• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಇಷ್ಟು ದಿನದೊಳಗೆ ಈ ಕೇಸ್ ಮುಗಿಯಲೇಬೇಕು ಎಂದು ಮೋದಿ ಕಾನೂನು ತರುತ್ತಾರಾ!

Hanumantha Kamath Posted On October 31, 2017
0


0
Shares
  • Share On Facebook
  • Tweet It

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಧರ್ಮಸ್ಥಳದಲ್ಲಿ ಹೇಳಿದ “ಸಮುದ್ರ ಕಡಲೆಕಳೆ” ಬಗ್ಗೆ ನೋಡಲು ಎಷ್ಟು ಜನ ಗೂಗಲ್ ಗೆ ಹೋಗಿ ಸರ್ಚ್ ಮಾಡಿದ್ದೀರಿ. ಒಂದು ರಾಜ್ಯ ತನ್ನಲ್ಲಿರುವ ಪ್ರಾಕೃತಿಕ ಸಂಪನ್ಮೂಲವನ್ನು ಹೇಗೆ ಬಳಸಿಕೊಳ್ಳಬಹುದು ಎಂದು ಪ್ರಧಾನಿ ಹೇಳಿದ್ದನ್ನು ನಾವು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಸಲಹೆ ಅಥವಾ ಅಭಿಪ್ರಾಯ ಎಲ್ಲಿಂದ ಕೂಡ ಬರಲಿ, ಅದು ಭಾರತೀಯ ಜತಾ ಪಾರ್ಟಿಯಾಗಲಿ ಅಥವಾ ಕಾಂಗ್ರೆಸ್ ಪಕ್ಷವಾಗಲಿ ಅಥವಾ ಕೊನೆಗೆ ಜೆಡಿಎಸ್ ಕೊಟ್ಟರೂ ಅದು ನಮ್ಮ ಒಳ್ಳೆಯದಕ್ಕೆ ಹೇಳಿದರೆ ಅದನ್ನು ಒಪ್ಪಿಕೊಳ್ಳಬೇಕು. ಮೋದಿ ಹೇಳಿದ್ರು ಎಂದು ಸರಿ ಇಲ್ಲ ಒಂದು ವೇಳೆ ರಾಹುಲ್ ಗಾಂಧಿ ಹೇಳಿದಿದ್ದರೆ ಒಪ್ಪಿಕೊಳ್ಳಬಹುದಿತ್ತು. ನನ್ನದಲ್ಲದ ಪಕ್ಷದವರು ಹೇಳಿದ ಕಾರಣ ಅದನ್ನು ಒಪ್ಪಿದರೆ ಸಣ್ಣವರಾಗುತ್ತಿವೆಯೋ ಎಂದು ಅಂದುಕೊಂಡು ಅದನ್ನು ನಿರ್ಲಕ್ಷ್ಯಿಸಿದರೆ ನಷ್ಟ ನಮಗೆ. ಹಾಗೆ ಆಗದಿರಲಿ, ಮುಗ್ಧ, ಶ್ರಮಜೀವಿ ಮೊಗವೀರ ಜನಾಂಗದವರಿಗೆ ಇದನ್ನು ಮನವರಿಕೆ ಮಾಡುವ ಕೆಲಸವನ್ನು ನಾವು ಮಾಡೋಣ. ಆ ಮೂಲಕ ಒಂದಿಷ್ಟು ಸಮಾಜ ಸುಧಾರಣೆ ಕೆಲಸ ನಮ್ಮಿಂದ ಆಗಲಿ. ಭವಿಷ್ಯದಲ್ಲಿ ಸೀವುಡ್ ಫಾರ್ಮಿಂಗ್ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾದಾಗ ಅದನ್ನು ಬಳಸಿಕೊಳ್ಳುವ ಕೆಲಸ ಮತ್ತು ಅದಕ್ಕೆ ಸಿದ್ಧತೆ ನಮ್ಮ ಕಡೆಯಿಂದಲೂ ಆಗಬೇಕಾಗಿರುವುದು ಅಗತ್ಯ.
