• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಕೆಲಸಕ್ಕೆ ಅರ್ಜಿದಾರ @ 80

TNN Correspondent Posted On September 29, 2017


  • Share On Facebook
  • Tweet It

>> ಶುರುವಾಗಿದೆ ಬಿಜೆಪಿ ಘನಾಘಟಿಗಳ ಸಮರ: ಜೇಟ್ಲಿ ವರ್ಸಸ್ ಸಿನ್ಹಾ

>> ಮೋದಿ ಆಪ್ತ ಜೇಟ್ಲಿ ವಿರುದ್ಧ ಆರ್ಥಿಕತೆ ಕುಸಿತ ಅಸ್ತ್ರ ಪ್ರಯೋಗಿಸಿದ ಹಿರಿಯ ನಾಯಕ ಯಶ್ವಂತ್ ಸಿನ್ಹಾ

>> ತಕ್ಷಣವೇ ಅಪ್ಪನಿಗೆ ಮಗ ಜಯಂತ್‍ನಿಂದ ತಿರುಗೇಟು

ದೆಹಲಿ : ದೇಶದ ಆರ್ಥಿಕತೆ ಕುಸಿತಕ್ಕೆ ಪ್ರಧಾನಿ ಹೊಣೆ ಎಂದು ಒಂದೆಡೆ ಪ್ರತಿಪ್ಷಗಳು ಹರಿಹಾಯುತ್ತಿದ್ದರೆ, ಮತ್ತೊಂದೆಡೆ ಬಿಜೆಪಿಯ ಹಿರಿಯ ನಾಯಕ ಹಾಗೂ ಮಾಜಿ ವಿತ್ತ ಸಚಿವ ಯಶ್ವಂತ್ ಸಿನ್ಹಾ ತಮ್ಮ ಅಸಮಾಧಾನ ಹೊರಹಾಕಿ ಜೇಟ್ಲಿ ತಪ್ಪು ನಿರ್ಧಾರಗಳೇ ಮಾರಕವಾಗಿವೆ ಎಂದು ದೂಷಿಸಿದ್ದರು. ಶಿಸ್ತಿನ ಪಕ್ಷದಲ್ಲಿ ಹಿರಿಯ ನಾಯಕರೊಬ್ಬರು ಸರ್ಕಾರದ ವಿರುದ್ಧ ಆರೋಪ ಮಾಡಿದ್ದು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ರಾಷ್ಟ್ರೀಯ ಇಂಗ್ಲೀಷ್ ದೈನಿಕದಲ್ಲಿ ಸಂಪಾದಕೀಯ ಪುಟದಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದ್ದ ಸಿನ್ಹಾ, ಪ್ರಧಾನಿ ಭೇಟಿಗೆ ಸಮಯ ನೀಡದ್ದಕ್ಕೆ ಇದೇ ನನ್ನ ಆಯ್ಕೆಯಾಯಿತು ಎಂದು ಅಸಹಾಯಕತೆ ಪ್ರದರ್ಶಿಸಿದ್ದರು. ಇದರ ಲಾಭ ಪಡೆದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ “ಮೋದಿ ವಿಮಾನದ ರೆಕ್ಕೆಗಳು ಕತ್ತಿರಿಸಲಾಗಿವೆ. ಸೀಟ್ ಬೆಲ್ಟ್ ಭದ್ರ’ ಎಂದು ವ್ಯಂಗ್ಯವಾಡಿದ್ದರು. ಮಾಜಿ ಸಚಿವ ಪಿ.ಚಿದಂಬರಂ ಸಿನ್ಹಾಗೆ ಬೆಂಬಲ ಸೂಚಿಸಿದ್ದರು.

