• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮೋದಿ ಈ ಬಾರಿ ದೇಶದ ಆರೋಗ್ಯ ಸುಧಾರಿಸುವ ಡಾಕ್ಟರ್ ಆಗಿದ್ದಾರೆ!!

Hanumantha Kamath Posted On February 1, 2018
0


0
Shares
  • Share On Facebook
  • Tweet It

ಇಷ್ಟು ದಿನ ನರೇಂದ್ರ ಮೋದಿಯವರು ಭಾರತವನ್ನು ಹೊರಗಿನಿಂದ ಶಕ್ತಿಯುತವನ್ನಾಗಿ ಮಾಡಲು ಶ್ರಮಿಸಿ ಆಯಿತು. ಅದಕ್ಕಾಗಿ ಬೇರೆ ಬೇರೆ ರಾಷ್ಟ್ರಗಳ ಅಧ್ಯಕ್ಷ, ಪ್ರಧಾನಿಗಳನ್ನು ಭೇಟಿ ಮಾಡಿ ಭಾರತದ ಸೌಹಾರ್ಧತೆಯನ್ನು, ಗೆಳೆತನದ ಪರಿಚಯ ಮಾಡಿಕೊಟ್ಟರು. ಈಗ ಹೊರಗಿನ ದೇಶದವರ ಕಣ್ಣಿನಲ್ಲಿ ನಮ್ಮ ಬಲ ಗೊತ್ತಾಗಿದೆ. ಈಗ ದೇಶವನ್ನು ಒಳಗಿನಿಂದ ಮಜಬೂತ್ ಮಾಡಲು ಮೋದಿಯವರು ಹೊರಟಿದ್ದಾರೆ. ಅದಕ್ಕಾಗಿ ಈ ಬಾರಿಯ ಬಜೆಟಿನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡಲಾಗಿದೆ. ಅದಕ್ಕೆ ಅನೇಕ ಅಂಶಗಳು ಈ ಬಜೆಟಿನಲ್ಲಿ ಅಡಕವಾಗಿದೆ.

ಐವತ್ತು ಕೋಟಿ ಭಾರತೀಯರ ಆರೋಗ್ಯ ಮೋದಿ ಕೈಯಲ್ಲಿ ಸೇಫ್….

ಬೇಕಾದರೆ ಒಂದು ಉದಾಹರಣೆ ತೆಗೆದುಕೊಳ್ಳೋಣ. ಭಾರತದ ಹತ್ತು ಕೋಟಿ ಕುಟುಂಬಗಳಿಗೆ ವರ್ಷಕ್ಕೆ ಐದು ಲಕ್ಷದ ತನಕ ಯಾವುದೇ ಅನಾರೋಗ್ಯಕ್ಕೆ ಸಂಬಂಧದ ಖರ್ಚುಗಳು ಬಂದರೂ ಅದನ್ನು ಕೇಂದ್ರ ಸರಕಾರ ಭರಿಸಲಿದೆ. ಅದಕ್ಕೆ ಆಯುಷ್ಯಮಾನ್ ಯೋಜನೆ ಎಂದು ಹೆಸರಿಡಲಾಗಿದೆ. ನೀವು ಲೆಕ್ಕ ಹಾಕಿ. ಮೇಲ್ನೋಟಕ್ಕೆ ಹತ್ತು ಕೋಟಿ ಕುಟುಂಬ ಅಂತ ಅನಿಸಬಹುದು. ಆದರೆ ಒಂದೊಂದು ಕುಟುಂಬದಲ್ಲಿ ಮನೆಯ ಯಜಮಾನ, ಅವನ ಹೆಂಡತಿ, ಇಬ್ಬರು ಮಕ್ಕಳು, ಅವನ ಅಪ್ಪ, ಅಮ್ಮ ಎಂದು ಏನಿಲ್ಲವೆಂದರೂ ಕನಿಷ್ಟ ಐದು ಜನರಾದರೂ ಇದ್ದೇ ಇರುತ್ತಾರೆ. ಅಂದರೆ ಈ ಯೋಜನೆಯಿಂದ ಕನಿಷ್ಟ 50 ಕೋಟಿ ಭಾರತೀಯರು ಪ್ರಯೋಜನ ಪಡೆಯಲಿದ್ದಾರೆ. ಇದೇನು ಹುಡುಗಾಟದ ಮಾತಲ್ಲ. ಮೋದಿ ಏನು ಮಾಡಿದರೂ ಅದು ಇಡೀ ದೇಶದ ಅರ್ಧದಷ್ಟು ಜನರ ಮೇಲೆ ಪರಿಣಾಮ ಬೀರುತ್ತೆ ಎಂದು ಏನು ಅಂದುಕೊಳ್ಳಲಾಗುತ್ತದೆಯೋ ಅದು ಮತ್ತೆ ನಿಜವಾಗಿದೆ. 50 ಕೋಟಿ ಜನರು ಇನ್ನು ಮುಂದೆ ತಮ್ಮ ಆರೋಗ್ಯದ ದೃಷ್ಟಿಯಿಂದ ನೆಮ್ಮದಿಯನ್ನು ಹೊಂದಲಿದ್ದಾರೆ. ನಾಳೆ ಆರೋಗ್ಯ ಹಾಳಾದರೆ ಹಣ ಎಲ್ಲಿಂದ ತರುವುದು ಎನ್ನುವುದಕ್ಕೆ ಈ ಒಂದು ಯೋಜನೆಯೇ ಉತ್ತರ ಕೊಡಲಿದೆ. ಆಯುಷ್ಯಮಾನ್ ಯೋಜನೆಯ ಆಯುಷ್ಯ ಮೋದಿ ಅಧಿಕಾರದಲ್ಲಿ ಇರುವ ತನಕ ಗಟ್ಟಿಯಾಗಿರುತ್ತದೆ ಎನ್ನುವುದರಲ್ಲಿ ಸಂಶಯವಿಲ್ಲ.

