• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಬೆಂಗಳೂರು ಮಳೆ ನಿರ್ಲಕ್ಷಿಸಿದ ಸರ್ಕಾರದಿಂದ 14ನೇ ಬಲಿ

TNN Correspondent Posted On October 16, 2017


  • Share On Facebook
  • Tweet It

>> ಪೂರ್ವ ಬೆಂಗಳೂರಿನ ಕೃಷ್ಣಪ್ಪ ಗಾರ್ಡನ್ ನಿವಾಸಿ ನರಸಮ್ಮ (18) ಮೃತ ಯುವತಿ

>> ಲಗ್ಗೆರೆ ನಗರ ನಿವಾಸಿ ಪುಷ್ಪಾ (22) ಶವ ಭಾನುವಾರ ಪತ್ತೆ, ಜೊತೆಗೆ ಕೊಚ್ಚಿಹೋಗಿದ್ದ ತಾಯಿ ಮೀನಾಕ್ಷಿ (57) ಶವಕ್ಕಾಗಿ ಹುಡುಕಾಟ

ಬೆಂಗಳೂರು : ಕಳೆದ ಆರು ವರ್ಷಗಳಿಂದ ಕರ್ನಾಟಕ ಭೀಕರ ಬರಗಾಲ ಎದುರಿಸುತ್ತಿತ್ತು. ಈ ಬಾರಿಯೂ ಹವಾಮಾನ ಇಲಾಖೆ ಮುನ್ಸೂಚನೆ ನೋಡಿದರೆ ಸಾಧಾರಣಕ್ಕಿಂತ ಕಡಿಮೆ ಮಳೆ ಎಂಬುದಿತ್ತು. ಆದರೆ ದೇವರ ದಯೆಯಿಂದ ಒಳ್ಳೆಯ ಮಳೆಯೇ ರಾಜ್ಯಾದ್ಯಂತ ಸುರಿಯುತ್ತಿದೆ. ಮುಂಗಾರು ಮುಗಿಯುವ ಲಕ್ಷಣಗಳೇ ಇಲ್ಲದ ಹೊತ್ತಲ್ಲಿ ಜನರು ಮಳೆಗೆ ಶಾಪಹಾಕಲು ಆರಂಭಿಸಿದ್ದಾರೆ.
ಬರ ಮುಗಿದು ತಂಪು ಬಂತು ಎಂದು ಖುಷಿಪಡುವ ಕನಿಷ್ಠ ಅರಿವೂ ಇಲ್ಲದ ಜನರು ಆಫೀಸ್‍ಗೆ ಲೇಟಾಯಿತು, ಬಟ್ಟೆ ಒಣಗಿಲ್ಲ, ಹೊರಗೆ ಹೊಗುವಂತಿಲ್ಲ ಎಂದು ಗೊಣಗುವುದು ಸಾಮಾನ್ಯವಾಗಿ ಹೋಗಿದೆ.
ಇದೇ ಮಾದರಿಯಲ್ಲಿ ಮಳೆ ಅವಾಂತರಕ್ಕೆ ಬೆಂಗಳೂರಿನಲ್ಲಿ ಮತ್ತೊಂದು ಬಲಿ ಎಂದು ಸುದ್ದಿ ಬರುತ್ತಿವೆ. ಅಲ್ಲ ಸ್ವಾಮಿ, ರಾಜ್ಯ ಸರ್ಕಾರ ಮೂಲಭೂತ ಸೌಕರ್ಯಗಳ ಕನಿಷ್ಢ ನಿರ್ವಹಣೆಯನ್ನೂ ಮಾಡದೆ, ಮಳೆ ನೀರು ಹರಿಯುವ ಜಾಗಗಳಲೆಲ್ಲಾ ಕಟ್ಟಡ ನಿರ್ಮಿಸಲು ಅನುಮತಿ, ಅತಿಕ್ರಮಣಕ್ಕೆ ಅವಕಾಶ ಕೊಟ್ಟರೆ ಇನ್ನೇನು ಆಗುತ್ತದೆ.


ಮೊನ್ನೆ ರಸ್ತೆ ಗುಂಡಿಗೆ 6 ಬಲಿಯಾಗಿದೆ ಎಂದು ಸುದ್ದಿ ಬಂದಿದೆ. ಇದಕ್ಕೆ ರಸ್ತೆ ಸರಿಯಾಗಿ ಡಾಂಬರು ಹಿಡಿದುಕೊಂಡಿಲ್ಲ ಎಂದು ದೂರಲಾಗುತ್ತದೆಯೇ? ಅಥವಾ ಡಾಂಬರು ಕಳ್ಳಾಟದಿಂದ ಮನುಷ್ಯರ ಬಲಿ ಎಂದು ಚೀರಾಡಲಾಗುತ್ತದೆಯೇ?
ಭ್ರಷ್ಟಾಚಾರದ ಉತ್ತುಂಗದಿಂದ ನಿರ್ಮಿಸಿ, ಮತ್ತೆ ದುಡ್ಡು ನುಂಗಲೆಂದೇ ಮರೆತ ರಸ್ತೆ ನಿರ್ವಹಣೆಯಿಂದ ತಾನೇ ನಾಗರಿಕರು ಬಲಿಯಾಗುತ್ತಿರುವುದು. ಅದರಂತೆ ಮಳೆ ಸುರಿದು ಯಾರನ್ನು ಬಲಿ ತೆಗೆದುಕೊಳ್ಳುತ್ತಿಲ್ಲ. ಬದಲಾಗಿ ಮುಂದಿನ ವರ್ಷ ಪೂರ್ತಿ ಒಳ್ಳೆಯ ಬಳೆ, ಸಮೃದ್ಧಿ ರಾಜ್ಯಾದ್ಯಂತ ಕಾಣಬಹುದು.

ಆದರೆ ಮಳೆ ನೀರು ಹರಿಯಲು ಬಿಡದೆ ಕಟ್ಟಿಕೊಂಡ ಮನೆಗಳು, ಯದ್ವಾತದ್ವಾ ಆಗಿರುವ ವಾಹನಗಳ ಸಂಚಾರ, ರಾಜಧಾನಿಯೇ ಕರ್ನಾಟಕವೇನೋ ಎಂಬಂತೆ ಪ್ರತಿದಿನ ಹರಿದುಬರುತ್ತಿರುವ ಜನಸಾಗರವೇ ನಾಗರಿಕರ ಸಾವಿಗೆ ಕಾರಣ. ಅಂದರೆ ನಮ್ಮಸಾವಿಗೆ ನಾವೂ ಹೊಣೆ. ಸರ್ಕಾರದ ಪಾಲು ಅದರಲ್ಲಿ ಸೇರುತ್ತಿದೆ.

  • Share On Facebook
  • Tweet It


- Advertisement -
bangalorebengalurublorecitydeathheavykarnatakarainsilicon


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
You may also like
ಡ್ರೋನ್ ಬಳಕೆಗೆ ಬರಲಿದೆ ಹೊಸ ಕಾನೂನು
November 2, 2017
ಕರ್ನಾಟಕದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕಿಯಾಗಿ ನೀಲಮಣಿ.ಎನ್.ರಾಜು
November 1, 2017
” ನನ್ನ ಮದುವೆ ಯಾವಾಗ? ” ತುಂಬಾ ಹಳೆಯ ಪ್ರಶ್ನೆ : 47ರ ರಾಹುಲ್!
October 27, 2017
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search