• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಬೆಂಗಳೂರು ಮಳೆ ನಿರ್ಲಕ್ಷಿಸಿದ ಸರ್ಕಾರದಿಂದ 14ನೇ ಬಲಿ

TNN Correspondent Posted On October 16, 2017
0


0
Shares
  • Share On Facebook
  • Tweet It

>> ಪೂರ್ವ ಬೆಂಗಳೂರಿನ ಕೃಷ್ಣಪ್ಪ ಗಾರ್ಡನ್ ನಿವಾಸಿ ನರಸಮ್ಮ (18) ಮೃತ ಯುವತಿ

>> ಲಗ್ಗೆರೆ ನಗರ ನಿವಾಸಿ ಪುಷ್ಪಾ (22) ಶವ ಭಾನುವಾರ ಪತ್ತೆ, ಜೊತೆಗೆ ಕೊಚ್ಚಿಹೋಗಿದ್ದ ತಾಯಿ ಮೀನಾಕ್ಷಿ (57) ಶವಕ್ಕಾಗಿ ಹುಡುಕಾಟ

ಬೆಂಗಳೂರು : ಕಳೆದ ಆರು ವರ್ಷಗಳಿಂದ ಕರ್ನಾಟಕ ಭೀಕರ ಬರಗಾಲ ಎದುರಿಸುತ್ತಿತ್ತು. ಈ ಬಾರಿಯೂ ಹವಾಮಾನ ಇಲಾಖೆ ಮುನ್ಸೂಚನೆ ನೋಡಿದರೆ ಸಾಧಾರಣಕ್ಕಿಂತ ಕಡಿಮೆ ಮಳೆ ಎಂಬುದಿತ್ತು. ಆದರೆ ದೇವರ ದಯೆಯಿಂದ ಒಳ್ಳೆಯ ಮಳೆಯೇ ರಾಜ್ಯಾದ್ಯಂತ ಸುರಿಯುತ್ತಿದೆ. ಮುಂಗಾರು ಮುಗಿಯುವ ಲಕ್ಷಣಗಳೇ ಇಲ್ಲದ ಹೊತ್ತಲ್ಲಿ ಜನರು ಮಳೆಗೆ ಶಾಪಹಾಕಲು ಆರಂಭಿಸಿದ್ದಾರೆ.
ಬರ ಮುಗಿದು ತಂಪು ಬಂತು ಎಂದು ಖುಷಿಪಡುವ ಕನಿಷ್ಠ ಅರಿವೂ ಇಲ್ಲದ ಜನರು ಆಫೀಸ್‍ಗೆ ಲೇಟಾಯಿತು, ಬಟ್ಟೆ ಒಣಗಿಲ್ಲ, ಹೊರಗೆ ಹೊಗುವಂತಿಲ್ಲ ಎಂದು ಗೊಣಗುವುದು ಸಾಮಾನ್ಯವಾಗಿ ಹೋಗಿದೆ.
ಇದೇ ಮಾದರಿಯಲ್ಲಿ ಮಳೆ ಅವಾಂತರಕ್ಕೆ ಬೆಂಗಳೂರಿನಲ್ಲಿ ಮತ್ತೊಂದು ಬಲಿ ಎಂದು ಸುದ್ದಿ ಬರುತ್ತಿವೆ. ಅಲ್ಲ ಸ್ವಾಮಿ, ರಾಜ್ಯ ಸರ್ಕಾರ ಮೂಲಭೂತ ಸೌಕರ್ಯಗಳ ಕನಿಷ್ಢ ನಿರ್ವಹಣೆಯನ್ನೂ ಮಾಡದೆ, ಮಳೆ ನೀರು ಹರಿಯುವ ಜಾಗಗಳಲೆಲ್ಲಾ ಕಟ್ಟಡ ನಿರ್ಮಿಸಲು ಅನುಮತಿ, ಅತಿಕ್ರಮಣಕ್ಕೆ ಅವಕಾಶ ಕೊಟ್ಟರೆ ಇನ್ನೇನು ಆಗುತ್ತದೆ.


