• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಆರ್ಥಿಕತೆಗೆ ಚೇತರಿಕೆ ಬೂಸ್ಟರ್ ನೀಡಲು ಬದ್ಧ: ಪ್ರಧಾನಿ

TNN Correspondent Posted On October 5, 2017
0


0
Shares
  • Share On Facebook
  • Tweet It

>> ಯುಪಿಎ ಅವಧಿಯಲ್ಲಿ ಎಂಟು ಬಾರಿ ಜಿಡಿಪಿ ಹಳ್ಳ ಹಿಡಿದಿತ್ತು!

>> ಕೊನೆಯ ತ್ರೈಮಾಸಿಕದಲ್ಲಿ ಜಿಡಿಪಿ 7.7% ದಾಖಲಾಗುವ ವಿಶ್ವಾಸ ಆರ್‍ಬಿಐ ಹೊಂದಿದೆ

>> ಮೂರು ವರ್ಷದಲ್ಲಿ 21 ಕ್ಷೇತ್ರದಲ್ಲಿ 87 ಕ್ರಾಂತಿಕಾರಿ ಸುಧಾರಣೆಗಳು

>> 125 ಕೋಟಿ ಜನರಿಗೆ ನೋಟು ನಿಷೇಧ, ಜಿಎಸ್‍ಟಿಯ ಲಾಭಗಳು ಭವಿಷ್ಯದಲ್ಲಿ ಅರಿವಾಗಲಿದೆ

ನವದೆಹಲಿ : ಮೊದಲ ತ್ರೈಮಾಸಿಕದಲ್ಲಿ 5.7%ಗೆ ಜಿಡಿಪಿ ಕುಸಿಯಲು ಪ್ರಧಾನಿ ಮೋದಿ ಅವರ ರಾಷ್ಟ್ರೀಯ ನೀತಿಗಳ ದುರ್ಬಲತೆಯೇ ಕಾರಣ ಎಂದು ತಿಂಗಳಿನಿಂದ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯಲು ಅಸ್ತ್ರವಾಗಿಸಿಕೊಂಡಿರುವ ಕಾಂಗ್ರೆಸ್ ಮುಖಂಡರಿಗೆ ಬುಧವಾರ ಮೋದಿ ತಕ್ಕ ಪ್ರತ್ಯುತ್ತರ ಕೊಟ್ಟಿದ್ದಾರೆ.
ಯಾರ 10 ವರ್ಷಗಳ ಅವಧಿಯಲ್ಲಿ ಎಂಟು ಬಾರಿ ಹೀನಾಯ ಅವಸ್ಥೆಗೆ ಜಿಡಿಪಿ ಕುಸಿದರೂ ಗೌಪ್ಯವಾಗಿಟ್ಟು ದೇಶದ ಜನರನ್ನು ದಡ್ಡರನ್ನಾಗಿಸಿದರೋ ಅಂಥವರು ಟೀಕೆಗೆ ಮುಂದಾಗಿದ್ದಾರೆ. ಕೆಲವರಿಗೆ ಅತೃಪ್ತ ವಾತಾವರಣ ನಿರ್ಮಾಣ ಮಾಡದ ಹೊರತು ನಿದ್ದೆ ಬರುವುದಿಲ್ಲ ಎಂದು ಮೋದಿ ಕಾಂಗ್ರೆಸ್ ಟೀಕಾಕಾರರಿಗೆ ತಪರಾಕಿ ಹಾಕಿದ್ದಾರೆ.
ದೇಶದ ಆರ್ಥಿಕತೆ ಸದೃಢವಾಗಿದೆ. ತಾತ್ಕಾಲಿಕ ಕುಸಿತದ ಚೇತರಿಕೆಗೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಪ್ರಸ್ತುತ ಎದುರಾಗುವ ಯಾವುದೇ ಸವಾಲಿಗೆ ಆರ್ಥಿಕತೆ ದುರ್ಬಲವಾಗಲು ಬಿಡಲ್ಲ ಎಂದು ಪ್ರಧಾನಿ ಭರವಸೆ ನೀಡಿದ್ದಾರೆ.
ಭಾರತೀಯ ಕಂಪನಿ ಸೆಕ್ರೆಟರೀಸ್ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡಿ ಅವರು ಮಾತನಾಡುತ್ತಿದ್ದರು.


