• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

ಮತ್ತದೇ ಹಳೆ ರಾಗ, ಗುಜರಾತ್ ಚುನಾವಣೆಗೆ ಮುಂಚೆಯೇ ಕೆಟ್ಟಿತೇ ಕಾಂಗ್ರೆಸ್ ಮತ ಯಂತ್ರ?

ರವಿ ಶೆಣೈ ಕಾರ್ಕಳ Posted On December 10, 2017
0


0
Shares
  • Share On Facebook
  • Tweet It

ಗುಜರಾತ್ ಚುನಾವಣೆಗೆ ಶನಿವಾರ ಮೊದಲ ಹಂತದ ಚುನಾವಣೆ ಮುಗಿದಿದೆ. ಚುನಾವಣೆ ಆಯೋಗ ತನ್ನ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದು, ಶೇ.68 ರಷ್ಟು ಮತದಾನವಾಗಿದೆ. ಆದರೆ ಕಾಂಗ್ರೆಸ್  ಮುಖಂಡರು ತಮ್ಮ ಹಳೆ ವರಸೆ ಮುಂದುವರಿಸಿದ್ದಾರೆ. ಮತಯಂತ್ರದಲ್ಲಿ ದೋಷವಿದೆ, ಅದರಲ್ಲಿ ಬ್ಲೂಟೂತ್ ಅಳವಡಿಸಿ ಯಾವುದೇ ಪಕ್ಷಕ್ಕೆ ಮತ ನೀಡಿದರೂ ಕೇವಲ ಬಿಜೆಪಿ ಮತ ಹೋಗುವಂತೆ ಷಡ್ಯಂತ್ರ ಮಾಡಲಾಗಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ.

ಹೀಗೆ ತನ್ನ ‘ಕೈ’ಯಲ್ಲಿ ಗುಜರಾತ್ ಚುನಾವಣೆಯಲ್ಲಿ ಗೆಲುವು ಸಾಧಿಸಲು ಆಗುವುದಿಲ್ಲ ಎಂಬುದನ್ನು ಕಾಂಗ್ರೆಸ್ ಚುನಾವಣೆಗೆ ಮುಂಚೆಯೇ ಭವಿಷ್ಯ ನುಡಿದಿದೆ. ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ಮೇಲೆ ಕಾಂಗ್ರೆಸ್ ಮಾಡಿರುವ ಆರೋಪ ಕೈ ಪಾಳಯಕ್ಕೆ ಸೋಲಿನ ಸುಳಿವು ಏನಾದ್ರೂ ದೊರಕಿದೆಯಾ ಎಂಬ ಅನುಮಾನ ಮೂಡಿದೆ.

ಯುದ್ಧಕ್ಕೆ ಮುಂಚೆಯೇ ಕಾಂಗ್ರೆಸ್ ಶಸ್ತ್ರತ್ಯಾಗ ಮಾಡಿದಂತಾಗಿದೆ. ಸದಾ ಬಿಜೆಪಿಯ ಬಾಯಿಗೆ ಸಿಲುಕಿ ಒದ್ದಾಡುವ ಕಾಂಗ್ರೆಸ್ ಹಲವು ಎಡವಟ್ಟುಗಳನ್ನು ಮಾಡಿಕೊಂಡಿದೆ. ಕಾಂಗ್ರೆಸ್ ಮುಖಂಡ ಮಣಿಶಂಕರ ಅಯ್ಯರ ಮೋದಿ ಅವರನ್ನು ನೀಚ ವ್ಯಕ್ತಿ ಎಂದು ಹೀಯಾಳಿಸಿದರೇ, ಇನ್ನೊಬ್ಬ ಮುಖಂಡ ಸಲ್ಮಾನ್ ನಿಜಾಮಿ ಮೋದಿ ತನ್ನ ತಂದೆ ಯಾರು ಎಂದು ಕೇಳಿದ್ದಾನೆ. ಇದು ಕಾಂಗ್ರೆಸ್ ಗೆ ತಿರುಗುಬಾಣವಾಗಿದಲ್ಲದೇ, ಬಿಜೆಪಿ ಕೈಪಡೆಯ ಮೇಲೆ ದಾಳಿ ಮಾಡಲು ಪ್ರಬಲ ಅಸ್ತ್ರ ಒದಗಿದೆ.

