• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಬೆಂಗಳೂರು ಮಳೆ ನಿರ್ಲಕ್ಷಿಸಿದ ಸರ್ಕಾರದಿಂದ 14ನೇ ಬಲಿ

TNN Correspondent Posted On October 16, 2017


  • Share On Facebook
  • Tweet It

>> ಪೂರ್ವ ಬೆಂಗಳೂರಿನ ಕೃಷ್ಣಪ್ಪ ಗಾರ್ಡನ್ ನಿವಾಸಿ ನರಸಮ್ಮ (18) ಮೃತ ಯುವತಿ

>> ಲಗ್ಗೆರೆ ನಗರ ನಿವಾಸಿ ಪುಷ್ಪಾ (22) ಶವ ಭಾನುವಾರ ಪತ್ತೆ, ಜೊತೆಗೆ ಕೊಚ್ಚಿಹೋಗಿದ್ದ ತಾಯಿ ಮೀನಾಕ್ಷಿ (57) ಶವಕ್ಕಾಗಿ ಹುಡುಕಾಟ

ಬೆಂಗಳೂರು : ಕಳೆದ ಆರು ವರ್ಷಗಳಿಂದ ಕರ್ನಾಟಕ ಭೀಕರ ಬರಗಾಲ ಎದುರಿಸುತ್ತಿತ್ತು. ಈ ಬಾರಿಯೂ ಹವಾಮಾನ ಇಲಾಖೆ ಮುನ್ಸೂಚನೆ ನೋಡಿದರೆ ಸಾಧಾರಣಕ್ಕಿಂತ ಕಡಿಮೆ ಮಳೆ ಎಂಬುದಿತ್ತು. ಆದರೆ ದೇವರ ದಯೆಯಿಂದ ಒಳ್ಳೆಯ ಮಳೆಯೇ ರಾಜ್ಯಾದ್ಯಂತ ಸುರಿಯುತ್ತಿದೆ. ಮುಂಗಾರು ಮುಗಿಯುವ ಲಕ್ಷಣಗಳೇ ಇಲ್ಲದ ಹೊತ್ತಲ್ಲಿ ಜನರು ಮಳೆಗೆ ಶಾಪಹಾಕಲು ಆರಂಭಿಸಿದ್ದಾರೆ.
ಬರ ಮುಗಿದು ತಂಪು ಬಂತು ಎಂದು ಖುಷಿಪಡುವ ಕನಿಷ್ಠ ಅರಿವೂ ಇಲ್ಲದ ಜನರು ಆಫೀಸ್‍ಗೆ ಲೇಟಾಯಿತು, ಬಟ್ಟೆ ಒಣಗಿಲ್ಲ, ಹೊರಗೆ ಹೊಗುವಂತಿಲ್ಲ ಎಂದು ಗೊಣಗುವುದು ಸಾಮಾನ್ಯವಾಗಿ ಹೋಗಿದೆ.
ಇದೇ ಮಾದರಿಯಲ್ಲಿ ಮಳೆ ಅವಾಂತರಕ್ಕೆ ಬೆಂಗಳೂರಿನಲ್ಲಿ ಮತ್ತೊಂದು ಬಲಿ ಎಂದು ಸುದ್ದಿ ಬರುತ್ತಿವೆ. ಅಲ್ಲ ಸ್ವಾಮಿ, ರಾಜ್ಯ ಸರ್ಕಾರ ಮೂಲಭೂತ ಸೌಕರ್ಯಗಳ ಕನಿಷ್ಢ ನಿರ್ವಹಣೆಯನ್ನೂ ಮಾಡದೆ, ಮಳೆ ನೀರು ಹರಿಯುವ ಜಾಗಗಳಲೆಲ್ಲಾ ಕಟ್ಟಡ ನಿರ್ಮಿಸಲು ಅನುಮತಿ, ಅತಿಕ್ರಮಣಕ್ಕೆ ಅವಕಾಶ ಕೊಟ್ಟರೆ ಇನ್ನೇನು ಆಗುತ್ತದೆ.


