• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಬೆಂಗಳೂರು ಮಳೆ ನಿರ್ಲಕ್ಷಿಸಿದ ಸರ್ಕಾರದಿಂದ 14ನೇ ಬಲಿ

TNN Correspondent Posted On October 16, 2017
0


0
Shares
  • Share On Facebook
  • Tweet It

>> ಪೂರ್ವ ಬೆಂಗಳೂರಿನ ಕೃಷ್ಣಪ್ಪ ಗಾರ್ಡನ್ ನಿವಾಸಿ ನರಸಮ್ಮ (18) ಮೃತ ಯುವತಿ

>> ಲಗ್ಗೆರೆ ನಗರ ನಿವಾಸಿ ಪುಷ್ಪಾ (22) ಶವ ಭಾನುವಾರ ಪತ್ತೆ, ಜೊತೆಗೆ ಕೊಚ್ಚಿಹೋಗಿದ್ದ ತಾಯಿ ಮೀನಾಕ್ಷಿ (57) ಶವಕ್ಕಾಗಿ ಹುಡುಕಾಟ

ಬೆಂಗಳೂರು : ಕಳೆದ ಆರು ವರ್ಷಗಳಿಂದ ಕರ್ನಾಟಕ ಭೀಕರ ಬರಗಾಲ ಎದುರಿಸುತ್ತಿತ್ತು. ಈ ಬಾರಿಯೂ ಹವಾಮಾನ ಇಲಾಖೆ ಮುನ್ಸೂಚನೆ ನೋಡಿದರೆ ಸಾಧಾರಣಕ್ಕಿಂತ ಕಡಿಮೆ ಮಳೆ ಎಂಬುದಿತ್ತು. ಆದರೆ ದೇವರ ದಯೆಯಿಂದ ಒಳ್ಳೆಯ ಮಳೆಯೇ ರಾಜ್ಯಾದ್ಯಂತ ಸುರಿಯುತ್ತಿದೆ. ಮುಂಗಾರು ಮುಗಿಯುವ ಲಕ್ಷಣಗಳೇ ಇಲ್ಲದ ಹೊತ್ತಲ್ಲಿ ಜನರು ಮಳೆಗೆ ಶಾಪಹಾಕಲು ಆರಂಭಿಸಿದ್ದಾರೆ.
ಬರ ಮುಗಿದು ತಂಪು ಬಂತು ಎಂದು ಖುಷಿಪಡುವ ಕನಿಷ್ಠ ಅರಿವೂ ಇಲ್ಲದ ಜನರು ಆಫೀಸ್‍ಗೆ ಲೇಟಾಯಿತು, ಬಟ್ಟೆ ಒಣಗಿಲ್ಲ, ಹೊರಗೆ ಹೊಗುವಂತಿಲ್ಲ ಎಂದು ಗೊಣಗುವುದು ಸಾಮಾನ್ಯವಾಗಿ ಹೋಗಿದೆ.
ಇದೇ ಮಾದರಿಯಲ್ಲಿ ಮಳೆ ಅವಾಂತರಕ್ಕೆ ಬೆಂಗಳೂರಿನಲ್ಲಿ ಮತ್ತೊಂದು ಬಲಿ ಎಂದು ಸುದ್ದಿ ಬರುತ್ತಿವೆ. ಅಲ್ಲ ಸ್ವಾಮಿ, ರಾಜ್ಯ ಸರ್ಕಾರ ಮೂಲಭೂತ ಸೌಕರ್ಯಗಳ ಕನಿಷ್ಢ ನಿರ್ವಹಣೆಯನ್ನೂ ಮಾಡದೆ, ಮಳೆ ನೀರು ಹರಿಯುವ ಜಾಗಗಳಲೆಲ್ಲಾ ಕಟ್ಟಡ ನಿರ್ಮಿಸಲು ಅನುಮತಿ, ಅತಿಕ್ರಮಣಕ್ಕೆ ಅವಕಾಶ ಕೊಟ್ಟರೆ ಇನ್ನೇನು ಆಗುತ್ತದೆ.