ಒಂದೇ ಎರಡೇ ಕಾಂಗ್ರೆಸ್ ಮಾಡಿಕೊಂಡಿರುವ ಎಡವಟ್ಟುಗಳು ಅವೆಲ್ಲವನ್ನು ಬಿಟ್ಟು ಕೂಸು ಹುಟ್ಟುವ ಮುನ್ನವೇ ಗಂಡೋ ಹೆಣ್ಣೋ ಎಂದು ನಿರ್ಧರಿಸಿ, ಜಾರಿಕೊಳ್ಳಲು ಕಾಂಗ್ರೆಸ್ ಮತಯಂತ್ರಗಳ ಮೇಲೆ ದೂರು ನೀಡುತ್ತಿದೆ. ಆದರೆ ಅದಕ್ಕೆ ತಕ್ಕ ಉತ್ತರವನ್ನು ನೀಡಿರುವ ಚುನಾವಣೆ ಆಯೋಗ ‘ಮತಯಂತ್ರದಲ್ಲಿ ಗೋಲ್ ಮಾಲ್ ಮಾಡಲಾಗಿದೆ ಎಂಬುದು ಆಧಾರರಹಿತ ಆರೋಪ ಎಂದು ಘೋಷಿಸಿದೆ.

ರಾಹುಲ್ ಗಾಂಧಿ ನೇತೃತ್ವದಲ್ಲಿ ಗುಜರಾತ್ ಚುನಾವಣೆ ಎದುರಿಸುತ್ತಿರುವ ಕಾಂಗ್ರೆಸ್ ಗೆ ಪಕ್ಷ ಮತ್ತು ರಾಹುಲ್ ಅಸ್ತಿತ್ವ ಎರಡು ಮುಖ್ಯ. ರಾಹುಲ್ ಗಾಂಧಿ ಮರ್ಯಾದೆ ಉಳಿಸಬೇಕು ಮತ್ತು ಪಕ್ಷದ ಅಸ್ತಿತ್ವ ಉಳಿಸಬೇಕು. ಇದೆ ಮತಯಂತ್ರಗಳನಿಟ್ಟುಕೊಂಡೇ ಪಂಜಾಬ್ ನಲ್ಲಿ ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್ ಗೆ ಇದೀಗ ಅದೆ ಮತಯಂತ್ರ ಮತ್ತು ಆಯೋಗದ ಮೇಲೆ ವಿಶ್ವಾಸ ಉಳಿದಿಲ್ಲವಲ್ಲ. ಈ ಇಬ್ಬಂದಿತನ ಜನರಿಗೆ ಅರ್ಥವಾಗದೇ ಇರದೇ?. ಏನಾದರೂ ಸರಿಯೇ ಎಂದು ಇದೀಗ ಚುನಾವಣೆ ಆಯೋಗದ ಮೇಲೆ ಗೂಭೆ ಕೂರಿಸಲು ಹೋದರೆ ಜನರೇನು ಮೂರ್ಖರೆ?. ಇವರ ಹುಚ್ಚು, ಮೊಂಡು ವಾದಗಳನ್ನು ಒಪ್ಪಲು.

 

0
Shares
  • Share On Facebook
  • Tweet It




Trending Now
ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
ರವಿ ಶೆಣೈ ಕಾರ್ಕಳ November 21, 2025
ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
ರವಿ ಶೆಣೈ ಕಾರ್ಕಳ November 20, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!

  • Privacy Policy
  • Contact
© Tulunadu Infomedia.

Press enter/return to begin your search