ಮೊನ್ನೆ ರಸ್ತೆ ಗುಂಡಿಗೆ 6 ಬಲಿಯಾಗಿದೆ ಎಂದು ಸುದ್ದಿ ಬಂದಿದೆ. ಇದಕ್ಕೆ ರಸ್ತೆ ಸರಿಯಾಗಿ ಡಾಂಬರು ಹಿಡಿದುಕೊಂಡಿಲ್ಲ ಎಂದು ದೂರಲಾಗುತ್ತದೆಯೇ? ಅಥವಾ ಡಾಂಬರು ಕಳ್ಳಾಟದಿಂದ ಮನುಷ್ಯರ ಬಲಿ ಎಂದು ಚೀರಾಡಲಾಗುತ್ತದೆಯೇ?
ಭ್ರಷ್ಟಾಚಾರದ ಉತ್ತುಂಗದಿಂದ ನಿರ್ಮಿಸಿ, ಮತ್ತೆ ದುಡ್ಡು ನುಂಗಲೆಂದೇ ಮರೆತ ರಸ್ತೆ ನಿರ್ವಹಣೆಯಿಂದ ತಾನೇ ನಾಗರಿಕರು ಬಲಿಯಾಗುತ್ತಿರುವುದು. ಅದರಂತೆ ಮಳೆ ಸುರಿದು ಯಾರನ್ನು ಬಲಿ ತೆಗೆದುಕೊಳ್ಳುತ್ತಿಲ್ಲ. ಬದಲಾಗಿ ಮುಂದಿನ ವರ್ಷ ಪೂರ್ತಿ ಒಳ್ಳೆಯ ಬಳೆ, ಸಮೃದ್ಧಿ ರಾಜ್ಯಾದ್ಯಂತ ಕಾಣಬಹುದು.

ಆದರೆ ಮಳೆ ನೀರು ಹರಿಯಲು ಬಿಡದೆ ಕಟ್ಟಿಕೊಂಡ ಮನೆಗಳು, ಯದ್ವಾತದ್ವಾ ಆಗಿರುವ ವಾಹನಗಳ ಸಂಚಾರ, ರಾಜಧಾನಿಯೇ ಕರ್ನಾಟಕವೇನೋ ಎಂಬಂತೆ ಪ್ರತಿದಿನ ಹರಿದುಬರುತ್ತಿರುವ ಜನಸಾಗರವೇ ನಾಗರಿಕರ ಸಾವಿಗೆ ಕಾರಣ. ಅಂದರೆ ನಮ್ಮಸಾವಿಗೆ ನಾವೂ ಹೊಣೆ. ಸರ್ಕಾರದ ಪಾಲು ಅದರಲ್ಲಿ ಸೇರುತ್ತಿದೆ.

  • Share On Facebook
  • Tweet It


- Advertisement -
bangalorebengalurublorecitydeathheavykarnatakarainsilicon


Trending Now
ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
Tulunadu News January 28, 2023
ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
Tulunadu News January 27, 2023
You may also like
ಡ್ರೋನ್ ಬಳಕೆಗೆ ಬರಲಿದೆ ಹೊಸ ಕಾನೂನು
November 2, 2017
ಕರ್ನಾಟಕದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕಿಯಾಗಿ ನೀಲಮಣಿ.ಎನ್.ರಾಜು
November 1, 2017
” ನನ್ನ ಮದುವೆ ಯಾವಾಗ? ” ತುಂಬಾ ಹಳೆಯ ಪ್ರಶ್ನೆ : 47ರ ರಾಹುಲ್!
October 27, 2017
Leave A Reply

  • Recent Posts

    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
    • ಹಿಂದೂಗಳ ಫಲವತ್ತತೆಯ ತಾಕತ್ತು ಪರೀಕ್ಷಿಸುತ್ತೀಯಾ ಬದ್ರುದ್ದೀನ್?
    • ಮಕ್ಕಳ ಬ್ಯಾಗಿನಲ್ಲಿ ಕಾಂಡೋಮ್ ಉತ್ತಮ ಲಕ್ಷಣವಲ್ಲ!!
    • ಬೊಮ್ಮಾಯಿ ಕಣ್ಣು ಮುಚ್ಚಿ ಕೊಟ್ಟ ಮುಸ್ಲಿಂ ಕಾಲೇಜು ಪ್ರಪಂಚ ನೋಡಿತು!!
  • Popular Posts

    • 1
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • 2
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • 3
      ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search