• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಗುಹಾಗೆ ನೋಟಿಸ್ ಗುಮ್ಮಿದ ಬಿಜೆಪಿ ಯುವ ಮೋರ್ಚಾ

TNN Correspondent Posted On September 12, 2017


  • Share On Facebook
  • Tweet It

ಬಾಯಿಚಪಲಕ್ಕೆ ದೂಷಿಸಿ ನಂತರ ವಾಜಪೇಯಿ ಹೆಸರ ಹಿಂದೆ ಅವಿತ ಇತಿಹಾಸ ತಜ್ಞ

ದೆಹಲಿ : ಪತ್ರಕರ್ತ ಗೌರಿ ಲಂಕೇಶ್ ಹತ್ಯೆಯಾಗುತ್ತಿದ್ದಂತೆ ಪ್ರಗತಿ ಪರ ಚಿಂತಕರು, ವಿಚಾರವಾದಿಗಳು ಹಾಗೂ ಎಡಪಂಥೀಯರಿಗೆ ಯಾರೇ ಮೈಕ್ ಹಿಡಿಯಲಿ ಬಿಡಲಿ ತಾವೇ ಖುದ್ದಾಗಿ ಹೋಗಿ ನಿಂತು ಮೈಕ್ ಹಿಡಿದು ಕೂಗಿದ್ದು”ಇದು ಬಿಜೆಪಿ ಕೆಲಸ’ ಎಂದು. ತಾವೇ ನಿರ್ಣಾಯಕರಾಗಿ, ತನಿಖೆ ಮಾಡಲು ಆರಂಭಿಸಿದ ಪೊಲೀಸರನ್ನು ನಾಚಿಸುವಂತೆ ತೀರ್ಪು ನೀಡಿಯೇ ಬಿಟ್ಟಿದ್ದರು. ಕೆಲವರು ಆರೆಸ್ಸೆಸ್ ಕಡೆ ಬೆರಳು ಮಾಡಿ ತಮ್ಮ ಹುದುಗಿದ್ದ ಬಾಯಹರುಕು ಚಪಲತನ ತೀರಿಸಿಕೊಳ್ಳಲು ತಡಮಾಡಲಿಲ್ಲ. ಅಂಥವರಲ್ಲಿ ಮುಂಚೂಣಿಯಲ್ಲಿ ನಿಂತಿದ್ದು ಸದಾ ಇತಿಹಾಸದ ಬೇರೊಂದು ಮಗ್ಗುಲನ್ನು ಹೇಳುತ್ತಾ ಪ್ರಚಾರದಲ್ಲಿರಲು ಬಯಸುವ ರಾಮಚಂದ್ರ ಗುಹಾ.

ಕಳೆದ ವಾರ ವರದಿಗಾರರನ್ನು ಕರೆಸಿ, ಮಹಾರಾಷ್ಟ್ರದಲ್ಲಿ ದಾಬೋಲ್ಕರ್, ಪನ್ಸಾರೆ ಹಾಗೂ ಕರ್ನಾಟಕದಲ್ಲಿ ಎಂ.ಎಂ.ಕಲ್ಬುರ್ಗಿ ಹತ್ಯೆ ಹಿಂದೆ ಯಾವ ಸಂಘ ಪರಿವಾರದವರ ಕೈವಾಡವಿದೆಯೋ, ಅವರೇ ಗೌರಿ ಹತ್ಯೆ ಮಾಡಿರುವ ಸಾಧ್ಯತೆಯಿದೆ ಎಂದು ಗುಹಾ ಸಂದರ್ಶನವೊಂದರಲ್ಲಿ ಹೇಳಿಯೇ ಬಿಟ್ಟರು.
ಈಗ ಕರ್ನಾಟಕದ ಬಿಜೆಪಿ ಯುವ ಮೋರ್ಚಾ ಗುಹಾ ಹೇಳಿಕೆ ವಿರುದ್ಧ ಲೀಗಲ್ ನೋಟಿಸ್ ಜಾರಿ ಮಾಡಿದೆ. ಮೂರು ದಿನದೊಳಗೆ ಒಂದು ವೇಳೆ ಷರತ್ತುಗಳಿಲ್ಲದೆ ಕ್ಷಮಾಪಣೆ ಕೇಳದಿದ್ದರೆ, ಕಾನೂನ ಹೋರಾಟಕ್ಕೆ ಸಜ್ಜಾಗಿ ಎಂಬ ಖಡಕ್ ಸಂದೇಶ ರವಾನಿಸಿದೆ.

ಆರೆಸ್ಸೆಸ್, ಬಿಜೆಪಿ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಾ ಓಡಾಡುವುದು ಫ್ಯಾಷನ್ ಆಗಿದೆ. ತಮ್ಮ ಪಾಂಡಿತ್ಯ ಪ್ರದರ್ಶನಕ್ಕೆ ಬಾಯಿಬಂದಂತೆ ಹರಟುವುದೇ ಶೋಕಿಯಾಗುತ್ತಿದೆ. ಇದಕ್ಕೆ ಕಾನೂನಾತ್ಮಕ ಹೋರಾಟವೇ ಪರಿಹಾರ ಎಂದು ಬಿಜೆಪಿ ತನ್ನ ಈ ಕ್ರಮದಿಂದ ಸಾರಿದೆ.

