• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕೇವಲ ಶಂಕುಸ್ಥಾಪನೆಯಲ್ಲ ಸ್ವಾಮಿ, ಚಾಲನೆ ಕೂಡ ಮಾಡುವೆ : ಕಾಂಗ್ರೆಸ್‍ಗೆ ಮೋದಿ ಟಾಂಗ್

TNN Correspondent Posted On September 23, 2017
0


0
Shares
  • Share On Facebook
  • Tweet It

>> ತುಳಸಿ ದಾಸರ ಮಂದಿರದಲ್ಲಿ ರಾಮಾಯಣ ಸ್ಟ್ಯಾಂಪ್ ಬಿಡುಗಡೆ ಮಾಡಿದ ಪ್ರಧಾನಿ


ವಾರಾಣಸಿ : ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ಬಳಿಕ ಮೊದಲ ಬಾರಿಗೆ ತಮ್ಮ ಲೋಕಸಭೆ ಕ್ಷೇತ್ರ ವಾರಾಣಸಿಗೆ ಶುಕ್ರವಾರ ಭೇಟಿ ನೀಡಿದ್ದರು. ಹಲವು ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಪ್ರತಿಪಕ್ಷಗಳ ಟೀಕೆಗೆ ತಮ್ಮ ಎಂದಿನ ಹಾಸ್ಯ ಚಟಾಕಿಯಿಂದ ಕುಟುಕಿದ ಪ್ರಧಾನಿ ” ನಾನು ಕೇವಲ ಶಂಕುಸ್ಥಾಪನೆ ಮಾತ್ರ ಮಾಡಿ ಬಿಡುವುದಿಲ್ಲ. ನಂತರ ಬಂದು ಉದ್ಘಾಟಿಸಿ ಚಾಲನೆ ಕೂಡ ನೀಡುತ್ತೇನೆ’ ಎಂದು ಕಾಂಗ್ರೆಸ್ ಕಡೆ ಬೆರಳು ಮಾಡಿದರು. 60 ದಶಕಗಳ ಸರ್ದಾರ್ ಸರೋವರ್ ಡ್ಯಾಂ, ಈಶಾನ್ಯದ ಸೇತುವೆ ಸೇರಿದಂತೆ ಹಲವು ಯೋಜನೆಗಳಿಗೆ ತನ್ನ ಆಡಳಿತದಲ್ಲಿ ಶಂಕುಸ್ಥಾಪನೆಯಾಗಿದ್ದು ಎಂದು ಕಾಂಗ್ರೆಸ್ ಬೀಗಿದ್ದಕ್ಕೆ ಪ್ರಧಾನಿ ಮುಟ್ಟು ನೋಡಿಕೊಳ್ಳುವಂತೆ ಉತ್ತರಿಸಿದ್ದಾರೆ.

ರಾಮಾಯಣ ಸ್ಟ್ಯಾಂಪ್ ಬಿಡುಗಡೆ: ನವರಾತ್ರಿಯ ವಿಶೇಷ ಸಂದರ್ಭದಲ್ಲಿ ವಾರಾಣಸಿಯಲ್ಲಿ ಪ್ರಧಾನಿ ಪ್ರಭು ರಾಮನ ಜೀವನಚರಿತ್ರೆ ರಾಮಾಯಣದ ವಿಶೇಷ ಸ್ಟ್ಯಾಂಪನ್ನು ಬಿಡುಗಡೆ ಮಾಡಿದರು. ತುಳಸಿ ಮಂದಿರದಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ” ರಾಮನ ಜೀವನ ಎಲ್ಲರಿಗೂ ಪ್ರೇರಣೆ. ಗಾಂಧೀಜಿಗೆ ರಾಮ ಮಂತ್ರ ಚಿಕ್ಕಂದಿನಿಂದಲೂ ಪ್ರೇರಣೆಯಾಗಿತ್ತು. ರಾಮನಂಥ ಮಹಾಪುರುಷ ಮತ್ತು ಚೈತನ್ಯಪುರುಷನ ಜೀವನ ಚರಿತ್ರೆ ನಮ್ಮನ್ನು ಸದಾಕಾಲ ಪ್ರಭಾವಿಸಲಿ” ಎಂದು ಹೇಳಿದರು.

ಶ್ರೀರಾಮನ ಅನೇಕ ಸ್ಟ್ಯಾಂಪ್‍ಗಳಿವೆ. ಆದರೆ ಜೀವನದ ಬಗೆಗಿನ ಈ ಸ್ಟ್ಯಾಂಪ್ ವಿಶೇಷ. ಇದರ ಬಿಡುಗಡೆ ಭಾಗ್ಯ ನನಗೆ ದೊರೆತಿದ್ದು ನನ್ನ ಪುಣ್ಯ ಎಂದು ಪ್ರಧಾನಿ ಮೋದಿ ಸಂತಸ ವ್ಯPಕ್ತಪಡಿಸಿದರು. ತುಳಸಿ ದಾಸರ ಈ ಪವತ್ರ ಮಂದಿರವೇ ಸರಿ ಜಾಗವೆನಿಸಿ ಇಲ್ಲಿಯೇ ಸ್ಟ್ಯಾಂಪ್ ಬಿಡುಗಡೆ ಮಾಡಿದೆ. ಇಲ್ಲದಿದ್ದರೆ ದೆಹಲಿಯಲ್ಲಿಯೇ ಮಾಡಬಹುದಿತ್ತು ಎಂದರು. ನಂತರ ಅವರು ದುರ್ಗಾ ಮಾತೆ ಮಂದಿರಕ್ಕೆ ಭೇಟಿ ನೀಡಿದರು.

0
Shares
  • Share On Facebook
  • Tweet It


congressfoundationmodiramayanastampvaranasi


Trending Now
ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
Tulunadu News January 28, 2026
ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
Tulunadu News January 23, 2026
You may also like
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಹಿಂದೆ ಕಾಂಗ್ರೆಸ್ ಮಾಡಿದ್ದ ತಪ್ಪುಗಳನ್ನು ಪರಿಹರಿಸಲು ಖಾದರ್ ಮನಸ್ಸು ಮಾಡ್ತಾರಾ?
August 9, 2018
ಉನ್ನತ ಶಿಕ್ಷಣದ ಉತ್ತೇಜನಕ್ಕೆ ಕೇಂದ್ರ ಸರ್ಕಾರದ ಭರ್ಜರಿ ಕೊಡುಗೆ, 1 ಲಕ್ಷ ಕೋಟಿ ಅನುದಾನ ಬಿಡುಗಡೆ
June 19, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
    • ನನಗೆ 6 ಮಕ್ಕಳು, ನಿಮಗೆ 4 ಮಕ್ಕಳನ್ನು ಮಾಡಲು ತಡೆದವರು ಯಾರು? ನವನೀತ್ ರಾಣಾಗೆ ಓವೈಸಿ ಪ್ರಶ್ನೆ!
  • Popular Posts

    • 1
      ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search