ಇನ್ನು ಟಿಬಿ ಎನ್ನುವ ಕಾಯಿಲೆಯ ಬಗ್ಗೆ ಗೊತ್ತಿದೆಯಲ್ಲ, ಧೂಳು, ಮಣ್ಣು, ಹೊಗೆ ಹೆಚ್ಚಿರುವ ಕಡೆ ಕೆಲಸ ಮಾಡುವ ಜನರಿಗೆ ಸುಲಭವಾಗಿ ಬರುವ ರೋಗ. ಆ ಕಾಯಿಲೆ ಪೀಡಿತರಾದವರಿಗೆ ತಿಂಗಳಿಗೆ ಕನಿಷ್ಟ ನೂರಾರು ರೂಪಾಯಿಗಳ ಔಷಧಿಯ ಅಗತ್ಯ ಇರುತ್ತದೆ. ಮೋದಿ ಅದಕ್ಕೆ ಪರಿಹಾರ ಕೊಟ್ಟಿದ್ದಾರೆ. ಇನ್ನು ಪ್ರತಿ ತಿಂಗಳು ಐನೂರು ರೂಪಾಯಿಗಳು ಅಂತವರಿಗೆ ಸಿಗಲಿದೆ. ಆರೋಗ್ಯಕ್ಕೆ ಈ ಬಾರಿ ಮೋದಿ ಕೊಟ್ಟಷ್ಟು ಇಷ್ಟು ವರ್ಷ ಯಾರೂ ಕೊಟ್ಟಿಲ್ಲ ಎನ್ನುವುದಕ್ಕೆ ಇನ್ನು ಕೆಲವು ಯೋಜನೆಗಳು ಸಾಕ್ಷಿಯಾಗಿವೆ. ಉದಾಹರಣೆಗೆ ಹಿರಿಯ ನಾಗರಿಕರು ಆಸ್ಪತ್ರೆಗೆ ದಾಖಲಾದಾಗ ಬಿಲ್ ಒಂದು ಲಕ್ಷ ಆದರೆ ಅದರಲ್ಲಿ ಐವತ್ತು ಸಾವಿರದ ತನಕದ ಮೊತ್ತಕ್ಕೆ ಯಾವುದೇ ತೆರಿಗೆ ಇರುವುದಿಲ್ಲ. ಎಂತಹ ಕಲ್ಪನೆ. ಈ ಯೋಜನೆಯಿಂದ ಎಷ್ಟೋ ಹಣ ಹಿರಿಯ ನಾಗರಿಕರಿಗೆ ಉಳಿಯಲಿದೆ. ಅದು ಅವರ ಮುಂದಿನ ಬೇರೆ ಖರ್ಚಿಗೆ ಮೀಸಲಿಡಬಹುದು.

ಮಂಗಳೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಬರಲಿ…

ಮೋದಿಯವರು ಆರೋಗ್ಯ ಕ್ಷೇತ್ರದ ಬಗ್ಗೆ ಇನ್ನು ಕೂಡ ಚಿಂತಿಸಿದ್ದಾರೆ ಎನ್ನುವುದಕ್ಕೆ ಉದಾಹರಣೆ ರಾಷ್ಟ್ರದಲ್ಲಿ 24 ಹೊಸ ಮೆಡಿಕಲ್ ಕಾಲೇಜುಗಳ ಸ್ಥಾಪನೆಗೆ ಫಂಡ್ ಇಟ್ಟಿರುವುದು. ನೆನಪಿಡಿ, ಒಂದೊಂದು ಮೆಡಿಕಲ್ ಕಾಲೇಜು ಸ್ಥಾಪನೆಯಾಗುವಾಗ ಅದರೊಂದಿಗೆ ಒಂದು ಸುಸಜ್ಜಿತ ಆಸ್ಪತ್ರೆ ಕೂಡ ಪ್ರಾರಂಭವಾಗಬೇಕು. ಇದು ಭಾರತೀಯ ವೈದ್ಯಕೀಯ ಕೌನ್ಸಿಲ್ ನಿಯಮ. 24 ಮೆಡಿಕಲ್ ಕಾಲೇಜು ಎಂದರೆ ಅದರೊಂದಿಗೆ 24 ಆಸ್ಪತ್ರೆಗಳು. ಆಯಾ ಭಾಗದ ಜನರಿಗೆ ಇದರಿಂದ ಅನುಕೂಲಕರವಾಗುತ್ತದೆ. 24 ರಲ್ಲಿ ಒಂದು ಮೆಡಿಕಲ್ ಕಾಲೇಜು ಕರ್ನಾಟಕಕ್ಕೆ ದಕ್ಕಿದೆ. ಈಗ ನಮ್ಮ ಜನಪ್ರತಿನಿಧಿಗಳ ನಿಜವಾದ ಜವಾಬ್ದಾರಿ ಪ್ರಾರಂಭವಾಗಿರುವುದು.
ಮಂಗಳೂರನ್ನು ಶಿಕ್ಷಣ ಕಾಶಿ ಎನ್ನಲಾಗುತ್ತದೆ. ಇಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಲಭ್ಯಗಳಿವೆ. ಬಸ್ಸು, ರೈಲು, ವಿಮಾನ ನಿಲ್ದಾಣವಿದೆ. ಇಲ್ಲ ಎಂದರೆ ಒಂದು ಸರಕಾರಿ ಮೆಡಿಕಲ್ ಕಾಲೇಜು. ಕೇಂದ್ರ ಸರಕಾರ ಅನುದಾನಿಸಿರುವ ಮೆಡಿಕಲ್ ಕಾಲೇಜನ್ನು ಮಂಗಳೂರಿಗೆ ತಂದರೆ ಇದು ಈ ಭಾಗದ ಜನರಿಗೆ ಅನುಕೂಲಕರವಾಗಲಿದೆ. ಅದರೊಂದಿಗೆ ಒಂದು ಸರಕಾರಿ ಆಸ್ಪತ್ರೆ ಕೂಡ ನಮ್ಮ ಭಾಗದ ಜನರಿಗೆ ದಕ್ಕಲಿದೆ. ನೆಮ್ಮದಿಯ ವಿಚಾರ ಎಂದರೆ 24 ಮೆಡಿಕಲ್ ಕಾಲೇಜುಗಳಿಂದ ಸುಮಾರು 35 ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಮಂಗಳೂರಿನಲ್ಲಿ ಒಂದು ಮೆಡಿಕಲ್ ಕಾಲೇಜು ಮತ್ತು ಅದರೊಂದಿಗೆ ಸರಕಾರಿ ಆಸ್ಪತ್ರೆ ಪ್ರಾರಂಭವಾದರೆ ಲೆಕ್ಕ ಹಾಕಿ ಎಷ್ಟು ಉದ್ಯೋಗಾವಕಾಶ ನಮ್ಮವರಿಗೆ ಸಿಗಲಿವೆ?

