• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕಸದ ತೊಟ್ಟಿಯಾಗಿದ್ದ ಕಲ್ಯಾಣಿಯನ್ನು ತೀರ್ಥ ಸ್ಥಾನ ಮಾಡಿದ ಯುವ ಬ್ರಿಗೇಡ್

TNN Correspondent Posted On January 19, 2018
0


0
Shares
  • Share On Facebook
  • Tweet It

ಗದಗ: ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವ ಬ್ರಿಗೇಡ್ ಯಾವುದೇ ಅಧಿಕಾರದ ಹಂಗಿಲ್ಲದೇ, ಹಣದಾಸೆಯಿಲ್ಲದೇ ನಿಸ್ವಾರ್ಥ ಯುವ ಪಡೆಯೊಂದಿಗೆ ನಡೆಸುತ್ತಿರುವ ಸಾಮಾಜಿಕ ಕಾರ್ಯಕ್ಕೆ ಭಾರಿ ಯಶಸ್ವಿ ದೊರೆಯುತ್ತಿದೆ. ಸ್ವಾರ್ಥವಿಲ್ಲದ ಕಾರ್ಯಗಳಿಗೆ ಯಶಸ್ಸು ನಿಶ್ಚಿತ ಮತ್ತು ಪರಿಣಾಮ ಖಚಿತ ಎಂಬುದಕ್ಕೆ ಯುವ ಬ್ರಿಗೇಡ್ ಕಾರ್ಯಗಳು ಸಾಕ್ಷಿಯಾಗಿ ನಿಂತಿದ್ದು, ಗದಗನಲ್ಲಿ ಯುವ ಬ್ರಿಗೇಡ್ ಕಾರ್ಯದಿಂದ ಕಸದ ತೊಟ್ಟಿಯಂತಾಗಿದ್ದ ಕಲ್ಯಾಣಿಯೊಂದು ತೀರ್ಥ ಕ್ಷೇತ್ರವಾಗಿ ಮಾರ್ಪಟ್ಟಿದೆ.

ಜೀವ ಜಲ ಬತ್ತಿ, ಸಮೀಪಕ್ಕೂ ಹೋಗಲಾರದಂತೆ ಬೆಳೆದಿದ್ದ ಮುಳ್ಳು ಕಂಟಿ, ಕಸದ ರಾಶಿಯಲ್ಲಿ ಮರೆಯಾಗಿದ್ದ ಗದುಗಿನ ಗಂಗಾಪುರ ಪೇಟೆಯ ವೀರನಾರಾಯಣ ದೇವಸ್ಥಾನದ ಎದುರಿಗಿರುವ ಕೋನೇರಿ ಹೊಂಡ ಇಂದು ಜೀವ ಜಲದಿಂದ ಭರ್ತಿಯಾಗಿದೆ. ಯುವ ಬ್ರಿಗೇಡ್ ನ ಉತ್ಸಾಹಿ ನಿಸ್ವಾರ್ಥಿ ತರುಣರ 270 ದಿನಗಳ ಶ್ರಮ ಸಾರ್ಥಕವಾಗಿದೆ.

ಸಂಘಟಿತ, ನಿಸ್ವಾರ್ಥ, ಶ್ರಮಜೀವಿ, ಅಭಿವೃದ್ಧಿಗೆ ತುಡಿಯುವ ಯುವಕರ ತಂಡ ಚಕ್ರವರ್ತಿ ಸೂಲಿಬೆಲೆಯುವ ಮಾರ್ಗದರ್ಶನದಲ್ಲಿ ಗದಗನಲ್ಲಿ ಕೈಗೊಂಡ ಕಲ್ಯಾಣಿ ಸ್ವಚ್ಛತಾ ಕಾರ್ಯದಿಂದ ಇದೀಗ ಕಲ್ಯಾಣಿಯಲ್ಲಿ ಜೀವ ಜಲ ಬಂದಿದೆ.

