• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮೋದಿ ಸರ್ಕಾರದ ದಾಳಿಗೆ ಹೆದರಿದ ನಕ್ಸಲರು, ಶರಣಾಗತಿ ಪ್ರಮಾಣ ಶೇ.143ಕ್ಕೆ ಏರಿಕೆ!

TNN Correspondent Posted On June 13, 2018
0


0
Shares
  • Share On Facebook
  • Tweet It

2014ನೇ ಇಸವಿಯನ್ನು ಪ್ರತಿ ಭಾರತೀಯನೂ ನೆನಪಿಟ್ಟುಕೊಳ್ಳುವಂತಹ ಇಸವಿ. ಇದು ನರೇಂದ್ರ ಮೋದಿ ಅವರು ಪ್ರಧಾನಿಯಾದ ಇಸವಿ. ಹಾಗಂತ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ನಾನು ಪ್ರಧಾನಿಯಾದೆ ಎಂದೂ ಬಡಾಯಿ ಕೊಚ್ಚಿಕೊಳ್ಳಲಿಲ್ಲ. ಅವರು ನಾನೊಬ್ಬ ಪ್ರಧಾನ ಸೇವಕ ಎಂದೇ ಹೇಳಿಕೊಂಡಿದ್ದಾರೆ ಹಾಗೂ ಅದರಂತೆಯೇ ಆಳ್ವಿಕೆ ನಡೆಸಿದ್ದಾರೆ.

ಇಂತಹ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಮುಖ್ಯವಾಗಿ ದೇಶಕ್ಕೇ ಮುಳುವಾಗಿರುವ ನಕ್ಸಲರು ನಿರ್ನಾಮವಾಗುತ್ತಿದ್ದಾರೆ ಎಂಬುದೇ ಸಂತಸದ ವಿಷಯ. ಹೌದು, ಮೋದಿ ಅವರು ಪ್ರಧಾನಿಯಾದ ಈ ನಾಲ್ಕು ವರ್ಷದಲ್ಲಿ ನಕ್ಸಲರ ಹೆಡೆಮುರಿಕಟ್ಟಲಾಗಿದೆ. ಅಲ್ಲದೆ ಕೇಂದ್ರ ಸರ್ಕಾರಕ್ಕೆ ಹೆದರಿ ನಕ್ಸಲರು ಪೊಲೀಸರಿಗೆ ಬಂದು ಶರಣಾಗುತ್ತಿದ್ದು, ಈ ಪ್ರಮಾಣ ನಾಲ್ಕು ವರ್ಷದಲ್ಲಿ ಶೇ.143ರಷ್ಟು ಪ್ರಗತಿ ಕಂಡಿದೆ ಎಂದರೆ ಎಷ್ಟರಮಟ್ಟಿಗೆ ಕೇಂದ್ರ ಸರ್ಕಾರ ನಕ್ಸಲರನ್ನು ಸದೆಬಡಿದಿರಬೇಕು ಯೋಚಿಸಿ.

2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ರಚಿಸಿದ ಬಳಿಕ ನಕ್ಸಲರ ವಿರುದ್ಧ ಸಮರ ಸಾರಿದ್ದು, ಭಾರತೀಯ ಭದ್ರತಾ ಪಡೆಗಳು 2014ರಿಂದ ಇದುವರೆಗೆ ಹಲವು ಕಾರ್ಯಾಚರಣೆಗಳನ್ನು ಕೈಗೊಳ್ಳುವ ಮೂಲಕ ಹಲವು ನಕ್ಸಲರನ್ನು ಹೊಡೆದುರುಳಿಸಿದ್ದಾರೆ. ಇದರ ಪರಿಣಾಮವಾಗಿ 2014ರಿಂದ ಇದುವರೆಗೆ 3,373 ನಕ್ಸಲರು ಪೊಲೀಸರಿಗೆ ಶರಣಾಗಿದ್ದು, ಈ ಶರಣಾಗತಿ ಪ್ರಕ್ರಿಯೆಯಲ್ಲಿ ಶೇ.143ರಷ್ಟು ಪ್ರಗತಿಯಾಗಿದೆ ಎಂದು ಕೇಂದ್ರ ಗೃಹಸಚಿವಾಲಯ ಮಾಹಿತಿಯಾಗಿದೆ.