ಇನ್ನು ಬೇರೆ ವಿಷಯಗಳ ಬಗ್ಗೆ ಮಾತನಾಡುವುದಾದರೆ ಸುಮಾರು 37 ಲಕ್ಷ ಮನೆಗಳು ಬಡವರಿಗಾಗಿಯೇ ನಿರ್ಮಾಣವಾಗಲಿವೆ. ಇನ್ನು ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡಿಸೀಲ್ ಮೇಲಿನ ತನ್ನ ಭಾಗದ ಒಂದು ತೆರಿಗೆಯನ್ನು ಇಳಿಸಿದೆ. ಈ ಮೂಲಕ ಪ್ರತಿ ಲೀಟರ್ ಮೇಲೆ ಎರಡು ರೂಪಾಯಿ ಇಳಿಕೆಯಾಗಲಿದೆ. ಇನ್ನು ಬೆಂಗಳೂರಿನಲ್ಲಿ ಸಬ್ ಅರ್ಬನ್ ರೈಲ್ವೆ ವಿಭಾಗಕ್ಕೆ 17 ಸಾವಿರ ಕೋಟಿ ರೂಪಾಯಿ ಹಣ ಮೀಸಲಿಡುವ ಮೂಲಕ ಬೆಂಗಳೂರು ಅನ್ನು ನಿಜವಾದ ಅರ್ಥದಲ್ಲಿ ಸಿಂಗಾಪುರ ಮಾಡಲು ಹೊರಟಿದ್ದಾರೆ. ಹೀಗೆ ಮೋದಿ ಹಾಗೂ ಜೇಟ್ಲಿ ಮಾಡಿದ ಹಲವು ಯೋಜನೆಗಳು ದೇಶದ ಅರ್ಥವ್ಯವಸ್ಥೆಯಲ್ಲಿ ಹೊಸ ಬದಲಾವಣೆ ಉಂಟು ಮಾಡಲಿವೆ. ಎಲ್ಲವನ್ನು ಒಂದೇ ಅಂಕಣದಲ್ಲಿ ಹೇಳಲು ಸಾಧ್ಯವಿಲ್ಲ ಮತ್ತೇ ಒಂದಿಷ್ಟು ನಾನು ಕೂಡ ಸ್ಟಡಿ ಮಾಡಬೇಕು.

ಇವತ್ತು ನಿನ್ನೆಯ ವಿಷಯದ ಬಾಕಿ ಉಳಿದ ಭಾಗವನ್ನು ಬರೆಯಬೇಕಿತ್ತು. ಅದನ್ನು ನಾಳೆ ಬರೆಯುತ್ತೇನೆ. ಇವತ್ತು ಮೋದಿಯವರ ಬಜೆಟ್ ನಲ್ಲಿ ಇಷ್ಟು ಒಳ್ಳೆಯ ಚಿಂತನೆಗಳು ಇದ್ದಾಗ ನಿಜಕ್ಕೂ ಖುಷಿಯಾಗಿದೆ. ಮೋದಿ ದೇಶದ ಆರೋಗ್ಯ ಸುಧಾರಿಸುವ ಡಾಕ್ಟರ್ ಗೆಟ್ಟಪ್ ನಲ್ಲಿ ನಿಂತಿದ್ದಾರೆ, ಜೈ ಡಾ|ಮೋದಿ!!

 

0
Shares
  • Share On Facebook
  • Tweet It


arun jetlybjpbjp 2018budget 2018Narendra Modi


Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Hanumantha Kamath October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Hanumantha Kamath October 6, 2025
You may also like
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಮಂಗಳೂರಿನಲ್ಲಿ ದಸರಾ ರಜೆ ಕಡಿಮೆ ಮಾಡುವುದು ಸರಿಯಲ್ಲ- ಶಾಸಕ ಕಾಮತ್
September 22, 2018
ಈ ಬಾರಿ ಲೋಕಸಭಾ ಚುನಾವಣೆ 2004 ರ ಪುನರಾವರ್ತನೆಯಾ?
June 2, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search