• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನನಗಿಂತ ಪ್ರಣಬ್ ಪ್ರಧಾನಿಯಾಗಲು ಹೆಚ್ಚು ಸಮರ್ಥರಿದ್ದರು

TNN Correspondent Posted On October 14, 2017


  • Share On Facebook
  • Tweet It

>> ಇತಿಹಾಸದ ಸತ್ಯಗಳನ್ನು ಮೌನ ಮುರಿದು ಹೊರಹಾಕಿದ ಮಾಜಿ ಪ್ರಧಾನಿ

>> ಸೋನಿಯಾ ಆದೇಶ ಮೀರದ ಅಸಹಾಯಕತೆ ಬಂಧಿಸಿತ್ತು

ನ್ಯೂಡೆಲ್ಲೀ : ತುಂಬಾ ಮೌನವಾಗಿರುವವರು ತಮ್ಮಲ್ಲಿ ಅನೇಕ ರಹಸ್ಯಗಳನ್ನು ಹುದುಗಿಸಿಟ್ಟುಕೊಂಡಿರುತ್ತಾರೆ ಎಂಬುದು ಸತ್ಯ. ಇದಕ್ಕೆ ಜ್ವಲಂತ ಉದಾಹರಣೆಯಾಗಿ ಶುಕ್ರವಾರ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಬಾಯಿಂದ ಗತರಹಸ್ಯವೊಂದು ಹೊರಬಿದ್ದಿದೆ.

” ಯುಪಿಎ ಅವಧಿಯಲ್ಲಿ ಪ್ರಧಾನಿ ಹುದ್ದೆ ನೀಡದಿದ್ದಕ್ಕೆ ಅಸಮಾಧಾನ ಹೊಂದಲು ಪ್ರಣಬ್ ಮುಖರ್ಜಿಯವರಿಗೆ ಎಲ್ಲ ರೀತಿಯ ಹಕ್ಕು ಇದೆ. ಆ ಹುದ್ದೆಗೆ ನನಗಿಂತಲೂ ಅವರು ಹೆಚ್ಚು ಅರ್ಹರಾಗಿದ್ದರು ಕೂಡ. ಆದರೆ ನನ್ನ ಬಳಿಯೂ ಪ್ರಧಾನಿ ಹುದ್ದೆ ಅಲಂಕರಿಸದ ಹೊರತು ದಾರಿ ಇರಲಿಲ್ಲ ” ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಅಣತಿ ಮೀರಲಾಗಲಿಲ್ಲ ಎಂದು ಪರೋಕ್ಷವಾಗಿ ಬೇಸರಿಸಿದ್ದಾರೆ.

ಮುಖರ್ಜಿ ಬರೆದಿರುವ “ಕೋಯಲೀಷನ್ ಇಯರ್ಸ್-1996-2012′ ಹೆಸರಿನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಸಿಂಗ್ ತಮ್ಮ ಮನದಾಳ ಬಿಚ್ಚಿಟ್ಟಿದ್ದಾರೆ.

ಸೋನಿಯಾ ತಮಗೆ ಪ್ರಧಾನಿಯಾಗಿ ಎಂದು ಆದೇಶಿಸಿದ್ದನ್ನು ಮೀರಲಾಗದ ನನ್ನ ಪರಿಸ್ಥಿತಿ ಪ್ರಣಬ್ ಅವರಿಗೆ ಅರ್ಥವಾಗಿತ್ತು. ಇದರಿಂದ ನಮ್ಮ ಸಂಬಂಧ ಉಳಿದಿದೆ ಎಂದು ಸಿಂಗ್ ಸೂಚ್ಯವಾಗಿ ಹೇಳಿ ಸಭಿಕರನ್ನು ಆಶ್ಚರ್ಯಚಕಿತರಾಗಿಸಿದರು. ಆದರೆ ಈ ಕಾರ್ಯಕ್ರಮದಲ್ಲಿದ್ದ ಕಾಂಗ್ರಸ್ ಉಪಾಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಮಾತ್ರ ಸಂದರ್ಭ ಮುಜುಗರ ತಂದಿಟ್ಟಿತ್ತು.

