• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

sept 14 – ಬುಲೆಟ್ ರೈಲು ಕನಸು ಸಾಕಾರಕ್ಕೆ ಮೋದಿ-ಅಬೆ ಶಂಕುಸ್ಥಾಪನೆ

TNN Correspondent Posted On September 12, 2017
0


0
Shares
  • Share On Facebook
  • Tweet It

>> ಆ.2022ಕ್ಕೆ ಬುಲೆಟ್ ರೈಲು ಸಂಚಾರ ಅರಂಭಕ್ಕೆ ಡೆಡ್‍ಲೈನ್ ಫಿಕ್ಸ್.

>> ಮುಂಬೈ-ಅಹಮದಾಬಾದ್ ನಡುವೆ ಕೇವಲ 2 ಗಂಟೆ ಪ್ರಯಾಣ!

>> ಸೆ.14ಕ್ಕೆ ಏರ್‍ಪೋರ್ಟ್‍ನಿಂದ ಸಾಬರಮತಿವರೆಗೆ ಜಪಾನ್ ಅಧ್ಯಕ್ಷ- ಪ್ರಧಾನಿ ಮೋದಿ ಮೆರವಣಿಗೆ

ದೆಹಲಿ : ಪ್ರತಿ ಭಾರತೀಯನ ಬುಲೆಟ್ ವೇಗದ ಸಾರಿಗೆ ಕನಸು ಸಾಕಾರಕ್ಕೆ ಪ್ರಧಾನಿ ಮೋದಿ ಜಪಾನ್ ಅಧ್ಯಕ್ಷ ಶಿಂಜೋ ಅಬೆ ಜತೆಗೆ ಗುರುವಾರ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಭಾರತದ ಬುನಿರೀಕ್ಷಿತ ಹೈಸ್ಪೀಡ್ ರೈಲಿನ(ಎಚ್‍ಎಸ್‍ಆರ್) ಯೋಜನೆ ನಿರ್ಮಾಣಕ್ಕೆ ಹಸಿರು ನಿಶಾನೆ ನೀಡುವ ಮೂಲಕ ಹೊಸ ಭಾಷ್ಯ ಬರೆಯಲಿದ್ದಾರೆ.
ಯೋಜನೆ ಚೊಚ್ಚಲ ಮಾರ್ಗವಾಗಿ ಮುಂಬೈನಿಂದ ಅಹಮದಾಬಾದ್‍ವರೆಗೆ ಬುಲೆಟ್ ರೈಲು ಮಾರ್ಗ ನಿರ್ಮಾಣವಾಗಲಿದೆ. ಡಿ.2023ಕ್ಕೆ ಯೋಜನೆ ಮುಕ್ತಾಯದ ಗುರಿ ನಿಗದಡಿಪಡಿಸಲಾಗಿದ್ದರೂ, ಬುಲೆಟ್ ರೈಲು ಸಂಚಾರ ಪರೀಕ್ಷೆಯನ್ನು ಆ.2022ರಿಂದ ನಡೆಸಲು ಗುರಿ ಹಾಕಿಕೊಳ್ಳಲಾಗಿದೆ.

ಬ್ರಿಟೀಷರ ಕಾಲದ ಬಳಿಕ ರೈಲ್ವೆಯಲ್ಲಿ ಹೇಳಿಕೊಳ್ಳುವಂಥ ಅಭಿವೃದ್ಧಿ, ಸಾಧನೆ ಮತ್ತು ಕ್ರಾಂತಿಯಾಗಿರಲೇ ಇಲ್ಲ. ಜಾಗತಿಕ ತಂತ್ರಜ್ಞಾನಕ್ಕೆ ಭಾರತೀಯ ರೈಲ್ವೆ ತೆರೆದುಕೊಳ್ಳುವ ಸಮಯ ಬಂದಿದೆ.
– ಪಿಯೂಷ್ ಗೋಯೆಲ್, ರೈಲ್ವೆ ಸಚಿವ

