• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಮಾಡಿದರೆ ಪಕ್ಷ ಸೇರಬಲ್ಲೆ- ಅನುಪಮಾ ಶೆಣೈ

Abdul Gaffur, Katipalla Posted On October 6, 2017


  • Share On Facebook
  • Tweet It

ಒಂದೂವರೆ ವರ್ಷಗಳ ಹಿಂದೆ ಆಗಿನ ಬಳ್ಳಾರಿಯ ಉಸ್ತುವಾರಿ ಸಚಿವ ಪರಮೇಶ್ವರ್ ನಾಯ್ಕ್ ಅವರ ವಿರುದ್ಧ ರಣಕಹಳೆ ಮೊಳಗಿಸಿ, ರಾಜ್ಯ ಸರಕಾರವನ್ನು ಟೀಕಿಸಿ, ಸರಕಾರಿ ಉದ್ಯೋಗದಲ್ಲಿ ಇರುವ ಮಹಿಳೆಯರಿಗೆ ರಾಜ್ಯ ಸರಕಾರದ ಸಚಿವರು ಕೆಟ್ಟದಾಗಿ ನಡೆಸಿಕೊಳ್ಳುತ್ತಾರೆ ಎಂದು ನೋವು ವ್ಯಕ್ತಪಡಿಸಿ ಪೊಲೀಸ್ ಇಲಾಖೆಗೆ ರಾಜೀನಾಮೆ ಬಿಸಾಡಿ ಹೊರಬಂದವರು ಅನುಪಮಾ ಶೆಣೈ. ಕಳೆದ ಒಂದೂವರೆ ವರ್ಷಗಳಿಂದ ಅವರು ಲೈಮ್ ಲೈಟ್ ನಲ್ಲಿ ಇರಲಿಲ್ಲ. ರಾಜ್ಯದ ಜನರು ಬಹುತೇಕ ಅವರನ್ನು ಮರೆತುಬಿಟ್ಟಿದ್ದರು. ಈಗ ಅನುಪಮಾ ಶೆಣೈ ಮತ್ತೆ ಮಾಧ್ಯಮಗಳ ಮುಂದೆ ಬಂದಿದ್ದಾರೆ. ಹೊಸ ರಾಜಕೀಯ ಪಕ್ಷವನ್ನು ಕಟ್ಟುತ್ತೇನೆ ಎಂದು ಘೋಷಿಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಬರಲು ಸಿದ್ಧರಾಗಿ ನಿಂತಿದ್ದಾರೆ.
ಈ ವಾರ ಬೇರೆ ಬೇರೆ ಸ್ಥಳೀಯ ಟಿವಿ ವಾಹಿನಿಗಳಲ್ಲಿ ಅವರ ನೇರಪ್ರಸಾರದ ಸಂದರ್ಶನ ಪ್ರಸಾರವಾಗಿದೆ. ಒಂದು ಚಾನೆಲ್ ನಲ್ಲಿ ಅವರಿಗೆ ಕರೆ ಮಾಡಿದ ವೀಕ್ಷಕರೊಬ್ಬರು ನೀವು ಬಿಜೆಪಿಗೆ ಸೇರಿದರೆ ಒಳ್ಳೆಯದು ಎಂದು ಕೊಟ್ಟ ಸಲಹೆಗೆ “ಅಲ್ಲಿ ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಮಾಡಿದರೆ ಬಿಜೆಪಿ ಸೇರುತ್ತೇನೆ” ಎಂದು ಹೇಳಿದ್ದಾರೆ. ಹಾಗೆ ಇನ್ನೊರ್ವ ವೀಕ್ಷಕರೊಬ್ಬರು ಕರೆ ಮಾಡಿ ನೀವು ಬೇರೆ ಪಕ್ಷ ಕಟ್ಟುವುದಕ್ಕಿಂತ ಬಿಜೆಪಿಗೆ ಸೇರಬಹುದಲ್ಲ ಎಂದು ಹೇಳಿದಾಗ ಬರುವ ಚುನಾವಣೆಯಲ್ಲಿ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿ ನಾನು ಹೇಳಿದ ಅಭ್ಯರ್ಥಿಗಳಿಗೆನೆ ಟಿಕೇಟ್ ಕೊಟ್ಟರೆ ಬಿಜೆಪಿ ಸೇರುತ್ತೇನೆ ಎಂದು ಹೇಳಿದ್ದಾರೆ.
ತನಗೆ ಕಾಂಗ್ರೆಸ್ ವಿರೋಧಿಯಲ್ಲ, ತಾನು ಸೇವೆಯಲ್ಲಿದ್ದಾಗ ಕಾಂಗ್ರೆಸ್ ಮುಖಂಡರೊಂದಿಗೆ ಒಳ್ಳೆಯ ಬಾಂಧವ್ಯ ಇಟ್ಟುಕೊಂಡಿದ್ದೆ. ಅವರು ಕೂಡ ನನ್ನೊಂದಿಗೆ ಚೆನ್ನಾಗಿಯೇ ಇದ್ದರು ಎಂದು ಹೇಳಿರುವ ಅನುಪಮಾ ಶೆಣೈ, ಕಾಂಗ್ರೆಸ್ಸನ್ನಾದರೂ ಅವರು ಮಾಡಿದ ತಪ್ಪುಗಳಿಗೆ ಕ್ಷಮಿಸಬಹುದು. ಆದರೆ ಬಿಜೆಪಿಯನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ ಎಂದು