• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ವಂಶಾಡಳಿತ: ಭಾರತ ಸಾಗುವುದೇ ಹೀಗೆ..

TNN Correspondent Posted On September 13, 2017
0


0
Shares
  • Share On Facebook
  • Tweet It

>> ಸ್ಟಾಲಿನ್, ಅಖಿಲೇಶ್, ಅಭಿಷೇಕ್ ಬಚ್ಚನ್, ಅಂಬಾನಿಯರದ್ದು ವಂಶಾಡಳಿತ, ನನ್ನನ್ನೇ ಏಕೆ ಟೀಕಿಸುತ್ತೀರಿ? : ರಾಗಾ ಪ್ರಶ್ನೆ

>> ಬರ್ಕಲಿ ವಿವಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಭಾಷಣದಲ್ಲಿ ಭಾರತದ ಮರ್ಯಾದೆ ಹರಾಜು ಹಾಕಿದ ಕಾಂಗ್ರೆಸ್ ಯುವರಾಜ

ದೆಹಲಿ : ಹೋದಲ್ಲೆಲ್ಲಾ ಒಂದಾದರೂ ವಿವಾದ ಹುಟ್ಟುಹಾಕದೇ ಮರಳದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಇಂದು ಕ್ಯಾಲಿಫೋರ್ನಿಯಾ ವಿವಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಭಾಷಣ ಮಾಡುತ್ತಾ ಪ್ರಸಕ್ತ ಭಾರತದ ಚಿತ್ರಣ ನೀಡುತ್ತೇನೆಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿ ಜಾಗತಿಕವಾಗಿ ಭಾರತೀಯರ ಮಾನ ಹರಾಜು ಹಾಕಿದ್ದಾರೆ. ಕಳೆದ 70 ವರ್ಷದಲ್ಲಿ ನನ್ನ ಅಜ್ಜ, ಅಜ್ಜಿ, ತಂದೆ ಹೀಗೆ ಮಾಡಿದರೂ, ಹಾಗೆ ಕೊಡುಗೆ ನೀಡಿದರೂ ಎಂದು ಭಾಷಣದ ಆರಂಭದಲ್ಲಿ ಉದ್ಘರಿಸಿದ ರಾಹುಲ್, ನಂತರ ಪ್ರಸ್ತುತ ಸರ್ಕಾರ ಎಂದು ಹೇಳುತ್ತಲೇ ನೋಟು ನಿಷೇಧ, ಜಿಡಿಪಿ ವಿಚಾರಗಳಲ್ಲಿ ವ್ಯಂಗ್ಯದ ಸುರಿಮಳೆ ಸುರಿಸಿದರು. ವಿದ್ಯಾರ್ಥಿಗಳ ಎದುರು ಹೋಗುತ್ತಿರುವುದು ಭಾರತದ ಮಾನ ಎಂದು ಅರಿಯದೆ ಪ್ರಧಾನಿ ನಡೆಯನ್ನು ಟೀಕಿಸುತ್ತಾ ಹೋದರು.

….ರಾಹುಲ್ ರೀಲ್…..
– ಸರ್ಕಾರದಿಂದ ಪ್ರತಿದಿನ ಕೇವಲ 500 ಉದ್ಯೋಗ ಸೃಷ್ಟಿ. ಬೇಕಿರುವುದು 30 ಸಾವಿರ.
– ನೋಟು ನಿಷೇಧದಿಂದ ದೇಶದಲ್ಲಿ ಚಲಾವಣೆಯಲ್ಲಿದ್ದ 80% ಹಣ ಮಾಯ. ಆರ್ಥಿಕ ಸಲಹೆಗಾರ, ಸಂಸತ್ ಮತ್ತು ಸಚಿವರ ಮಾತಿಗೆ ಕಿವಿಗೊಡದೆ ತೆಗದುಕೊಳ್ಳಲಾದ ಆತುರದ ನಿರ್ಧಾರ.
– ಕೃಷಿ ನೆಲಕಚ್ಚಿದೆ. ರೈತರ ಆತ್ಮಹತ್ಯೆ ಪ್ರಮಾಣ ಮುಗಿಲುಮುಟ್ಟಿದೆ.
– ನೋಟು ನಿಷೇಧದಿಂದ ಭಾರತದ ಜಿಡಿಪಿಗೆ 2% ನಷ್ಟ.
– ಯುವಕರು, ಸಾರ್ವಜನಿಕರ ಆಕ್ರೋಶ ದಿನದಿಂದ ದಿನಕ್ಕೆ ಏರಿಕೆಯಾಗಿ 70 ವರ್ಷ ಕಟ್ಟಿದ ಭಾರತವನ್ನು ಅಲುಗಾಡಿಸುತ್ತದೆ.

