• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕೆಲಸಕ್ಕೆ ಅರ್ಜಿದಾರ @ 80

TNN Correspondent Posted On September 29, 2017
0


0
Shares
  • Share On Facebook
  • Tweet It

>> ಶುರುವಾಗಿದೆ ಬಿಜೆಪಿ ಘನಾಘಟಿಗಳ ಸಮರ: ಜೇಟ್ಲಿ ವರ್ಸಸ್ ಸಿನ್ಹಾ

>> ಮೋದಿ ಆಪ್ತ ಜೇಟ್ಲಿ ವಿರುದ್ಧ ಆರ್ಥಿಕತೆ ಕುಸಿತ ಅಸ್ತ್ರ ಪ್ರಯೋಗಿಸಿದ ಹಿರಿಯ ನಾಯಕ ಯಶ್ವಂತ್ ಸಿನ್ಹಾ

>> ತಕ್ಷಣವೇ ಅಪ್ಪನಿಗೆ ಮಗ ಜಯಂತ್‍ನಿಂದ ತಿರುಗೇಟು

ದೆಹಲಿ : ದೇಶದ ಆರ್ಥಿಕತೆ ಕುಸಿತಕ್ಕೆ ಪ್ರಧಾನಿ ಹೊಣೆ ಎಂದು ಒಂದೆಡೆ ಪ್ರತಿಪ್ಷಗಳು ಹರಿಹಾಯುತ್ತಿದ್ದರೆ, ಮತ್ತೊಂದೆಡೆ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ವಿತ್ತ ಸಚಿವ ಯಶ್ವಂತ್ ಸಿನ್ಹಾ ತಮ್ಮ ಅಸಮಾಧಾನ ಹೊರಹಾಕಿ ಜೇಟ್ಲಿ ತಪ್ಪು ನಿರ್ಧಾರಗಳೇ ಮಾರಕವಾಗಿವೆ ಎಂದು ದೂಷಿಸಿದ್ದರು. ಶಿಸ್ತಿನ ಪಕ್ಷದಲ್ಲಿ ಹಿರಿಯ ನಾಯಕರೊಬ್ಬರು ಸರ್ಕಾರದ ವಿರುದ್ಧ ಆರೋಪ ಮಾಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ರಾಷ್ಟ್ರೀಯ ಇಂಗ್ಲೀಷ್ ದೈನಿಕದಲ್ಲಿ ಸಂಪಾದಕೀಯ ಪುಟದಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದ್ದ ಸಿನ್ಹಾ, ಪ್ರಧಾನಿ ಭೇಟಿಗೆ ಸಮಯ ನೀಡದ್ದಕ್ಕೆ ಇದೇ ನನ್ನ ಆಯ್ಕೆಯಾಯಿತು ಎಂದು ಅಸಹಾಯಕತೆ ಪ್ರದರ್ಶಿಸಿದ್ದರು. ಇದರ ಲಾಭ ಪಡೆದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ “ಮೋದಿ ವಿಮಾನದ ರೆಕ್ಕೆಗಳು ಕತ್ತಿರಿಸಲಾಗಿವೆ. ಸೀಟ್ ಬೆಲ್ಟ್ ಭದ್ರ’ ಎಂದು ವ್ಯಂಗ್ಯವಾಡಿದ್ದರು. ಮಾಜಿ ಸಚಿವ ಪಿ.ಚಿದಂಬರಂ ಸಿನ್ಹಾಗೆ ಬೆಂಬಲ ಸೂಚಿಸಿದ್ದರು.

ಜೇಟ್ಲಿ ತಿರುಗೇಟು, ಸಿನ್ಹಾಗೆ ಕೆಲಸ ಬೇಕು : ಹಿರಿಯ ಮುಖಂಡ ಸಿನ್ಹಾಗೆ ತಿರುಗೇಟಿ ನೀಡಲು ವಿತ್ತ ಸಚಿವ ಅರುಣ್ ಜೇಟ್ಲಿ ಗುರುವಾರ ಪುಸ್ತಕ ಬಿಡುಗಡೆ ಸಮಾರಂಭವನ್ನು ಆಯ್ದುಕೊಂಡರು. ಇಂಡಿಯಾ @70, ಮೋದಿ @3.5 ಎಂಬ ಶೀರ್ಷಿಕೆಯ ಪುಸ್ತಕ ಬಿಡುಗಡೆ ಮಾಡಿ, ಕೆಲಸಕ್ಕೆ ಅರ್ಜಿದಾರ @80 ಎಂದು ಪರೋಕ್ಷವಾಗಿ ಸಿನ್ಹಾಗೆ ಕುಟುಕಿದರು. ಸಿನ್ಹಾ ವಿತ್ತ ಸಚಿವಾರಗಿದ್ದ 1991ರಲ್ಲಿ ಆದಂಥ ಅನುತ್ಪಾದಕ ಆಸ್ತಿಗಳ ಪ್ರಮಾಣ ಇಂದಿಗೂ ದೇಶಕ್ಕೆ ಹೊರೆಯಾಗಿದೆ. ಅಂಥವರು ಕಾಂಗ್ರೆಸ್‍ಗೆ ಆಹಾರವಾಗುತ್ತಿದ್ದಾರೆ ಅಷ್ಟೇ ಎಂದು ಜೇಟ್ಲಿ ಹರಿಹಾಯ್ದಿದ್ದಾರೆ. ಹಿರಿಯ ಮುಖಂಡ ಆಡ್ವಾಣಿ ನನಗೆ ಯಾರನ್ನೂ ನೇರವಾಗಿ ಹೆಸರಿಸಿ ತಿರುಗೇಟು ನೀಡಬಾರದು ಎಂದು ಕಿವಿಮಾತು ಹೇಳಿದ್ದನ್ನು ಗೌರವಿಸಿ ನನ್ನ ವಾಗ್ದಾಳಿ ನಿಯಂತ್ರಿಸಿದ್ದೇನೆ ಎಂದರು.

