಯಬೇಕು ಎಂದು ಸಾಮಾಜಿಕ ತಾಣಗಳಲ್ಲಿ ತಮ್ಮ ಅಪ್ರತಿಮ ಲೇಖನಗಳಿಂದ ಮನೆಮಾತಾಗಿರುವ #Tejinder Pal Singh Bagga ಹೇಳಿದ್ದಾರೆ. 
ಅವರು ಯುವ ಬ್ರಿಗೇಡ್ ಸಮರ್ಪಿಸುವ ಸ್ವಾಮಿ ವಿವೇಕಾನಂದ ಅಕ್ಕ ನಿವೇದಿತಾ ಸಾಹಿತ್ಯ ಸಮ್ಮೇಳನದ ಕೊನೆಯ ಹಂತದ ಕಾರ್ಯಕ್ರಮದ ಮೊದಲ ದಿನ ಪತ್ರಕರ್ತರ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು. ಗೌರೀಶ್ ಲಂಕೇಶ್ ಹತ್ಯೆಯ ಬಗ್ಗೆ ನಮಗೆಲ್ಲರಿಗೂ ಬೇಸರವಿದೆ. ಆದರೆ ಅದನ್ನು ಇಡೀ ದಿನ ಮತ್ತು ನಂತರವೂ ಹೆಚ್ಚು ತೋರಿಸುವ ನಮ್ಮ ವಾಹಿನಿಗಳು ಅದೇ ಮೈಸೂರಿನ ರಾಜು, ಮಡಿಕೇರಿಯ ಕುಟ್ಟಪ್ಪ ಅಥವಾ ಮಂಗಳೂರಿನ ಶರತ್ ಹತ್ಯೆಯಾದಾಗ ಅದನ್ನು ಎಷ್ಟು ಹೊತ್ತು ತೋರಿಸಿದ್ದರು ಎನ್ನುವುದು ನಮಗೆಲ್ಲರಿಗೂ ಗೊತ್ತೆ ಇದೆ. ಅಂತಹ ಸಮಯದಲ್ಲಿ ಸಾಮಾಜಿಕ ತಾಣಗಳಲ್ಲಿ ನಾವು ಸಕ್ರಿಯರಾಗಿ ಸತ್ಯವನ್ನು ಮರೆಮಾಚಿ ಸುಳ್ಳನ್ನು ವೈಭವಿಕರಿಸುತ್ತಿದ್ದ ಮಾಧ್ಯಮಗಳ ಮುಖಕ್ಕೆ ಕನ್ನಡಿ ಹಿಡಿದು ಅವರು ಅನಿವಾರ್ಯವಾಗಿ ವಾಸ್ತವವನ್ನು ತೋರಿಸಲು ಮುಂದಾಗುವಂತೆ ಮಾಡಬೇಕು ಎಂದು ಬಗ್ಗಾ ಹೇಳಿದ್ದಾರೆ. ದೇಶವನ್ನು ವಿರೋಧಿಸಿ ಮಾತನಾಡುವ ವ್ಯಕ್ತಿಗಳ ಭಾಷಣವನ್ನು ಇಡೀ ದಿನ ತೋರಿಸುವ ನಮ್ಮ ಮಾಧ್ಯಮಗಳು ಅದೇ ದೇಶಕ್ಕಾಗಿ ಹೋರಾಡಿ ಆ ಮೂಲಕ ಭಯೋತ್ಪಾದಕರ ಕೆಂಗೆಣ್ಣಿಗೆ ತುತ್ತಾಗಿ ಹತ್ಯೆಯಾದ ದೇಶಪ್ರೇಮಿಗಳ ಹತ್ಯಾ ಸುದ್ದಿಗಳನ್ನು ಮರೆ ಮಾಚುತ್ತವೆ ಎಂದು #Tejinder Pal Singh Bagga ಹೇಳಿದರು.
ಫರಿದಾಬಾದ್ ನಲ್ಲಿ ಗುಡಿಸಲೊಳಗೆ ಇದ್ದ ಎರಡು ಮಕ್ಕಳ ಹತ್ಯೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕತ್ತರು ಕಾರಣ ಎಂದು ಸುದ್ದಿ ಮಾಧ್ಯಮಗಳು ಸುಳ್ಳು ಸುದ್ದಿ ದಿನವೀಡಿ ಪ್ರಚಾರಪಡಿಸಿದವು. ನಂತರ ತನಿಖೆಯ ಬಳಿಕ ಅದು ಶಾರ್ಟ್ ಸರ್ಕಿಟ್ ನಿಂದ ಆದ ಸಾವು ಎಂದು