ಇಷ್ಟು ಮುತ್ತುಗಳನ್ನು ಉದುರಿಸಿದ ಬಳಿಕ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿಗೆ ಎದುರಾಗಿದ್ದು ‘ವಂಶಾಡಳಿತದ’ ಖಡಕ್ ಪ್ರಶ್ನೆ.

ಇದಕ್ಕೆ ಉತ್ತರಿಸುತ್ತಾ ” ಭಾರತದ ರಾಜಕೀಯ, ಸಿನಿಮಾ ಸೇರಿದಂತೆ ಎಲ್ಲ ರಂಗದಲ್ಲಿಯೂ ವಂಶಾಡಳಿತವಿದೆ. ಅಖಿಲೇಶ್ ಯಾದವ್, ಸ್ಟಾಲಿನ್ ಹಾಗು ಅನುರಾಗ್ ಠಾಕೂರ್ ವಂಶಾಡಳಿತದ ಉದಾಹರಣೆಗಳು. ನನ್ನನ್ನು ಮಾತ್ರ ಕೇಂದ್ರೀಕರಿಸುತ್ತೀರಿ ಯಾಕೆ? ಎಂದು ಮರುಪ್ರಶ್ನಿಸಿದರು.
ಭಾರತದ ನಡೆಯುವುದೇ ಹೀಗೆ….ಇದರಲ್ಲಿ ಆಶ್ಚರ್ಯವಿಲ್ಲ. ಆದರೆ ವಂಶಾಡಳಿತದ ವಾರಸುದಾರ ಸಮರ್ಥನೇ, ಸೂಕ್ಷ್ಮ ಸ್ವಭಾವದವನೇ ? “ ಎಂದು ರಾಹುಲ್ ಹೇಳಿದರು.

ನಾನೇ ಪ್ರಧಾನಿ ಅಭ್ಯರ್ಥಿ, ಏನೀಗ?

ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ” ನನ್ನು ಮುಂದಿನ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಿಕೊಳ್ಳಲು ನಾನು ಈಗಲೇ ಸಿದ್ಧ. ಆದರೆ ದೇಶದಲ್ಲಿ ಸಾಂಸ್ಥಿಕ ವ್ಯವಸ್ಥೆ ಇದೆ, ಚುನಾವಣೆ ನಡೆಯುತ್ತದೆ. ಇದನ್ನು ಕಾಂಗ್ರೆಸ್ ನಿರ್ಧರಿಸಬೇಕಿದೆ’ ಎಂದು ತಮ್ಮ ಹೆಬ್ಬಯಕೆ ಬಿಚ್ಚಿಟ್ಟಿದ್ದಾರೆ.
ತಾಯಿ ಸೋನಿಯಾ ಗಾಂಧಿ ತಮ್ಮ ಗಾದಿ ಬಿಟ್ಟುಕೊಟ್ಟರೆ ವಹಿಸಿಕೊಳ್ಳಲು ಸಿದ್ಧ ಎನ್ನುವಂತಿತ್ತು ಈ ಹೇಳಿಕೆ.

