• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕೇವಲ ಶಂಕುಸ್ಥಾಪನೆಯಲ್ಲ ಸ್ವಾಮಿ, ಚಾಲನೆ ಕೂಡ ಮಾಡುವೆ : ಕಾಂಗ್ರೆಸ್‍ಗೆ ಮೋದಿ ಟಾಂಗ್

TNN Correspondent Posted On September 23, 2017


  • Share On Facebook
  • Tweet It

>> ತುಳಸಿ ದಾಸರ ಮಂದಿರದಲ್ಲಿ ರಾಮಾಯಣ ಸ್ಟ್ಯಾಂಪ್ ಬಿಡುಗಡೆ ಮಾಡಿದ ಪ್ರಧಾನಿ


ವಾರಾಣಸಿ : ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಬಳಿಕ ಮೊದಲ ಬಾರಿಗೆ ತಮ್ಮ ಲೋಕಸಭೆ ಕ್ಷೇತ್ರ ವಾರಾಣಸಿಗೆ ಶುಕ್ರವಾರ ಭೇಟಿ ನೀಡಿದ್ದರು. ಹಲವು ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಪ್ರತಿಪಕ್ಷಗಳ ಟೀಕೆಗೆ ತಮ್ಮ ಎಂದಿನ ಹಾಸ್ಯ ಚಟಾಕಿಯಿಂದ ಕುಟುಕಿದ ಪ್ರಧಾನಿ ” ನಾನು ಕೇವಲ ಶಂಕುಸ್ಥಾಪನೆ ಮಾತ್ರ ಮಾಡಿ ಬಿಡುವುದಿಲ್ಲ. ನಂತರ ಬಂದು ಉದ್ಘಾಟಿಸಿ ಚಾಲನೆ ಕೂಡ ನೀಡುತ್ತೇನೆ’ ಎಂದು ಕಾಂಗ್ರೆಸ್ ಕಡೆ ಬೆರಳು ಮಾಡಿದರು. 60 ದಶಕಗಳ ಸರ್ದಾರ್ ಸರೋವರ್ ಡ್ಯಾಂ, ಈಶಾನ್ಯದ ಸೇತುವೆ ಸೇರಿದಂತೆ ಹಲವು ಯೋಜನೆಗಳಿಗೆ ತನ್ನ ಆಡಳಿತದಲ್ಲಿ ಶಂಕುಸ್ಥಾಪನೆಯಾಗಿದ್ದು ಎಂದು ಕಾಂಗ್ರೆಸ್ ಬೀಗಿದ್ದಕ್ಕೆ ಪ್ರಧಾನಿ ಮುಟ್ಟು ನೋಡಿಕೊಳ್ಳುವಂತೆ ಉತ್ತರಿಸಿದ್ದಾರೆ.

ರಾಮಾಯಣ ಸ್ಟ್ಯಾಂಪ್ ಬಿಡುಗಡೆ: ನವರಾತ್ರಿಯ ವಿಶೇಷ ಸಂದರ್ಭದಲ್ಲಿ ವಾರಾಣಸಿಯಲ್ಲಿ ಪ್ರಧಾನಿ ಪ್ರಭು ರಾಮನ ಜೀವನಚರಿತ್ರೆ ರಾಮಾಯಣದ ವಿಶೇಷ ಸ್ಟ್ಯಾಂಪನ್ನು ಬಿಡುಗಡೆ ಮಾಡಿದರು. ತುಳಸಿ ಮಂದಿರದಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ” ರಾಮನ ಜೀವನ ಎಲ್ಲರಿಗೂ ಪ್ರೇರಣೆ. ಗಾಂಧೀಜಿಗೆ ರಾಮ ಮಂತ್ರ ಚಿಕ್ಕಂದಿನಿಂದಲೂ ಪ್ರೇರಣೆಯಾಗಿತ್ತು. ರಾಮನಂಥ ಮಹಾಪುರುಷ ಮತ್ತು ಚೈತನ್ಯಪುರುಷನ ಜೀವನ ಚರಿತ್ರೆ ನಮ್ಮನ್ನು ಸದಾಕಾಲ ಪ್ರಭಾವಿಸಲಿ” ಎಂದು ಹೇಳಿದರು.