ಯುಪಿಎ ಅವಧಿಯ 10% ಹಣದುಬ್ಬರವನ್ನು 2.5%ಗೆ ಇಳಿಸಿದ್ದೇವೆ. ಚಾಲ್ತಿ ಖಾತೆ ವಿತ್ತೀಯ ಕೊರತೆ 4% ಇದ್ದದ್ದನ್ನು 1%ಗೆ ಕಡಿಮೆ ಮಾಡಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ ವಿತ್ತೀಯ ಕೊರತೆ 1% ಇಳಿಕೆ ಕಂಡಿರುವುದು ಗಮನಾರ್ಹ. ಇದನ್ನು ಜನರಿಗೆ ತಿಳಿಸಿವುದು ಬಿಟ್ಟು ಇವುಗಳನ್ನು ಕೆಲವರು ಮರೆಮಾಚಲು ಜಿಡಿಪಿ ಹಿಂದೆ ಬಿದ್ದಿದ್ದಾರೆ ಎಂದು ಮೋದಿ ಕಾಂಗ್ರೆಸ್ ಕಾಲೆಳೆದಿದ್ದಾರೆ.

ಪ್ರಾಮಾಣಿಕ ಜನರ ಹಣ ಸುರಕ್ಷಿತವಾಗಿದೆ. ಅದರ ಜವಾಬ್ದಾರಿಯನ್ನು ನಾವು ಅರಿತಿದ್ದೇವೆ. ಕಪ್ಪು ಹಣದ ಕುಳಗಳು ಮತ್ತು ಭ್ರಷ್ಟರಿಗೆ ಖಂಡಿತ ಮುಂದಿನ ದಿನಗಳು ನರಕವಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ. ಶತಾಯಗತಾಯ 2022ರೊಳಗೆ ಶೆಲ್ ಕಂಪನಿ(ಬೇನಾಮಿ ಕಂಪನಿಗಳು)ಗಳಿಗೆಲ್ಲಾ ಬೀಗ ಜಡಿದೇ ಜಡಿಯುತ್ತೇವೆ ಎಂದು ಅವರು ಗುಡುಗಿದ್ದಾರೆ.

 

0
Shares
  • Share On Facebook
  • Tweet It


%companyeconomygandhigdpgrowthICSIindiaindianmanmohanministermodipeopleprimerahulsecretarysoniatodayupa


Trending Now
ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
Tulunadu News July 15, 2025
ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
Tulunadu News July 15, 2025
You may also like
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಹೀಗೆ ಬಿಟ್ಟರೆ ಸ್ಮಾರ್ಟ್ ಸಿಟಿ ಹಣದಿಂದ ಖಾದರ್ ಶಾದಿ ಮಹಾಲ್ ಕಟ್ಟುತ್ತೇನೆ ಅಂದರೂ ಅನ್ನಬಹುದು!
October 9, 2018
ವಿಶ್ವದ ದೊಡ್ಡಣ್ಣ ಅಮೆರಿಕಕ್ಕೆ ಸೆಡ್ಡು ಹೊಡೆದ ಭಾರತ: ರಷ್ಯಾದಿಂದ ಎಸ್ -400 ಕ್ಷಿಪಣಿ ಕೊಳಲು ಮುಂದಾದ ಭಾರತ
July 1, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
  • Popular Posts

    • 1
      ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • 2
      ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • 3
      ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • 4
      ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • 5
      ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!

  • Privacy Policy
  • Contact
© Tulunadu Infomedia.

Press enter/return to begin your search