508 ಕಿ.ಮೀ ಕೇವಲ 2.07 ಗಂಟೆಯಲ್ಲಿ ಸಂಚಾರ!
ಪ್ರತಿ ಗಂಟೆಗೆ 350 ಕಿ.ಮೀ ವೇಗದಲ್ಲಿ ಸಂಚರಿಸುವ ಬುಲೆಟ್ ರೈಲು ಮುಂಬೈ-ಅಹಮದಾಬಾದ್ ನಡುವಿನ ಅಂತರವನ್ನು ಕೇವಲ 2.07 ಗಂಟೆಯಲ್ಲಿ ಕ್ರಮಿಸಲಿದೆ. ಎಕ್ಸ್‍ಪ್ರೆಸ್ ರೈಲುಗಳು ಕೂಡ ಈ ಮಾರ್ಗವನ್ನು ಗರಿಷ್ಠ 7-8 ಗಂಟೆಯಲ್ಲಿ ಮಾತ್ರ ಕ್ರಮಿಸಲು ಸದ್ಯಕ್ಕೆ ಸಾಧ್ಯವಾಗುತ್ತಿದೆ.

ಯೋಜನೆ ವೆಚ್ಚ ರೂ. 108 ಸಾವಿರ ಕೋಟಿ !
ಈ ಯೋಜನೆಗೆ ಅಂದಾಜು ರೂ.108 ಸಾವಿರ ಕೋಟಿ ತಗುಲಲಿದೆ ಎಂದು ಅಂದಾಜಿಸಲಾಗಿದೆ. ಆ ಪೈಕಿ ಶೇ.81ರಷ್ಟು ಹಣ ಸಾಲದ ರೂಪದಲ್ಲಿ ಜಪಾನ್ ಸರ್ಕಾರದ ವತಿಯಿಂದ 0.1% ಬಡ್ಡಿಗೆ ದೊರೆಯಲಿದೆ. ಮುಂದಿನ 50 ವರ್ಷಗಳಲ್ಲಿ ಭಾರತ ಈ ಸಾಲ ತೀರಿಸಬೇಕಿದೆ. ಯೋಜನೆ ಪೂರ್ಣಗೊಳ್ಳುವಷ್ಟರಲ್ಲಿ ವಡೋದರಾದಲ್ಲಿ ಸಿಬ್ಬಂದಿ ತರಬೇತಿ ಸಂಸ್ಥೆ ತೆರೆದು ಜಪಾನ್‍ನಿಂದ ನುರಿತ ತರಬೇತಿ ಕೊಡಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

0
Shares
  • Share On Facebook
  • Tweet It


abeahmedabadbjpbulletfoundationgandhigoyalgujarathigh speedindiaitalyjapanministermodindapiyushrahulrahul gandhirailwayrecordsabarmatishinzosonia gandhitraintrains


Trending Now
ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
Tulunadu News February 12, 2026
ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
Tulunadu News February 12, 2026
You may also like
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಹೀಗೆ ಬಿಟ್ಟರೆ ಸ್ಮಾರ್ಟ್ ಸಿಟಿ ಹಣದಿಂದ ಖಾದರ್ ಶಾದಿ ಮಹಾಲ್ ಕಟ್ಟುತ್ತೇನೆ ಅಂದರೂ ಅನ್ನಬಹುದು!
October 9, 2018
ಮಂಗಳೂರಿನಲ್ಲಿ ದಸರಾ ರಜೆ ಕಡಿಮೆ ಮಾಡುವುದು ಸರಿಯಲ್ಲ- ಶಾಸಕ ಕಾಮತ್
September 22, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್
    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
  • Popular Posts

    • 1
      ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • 2
      ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 3
      'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • 4
      ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • 5
      ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್

  • Privacy Policy
  • Contact
© Tulunadu Infomedia.

Press enter/return to begin your search