ಶ್ರೀರಾಮನ ಅನೇಕ ಸ್ಟ್ಯಾಂಪ್‍ಗಳಿವೆ. ಆದರೆ ಜೀವನದ ಬಗೆಗಿನ ಈ ಸ್ಟ್ಯಾಂಪ್ ವಿಶೇಷ. ಇದರ ಬಿಡುಗಡೆ ಭಾಗ್ಯ ನನಗೆ ದೊರೆತಿದ್ದು ನನ್ನ ಪುಣ್ಯ ಎಂದು ಪ್ರಧಾನಿ ಮೋದಿ ಸಂತಸ ವ್ಯPಕ್ತಪಡಿಸಿದರು. ತುಳಸಿ ದಾಸರ ಈ ಪವತ್ರ ಮಂದಿರವೇ ಸರಿ ಜಾಗವೆನಿಸಿ ಇಲ್ಲಿಯೇ ಸ್ಟ್ಯಾಂಪ್ ಬಿಡುಗಡೆ ಮಾಡಿದೆ. ಇಲ್ಲದಿದ್ದರೆ ದೆಹಲಿಯಲ್ಲಿಯೇ ಮಾಡಬಹುದಿತ್ತು ಎಂದರು. ನಂತರ ಅವರು ದುರ್ಗಾ ಮಾತೆ ಮಂದಿರಕ್ಕೆ ಭೇಟಿ ನೀಡಿದರು.

  • Share On Facebook
  • Tweet It


- Advertisement -
congressfoundationmodiramayanastampvaranasi


Trending Now
ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
Tulunadu News May 27, 2023
ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
Tulunadu News May 25, 2023
You may also like
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಹಿಂದೆ ಕಾಂಗ್ರೆಸ್ ಮಾಡಿದ್ದ ತಪ್ಪುಗಳನ್ನು ಪರಿಹರಿಸಲು ಖಾದರ್ ಮನಸ್ಸು ಮಾಡ್ತಾರಾ?
August 9, 2018
ಉನ್ನತ ಶಿಕ್ಷಣದ ಉತ್ತೇಜನಕ್ಕೆ ಕೇಂದ್ರ ಸರ್ಕಾರದ ಭರ್ಜರಿ ಕೊಡುಗೆ, 1 ಲಕ್ಷ ಕೋಟಿ ಅನುದಾನ ಬಿಡುಗಡೆ
June 19, 2018
Leave A Reply

  • Recent Posts

    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
    • ಮೇ ಮಳೆ ತೆರೆದಿಟ್ಟಿತ್ತು ಹಣೆಬರಹ!
    • ಚುನಾವಣೆ ಪ್ರಜಾಪ್ರಭುತ್ವದ ಹಬ್ಬ ಬೆಟ್ಟಿಂಗ್ ನವರಿಗೆ!!
    • ಕೇರಳ ಸ್ಟೋರಿ ಮೇ ಮೇರಾ ಅಬ್ದುಲ್ಲಾ ಅಲಗ್ ಹೇ?
    • ಪ್ರಣಾಳಿಕೆಯಲ್ಲಿ ಪಾರ್ಕಿಂಗ್ ಸಮಸ್ಯೆ ಪರಿಹರಿಸಲು ಮೂರು ಸೂತ್ರ!!
    • ಫೇಕ್ ನ್ಯೂಸ್ ಜಮಾನದಲ್ಲಿ ಸಂತೋಷ್ ವಿರುದ್ಧ ಷಡ್ಯಂತ್ರ!!
    • ಕಾಶ್ಮೀರಿ ಫೈಲ್ಸ್ ಚರಿತ್ರೆ, ಕೇರಳ ಸ್ಟೋರಿ ವರ್ತಮಾನ!!
    • ಕಾಂಗ್ರೆಸ್ ಬಾಯಿಗೆ ಬಂದ ತುತ್ತನ್ನು ಮೈಮೇಲೆ ಚೆಲ್ಲಿಕೊಂಡಿದೆ!!
    • ಕಾಂಗ್ರೆಸ್ಸಿಗರೇ ಕ್ಯಾಲ್ಕುಲೇಟರ್ ನಲ್ಲಿ ಲೆಕ್ಕ ಹಾಕಿ ಘೋಷಣೆ ಕೂಗಿ!!
  • Popular Posts

    • 1
      ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • 2
      ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search