• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ವಂಶಾಡಳಿತ: ಭಾರತ ಸಾಗುವುದೇ ಹೀಗೆ..

TNN Correspondent Posted On September 13, 2017
0


0
Shares
  • Share On Facebook
  • Tweet It

>> ಸ್ಟಾಲಿನ್, ಅಖಿಲೇಶ್, ಅಭಿಷೇಕ್ ಬಚ್ಚನ್, ಅಂಬಾನಿಯರದ್ದು ವಂಶಾಡಳಿತ, ನನ್ನನ್ನೇ ಏಕೆ ಟೀಕಿಸುತ್ತೀರಿ? : ರಾಗಾ ಪ್ರಶ್ನೆ

>> ಬರ್ಕಲಿ ವಿವಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಭಾಷಣದಲ್ಲಿ ಭಾರತದ ಮರ್ಯಾದೆ ಹರಾಜು ಹಾಕಿದ ಕಾಂಗ್ರೆಸ್ ಯುವರಾಜ

ದೆಹಲಿ : ಹೋದಲ್ಲೆಲ್ಲಾ ಒಂದಾದರೂ ವಿವಾದ ಹುಟ್ಟುಹಾಕದೇ ಮರಳದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಇಂದು ಕ್ಯಾಲಿಫೋರ್ನಿಯಾ ವಿವಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಭಾಷಣ ಮಾಡುತ್ತಾ ಪ್ರಸಕ್ತ ಭಾರತದ ಚಿತ್ರಣ ನೀಡುತ್ತೇನೆಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿ ಜಾಗತಿಕವಾಗಿ ಭಾರತೀಯರ ಮಾನ ಹರಾಜು ಹಾಕಿದ್ದಾರೆ. ಕಳೆದ 70 ವರ್ಷದಲ್ಲಿ ನನ್ನ ಅಜ್ಜ, ಅಜ್ಜಿ, ತಂದೆ ಹೀಗೆ ಮಾಡಿದರೂ, ಹಾಗೆ ಕೊಡುಗೆ ನೀಡಿದರೂ ಎಂದು ಭಾಷಣದ ಆರಂಭದಲ್ಲಿ ಉದ್ಘರಿಸಿದ ರಾಹುಲ್, ನಂತರ ಪ್ರಸ್ತುತ ಸರ್ಕಾರ ಎಂದು ಹೇಳುತ್ತಲೇ ನೋಟು ನಿಷೇಧ, ಜಿಡಿಪಿ ವಿಚಾರಗಳಲ್ಲಿ ವ್ಯಂಗ್ಯದ ಸುರಿಮಳೆ ಸುರಿಸಿದರು. ವಿದ್ಯಾರ್ಥಿಗಳ ಎದುರು ಹೋಗುತ್ತಿರುವುದು ಭಾರತದ ಮಾನ ಎಂದು ಅರಿಯದೆ ಪ್ರಧಾನಿ ನಡೆಯನ್ನು ಟೀಕಿಸುತ್ತಾ ಹೋದರು.

….ರಾಹುಲ್ ರೀಲ್…..
– ಸರ್ಕಾರದಿಂದ ಪ್ರತಿದಿನ ಕೇವಲ 500 ಉದ್ಯೋಗ ಸೃಷ್ಟಿ. ಬೇಕಿರುವುದು 30 ಸಾವಿರ.
– ನೋಟು ನಿಷೇಧದಿಂದ ದೇಶದಲ್ಲಿ ಚಲಾವಣೆಯಲ್ಲಿದ್ದ 80% ಹಣ ಮಾಯ. ಆರ್ಥಿಕ ಸಲಹೆಗಾರ, ಸಂಸತ್ ಮತ್ತು ಸಚಿವರ ಮಾತಿಗೆ ಕಿವಿಗೊಡದೆ ತೆಗದುಕೊಳ್ಳಲಾದ ಆತುರದ ನಿರ್ಧಾರ.
– ಕೃಷಿ ನೆಲಕಚ್ಚಿದೆ. ರೈತರ ಆತ್ಮಹತ್ಯೆ ಪ್ರಮಾಣ ಮುಗಿಲುಮುಟ್ಟಿದೆ.
– ನೋಟು ನಿಷೇಧದಿಂದ ಭಾರತದ ಜಿಡಿಪಿಗೆ 2% ನಷ್ಟ.
– ಯುವಕರು, ಸಾರ್ವಜನಿಕರ ಆಕ್ರೋಶ ದಿನದಿಂದ ದಿನಕ್ಕೆ ಏರಿಕೆಯಾಗಿ 70 ವರ್ಷ ಕಟ್ಟಿದ ಭಾರತವನ್ನು ಅಲುಗಾಡಿಸುತ್ತದೆ.

