• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಜಯಾ ಸಾವಿನ ಮಹಾರಹಸ್ಯ ಸ್ಫೋಟ!

TNN Correspondent Posted On September 24, 2017


  • Share On Facebook
  • Tweet It

>> ಯಾವ ಎಐಎಡಿಎಂಕೆ ಮುಖಂಡರೂ ಕೂಡ ಅಮ್ಮನನ್ನು ಅಪೋಲೊ ಆಸ್ಪತ್ರೆಯಲ್ಲಿ ಭೇಟಿಯಾಗಿರಲಿಲ್ಲ

>> ಚಿನ್ನಮ್ಮಗೆ ಹೆದರಿ ಬಾಯಿಗೆಬಂದಂತೆ ಸುಳ್ಳು ಹೇಳಿದೆವು.

>> ಅಮ್ಮ ಇಡ್ಲಿ ತಿಂದಿದ್ದು, ನ್ಯೂಸ್ ಪೇಪರ್ ಓದುತ್ತಿದ್ದದ್ದು ಸುಳ್ಳು

ಚೆನ್ನೈ : ನಾವು ಎಐಎಡಿಎಂಕೆ ಮುಖಂಡರು ಯಾರೂ ಕೂಡ ಅಪೋಲೋ ಆಸ್ಪತ್ರೆಯಲ್ಲಿ ಮಾಜಿ ಸಿಎಂ ಜಯಲಲಿತಾಗೆ ಚಿಕಿತ್ಸೆ ಸಂದರ್ಭ ಅವರನ್ನು ಕಂಡಿಲ್ಲ. ಶಶಿಕಲಾಗೆ ಹೆದರಿ ಸುಳ್ಳು ಹೇಳಿದ್ದೆವು ಎಂಬ ರಹಸ್ಯವನ್ನು ತಮಿಳುನಾಡು ಅರಣ್ಯ ಸಚಿವ ದಿಂಡಿಗಲ್ ಶ್ರೀನಿವಾಸನ್ ಶನಿವಾರ ಸ್ಫೋಟಿಸಿದ್ದಾರೆ. ಈ ಮೂಲಕ ಜಯಾ ಸಾವಿನ ಸುತ್ತ ಅನುಮಾನದ ಹುತ್ತ ಮತ್ತೆ ಬೆಳೆಯಲು ಆರಂಭವಾಗಿದೆ.
ಡಿ.5ರಂದು ಜಯಾ ಸತ್ತಿದ್ದಾರೆ ಎಂದು ವೈದ್ಯರು ಘೋಷಿಸುವವರೆಗೂ 75 ದಿನಗಳ ಆಸ್ಪತ್ರೆಯ ಹೈಡ್ರಾಮಾದಲ್ಲಿ ದಿನಕ್ಕೊಬ್ಬ ಶಾಸಕರು ಅಮ್ಮ ಇಡ್ಲಿ ತಿಂದರು. ಪೇಪರ್ ಓದಿದರು ಎಂದು ಹೇಳುತ್ತಾ ಬಂದಿದ್ದರು. ಆದರೆ ಅಸಲಿಗೆ ಯಾರೂ ಜಯಾ ಅವರನ್ನು ನೋಡಲು ಅವಕಾಶವೇ ಇರಲಿಲ್ಲ ಎಂದು ಶ್ರೀನಿವಾಸನ್ ಸತ್ಯ ಬಹಿರಂಗಪಡಿಸಿದ್ದಾರೆ.
ಎಲ್ಲ ಎಐಎಡಿಎಂಕೆ ಮುಖಂಡರು ಆಸ್ಪತ್ರೆಗೆ ಜಯಾ ಅವರನ್ನು ಕಾಣಲು ಹೋದಾಗ ಕೇವಲ ಒಂದನೇ ಮಹಡಿಯಲ್ಲಿ ಕೂತು ಕಾದು ವಾಪಸಾಗಿದ್ದರು. ರಾಜ್ಯಪಾಲ ವಿದ್ಯಾಸಾಗರ ರಾವ್ ಕೂಡ ಅಮ್ಮ ಅವರನ್ನು ನೋಡೇ ಇಲ್ಲ ಎಂದು ಶ್ರೀನಿವಾನಸ್ ಅಮ್ಮ ಸಾವಿನ ಹಿಂದೆ ಕಾಣದ ಕೈಗಳ ಆಟ ನಡೆದಿದೆ ಎಂಬ ಶಂಕೆಗೆ ಪುಷ್ಟಿ ನೀಡಿದ್ದಾರೆ.

ದಿಂಡಿಗಲ್ ಶ್ರೀನಿವಾಸನ್

ತನಿಖಾ ಸಮಿತಿ ಡಮ್ಮಿ, ಹೇಳೋರು-ಕೇಳೊರು ಇಲ್ಲ

ಅಮ್ಮ ಆಪ್ತ ಒ. ಪನ್ನೀರ್ ಸೆಲ್ವಂ ಸಿಎಂ ಆಗಿದ್ದಾಗ ಜಯಾ ಸಾವಿನ ಬಳಿಕ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಗೆ ಆದೇಶಿಸುವುದಾಗಿ ಹೇಳಿದ್ದರು. ಆದರೆ ಎ.ಪಳನಿಸ್ವಾಮಿ ಸಿಎಂ ಆದನಂತರ ಅದರ ಘೋಷಣೆ ಮಾಡಿದರು. ಈಗ ಇಬ್ಬರೂ ಒಂದಾಗಿದ್ದರೂ ತನಿಖೆ ಆರಂಭವೇ ಆಗಿಲ್ಲ ಎಂದು ಶ್ರೀನಿವಾಸನ್ ಬಾಗ್ದಾಳಿ ನಡೆಸಿದ್ದಾರೆ.

  • Share On Facebook
  • Tweet It


- Advertisement -
aiadmkapolloappollodeathdecemberdinakarandindigaldindiguldmkhospitaljayajayalalitajayalalithakarunanidhimgrmurder\palaniswamyrajnikanthsasikalasreenivasanstalintamilnaduttv


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
You may also like
ಡಿ.9, 14 ಪ್ರಧಾನಿ ತವರಲ್ಲಿ ಚುನಾವಣೆ, ಸಮೀಕ್ಷೆಯಲ್ಲಿ ಬಿಜೆಪಿ ಗೆಲವು ಶತಸಿದ್ಧ
October 26, 2017
ಬೆಂಗಳೂರು ಮಳೆ ನಿರ್ಲಕ್ಷಿಸಿದ ಸರ್ಕಾರದಿಂದ 14ನೇ ಬಲಿ
October 16, 2017
ಶಶಿಕಲಾಗೆ 5 ದಿನಗಳ ಪೆರೋಲ್, ತಮಿಳುನಾಡು ರಾಜಕೀಯದಲ್ಲಿ ತಲ್ಲಣ!
October 7, 2017
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search