ಜೇಟ್ಲಿ ತಿರುಗೇಟು, ಸಿನ್ಹಾಗೆ ಕೆಲಸ ಬೇಕು : ಹಿರಿಯ ಮುಖಂಡ ಸಿನ್ಹಾಗೆ ತಿರುಗೇಟಿ ನೀಡಲು ವಿತ್ತ ಸಚಿವ ಅರುಣ್ ಜೇಟ್ಲಿ ಗುರುವಾರ ಪುಸ್ತಕ ಬಿಡುಗಡೆ ಸಮಾರಂಭವನ್ನು ಆಯ್ದುಕೊಂಡರು. ಇಂಡಿಯಾ @70, ಮೋದಿ @3.5 ಎಂಬ ಶೀರ್ಷಿಕೆಯ ಪುಸ್ತಕ ಬಿಡುಗಡೆ ಮಾಡಿ, ಕೆಲಸಕ್ಕೆ ಅರ್ಜಿದಾರ @80 ಎಂದು ಪರೋಕ್ಷವಾಗಿ ಸಿನ್ಹಾಗೆ ಕುಟುಕಿದರು. ಸಿನ್ಹಾ ವಿತ್ತ ಸಚಿವಾರಗಿದ್ದ 1991ರಲ್ಲಿ ಆದಂಥ ಅನುತ್ಪಾದಕ ಆಸ್ತಿಗಳ ಪ್ರಮಾಣ ಇಂದಿಗೂ ದೇಶಕ್ಕೆ ಹೊರೆಯಾಗಿದೆ. ಅಂಥವರು ಕಾಂಗ್ರೆಸ್‍ಗೆ ಆಹಾರವಾಗುತ್ತಿದ್ದಾರೆ ಅಷ್ಟೇ ಎಂದು ಜೇಟ್ಲಿ ಹರಿಹಾಯ್ದಿದ್ದಾರೆ. ಹಿರಿಯ ಮುಖಂಡ ಆಡ್ವಾಣಿ ನನಗೆ ಯಾರನ್ನೂ ನೇರವಾಗಿ ಹೆಸರಿಸಿ ತಿರುಗೇಟು ನೀಡಬಾರದು ಎಂದು ಕಿವಿಮಾತು ಹೇಳಿದ್ದನ್ನು ಗೌರವಿಸಿ ನನ್ನ ವಾಗ್ದಾಳಿ ನಿಯಂತ್ರಿಸಿದ್ದೇನೆ ಎಂದರು.

ಚಿದಂಬರಂ ನನ್ನ ಆರ್ಥಿಕತೆ ಕೊಡುಗೆಯ ದಾಖಲೆಗಳನ್ನು ಸರಿದೂಗಿಸಲು ಮತ್ತೆ ಹುಟ್ಟಿ ಬಂದು ಸಚಿವರಾಗಬೇಕು. ವಿತ್ತೀಯ ಕೊರತೆ ಎಂಬ ರೋಗಿಯನ್ನು ಮತ್ತಷ್ಟು ಅನಾರೋಗ್ಯಕ್ಕೆ ದೂಡಿದ ವಿಫಲ ವೈದ್ಯ ಚಿದಂಬರಂ. ಅವರಿಂದ ಯುಪಿಎ ಅವಧಿಯಲ್ಲಿ ಆರ್ಥಿಕತೆ ಪಾತಾಳ ತಲುಪಿದ್ದು, ಈಗಲೂ ನಾವು ಅಡ್ಡಪರಿಣಾಮ ಎದುರಿಸುತ್ತಿದ್ದೇವೆ.
– ಅರುಣ್ ಜೇಟ್ಲಿ, ವಿತ್ತ ಸಚಿವ

ಮಗ ಜಯಂತ್ ವರ್ಸಸ್ ಅಪ್ಪ ಯಶ್ವಂತ್ : ಯಶ್ವಂತ್ ಸಿನ್ಹಾ ಲೇಖನಕ್ಕೆ ಅವರ ಪುತ್ರ ಹಾಗೂ ನಾಗರಿಕ ವಿಮಾನಯಾನ ರಾಜ್ಯ ಖಾತೆ ಸಚಿವ ಜಯಂತ್ ಸಿನ್ಹಾ ಮತ್ತೊಂದು ರಾಷ್ಟ್ರೀಯ ಇಂಗ್ಲೀಷ್ ದೈನಿಕದಲ್ಲಿ ಲೇಖನ ಬರೆದು ಉತ್ತರಿಸಿದ್ದಾರೆ.