ಇಷ್ಟು ಮುತ್ತುಗಳನ್ನು ಉದುರಿಸಿದ ಬಳಿಕ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿಗೆ ಎದುರಾಗಿದ್ದು ‘ವಂಶಾಡಳಿತದ’ ಖಡಕ್ ಪ್ರಶ್ನೆ.

ಇದಕ್ಕೆ ಉತ್ತರಿಸುತ್ತಾ ” ಭಾರತದ ರಾಜಕೀಯ, ಸಿನಿಮಾ ಸೇರಿದಂತೆ ಎಲ್ಲ ರಂಗದಲ್ಲಿಯೂ ವಂಶಾಡಳಿತವಿದೆ. ಅಖಿಲೇಶ್ ಯಾದವ್, ಸ್ಟಾಲಿನ್ ಹಾಗು ಅನುರಾಗ್ ಠಾಕೂರ್ ವಂಶಾಡಳಿತದ ಉದಾಹರಣೆಗಳು. ನನ್ನನ್ನು ಮಾತ್ರ ಕೇಂದ್ರೀಕರಿಸುತ್ತೀರಿ ಯಾಕೆ? ಎಂದು ಮರುಪ್ರಶ್ನಿಸಿದರು.
ಭಾರತದ ನಡೆಯುವುದೇ ಹೀಗೆ….ಇದರಲ್ಲಿ ಆಶ್ಚರ್ಯವಿಲ್ಲ. ಆದರೆ ವಂಶಾಡಳಿತದ ವಾರಸುದಾರ ಸಮರ್ಥನೇ, ಸೂಕ್ಷ್ಮ ಸ್ವಭಾವದವನೇ ? “ ಎಂದು ರಾಹುಲ್ ಹೇಳಿದರು.

ನಾನೇ ಪ್ರಧಾನಿ ಅಭ್ಯರ್ಥಿ, ಏನೀಗ?

ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ” ನನ್ನು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿಕೊಳ್ಳಲು ನಾನು ಈಗಲೇ ಸಿದ್ಧ. ಆದರೆ ದೇಶದಲ್ಲಿ ಸಾಂಸ್ಥಿಕ ವ್ಯವಸ್ಥೆ ಇದೆ, ಚುನಾವಣೆ ನಡೆಯುತ್ತದೆ. ಇದನ್ನು ಕಾಂಗ್ರೆಸ್ ನಿರ್ಧರಿಸಬೇಕಿದೆ’ ಎಂದು ತಮ್ಮ ಹೆಬ್ಬಯಕೆ ಬಿಚ್ಚಿಟ್ಟಿದ್ದಾರೆ.
ತಾಯಿ ಸೋನಿಯಾ ಗಾಂಧಿ ತಮ್ಮ ಗಾದಿ ಬಿಟ್ಟುಕೊಟ್ಟರೆ ವಹಿಸಿಕೊಳ್ಳಲು ಸಿದ್ಧ ಎನ್ನುವಂತಿತ್ತು ಈ ಹೇಳಿಕೆ.

