• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮೋದಿ ಸರ್ಕಾರದ ದಾಳಿಗೆ ಹೆದರಿದ ನಕ್ಸಲರು, ಶರಣಾಗತಿ ಪ್ರಮಾಣ ಶೇ.143ಕ್ಕೆ ಏರಿಕೆ!

TNN Correspondent Posted On June 13, 2018


  • Share On Facebook
  • Tweet It

2014ನೇ ಇಸವಿಯನ್ನು ಪ್ರತಿ ಭಾರತೀಯನೂ ನೆನಪಿಟ್ಟುಕೊಳ್ಳುವಂತಹ ಇಸವಿ. ಇದು ನರೇಂದ್ರ ಮೋದಿ ಅವರು ಪ್ರಧಾನಿಯಾದ ಇಸವಿ. ಹಾಗಂತ ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ನಾನು ಪ್ರಧಾನಿಯಾದೆ ಎಂದೂ ಬಡಾಯಿ ಕೊಚ್ಚಿಕೊಳ್ಳಲಿಲ್ಲ. ಅವರು ನಾನೊಬ್ಬ ಪ್ರಧಾನ ಸೇವಕ ಎಂದೇ ಹೇಳಿಕೊಂಡಿದ್ದಾರೆ ಹಾಗೂ ಅದರಂತೆಯೇ ಆಳ್ವಿಕೆ ನಡೆಸಿದ್ದಾರೆ.

ಇಂತಹ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಮುಖ್ಯವಾಗಿ ದೇಶಕ್ಕೇ ಮುಳುವಾಗಿರುವ ನಕ್ಸಲರು ನಿರ್ನಾಮವಾಗುತ್ತಿದ್ದಾರೆ ಎಂಬುದೇ ಸಂತಸದ ವಿಷಯ. ಹೌದು, ಮೋದಿ ಅವರು ಪ್ರಧಾನಿಯಾದ ಈ ನಾಲ್ಕು ವರ್ಷದಲ್ಲಿ ನಕ್ಸಲರ ಹೆಡೆಮುರಿಕಟ್ಟಲಾಗಿದೆ. ಅಲ್ಲದೆ ಕೇಂದ್ರ ಸರ್ಕಾರಕ್ಕೆ ಹೆದರಿ ನಕ್ಸಲರು ಪೊಲೀಸರಿಗೆ ಬಂದು ಶರಣಾಗುತ್ತಿದ್ದು, ಈ ಪ್ರಮಾಣ ನಾಲ್ಕು ವರ್ಷದಲ್ಲಿ ಶೇ.143ರಷ್ಟು ಪ್ರಗತಿ ಕಂಡಿದೆ ಎಂದರೆ ಎಷ್ಟರಮಟ್ಟಿಗೆ ಕೇಂದ್ರ ಸರ್ಕಾರ ನಕ್ಸಲರನ್ನು ಸದೆಬಡಿದಿರಬೇಕು ಯೋಚಿಸಿ.

2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ರಚಿಸಿದ ಬಳಿಕ ನಕ್ಸಲರ ವಿರುದ್ಧ ಸಮರ ಸಾರಿದ್ದು, ಭಾರತೀಯ ಭದ್ರತಾ ಪಡೆಗಳು 2014ರಿಂದ ಇದುವರೆಗೆ ಹಲವು ಕಾರ್ಯಾಚರಣೆಗಳನ್ನು ಕೈಗೊಳ್ಳುವ ಮೂಲಕ ಹಲವು ನಕ್ಸಲರನ್ನು ಹೊಡೆದುರುಳಿಸಿದ್ದಾರೆ. ಇದರ ಪರಿಣಾಮವಾಗಿ 2014ರಿಂದ ಇದುವರೆಗೆ 3,373 ನಕ್ಸಲರು ಪೊಲೀಸರಿಗೆ ಶರಣಾಗಿದ್ದು, ಈ ಶರಣಾಗತಿ ಪ್ರಕ್ರಿಯೆಯಲ್ಲಿ ಶೇ.143ರಷ್ಟು ಪ್ರಗತಿಯಾಗಿದೆ ಎಂದು ಕೇಂದ್ರ ಗೃಹಸಚಿವಾಲಯ ಮಾಹಿತಿಯಾಗಿದೆ.

ಅಷ್ಟೇ ಅಲ್ಲ, ನಕ್ಸಲರ ದಾಳಿ ಹಾಗೂ ಹಿಂಸಾತ್ಮಕ ಘಟನೆಯಲ್ಲೂ ಕಡಿಮೆಯಾಗಿದ್ದು, 2016ರಲ್ಲಿ 6,524 ದಾಳಿಗಳಾದರೆ, 2017ರಲ್ಲಿ ಇದರ ಪ್ರಮಾಣ 4,136ಕ್ಕೆ ಕುಸಿದಿದ್ದು, ಶೇ. 36ರಷ್ಟು ಕುಸಿತ ಕಂಡಿದೆ. ಜತೆಗೆ ನಕ್ಸಲರ ದಾಲಿಯಿಂದ ಮೃತಪಡುವವರ ಸಂಖ್ಯೆಯಲ್ಲೂ ಇಳಿಮುಖವಾಗಿದ್ದು, ಶೇ55.5ರಷ್ಟು ಕುಸಿತವಾಗಿದೆ.

2017ರಲ್ಲಿ ನಕ್ಸಲರ ದಾಳಿಯಲ್ಲಿ 188 ಜನ ಮೃತಪಟ್ಟಿದ್ದು, 1999-2017ರ ಅವಧಿಯಲ್ಲಿ ಇದೇ ವರ್ಷ ಕಡಿಮೆ ಜನ ಮೃತಪಟ್ಟಿದ್ದಾರೆ. ಕೇಂದ್ರದಲ್ಲಿ ಯುಪಿಎ ಸರ್ಕಾರ ಇದ್ದಾಗ, ಅಂದರೆ 2010ರ ಇಸವಿಯಲ್ಲಿ 720 ಜನ ನಕ್ಸಲರ ದಾಳಿಯಿಂದ ಮೃತಪಟ್ಟಿದ್ದರು.

ಒಟ್ಟಿನಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ರಚನೆಯಾದ ಬಳಿಕ ಪಾಕಿಸ್ತಾನ ಬಾಲ ಮುದುರಿಕೊಂಡು ಕೂತಿದೆ. ಪಾಕ್ ದಾಳಿಗೆ ಭಾರತ ಪ್ರತಿದಾಳಿ ಮಾಡುವ ಮೂಲಕ ಛಾಟಿಯೇಟು ನೀಡಿದೆ. ಚೀನಾವೂ ಭಾರತದ ಎದುರು ಮಂಡಿಯೂರಿದೆ. ಹಾಗೆಯೇ ದೇಶದ ಆಂತರಿಕ ಕಂಟವಾಗಿರುವ ನಕ್ಸಲರೂ ಹೆದರುತ್ತಿದ್ದಾರೆ. ಒಬ್ಬ ದಕ್ಷ ಪ್ರಧಾನ ಸೇವಕನಿಂದ ದೇಶದ ಭದ್ರತೆ ಜಾಸ್ತಿಯಾಗಿದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವವೂ ದ್ವಿಗುಣವಾಗಿದೆ. ಇನ್ನೇನು ಬೇಕು!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search