ಹೇಳಿದ್ದಾರೆ. ಪೊಲೀಸ್ ಇಲಾಖೆಯಲ್ಲಿದ್ದಾಗ ಪರಮೇಶ್ವರ್ ನಾಯ್ಕ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಅನುಪಮಾ ಶೆಣೈ ನಂತರ ಯು ಟರ್ನ್ ತೆಗೆದುಕೊಂಡು ಪರಮೇಶ್ವರ್ ನಾಯ್ಕ್ ನಾನು ಅಂದುಕೊಂಡಷ್ಟು ಕೆಟ್ಟವರಲ್ಲ ಎಂದು ಹೇಳಿ ಮಾಧ್ಯಮಗಳನ್ನೇ ಆಶ್ಚರ್ಯಗೊಳಿಸಿದ್ದರು. ರಾಜೀನಾಮೆ ಕೊಡುವಾಗ ಕಾಂಗ್ರೆಸ್ ಅನ್ನು ಟೀಕಿಸಿದ್ದ ಅನುಪಮಾ ಶೆಣೈ ನಂತರ ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ತಮ್ಮನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಿ ಎಂದು ಪತ್ರ ಬರೆದಿದ್ದರು. ರಾಜೀನಾಮೆ ಕೊಟ್ಟ ಬಳಿಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ್ಯದ ಪ್ರಮುಖರಾಗಿರುವ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಭೇಟಿಯಾಗಿ ಸಂತಸ ವ್ಯಕ್ತಪಡಿಸಿದ್ದರು. ಅದೇ ಅನುಪಮಾ ಶೆಣೈ ಮೊನ್ನೆ ಒಂದು ವಾಹಿನಿಯಲ್ಲಿ ವೀಕ್ಷಕರೊಬ್ಬರ ಸಲಹೆಗೆ ಉತ್ತರಿಸುವಾಗ ಕಲ್ಲಡ್ಕದಲ್ಲಿ ಕೋಮುಗಲಭೆಯಾಗಿ ತಿಂಗಳುಗಟ್ಟಲೆ ವ್ಯಾಪಾರಿಗಳಿಗೆ ವ್ಯವಹಾರಕ್ಕೆ ದಕ್ಕೆಯಾಗಿದೆ, ನಾನು ಜಿಎಸ್ ಬಿ, ನಮ್ಮ ಸಮುದಾಯದಲ್ಲಿ ಹೆಚ್ಚಿನವರು ವ್ಯಾಪಾರದಲ್ಲಿ ಇದ್ದಾರೆ, ಹೀಗೆ ಅಂಗಡಿಗಳು ಹಲವು ದಿನ ಬಂದ್ ಆದರೆ ನಮ್ಮ ಗತಿ ಏನು ಎಂದು ತನ್ನ ಸಮುದಾಯದ ಪರವಾಗಿ ಮಾತನಾಡಿ ಬಿಜೆಪಿಗೆ ಸೇರಿ ಎಂದು ವೀಕ್ಷಕರೊಬ್ಬರು ಕೊಟ್ಟ ಸಲಹೆಗೆ ತಿರುಗಿ ಮಾತನಾಡುವ ಮೂಲಕ ತಮ್ಮ ಕೋಪ ಪ್ರದರ್ಶಿಸಿದ್ದಾರೆ.
ಇವರ ಆವೇಶ ನೋಡಿ ಕಕ್ಕಾಬಿಕ್ಕಿಯಾದ ಆ ವೀಕ್ಷಕ ನಾನು ಹೀಗೆ ಹೇಳಿದ್ದು ಎಂದು ಸಮಾಧಾನಪಡಿಸಲು ನೋಡಿದರೆ ಮುಂದುವರೆದು ಅನುಪಮಾ ಶೆಣೈ, ಅಲ್ಲಿ ಗಲಾಟೆಯಾಗಲು ನೀವೆ ಕಾರಣ ಎನ್ನುವ ಅರ್ಥದಲ್ಲಿ ಬಿಜೆಪಿ ಪರ ಮಾತನಾಡಿದ ವೀಕ್ಷಕನಿಗೆ ಇರಿಸುಮುರುಸು ಮಾಡಿದ್ದಾರೆ. ತಾನು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ ಎಂದು ಹೇಳಿರುವ ಅನುಪಮಾ ಶೆಣೈ, ಒಂದು ಚಾನಲ್ ನಲ್ಲಿ ತಮಗೆ 60 ಸೀಟ್ ಕನಿಷ್ಟ ಗೆಲ್ಲಬಹುದು ಎನ್ನುವ ವಾತಾವರಣ ಇದೆ ಎಂದಿದ್ದಾರೆ. ಅವರು ಯಾವಾಗ ಕಾಂಗ್ರೆಸ್ಸನ್ನು ಟೀಕಿಸುತ್ತಾರೆ, ಯಾವಾಗ ಬಿಜೆಪಿಯನ್ನು ಬೈಯುತ್ತಾರೆ, ಯಾವಾಗ ಆರ್ ಎಸ್ ಎಸ್ ಅನ್ನು ಹೊಗಳುತ್ತಾರೆ, ಯಾವಾಗ ಕಲ್ಕಡ್ಕ ಘಟನೆಗಳನ್ನು ಬಿಜೆಪಿ ಮೇಲೆ ಹಾಕುತ್ತಾರೆ ಎಂದು ತಿಳಿಯದೇ ಜನರು ಕಕ್ಕಾಬಿಕ್ಕಿಯಾಗಿದ್ದಾರೆ!