ಮೋದಿಯೇ ಉತ್ತಮ ವಾಗ್ಮಿ

ಇದೇ ಮೊದಲ ಬಾರಿಗೆ ರಾಹುಲ್ ಅವರಿಗೆ ಪ್ರಧಾನಿ ತಮಗಿಂತ ಯಾವುದಾದರೂ ವಿಷಯದಲ್ಲಿ ಹೆಚ್ಚು ಎನಿಸಿದ್ದಾರೆ. ಮತ್ತು ಅದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಅವರು ನನಗಿಂತ ಉತ್ತಮ ಸಂವಹನಕಾರರು. ಗುಂಪಿನಲ್ಲಿ ಎಲ್ಲ ಥರದ ಜನರೊಂದಿಗೆ ಹೇಗೆ ವ್ಯವಹರಿಸಬೇಕು ಎಂದು ಅವರಿಗೆ ನನಗಿಂತ ಚೆನ್ನಾಗಿ ಗೊತ್ತು ಎಂದು ಹೊಗಳಿದ್ದಾರೆ.

ಕಳೆದ ತಿಂಗಳು ನಾರ್ವೆ ಪ್ರವಾಸ ಮುಗಿಸಿ, ಸೆಪ್ಟೆಂಬರ್‍ನಲ್ಲಿ 10 ದಿನ ಅಮೆರಿಕ ಪ್ರವಾಸಕ್ಕೆ ತೆರಳಿದ್ದ ರಾಹುಲ್‍ಗೆ ಈ ತಿಂಗಳ ಎರಡನೇ ವಿದೇಶ ಪ್ರವಾಸವಿದು.

” ಕಾಶ್ಮೀರದಲ್ಲಿ ಹಿಂದಿನ ಸರ್ಕಾರಗಳಿಂದ ದ್ವೇಷ ಬಿತ್ತನೆ ಕಾರ್ಯವಾಗಿದೆ ಎಂದು ಮೋದಿ ಶೃಂಗಸಭೆಗಳಲ್ಲಿ ದೇಶದ ಮಾನ ಕಳೆದಿಲ್ಲವೇ.? ನಮ್ಮ ಉಪಾಧ್ಯಕ್ಷ ಹೇಳಿದ್ದರಲ್ಲಿ ವಾಸ್ತವೆತೆಯಿದೆ.” – ಆನಂದ ಶರ್ಮಾ, ಕಾಂಗ್ರೆಸ್ ಮುಖಂಡ

” ವಿದೇಶದಲ್ಲಿ ಭಾರತದ ಮಾನ ಹರಾಜು ಹಾಕಿ ತಾವೊಬ್ಬ ವಿಫಲ ವಂಶಾಡಳಿತಗಾರ ಎಂದು ರಾಹುಲ್ ತೋರಿಸಿದ್ದಾರೆ. ಈ ಮುಂಚೆ ಅವರೊಬ್ಬ ವಿಫಲ ರಾಜಕಾರಣಿ ಎಂದು ಸಾಬೀತಾಗಿತ್ತು.”   – ಸ್ಮøತಿ ಇರಾನಿ, ಕೇಂದ್ರ ಸಚಿವೆ

 

0
Shares
  • Share On Facebook
  • Tweet It


berkleybjpcaliforniacongressdynastygandhiindiaindiralostmanekaministermodinarendrandanehruprideprimerahulrajivsanjaysoniauniversityupavarun


Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
You may also like
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಹೀಗೆ ಬಿಟ್ಟರೆ ಸ್ಮಾರ್ಟ್ ಸಿಟಿ ಹಣದಿಂದ ಖಾದರ್ ಶಾದಿ ಮಹಾಲ್ ಕಟ್ಟುತ್ತೇನೆ ಅಂದರೂ ಅನ್ನಬಹುದು!
October 9, 2018
ಮಂಗಳೂರಿನಲ್ಲಿ ದಸರಾ ರಜೆ ಕಡಿಮೆ ಮಾಡುವುದು ಸರಿಯಲ್ಲ- ಶಾಸಕ ಕಾಮತ್
September 22, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
  • Popular Posts

    • 1
      ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • 2
      ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • 3
      ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • 4
      ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.

  • Privacy Policy
  • Contact
© Tulunadu Infomedia.

Press enter/return to begin your search