ಗೊತ್ತಾದ ನಂತರ ಅದೇ ಮಾಧ್ಯಮಗಳು ಬಾಯಿ ಮುಚ್ಚಿಕೊಂಡವು. ಹಾಗಂತ ಸತ್ಯ ಸುದ್ದಿಯನ್ನು ತೋರಿಸಲು ಹೋಗಲಿಲ್ಲ. ಹತ್ತು ವರ್ಷಗಳ ಹಿಂದೆ ಮಾಧ್ಯಮಗಳು ಹೇಳಿದ್ದೇ ನಿಜ ಎಂದು ಅಂದುಕೊಳ್ಳುವ ಕಾಲವಿತ್ತು. ಆದರೆ ಈಗ ಸಾಮಾಜಿಕ ತಾಣಗಳ ಪತ್ರಕರ್ತರು ಮನಸ್ಸು ಮಾಡಿದರೆ ಸತ್ಯಗಳನ್ನು ಪ್ರಪಂಚದ ಮುಂದೆ ಎತ್ತಿ ಹಿಡಿಯಬಹುದು. ದೆಹಲಿಯಲ್ಲಿ ಚರ್ಚ್ ಮೇಲೆ ಕಲ್ಲು ತೂರಾಟ ಆಯಿತು, ಅಸಹಿಷ್ಣುತೆ ಎಂದು ಮಾಧ್ಯಮಗಳು ಮೋದಿ ಸರಕಾರದ ವಿರುದ್ಧ ಗೂಬೆ ಕೂರಿಸಿದವು. ನಂತರ ಗೊತ್ತಾಯಿತು, ಅದು ಮಕ್ಕಳು ಕ್ರಿಕೆಟ್ ಆಡುವಾಗ ಬಾಲ್ ತಾಗಿದ್ದು ಎಂದು. ಆದರೆ ಅಷ್ಟರಲ್ಲಿ ಮಾಧ್ಯಮಗಳು ತಮ್ಮ ಸೈಡಿನ ಮಾತುಗಳನ್ನು ಹೇಳಿ ಆಗಿರುತ್ತದೆ. ಈಗ ಅದನ್ನು ಸುಳ್ಳೆಂದು ಸಾಬೀತು ಪಡಿಸುವ ಜವಾಬ್ದಾರಿ ಸಾಮಾಜಿಕ ತಾಣಗಳ ಪತ್ರಕರ್ತರ ಮೇಲಿದೆ ಎಂದು ಸಿಂಗ್ ಹೇಳಿದರು.
ಪಶ್ಚಿಮ ಬಂಗಾಲದಲ್ಲಿ ನನ್ ಒಬ್ಬರ ಮೇಲೆ ಅತ್ಯಾಚಾರವಾಗುತ್ತದೆ. ಅದನ್ನು ಸಂಘ ಪರಿವಾರದ ತಲೆಗೆ ಕಟ್ಟಲಾಗುತ್ತದೆ. ಆ ಬಳಿಕ ಬಾಂಗ್ಲಾ ದೇಶದ ಮುಸಲ್ಮಾನನೊಬ್ಬ ಮಾಡಿದ್ದು ಎಂದು ಗೊತ್ತಾದ ನಂತರ ಅದೇ ಮಾಧ್ಯಮಗಳು ಮೌನಕ್ಕೆ ಶರಣಾಗುತ್ತವೆ. ಮಾಧ್ಯಮಗಳಿಗೆ ಬಂಗಾಲದ, ಕೇರಳದ ಕೊಲೆಗಳು ಕಾಣಿಸಲ್ಲ, ಅದನ್ನು ನಾವು ಮಾಡೇಕು. 2014 ರಲ್ಲಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರಲು ಸಾಮಾಜಿಕ ತಾಣಗಳಲ್ಲಿ ಹೆಚ್ಚೆಚ್ಚು ಕಾರ್ಯಕತ್ತರು ಸಕ್ರಿಯವಾಗಿದ್ದೇ ಕಾರಣ, ಆದ್ದರಿಂದ ಮುಂದಿನ ಬಾರಿಯೂ ಯುವಕರು ಸತ್ಯದ ಶೋಧ ಮಾಡಿ ಜನರ ಮುಂದಿಟ್ಟು ಮುಖ್ಯವಾಹಿನಿಯ ಮಾಧ್ಯಮಗಳ ಹಿಡನ್ ಏಜೆಂಡಾವನ್ನು ಬಯಲಿಗೆ ತರಬೇಕು ಎಂದು ಹೇಳಿದರು. ಚಕ್ರವರ್ತಿ ಸೂಲಿಬೆಲೆ #Tejinder Pal Singh Bagga ಅವರ ಪರಿಚಯ ಮಾಡಿದರು. ಶ್ರೀನಾಥ ಮಾನೆ ಅತಿಥಿಯವರನ್ನು ಗೌರವಿಸಿದರು.