ಚಿದಂಬರಂ ನನ್ನ ಆರ್ಥಿಕತೆ ಕೊಡುಗೆಯ ದಾಖಲೆಗಳನ್ನು ಸರಿದೂಗಿಸಲು ಮತ್ತೆ ಹುಟ್ಟಿ ಬಂದು ಸಚಿವರಾಗಬೇಕು. ವಿತ್ತೀಯ ಕೊರತೆ ಎಂಬ ರೋಗಿಯನ್ನು ಮತ್ತಷ್ಟು ಅನಾರೋಗ್ಯಕ್ಕೆ ದೂಡಿದ ವಿಫಲ ವೈದ್ಯ ಚಿದಂಬರಂ. ಅವರಿಂದ ಯುಪಿಎ ಅವಧಿಯಲ್ಲಿ ಆರ್ಥಿಕತೆ ಪಾತಾಳ ತಲುಪಿದ್ದು, ಈಗಲೂ ನಾವು ಅಡ್ಡಪರಿಣಾಮ ಎದುರಿಸುತ್ತಿದ್ದೇವೆ.
– ಅರುಣ್ ಜೇಟ್ಲಿ, ವಿತ್ತ ಸಚಿವ

ಮಗ ಜಯಂತ್ ವರ್ಸಸ್ ಅಪ್ಪ ಯಶ್ವಂತ್ : ಯಶ್ವಂತ್ ಸಿನ್ಹಾ ಲೇಖನಕ್ಕೆ ಅವರ ಪುತ್ರ ಹಾಗೂ ನಾಗರಿಕ ವಿಮಾನಯಾನ ರಾಜ್ಯ ಖಾತೆ ಸಚಿವ ಜಯಂತ್ ಸಿನ್ಹಾ ಮತ್ತೊಂದು ರಾಷ್ಟ್ರೀಯ ಇಂಗ್ಲೀಷ್ ದೈನಿಕದಲ್ಲಿ ಲೇಖನ ಬರೆದು ಉತ್ತರಿಸಿದ್ದಾರೆ.

ಸರಕಾರವನ್ನು ಸಮರ್ಥಸಿಕೊಂಡಿರುವ ಅವರು ಕೆಲವೇ ಕೆಲವು ಅಂಶಗಳನ್ನು ಕೇಂದ್ರೀಕರಿಸಿ ಆರ್ಥಿಕತೆ, ಎನ್‍ಪಿಎ ಬಗ್ಗೆ ಯಶ್ವಂತ್ ಕಿಡಿಕಾರಿದ್ದಾರೆ. ಜಿಡಿಪಿ ಲೆಕ್ಕಾಚಾರದ ಹೊಸ ಪದ್ಧತಿಯಿಂದ 5.7 ಎಂದು ಜಿಡಿಪಿ ದಾಖಲಾದರು. ಅದು ಹಳೆಯ ಪದ್ಧತಿಯಲ್ಲಿ 3.7ರಷ್ಟು ಹೆಚ್ಚಿರುತ್ತಿತ್ತು ಎಂದಿದ್ದಾರೆ.

0
Shares
  • Share On Facebook
  • Tweet It


@80applicantarunchidambarameconomyfinancegdpjaitleyjayant sinhajayanth sinhaministermodiprimetamil naduyashwant sinhayashwanth sinha


Trending Now
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
Tulunadu News December 27, 2025
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
Tulunadu News December 23, 2025
You may also like
ಹೀಗೆ ಬಿಟ್ಟರೆ ಸ್ಮಾರ್ಟ್ ಸಿಟಿ ಹಣದಿಂದ ಖಾದರ್ ಶಾದಿ ಮಹಾಲ್ ಕಟ್ಟುತ್ತೇನೆ ಅಂದರೂ ಅನ್ನಬಹುದು!
October 9, 2018
ಉನ್ನತ ಶಿಕ್ಷಣದ ಉತ್ತೇಜನಕ್ಕೆ ಕೇಂದ್ರ ಸರ್ಕಾರದ ಭರ್ಜರಿ ಕೊಡುಗೆ, 1 ಲಕ್ಷ ಕೋಟಿ ಅನುದಾನ ಬಿಡುಗಡೆ
June 19, 2018
ಈ ಬಾರಿ ಲೋಕಸಭಾ ಚುನಾವಣೆ 2004 ರ ಪುನರಾವರ್ತನೆಯಾ?
June 2, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
  • Popular Posts

    • 1
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • 2
      ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • 3
      ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • 4
      ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • 5
      ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ

  • Privacy Policy
  • Contact
© Tulunadu Infomedia.

Press enter/return to begin your search