ಮೋದಿಯೇ ಉತ್ತಮ ವಾಗ್ಮಿ

ಇದೇ ಮೊದಲ ಬಾರಿಗೆ ರಾಹುಲ್ ಅವರಿಗೆ ಪ್ರಧಾನಿ ತಮಗಿಂತ ಯಾವುದಾದರೂ ವಿಷಯದಲ್ಲಿ ಹೆಚ್ಚು ಎನಿಸಿದ್ದಾರೆ. ಮತ್ತು ಅದನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಅವರು ನನಗಿಂತ ಉತ್ತಮ ಸಂವಹನಕಾರರು. ಗುಂಪಿನಲ್ಲಿ ಎಲ್ಲ ಥರದ ಜನರೊಂದಿಗೆ ಹೇಗೆ ವ್ಯವಹರಿಸಬೇಕು ಎಂದು ಅವರಿಗೆ ನನಗಿಂತ ಚೆನ್ನಾಗಿ ಗೊತ್ತು ಎಂದು ಹೊಗಳಿದ್ದಾರೆ.

ಕಳೆದ ತಿಂಗಳು ನಾರ್ವೆ ಪ್ರವಾಸ ಮುಗಿಸಿ, ಸೆಪ್ಟೆಂಬರ್‍ನಲ್ಲಿ 10 ದಿನ ಅಮೆರಿಕ ಪ್ರವಾಸಕ್ಕೆ ತೆರಳಿದ್ದ ರಾಹುಲ್‍ಗೆ ಈ ತಿಂಗಳ ಎರಡನೇ ವಿದೇಶ ಪ್ರವಾಸವಿದು.

” ಕಾಶ್ಮೀರದಲ್ಲಿ ಹಿಂದಿನ ಸರ್ಕಾರಗಳಿಂದ ದ್ವೇಷ ಬಿತ್ತನೆ ಕಾರ್ಯವಾಗಿದೆ ಎಂದು ಮೋದಿ ಶೃಂಗಸಭೆಗಳಲ್ಲಿ ದೇಶದ ಮಾನ ಕಳೆದಿಲ್ಲವೇ.? ನಮ್ಮ ಉಪಾಧ್ಯಕ್ಷ ಹೇಳಿದ್ದರಲ್ಲಿ ವಾಸ್ತವೆತೆಯಿದೆ.” – ಆನಂದ ಶರ್ಮಾ, ಕಾಂಗ್ರೆಸ್ ಮುಖಂಡ

” ವಿದೇಶದಲ್ಲಿ ಭಾರತದ ಮಾನ ಹರಾಜು ಹಾಕಿ ತಾವೊಬ್ಬ ವಿಫಲ ವಂಶಾಡಳಿತಗಾರ ಎಂದು ರಾಹುಲ್ ತೋರಿಸಿದ್ದಾರೆ. ಈ ಮುಂಚೆ ಅವರೊಬ್ಬ ವಿಫಲ ರಾಜಕಾರಣಿ ಎಂದು ಸಾಬೀತಾಗಿತ್ತು.”   – ಸ್ಮøತಿ ಇರಾನಿ, ಕೇಂದ್ರ ಸಚಿವೆ

 

0
Shares
  • Share On Facebook
  • Tweet It


berkleybjpcaliforniacongressdynastygandhiindiaindiralostmanekaministermodinarendrandanehruprideprimerahulrajivsanjaysoniauniversityupavarun


Trending Now
ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
Tulunadu News May 21, 2026
ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
Tulunadu News May 12, 2026
You may also like
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಹೀಗೆ ಬಿಟ್ಟರೆ ಸ್ಮಾರ್ಟ್ ಸಿಟಿ ಹಣದಿಂದ ಖಾದರ್ ಶಾದಿ ಮಹಾಲ್ ಕಟ್ಟುತ್ತೇನೆ ಅಂದರೂ ಅನ್ನಬಹುದು!
October 9, 2018
ಮಂಗಳೂರಿನಲ್ಲಿ ದಸರಾ ರಜೆ ಕಡಿಮೆ ಮಾಡುವುದು ಸರಿಯಲ್ಲ- ಶಾಸಕ ಕಾಮತ್
September 22, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ

  • Privacy Policy
  • Contact
© Tulunadu Infomedia.

Press enter/return to begin your search