• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಉಂಗಾದಲ್ಲಿ ಪಾಕ್ ಆಯಿತು ಮಂಗ !

TNN Correspondent Posted On September 25, 2017
0


0
Shares
  • Share On Facebook
  • Tweet It

 

>> ವಿಶ್ವಸಂಸ್ಥೆ ಸಭೆಯಲ್ಲಿ ನಕಲಿ ಫೋಟೊ ತೋರಿಸಿ ಕಮಂಗಿಯಾದ ನರಿ ಪಾಕಿಸ್ತಾನ

>> ಪೆಲೆಟ್ ಗನ್ ದಾಳಿ ಎಂದು ಪ್ಯಾಲೆಸ್ತೀನಿ ಸಂತ್ರಸ್ತೆ ಫೋಟೊ ತೋರಿಸಿದ ಪಾಕ್ ಪ್ರತಿನಿಧಿ

ನ್ಯೂಯಾರ್ಕ್ : ಭಾರತವನ್ನು ಹೀಯಾಳಿಸಬೇಕು, ಜರಿಯಬೇಕು, ಜಾಗತಿಕವಾಗಿ ಭಾರತದ ಮುಖಕ್ಕೆ ಮಸಿ ಬಳಿಯಬೇಕು. ಒಟ್ಟಿನಲ್ಲಿ ಭಾರತ ನಾಶವಾಗಬೇಕು. ಅದನ್ನು ನೋಡಿ ಕೇಕೆ ಹಾಕಿ ನಗಬೇಕು….

ಏನಿದು ಅಂತಾನ? ಇದು ಪಾಕಿಸ್ತಾನದ ಮಹದಾಸೆ. ಅಲ್ಲವೇ, ಆದರೆ ತಾನೊಂದು ಬಗೆದೊಡೆ, ದೈವವೊಂದು ಬಗೆವುದು ಅನ್ನುವುದು ಭಾನುವಾರ ಪಾಕಿಸ್ತಾನದ ಪಾಲಿಗೆ ಜ್ಞಾಪಕವಾಗಿದೆ. ಶುದ್ಧ ಮುಸ್ಲಿಂ ರಾಷ್ಟ್ರಕ್ಕೆ ಅವರ ದೇವರೆ ಪಾಠ ಕಲಿಸಿದ್ದಾನೆ.

ಶನಿವಾರ ಪಾಕಿಸ್ತಾನವನ್ನು ಭಯೋತ್ಪಾದನೆ ಕಾರ್ಖಾನೆ. ಭಾರತದಲ್ಲಿ ಐಐಟಿ, ಐಐಎಂಗಳಿದ್ದರೆ ಪಾಕ್‍ನಲ್ಲಿ ಜೈಷೆ ಮೊಹಮ್ಮದ್, ಲಷ್ಕರೆ ತಯ್ಯಬಾ, ಹಕ್ಕಾನಿ ಥರದ ಉಗ್ರರ ತರಬೇತಿ ಸಂಸ್ಥೆಯಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಪಾಕ್‍ನನ್ನು ಬೆತ್ತಲೆಗೊಳಿಸಿದ್ದರು.
ಲಂಗೋಟಿಯೂ ಇಲ್ಲದೇ ನಿಂತಿದ್ದ ಪಾಕಿಸ್ತಾನಕ್ಕೆ ಎಂದಿನಂತೆ ಅಡಗಿಕೊಳ್ಳಲು ಸಿಕ್ಕಿದ್ದು ಕಾಶ್ಮೀರ.
ಭಾನುವಾರ ಪ್ರತಿಕ್ರಿಯೆ ಹಕ್ಕು ಬಳಸಿ ಮಾತನಾಡಲು ಆರಂಭಿಸಿದ ಪಾಕಿಸ್ತಾನದ ಪ್ರತಿನಿಧಿ ಮಲೀಹಾ ಲೋಧಿ ಕೇವಲ ಭಾರತವನ್ನು ಬಯ್ಯುತ್ತಲೇ ಹೋದರು. ಆರ್‍ಎಸ್‍ಎಸ್ ಹಿನ್ನೆಲೆಯ ಪ್ರಧಾನಿಯಿಂಧ ಅಲ್ಪಸಂಖ್ಯಾತರು ಆತಂಕದಲ್ಲಿ ಬದುಕುತ್ತಿದ್ದಾರೆ. 2015ರಲ್ಲಿ ಅರುಂಧತಿ ರಾಯ್ ಅವರ ಹೇಳಿಕೆ ಇದಕ್ಕೆ ಸಾಕ್ಷಿ. ಭಾರತ ಉಗ್ರವಾದ ಪೋಷಿಸಿ ಪಾಕ್‍ನೊಳಗೆ ತೂರಿಸುತ್ತಿದೆ. ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆ ನಡೆಸಿರುವ ಭಾರತೀಯ ಸೇನೆಯನ್ನು ಪ್ರಶ್ನಿಸುವವರೇ ಇಲ್ಲ ಎಂದು ವ್ಯರ್ಥಾರೋಪಗಳ ಪಟ್ಟಿ ಓದುತ್ತಾ ಹೋದರು.