  • Share On Facebook
  • Tweet It


- Advertisement -
anupama shenoy


Trending Now
ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
Abdul Gaffur, Katipalla May 23, 2025
ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
Abdul Gaffur, Katipalla May 23, 2025
Leave A Reply

  • Recent Posts

    • ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
    • ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
    • ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!
    • ಜಯಂ ರವಿಯಿಂದ ಪ್ರತಿ ತಿಂಗಳು 40 ಲಕ್ಷ ರೂ ಪರಿಹಾರ ಕೇಳಿದ ಪತ್ನಿ!
    • ಮಾವೋವಾದಿ ರಾಷ್ಟ್ರೀಯ ನಾಯಕ, 1.5 ಕೋಟಿ ಘೋಷಿತ ನಕ್ಸಲ್ ಬಸವರಾಜ್ ಫಿನಿಶ್!
    • ಜೂನ್ 5 ಕ್ಕೆ ಅಯೋಧ್ಯೆ ರಾಮ ದರ್ಬಾರ್ ಪ್ರಾಣ ಪ್ರತಿಷ್ಟೆಗೆ ದಿನ ನಿಗದಿ... ಕೆಲಸಕಾರ್ಯಗಳು ಅಂತಿಮ ಹಂತಕ್ಕೆ!
    • ಕನ್ನಡತಿಯ ಮುಸ್ಲಿಂ ಹೆಣ್ಣುಮಕ್ಕಳ ದೈನಂದಿನ ಬದುಕಿನ ಕತೆಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ!
    • ಕನ್ನಡ ಮಾತಾಡಲ್ಲ ಎಂದು ದರ್ಪ ತೋರಿದ ಬ್ಯಾಂಕ್ ಮ್ಯಾನೇಜರ್ ಟ್ರಾನ್ಫರ್! ಉಳಿದವರಿಗೆ ಎಚ್ಚರಿಕೆ ಗಂಟೆ..
    • ಲಷ್ಕರ್ ಈ ತೈಬಾ ಸಹಸಂಸ್ಥಾಪಕನಿಗೆ ಮನೆಯಲ್ಲಿಯೇ ಭೀಕರ ದಾಳಿ, ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಗೆ ದಾಖಲು!
  • Popular Posts

    • 1
      ತಿರುಪತಿ ಕಲ್ಯಾಣ ಮಂಟಪದ ಆವರಣದಲ್ಲಿ ನಮಾಜ್! ಸಿಸಿಟಿವಿಯಲ್ಲಿ ಸೆರೆ!
    • 2
      ಮೈಸೂರು ಪಾಕ್, ಮೋತಿ ಪಾಕ್, ಆಮ್ ಪಾಕ್ ಇನ್ನು ಪಾಕ್ ಜಾಗದಲ್ಲಿ ಶ್ರೀ!
    • 3
      ರಿಪಬ್ಲಿಕ್ ವಾಹಿನಿಯಿಂದ ಖ್ಯಾತ ನ್ಯಾಯವಾದಿ ಅರುಣ್ ಶ್ಯಾಮ್ ಹಾಗೂ ಕಾನೂನು ತಂಡಕ್ಕೆ ಧನ್ಯವಾದ!
    • 4
      ಕರ್ನಾಟಕದಲ್ಲಿ ಸರಕಾರದ ಸೋಪ್ ಪ್ರಚಾರಕ್ಕೆ ತಮನ್ನಾ ಭಾಟಿಯಾಗೆ 2 ವರ್ಷಕ್ಕೆ 6.20 ಕೋಟಿ!
    • 5
      ಜಯಂ ರವಿಯಿಂದ ಪ್ರತಿ ತಿಂಗಳು 40 ಲಕ್ಷ ರೂ ಪರಿಹಾರ ಕೇಳಿದ ಪತ್ನಿ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search