ಸಿಂಗ್ ಸರಕಾರದ ಭಾಗವಾಗುವುದು ಬೇಡ : ಪ್ರಧಾನಿ ಅಭ್ಯರ್ಥಿಯಾದ ಸಿಂಗ್ ಅವರಿಗಿಂತಲೂ ಕಾಂಗ್ರೆಸ್ ಪಕ್ಷದಲ್ಲಿ ಹಾಗೂ ರಾಜಕೀಯ ಅನುಭವದಲ್ಲಿ ಪ್ರಣಬ್ ಹಿರಿಯರು. ಇದು ಎಲ್ಲರಿಗೂ ತಿಳಿದಿತ್ತು. ಹಾಗಾಗಿಯೇ ಪ್ರಧಾನಿ ಪ್ರಣಬ್ ಅವರೇ ಆಗುತ್ತಾರೆ ಎಂದು ಎಲ್ಲರೂ ತಿಳಿದಿದ್ದರು. ಆದರೆ ಸೋನಿಯಾ ಲೆಕ್ಕಾಚಾರ ಬೇರೆಯಿತ್ತು ಎಂದು ಮಾಜಿ ರಾಷ್ಟ್ರಪತಿ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
ಸಿಂಗ್ ನೇತೃತ್ವದಲ್ಲಿ ಯುಪಿಎ ಸರಕಾರದ ಭಾಗವಾಗಲು ನನಗೆ ಇಚ್ಛೆಯಿರಲಿಲ್ಲ. ಆದರೆ ಸೋನಿಯಾ ಒತ್ತಡದಿಂದ ನಿಮ್ಮ ಅನುಭವ ಸಿಂಗ್ ಅವರಿಗೆ ಅವಶ್ಯಕ ಎಂದು ಪಟ್ಟು ಹಿಡಿದಾಗ ಒಪ್ಪಿ ಸಲಹೆಗಳನ್ನ ನೀಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

  • Share On Facebook
  • Tweet It


- Advertisement -
bjpbookcongressgandhiindiakolkatamanmohanministermodimukherjeendanewpranabpresidentprimerahulsinghsoniaupa


Trending Now
ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
Tulunadu News January 28, 2023
ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
Tulunadu News January 27, 2023
You may also like
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಹೀಗೆ ಬಿಟ್ಟರೆ ಸ್ಮಾರ್ಟ್ ಸಿಟಿ ಹಣದಿಂದ ಖಾದರ್ ಶಾದಿ ಮಹಾಲ್ ಕಟ್ಟುತ್ತೇನೆ ಅಂದರೂ ಅನ್ನಬಹುದು!
October 9, 2018
ಮಂಗಳೂರಿನಲ್ಲಿ ದಸರಾ ರಜೆ ಕಡಿಮೆ ಮಾಡುವುದು ಸರಿಯಲ್ಲ- ಶಾಸಕ ಕಾಮತ್
September 22, 2018
Leave A Reply

  • Recent Posts

    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
    • ಹಿಂದೂಗಳ ಫಲವತ್ತತೆಯ ತಾಕತ್ತು ಪರೀಕ್ಷಿಸುತ್ತೀಯಾ ಬದ್ರುದ್ದೀನ್?
    • ಮಕ್ಕಳ ಬ್ಯಾಗಿನಲ್ಲಿ ಕಾಂಡೋಮ್ ಉತ್ತಮ ಲಕ್ಷಣವಲ್ಲ!!
    • ಬೊಮ್ಮಾಯಿ ಕಣ್ಣು ಮುಚ್ಚಿ ಕೊಟ್ಟ ಮುಸ್ಲಿಂ ಕಾಲೇಜು ಪ್ರಪಂಚ ನೋಡಿತು!!
  • Popular Posts

    • 1
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • 2
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • 3
      ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search