ಅಷ್ಟೇ ಅಲ್ಲ, ನಕ್ಸಲರ ದಾಳಿ ಹಾಗೂ ಹಿಂಸಾತ್ಮಕ ಘಟನೆಯಲ್ಲೂ ಕಡಿಮೆಯಾಗಿದ್ದು, 2016ರಲ್ಲಿ 6,524 ದಾಳಿಗಳಾದರೆ, 2017ರಲ್ಲಿ ಇದರ ಪ್ರಮಾಣ 4,136ಕ್ಕೆ ಕುಸಿದಿದ್ದು, ಶೇ. 36ರಷ್ಟು ಕುಸಿತ ಕಂಡಿದೆ. ಜತೆಗೆ ನಕ್ಸಲರ ದಾಲಿಯಿಂದ ಮೃತಪಡುವವರ ಸಂಖ್ಯೆಯಲ್ಲೂ ಇಳಿಮುಖವಾಗಿದ್ದು, ಶೇ55.5ರಷ್ಟು ಕುಸಿತವಾಗಿದೆ.

2017ರಲ್ಲಿ ನಕ್ಸಲರ ದಾಳಿಯಲ್ಲಿ 188 ಜನ ಮೃತಪಟ್ಟಿದ್ದು, 1999-2017ರ ಅವಧಿಯಲ್ಲಿ ಇದೇ ವರ್ಷ ಕಡಿಮೆ ಜನ ಮೃತಪಟ್ಟಿದ್ದಾರೆ. ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ, ಅಂದರೆ 2010ರ ಇಸವಿಯಲ್ಲಿ 720 ಜನ ನಕ್ಸಲರ ದಾಳಿಯಿಂದ ಮೃತಪಟ್ಟಿದ್ದರು.

ಒಟ್ಟಿನಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ರಚನೆಯಾದ ಬಳಿಕ ಪಾಕಿಸ್ತಾನ ಬಾಲ ಮುದುರಿಕೊಂಡು ಕೂತಿದೆ. ಪಾಕ್ ದಾಳಿಗೆ ಭಾರತ ಪ್ರತಿದಾಳಿ ಮಾಡುವ ಮೂಲಕ ಛಾಟಿಯೇಟು ನೀಡಿದೆ. ಚೀನಾವೂ ಭಾರತದ ಎದುರು ಮಂಡಿಯೂರಿದೆ. ಹಾಗೆಯೇ ದೇಶದ ಆಂತರಿಕ ಕಂಟವಾಗಿರುವ ನಕ್ಸಲರೂ ಹೆದರುತ್ತಿದ್ದಾರೆ. ಒಬ್ಬ ದಕ್ಷ ಪ್ರಧಾನ ಸೇವಕನಿಂದ ದೇಶದ ಭದ್ರತೆ ಜಾಸ್ತಿಯಾಗಿದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವವೂ ದ್ವಿಗುಣವಾಗಿದೆ. ಇನ್ನೇನು ಬೇಕು!

0
Shares
  • Share On Facebook
  • Tweet It




Trending Now
ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
Tulunadu News February 12, 2026
ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
Tulunadu News February 12, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ
    • ಪುತ್ತೂರಿನ ಹಿಂದೂ ಸಂಘಟನೆ ಮುಖಂಡ ಅಜಿತ್ ರೈ ಹೊಸಮನೆ ಗಡಿಪಾರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್
    • ‘ನಾನು ಆ ಸಮಿತಿಯಲ್ಲಿ ಇಲ್ಲ’ – ಸಾವರ್ಕರ್‌ಗೆ ಭಾರತ ರತ್ನ ವಿಳಂಬ ಕುರಿತು ಮೋಹನ್ ಭಾಗವತ್
    • ವೈಯಕ್ತಿಕ ಕಾರಣದಿಂದ ಪಕ್ಷ ನೀಡಿದ ಹೊಣೆಗಾರಿಕೆಯಿಂದ ಹಿಂದೆ ಸರಿದ ಅಣ್ಣಾಮಲೈ!
    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
  • Popular Posts

    • 1
      ಕ್ರಿಮಿನಾಲಜಿ ಕಲಿತವಳು ಕ್ರಿಮಿಯ ಬಯೋಲಜಿಗೆ ಮರಳಾದದ್ದೇ ಆಶ್ಚರ್ಯ!
    • 2
      ಹಲವಾರು ಯುವತಿಯರ ಗಂಡ ಮಂಗಳೂರಿನ ಸುಶಾಂತ್ ಪೂಜಾರಿ ಅಂದರ್!
    • 3
      'ವಂದೇ ಮಾತರಂ' ಅವಮಾನ ಮಾಡಿದವರಿಗೆ ಕಾದಿದೆ 3 ವರ್ಷಗಳ ಜೈಲು! ಕೇಂದ್ರ ಸರಕಾರದ ನೂತನ ನಿಯಮಾವಳಿ ಬಿಡುಗಡೆ

  • Privacy Policy
  • Contact
© Tulunadu Infomedia.

Press enter/return to begin your search