0
Shares
  • Share On Facebook
  • Tweet It


Tejinder Singh Baggayuva brigade


Trending Now
ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
Tulunadu News July 30, 2025
ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
Tulunadu News July 29, 2025
You may also like
ಬೆಳಗಾವಿಯಲ್ಲಿ ಆದ್ದೂರಿಯಾಗಿ ಪ್ರಾರಂಭವಾದ ಶೋಭಾಯಾತ್ರೆ
September 10, 2017
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!
    • ಚಕ್ರವರ್ತಿ ವಿರುದ್ಧದ FIR ರದ್ದು! ಸುಪ್ರೀಂ ಕೋರ್ಟಿನಲ್ಲಿ ಅರುಣ್ ಶ್ಯಾಮ್ ವಾದ
    • 6 ಡ್ರೋನ್ ಗಳಲ್ಲಿ ಪಾಕ್ ನಿಂದ ಪಿಸ್ತೂಲ್, ಹೆರಾಯಿನ್ ಸಾಗಾಟ: ಧರೆಗುರುಳಿಸಿದ ಬಿಎಸ್ ಎಫ್..
    • ಶಿವದೂತ ಗುಳಿಗೆ ನಾಟಕದ "ಭೀಮರಾವ್" ರಮೇಶ್ ಕಲ್ಲಡ್ಕ ನಿಧನ!
    • ನೂರಾರು ಜನರಿಗೆ ಸಾಲಕೊಡಿಸುವ ನೆಪದಲ್ಲಿ ವಂಚನೆ: ರೋಶನ್ ಸಲ್ದಾನಾ ಪ್ರಕರಣ ಸಿಐಡಿಗೆ
    • ಕರ್ನಾಟಕದಲ್ಲಿ "ಮನೆಮನೆಗೆ ಪೊಲೀಸ್" ಏನು ಕಥೆ!
  • Popular Posts

    • 1
      ಡ್ರೋಣ್ ಕ್ಷೇತ್ರದ ಬಗ್ಗೆ ರಾಹುಲ್ ಗಾಂಧಿಯವರ ಹೇಳಿಕೆಗೆ ಡಿಎಫ್ ಐ ಅಧ್ಯಕ್ಷರ ಕೌಂಟರ್!
    • 2
      ಧರ್ಮಸ್ಥಳದ ಶವ ಹೂತಿಟ್ಟ ಸ್ಥಳಗಳ ಅಗೆತಕ್ಕೆ ಜೆಸಿಬಿ ಬರಬೇಕಾಯ್ತು!
    • 3
      ಸಮಸ್ಯೆ ಬಗೆಹರಿಯದಿದ್ದರೆ ಉಗ್ರ ಹೋರಾಟ ಅನಿವಾರ್ಯ -ನಳಿನ್ ಕುಮಾರ್ ಕಟೀಲ್
    • 4
      SSLC ಮಕ್ಕಳಿಗೆ ರಾಜ್ಯ ಸರಕಾರದಿಂದ ಶುಭ ಸುದ್ದಿ!
    • 5
      ಬಹುಮುಖ ಪ್ರತಿಭೆ ರಾಜಶ್ರೀ ಪೂಜಾರಿ ಇನ್ನಿಲ್ಲ!

  • Privacy Policy
  • Contact
© Tulunadu Infomedia.

Press enter/return to begin your search