ಮೊನ್ನೆ ರಸ್ತೆ ಗುಂಡಿಗೆ 6 ಬಲಿಯಾಗಿದೆ ಎಂದು ಸುದ್ದಿ ಬಂದಿದೆ. ಇದಕ್ಕೆ ರಸ್ತೆ ಸರಿಯಾಗಿ ಡಾಂಬರು ಹಿಡಿದುಕೊಂಡಿಲ್ಲ ಎಂದು ದೂರಲಾಗುತ್ತದೆಯೇ? ಅಥವಾ ಡಾಂಬರು ಕಳ್ಳಾಟದಿಂದ ಮನುಷ್ಯರ ಬಲಿ ಎಂದು ಚೀರಾಡಲಾಗುತ್ತದೆಯೇ?
ಭ್ರಷ್ಟಾಚಾರದ ಉತ್ತುಂಗದಿಂದ ನಿರ್ಮಿಸಿ, ಮತ್ತೆ ದುಡ್ಡು ನುಂಗಲೆಂದೇ ಮರೆತ ರಸ್ತೆ ನಿರ್ವಹಣೆಯಿಂದ ತಾನೇ ನಾಗರಿಕರು ಬಲಿಯಾಗುತ್ತಿರುವುದು. ಅದರಂತೆ ಮಳೆ ಸುರಿದು ಯಾರನ್ನು ಬಲಿ ತೆಗೆದುಕೊಳ್ಳುತ್ತಿಲ್ಲ. ಬದಲಾಗಿ ಮುಂದಿನ ವರ್ಷ ಪೂರ್ತಿ ಒಳ್ಳೆಯ ಬಳೆ, ಸಮೃದ್ಧಿ ರಾಜ್ಯಾದ್ಯಂತ ಕಾಣಬಹುದು.

ಆದರೆ ಮಳೆ ನೀರು ಹರಿಯಲು ಬಿಡದೆ ಕಟ್ಟಿಕೊಂಡ ಮನೆಗಳು, ಯದ್ವಾತದ್ವಾ ಆಗಿರುವ ವಾಹನಗಳ ಸಂಚಾರ, ರಾಜಧಾನಿಯೇ ಕರ್ನಾಟಕವೇನೋ ಎಂಬಂತೆ ಪ್ರತಿದಿನ ಹರಿದುಬರುತ್ತಿರುವ ಜನಸಾಗರವೇ ನಾಗರಿಕರ ಸಾವಿಗೆ ಕಾರಣ. ಅಂದರೆ ನಮ್ಮಸಾವಿಗೆ ನಾವೂ ಹೊಣೆ. ಸರ್ಕಾರದ ಪಾಲು ಅದರಲ್ಲಿ ಸೇರುತ್ತಿದೆ.

0
Shares
  • Share On Facebook
  • Tweet It


- Advertisement -
bangalorebengalurublorecitydeathheavykarnatakarainsilicon


Trending Now
ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
Tulunadu News June 26, 2025
ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
Tulunadu News June 26, 2025
You may also like
ಡ್ರೋನ್ ಬಳಕೆಗೆ ಬರಲಿದೆ ಹೊಸ ಕಾನೂನು
November 2, 2017
ಕರ್ನಾಟಕದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕಿಯಾಗಿ ನೀಲಮಣಿ.ಎನ್.ರಾಜು
November 1, 2017
” ನನ್ನ ಮದುವೆ ಯಾವಾಗ? ” ತುಂಬಾ ಹಳೆಯ ಪ್ರಶ್ನೆ : 47ರ ರಾಹುಲ್!
October 27, 2017
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
    • ಬೊಮ್ಮಾಯಿ 40% ಲಂಚದ ಆರೋಪ ಬಂದಾಗ ಸುಮ್ಮನೆ ಕುಳಿತು ತಪ್ಪು ಮಾಡಿದ್ರು - ಮೋಹನದಾಸ್ ಪೈ
    • ನಿಜವಾಯ್ತು ದೈವದ ನುಡಿ: 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಹಿರಿಮಗ
    • ನಮ್ಮ ಸರಕಾರವಿದ್ದೇ ಒಂದು ಚರಂಡಿ ಮಾಡಲು ಆಗಿಲ್ಲ - ಕಾಂಗ್ರೆಸ್ ಶಾಸಕ ಬಹಿರಂಗ ಬೇಸರ!
    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
  • Popular Posts

    • 1
      ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • 2
      ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • 3
      ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
    • 4
      ಬೊಮ್ಮಾಯಿ 40% ಲಂಚದ ಆರೋಪ ಬಂದಾಗ ಸುಮ್ಮನೆ ಕುಳಿತು ತಪ್ಪು ಮಾಡಿದ್ರು - ಮೋಹನದಾಸ್ ಪೈ
    • 5
      ನಿಜವಾಯ್ತು ದೈವದ ನುಡಿ: 36 ವರ್ಷಗಳ ಬಳಿಕ ತಾಯಿಯ ಮಡಿಲು ಸೇರಿದ ಹಿರಿಮಗ

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search