ಮೋದಿಯವರು ಮೊನ್ನೆ ಧರ್ಮಸ್ಥಳದಲ್ಲಿ ಮಾತನಾಡುವಾಗ ಹಿಂದಿನ ಪ್ರಧಾನ ಮಂತ್ರಿಯೊಬ್ಬರು ಸ್ವತ: ಒಪ್ಪಿಕೊಂಡ ಒಂದು ನಗ್ನಸತ್ಯವನ್ನು ನಮಗೆ ನೆನಪಿಸಿದರು. ಅವರು ರಾಜೀವ್ ಗಾಂಧೀಯವರ ಹೆಸರು ಹೇಳಲಿಲ್ಲವಾದರೂ ರಾಜೀವ್ ಗಾಂಧಿಯವರು ಹಿಂದೊಮ್ಮೆ ಹೇಳಿದ್ದ ಮಾತನ್ನು ಸ್ಮರಿಸಿದರು. ರಾಜೀವ್ ಗಾಂಧಿ ಆವತ್ತು ಹೇಳಿದ “ದೆಹಲಿಯಿಂದ ಒಂದು ಯೋಜನೆಗೆ ಒಂದು ರೂಪಾಯಿ ಬಿಡುಗಡೆಯಾದರೆ ಅದು ಹಳ್ಳಿಗೆ ಮುಟ್ಟುವಾಗ ಹದಿನೈದು ಪೈಸೆ ಮಾತ್ರ ಉಳಿಯುತ್ತದೆ.” ಆದರೆ ಕಳೆದ ಮೂರುವರೆ ವರ್ಷದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಒಂದು ರೂಪಾಯಿ ಬಿಡುಗಡೆಯಾದರೆ ಅದರ ಸಂಪೂರ್ಣ ಮೊತ್ತ ಅಭಿವೃದ್ಧಿಗೆ ವಿನಿಯೋಗವಾಗುತ್ತಿದೆ ಎಂದು ಮೋದಿ ಮೊನ್ನೆ ಹೇಳಿದ್ದಾರೆ. ಮೋದಿಯವರೇ ನೀವು ಹೇಳಿದ್ದು ಅದೇನೋ ಸರಿ ಇರಬಹುದು. ಹಣವನ್ನು ಪೂರ್ತಿಯಾಗಿ ಅಭಿವೃದ್ದಿಗೆ ಬಳಕೆಯಾಗುವಂತೆ ಅಧಿಕಾರಿಗಳು ಬಳಸುತ್ತಿದ್ದಾರೆ ಎಂದೇ ಇಟ್ಟುಕೊಳ್ಳೋಣ. ಆದರೆ ನನಗೆ ಅಷ್ಟರಲ್ಲಿಯೇ ತೃಪ್ತಿಯಾಗುವುದಿಲ್ಲ. ನನ್ನ ನಿರೀಕ್ಷೆಗಳು ಬೇರೆ ಕೂಡ ಇವೆ.
ಮೋದಿಯವರು ದೇಶದ ಕಾನೂನಿನಲ್ಲಿ ಬದಲಾವಣೆ ತರಬೇಕು. ಅಂದರೆ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ ಇರಬಹುದು ಅಥವಾ ಭಾರತೀಯ ಸಿವಿಲ್ ಪ್ರೊಸಿಡ್ಜರ್ ಕೋಡ್ ಇರಬಹುದು. ಅದರಲ್ಲಿ ಅಮೂಲಾಗ್ರ ಬದಲಾವಣೆ ತರಬೇಕು. ಒಂದು ಪ್ರಕರಣ ಇಂತಿಂಷ್ಟೇ ದಿನಗಳೊಳಗೆ ಮುಗಿಯಲೇಬೇಕು ಎಂದು ಕಾನೂನು ತರಬೇಕು. ಮೋದಿ ಬೀದರ್ ನಲ್ಲಿ ಭಾಷಣ ಮಾಡುವಾಗ ಒಂದು ಮಾತು ಹೇಳಿದ್ರು ” ನಾನು ಪ್ರಧಾನಿಯಾದ ತಕ್ಷಣ ಮೊದಲು ಯಾವೆಲ್ಲ ಪ್ರಮುಖ ಕಾಮಗಾರಿಗಳು ಆಮೆಗತಿಯಲ್ಲಿ ಹೋಗುತ್ತಿವೆ ಎನ್ನುವುದರ ಪಟ್ಟಿ ತರಿಸಿ ನೋಡಿದೆ. ಅದರ ನಂತರ ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳನ್ನು ಕೇಳಿದೆ. ಇಂತಿಂತಹ ಯೋಜನೆ ಎಷ್ಟು ದಿನಗಳೊಳಗೆ ಮುಗಿಯುತ್ತೆ ಎಂದೆ. ಅದಕ್ಕೆ ಅಧಿಕಾರಿಗಳು ಬೇಗ ಮುಗಿಯುತ್ತೆ ಸರ್ ಎಂದರು. ಆದರೆ ನಾನು ಆ ಬೇಗ ಎನ್ನುವುದನ್ನು ದಿನಾಂಕ, ತಿಂಗಳು, ವರ್ಷದೊಂದಿಗೆ ಹೇಳಿ ಎಂದೆ. ಆ ಕಾರಣದಿಂದ ಬೀದರ್-ಗುಲ್ಬಗ್ರಾ ರೈಲ್ವೆ ಟ್ರಾಕ್ ಒಂದೂವರೆ ದಶಕದಿಂದ ಮಲಗಿತ್ತು, ಬಳಿಕ ವೇಗ ಪಡೆದುಕೊಂಡು ಈಗ ಮುಗಿದಿದೆ” ಎಂದರು. ನಾನು ಈಗ ಹೇಳುವುದು ಅದೇ. ಯೋಜನೆ ಮಾತ್ರ ಬೇಗ ಮುಗಿದರೆ ಆಗುವುದಿಲ್ಲ. ಇವತ್ತು ನಮ್ಮ ನ್ಯಾಯಾಲಯದಲ್ಲಿ ಅಸಂಖ್ಯಾತ ಕೇಸುಗಳು ಮುಂದೂಡಲ್ಪಡುತ್ತಾ ಅದರಲ್ಲಿ ಸಿಕ್ಕಿಕೊಂಡಿರುವ ನಾಗರಿಕರು ಒದ್ದಾಡುತ್ತಾ ಇರುತ್ತಾರೆ. ಇದರಿಂದ ಅವರ ಸಮಯ, ಶಕ್ತಿ ವೇಸ್ಟ್, ಅದರೊಂದಿಗೆ ನ್ಯಾಯಾಲಯದ ಸಮಯ, ಶಕ್ತಿ ಟೋಟಲ್ ವೇಸ್ಟ್. ಇದರಿಂದ ಆಗುವಂತದ್ದು ಏನೂ ಇಲ್ಲ. ಆದ್ದರಿಂದ ಮೋದಿಯವರು ಒಂದು ನಿಯಮ ಮಾಡಿ ” ಇಂತಿಂತಹ ಪ್ರಕರಣಗಳು ಇಷ್ಟು ದಿನಗಳೊಳಗೆ ಮುಗಿಯಲೇಬೇಕು” ಎಂದು ಕಾನೂನು ತರಲಿ. ಎಷ್ಟೋ ಪ್ರಕರಣಗಳಲ್ಲಿ ತೀರ್ಪು ಬಂದಿರುವಾಗ ಅದನ್ನು ಅನುಭವಿಸುವವರು ಇರುವುದಿಲ್ಲ. ಕೆಲವರು ಒಳಗೆ ಸುಮ್ಮಸುಮ್ಮನೆ ಕೊಳೆಯುತ್ತಿರುತ್ತಾರೆ. ಇನ್ನೊಂದಿಷ್ಟು ಜನ ಸುಳ್ಳು ಆರೋಪ ಹೊತ್ತುಕೊಂಡು ಹೊರಗೆ ಒದ್ದಾಡುತ್ತಿರುತ್ತಾರೆ. ಅದೇ ಸೆಲೆಬ್ರಿಟಿಗಳಿಗಾದರೆ ಎಂತಹುದೇ ಆರೋಪ ಇರಲಿ, ತಕ್ಷಣ ಬೇಲ್ ಸಿಕ್ಕಿಬಿಡುತ್ತದೆ. ನಂತರ ಕೇಸ್ ಮುಗಿಯುವುದೇ ಇಲ್ಲ. ಕೇಸ್ ಮುಗಿಯುವಾಗ ಅಲ್ಲಿ ನ್ಯಾಯ ಪಡೆದುಕೊಳ್ಳಬೇಕಿರುವವರು ಉಳಿದಿರುವುದಿಲ್ಲ. ಹಾಗೆ ಆಗದ ಹಾಗೆ ಮೋದಿ ಕಾನೂನು ತರುತ್ತಾರಾ!

0
Shares
  • Share On Facebook
  • Tweet It


modi law cases


Trending Now
ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
Hanumantha Kamath February 4, 2026
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Hanumantha Kamath January 30, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
  • Popular Posts

    • 1
      ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!

  • Privacy Policy
  • Contact
© Tulunadu Infomedia.

Press enter/return to begin your search