ಪ್ಯಾಲೆಸ್ತೀನ್ ಯುವತಿಯನ್ನು ಕಾಶ್ಮೀರಯಾಗಿಸಿ, ಸುಳ್ಳು ಫೋಟೊ ಪ್ರೂಫ್

ಇಷ್ಟು ಸಾಲದು ಎಂದು ಮಲೀಹಾ ಪೆಲೆಟ್ ಗನ್ ದಾಳಿಯಿಂದ ಯುವತಿಯೊಬ್ಬಳ ಮುಖ ನೋಡಿ ಹೇಗಾಗಿದೆ ಎಂದು ಒಂದು ಫೋಟೊ ತೋರಿಸಿ ಅನುಕಂಪ ಗಿಟ್ಟಿಸಿಕೊಳ್ಳುವ ನಾಟಕವಾಡಿದರು. ಕೊನೆಗೆ ತಿಳಿದಿದ್ದೇನೆಂದರೆ ಆ ಫೋಟೊ ಪ್ಯಾಲಿಸ್ತೀನಿ ಮಹಿಳೆಯದ್ದು ಎಂದು.

ಹೌದು, ರಾವ್ಯಾ ಅಬು ಜೋಂ ಎಂಬ ಗಾಜಾದ ಮಹಿಳೆ 2014ರ ಇಸ್ರೇಲ್ ಗಾಜಾ ಯುದ್ಧದಲ್ಲಿ ಗಾಯಗೊಂಡಿದ್ದ ಫೋಟೊ ಇದು. ಸರಿಯಾಗಿ ಗೂಗಲ್‍ನಲ್ಲಿ ಹುಡುಕಲು ಬರದ ಪಾಕಿಸ್ತಾನದಂಥ ದೇಶದಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳು ಗಹಗಹಿಸಿ ನಕ್ಕುತ್ತದ್ದವಂತೆ.

0
Shares
  • Share On Facebook
  • Tweet It


abbasiabuexposedgazaindiaisraellodhimodipakpakistanpalistinepmrawyasushmaswarajungawaleeha


Trending Now
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
Tulunadu News April 6, 2026
ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
Tulunadu News March 27, 2026
You may also like
ವಿಶ್ವದ ದೊಡ್ಡಣ್ಣ ಅಮೆರಿಕಕ್ಕೆ ಸೆಡ್ಡು ಹೊಡೆದ ಭಾರತ: ರಷ್ಯಾದಿಂದ ಎಸ್ -400 ಕ್ಷಿಪಣಿ ಕೊಳಲು ಮುಂದಾದ ಭಾರತ
July 1, 2018
ಉನ್ನತ ಶಿಕ್ಷಣದ ಉತ್ತೇಜನಕ್ಕೆ ಕೇಂದ್ರ ಸರ್ಕಾರದ ಭರ್ಜರಿ ಕೊಡುಗೆ, 1 ಲಕ್ಷ ಕೋಟಿ ಅನುದಾನ ಬಿಡುಗಡೆ
June 19, 2018
ಈ ಬಾರಿ ಲೋಕಸಭಾ ಚುನಾವಣೆ 2004 ರ ಪುನರಾವರ್ತನೆಯಾ?
June 2, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
    • ಸುಳ್ಯದ ಹಿಂದೂ ಬಾಂಧವರಿಗೆ ಗೋಪ್ರೇಮಿಗಳ ಬಹಿರಂಗ ಪತ್ರ!
    • ಮೂಡಬಿದ್ರೆ ಇನ್ ಸ್ಪೆಕ್ಟ‌ರ್ ಸಂದೇಶ್ ವಿರುದ್ಧದ ಆರೋಪ ಸುಳ್ಳು: ಕಮಿಷನ‌ರ್ ರೆಡ್ಡಿ ಸ್ಪಷ್ಟನೆ
    • ಪೊಲೀಸ್ ಇನ್ಸ್‌ಪೆಕ್ಟರ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ : ಮೂಡಬಿದಿರೆ ಇನ್ಸ್ಪೆಕ್ಟರ್ ಸಂದೇಶ್ ಬಿ.ಜಿ ಅಮಾನತು.
    • ಕಾಣೆಯಾಗಿದ್ದ ವಿವೇಕ್ ಶೆಟ್ಟಿಗಾರ್ ಮೃತದೇಹ ಪತ್ತೆ
    • ಸರ್ಪ ಸಂಸ್ಕಾರ, ಆಶ್ಲೇಷ ಬಲಿ ಸೇವೆ ಸಲ್ಲಿಸಿದ ನಟ!
    • ಅಕ್ರಮ 4 ಸಾವಿರ ಲೀಟರ್ ಡೀಸಿಲ್ ಬೆಳ್ತಂಗಡಿಯಲ್ಲಿ ಪತ್ತೆ!
    • ಕಳ್ಳತನ ನಡೆದ ಅರಣ್ಯಾಧಿಕಾರಿ ಮನೆ ಹಾಗೂ ನೆರೆಮನೆಗಳಲ್ಲಿ ಸಿಸಿಟಿವಿಗಳೂ ಇಲ್ಲ!
    • ಸಾಲ ಕೊಡಿಸುವ ಭರವಸೆ: ಕೋಟ್ಯಾಂತರ ರೂ ವಂಚನೆಯ ರೋಶನ್ ಸಲ್ದಾನ Case Update:
    • ಅಲಿ ಖಮೇನಿ ಹತ್ಯೆ: ಕರ್ನಾಟಕದ 'ಮಿನಿ ಇರಾನ್' ನಲ್ಲಿ 3 ದಿನ ಶೋಕಾಚಾರಣೆ!
  • Popular Posts

    • 1
      ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search