ವಾಜಪೇಯಿ ಜಪ ಮಾಡುತ್ತಾ ಅವಿತ ಗುಹಾ!
ನೋಟಿಸ್ ಸುದ್ದಿ ತಿಳಿಯುತ್ತಿದಂತೆ ಗುಹಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ” ಪುಸ್ತಕಕ್ಕೆ ಪುಸ್ತಕದಿಂದ, ಹೇಳಿಕೆಗೆ ಮಾತಿನಿಂದಲೇ ತಿರುಗೇಟು ನೀಡಬೇಕು ಎಂದು ಅಜಾತಶತ್ರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳುತ್ತಿದ್ದರು. ಆದರೆ ನಾವು ಈಗ ವಾಜಪೇಯಿ ಅವರ ಭಾರತದಲ್ಲಿಲ್ಲ ” ಎಂದು ಕೇಂದ್ರ ಸರಕಾರದ ಕಡೆ ಬೆರಳು ಮಾಡಿದ್ದಾರೆ.

  • Share On Facebook
  • Tweet It


- Advertisement -
bjpcourtdabolkargaurigowriguhaguhaakalburgikarnatakalankeshlawyerlegallegallymodimorchamurder\noticeramachandrashahstatesupremeyuva


Trending Now
ದಿನೇಶ್ ಗುಂಡುರಾವ್ ದಕ್ಷಿಣ ಕನ್ನಡ, ಲಕ್ಷ್ಮಿ ಹೆಬ್ಬಾಳ್ಕರ್ ಉಡುಪಿ!
Tulunadu News June 9, 2023
ಸತ್ಯನಾರಾಯಣ ಆಲಿಯಾಸ್ ಸ್ಯಾಮ್ ಏನಿದು ಅವಸ್ಥೆ!
Tulunadu News June 9, 2023
You may also like
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಮಂಗಳೂರಿನಲ್ಲಿ ದಸರಾ ರಜೆ ಕಡಿಮೆ ಮಾಡುವುದು ಸರಿಯಲ್ಲ- ಶಾಸಕ ಕಾಮತ್
September 22, 2018
ಉನ್ನತ ಶಿಕ್ಷಣದ ಉತ್ತೇಜನಕ್ಕೆ ಕೇಂದ್ರ ಸರ್ಕಾರದ ಭರ್ಜರಿ ಕೊಡುಗೆ, 1 ಲಕ್ಷ ಕೋಟಿ ಅನುದಾನ ಬಿಡುಗಡೆ
June 19, 2018
Leave A Reply

  • Recent Posts

    • ದಿನೇಶ್ ಗುಂಡುರಾವ್ ದಕ್ಷಿಣ ಕನ್ನಡ, ಲಕ್ಷ್ಮಿ ಹೆಬ್ಬಾಳ್ಕರ್ ಉಡುಪಿ!
    • ಸತ್ಯನಾರಾಯಣ ಆಲಿಯಾಸ್ ಸ್ಯಾಮ್ ಏನಿದು ಅವಸ್ಥೆ!
    • ಓಡಿಶಾದಲ್ಲಿ ಮುಂದುವರೆದ ರೈಲು ಅಪಘಾತ
    • ರಾತ್ರಿ ಸ್ನೇಹಿತೆ ಜೊತೆ ಚಾಟ್, ಡೆತ್ ನೋಟ್, ಆತ್ಮ ಹತ್ಯೆ!
    • ಇಂಟರ್ ಲಾಕಿಂಗ್ ಕೇಂದ್ರ ಸ್ಥಾನ ಪಶ್ಚಿಮ ಬಂಗಾಲದಲ್ಲಿ!
    • ಹೆಣ್ಣು ಕಾಮದ ಸರಕಲ್ಲ!
    • ಎರಡೂವರೆ ವರ್ಷ ಬಳಿಕ ಸಚಿವರಾಗಿ ಇರುವುದೇ ಡೌಟು!
    • ದೇವರು ಕೊಟ್ಟರೂ ಅರ್ಚಕ ಕೊಟ್ಟಿಲ್ಲ ಎಂದು ಇನ್ನು ಆಗಲಿಕ್ಕಿಲ್ಲ!!
    • ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
    • ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
  • Popular Posts

    • 1
      ದಿನೇಶ್ ಗುಂಡುರಾವ್ ದಕ್ಷಿಣ ಕನ್ನಡ, ಲಕ್ಷ್ಮಿ ಹೆಬ್ಬಾಳ್ಕರ್ ಉಡುಪಿ!
    • 2
      ಸತ್ಯನಾರಾಯಣ ಆಲಿಯಾಸ್ ಸ್ಯಾಮ್ ಏನಿದು ಅವಸ್ಥೆ!
    • 3
      ಓಡಿಶಾದಲ್ಲಿ ಮುಂದುವರೆದ ರೈಲು ಅಪಘಾತ
    • 4
      ರಾತ್ರಿ ಸ್ನೇಹಿತೆ ಜೊತೆ ಚಾಟ್, ಡೆತ್ ನೋಟ್, ಆತ್ಮ ಹತ್ಯೆ!
    • 5
      ಇಂಟರ್ ಲಾಕಿಂಗ್ ಕೇಂದ್ರ ಸ್ಥಾನ ಪಶ್ಚಿಮ ಬಂಗಾಲದಲ್ಲಿ!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search