ಸರಕಾರವನ್ನು ಸಮರ್ಥಸಿಕೊಂಡಿರುವ ಅವರು ಕೆಲವೇ ಕೆಲವು ಅಂಶಗಳನ್ನು ಕೇಂದ್ರೀಕರಿಸಿ ಆರ್ಥಿಕತೆ, ಎನ್‍ಪಿಎ ಬಗ್ಗೆ ಯಶ್ವಂತ್ ಕಿಡಿಕಾರಿದ್ದಾರೆ. ಜಿಡಿಪಿ ಲೆಕ್ಕಾಚಾರದ ಹೊಸ ಪದ್ಧತಿಯಿಂದ 5.7 ಎಂದು ಜಿಡಿಪಿ ದಾಖಲಾದರು. ಅದು ಹಳೆಯ ಪದ್ಧತಿಯಲ್ಲಿ 3.7ರಷ್ಟು ಹೆಚ್ಚಿರುತ್ತಿತ್ತು ಎಂದಿದ್ದಾರೆ.

  • Share On Facebook
  • Tweet It


- Advertisement -
@80applicantarunchidambarameconomyfinancegdpjaitleyjayant sinhajayanth sinhaministermodiprimetamil naduyashwant sinhayashwanth sinha


Trending Now
ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
Tulunadu News February 3, 2023
ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
Tulunadu News February 2, 2023
You may also like
ಹೀಗೆ ಬಿಟ್ಟರೆ ಸ್ಮಾರ್ಟ್ ಸಿಟಿ ಹಣದಿಂದ ಖಾದರ್ ಶಾದಿ ಮಹಾಲ್ ಕಟ್ಟುತ್ತೇನೆ ಅಂದರೂ ಅನ್ನಬಹುದು!
October 9, 2018
ಉನ್ನತ ಶಿಕ್ಷಣದ ಉತ್ತೇಜನಕ್ಕೆ ಕೇಂದ್ರ ಸರ್ಕಾರದ ಭರ್ಜರಿ ಕೊಡುಗೆ, 1 ಲಕ್ಷ ಕೋಟಿ ಅನುದಾನ ಬಿಡುಗಡೆ
June 19, 2018
ಈ ಬಾರಿ ಲೋಕಸಭಾ ಚುನಾವಣೆ 2004 ರ ಪುನರಾವರ್ತನೆಯಾ?
June 2, 2018
Leave A Reply

  • Recent Posts

    • ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!
    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
  • Popular Posts

    • 1
      ಸಾವಿರ ಕೋಟಿ ಖರ್ಚು, ಪಾರ್ಕಿಂಗ್ ಗಾಗಿ ರಸ್ತೆ ಅಗಲ!!
    • 2
      ಶರಣ್ ಪಂಪ್ವೆಲ್ ಎಚ್ಚರಿಕೆ ಕೊಡುವ ಸನ್ನಿವೇಶ ತಂದದ್ದೇ ಮತಾಂಧರು!!
    • 3
      ಕಂಬಳಕ್ಕೆ ನಟಿಯರು ಮತ್ತು ಅಸಹ್ಯ ಮನಸ್ಸಿನ ದುರುಳರೂ....
    • 4
      ಗ್ರಾಹಕರಿಗೆ ಮಾತ್ರ ಈ ಜಾಗ ಎಂದು ಹೇಳಲು ಸಾಧ್ಯವಿಲ್ಲ!!
    • 5
      ಸೌದಿ ಮುಂದಿದೆ ಆರೋಪಿಗಳಾ ಅಥವಾ ಭಾರತವಾ ಎನ್ನುವ ಆಯ್ಕೆ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search