ಮೊನ್ನೆ ರಸ್ತೆ ಗುಂಡಿಗೆ 6 ಬಲಿಯಾಗಿದೆ ಎಂದು ಸುದ್ದಿ ಬಂದಿದೆ. ಇದಕ್ಕೆ ರಸ್ತೆ ಸರಿಯಾಗಿ ಡಾಂಬರು ಹಿಡಿದುಕೊಂಡಿಲ್ಲ ಎಂದು ದೂರಲಾಗುತ್ತದೆಯೇ? ಅಥವಾ ಡಾಂಬರು ಕಳ್ಳಾಟದಿಂದ ಮನುಷ್ಯರ ಬಲಿ ಎಂದು ಚೀರಾಡಲಾಗುತ್ತದೆಯೇ?
ಭ್ರಷ್ಟಾಚಾರದ ಉತ್ತುಂಗದಿಂದ ನಿರ್ಮಿಸಿ, ಮತ್ತೆ ದುಡ್ಡು ನುಂಗಲೆಂದೇ ಮರೆತ ರಸ್ತೆ ನಿರ್ವಹಣೆಯಿಂದ ತಾನೇ ನಾಗರಿಕರು ಬಲಿಯಾಗುತ್ತಿರುವುದು. ಅದರಂತೆ ಮಳೆ ಸುರಿದು ಯಾರನ್ನು ಬಲಿ ತೆಗೆದುಕೊಳ್ಳುತ್ತಿಲ್ಲ. ಬದಲಾಗಿ ಮುಂದಿನ ವರ್ಷ ಪೂರ್ತಿ ಒಳ್ಳೆಯ ಬಳೆ, ಸಮೃದ್ಧಿ ರಾಜ್ಯಾದ್ಯಂತ ಕಾಣಬಹುದು.

ಆದರೆ ಮಳೆ ನೀರು ಹರಿಯಲು ಬಿಡದೆ ಕಟ್ಟಿಕೊಂಡ ಮನೆಗಳು, ಯದ್ವಾತದ್ವಾ ಆಗಿರುವ ವಾಹನಗಳ ಸಂಚಾರ, ರಾಜಧಾನಿಯೇ ಕರ್ನಾಟಕವೇನೋ ಎಂಬಂತೆ ಪ್ರತಿದಿನ ಹರಿದುಬರುತ್ತಿರುವ ಜನಸಾಗರವೇ ನಾಗರಿಕರ ಸಾವಿಗೆ ಕಾರಣ. ಅಂದರೆ ನಮ್ಮಸಾವಿಗೆ ನಾವೂ ಹೊಣೆ. ಸರ್ಕಾರದ ಪಾಲು ಅದರಲ್ಲಿ ಸೇರುತ್ತಿದೆ.

0
Shares
  • Share On Facebook
  • Tweet It


bangalorebengalurublorecitydeathheavykarnatakarainsilicon


Trending Now
ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
Tulunadu News February 12, 2026
ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
Tulunadu News February 12, 2026
You may also like
ಡ್ರೋನ್ ಬಳಕೆಗೆ ಬರಲಿದೆ ಹೊಸ ಕಾನೂನು
November 2, 2017
ಕರ್ನಾಟಕದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕಿಯಾಗಿ ನೀಲಮಣಿ.ಎನ್.ರಾಜು
November 1, 2017
” ನನ್ನ ಮದುವೆ ಯಾವಾಗ? ” ತುಂಬಾ ಹಳೆಯ ಪ್ರಶ್ನೆ : 47ರ ರಾಹುಲ್!
October 27, 2017
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್
    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
  • Popular Posts

    • 1
      ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • 2
      ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 3
      'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • 4
      ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • 5
      ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್

  • Privacy Policy
  • Contact
© Tulunadu Infomedia.

Press enter/return to begin your search