ಕಸದ ತೊಟ್ಟಿಯಾಗಿದ್ದ ಕಲ್ಯಾಣಿ ಸ್ವಚ್ಛತೆ ಮಾಡಿದ ಯುವಪಡೆಗೆ ಕಲ್ಯಾಣಿಯಲ್ಲಿ ಜಲ ನಳ ನಳಿಸುತ್ತಿದ್ದಾಗ ಅದೇನೋ ಸಾರ್ಥಕ ಭಾವ, ನಮ್ಮ ಹುಡುಗರು ಎಂಥಾ ಕಾರ್ಯ ಮಾಡಿದರು ಎಂಬ ಹಿರಿಯರ ಆಶೀರ್ವಾದ. ಇಷ್ಟು ಸಾಕಲ್ಲವೇ ನವ ಕರ್ನಾಟಕ ನಿರ್ಮಾಣಕ್ಕೆ ಹೊಸ ಮುನ್ನುಡಿ ಬರೆದಂತೆ. ಯುವ ಪಡೆ ಎದ್ದು ನಿಂತರೆ ಎಂತಹ ಕಾರ್ಯವೂ ಸರಳಿತ, ಸರಕಾರದ ಮುಂದೆ ಕೈ ಚಾಚುವ ಅಗತ್ಯವಿಲ್ಲ ಎಂಬುದನ್ನು ಸಾರಿ ಹೇಳಿದ್ದಾರೆ.

ದೀಪೋತ್ಸವದ ಸಂಭ್ರಮ

ಶತಮಾನಗಳ ಐತಿಹಾಸಿಕ ಕಲ್ಯಾಣಿಯನ್ನು ಸ್ವಚ್ಛಗೊಳಿಸಿ, ಹೂಳೆತ್ತಿ ನೀರು ಚಿಮ್ಮಿಸಿದ ಗದಗ ಯುವ ಬ್ರಿಗೇಡ್ . ಕಲ್ಯಾಣಿಯಲ್ಲಿ ಗಂಗಾ ಮಾತೆಗೆ ಪೂಜೆ ಸಲ್ಲಿಸಿ ಅದ್ಧೂರಿಯಾಗಿ ದೀಪೋತ್ಸವ ನಡೆಸಿದರು. ಸುಮಾರು 270 ದಿನಗಳ ಕಾಲ ನಿತ್ಯ ಯುವಕರ ನಿಸ್ವಾರ್ಥ ಶ್ರಮದಿಂದ ಕಲ್ಯಾಣಿ ಹೊಸ ರೂಪ ಪಡೆದುಕೊಂಡಿದ್ದು, ದೀಪೋತ್ಸವದಲ್ಲಿ ಭಾಗಿಯಾದ ಯುವಕರಲ್ಲಿ ಸಾರ್ಥಕ ಭಾವ ಮೂಡಿಸಿತ್ತು. ಯುವಕರ ಈ ಕಾರ್ಯವನ್ನು ಮೆಚ್ಚಿ ನೂರಾರು ಜನರು ಕೊನೇರಿ ಹೊಂಡಕ್ಕೆ ಬಂದು ನೋಡಿ, ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಯುವ ಬ್ರಿಗೇಡ್ ಕಾರ್ಯವನ್ನು ಮೆಚ್ಚಿ, ಕಲ್ಯಾಣಿಯ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಜಾಗೃತರಾಗಿದ್ದಾರೆ.

0
Shares
  • Share On Facebook
  • Tweet It




Trending Now
ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
Tulunadu News July 8, 2025
ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
Tulunadu News July 8, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
    • 20, 30 ವಯಸ್ಸಿನಲ್ಲಿ ಮಗು ಬೇಕೆನ್ನುವ ಆಸೆ ಹುಟ್ಟಿರಲಿಲ್ಲ, 40 ರಲ್ಲಿ ಬಂತು! ಖ್ಯಾತ ನಟಿಯ ಮನದಿಂಗಿತ...
    • ಸ್ಯಾನಿಟರಿ ಪ್ಯಾಡ್ ಪ್ಯಾಕೆಟ್ ಮೇಲೆ ರಾಹುಲ್ ಗಾಂಧಿ ಫೋಟೋಗೆ ಜೆಡಿಯು-ಬಿಜೆಪಿ ವ್ಯಂಗ್ಯ!
    • ಪರಸ್ಪರ ಸಮ್ಮತಿಯಿಂದ ನಡೆದ ಲೈಂಗಿಕ ಕ್ರಿಯೆ ನಂತರ ರೇಪ್ ಎನ್ನಲಾಗುವುದಿಲ್ಲ - ಕೇರಳ ಹೈಕೋರ್ಟ್ ಆದೇಶ
  • Popular Posts

    • 1
      ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • 2
      ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • 3
      ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • 4
      ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • 5
      ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!

  • Privacy Policy
  • Contact
© Tulunadu Infomedia.

Press enter/return to begin your search