• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ನಿಯಮಗಳೆಲ್ಲವೂ ಮೀರಿ ಹೋಗಿರುವಾಗ ನೀರು ಉಳಿಸಪ್ಪ ಎಂದು ದೇವರಿಗೆ ಬೇಡುವುದು ಮಾತ್ರ ಬಾಕಿ!!

Hanumantha Kamath Posted On April 24, 2019
0


0
Shares
  • Share On Facebook
  • Tweet It

ನಾನು ಎರಡು ಅಂಕಣಗಳ ಹಿಂದೆ ಪ್ರಾರಂಭದಲ್ಲಿಯೇ ಒಂದು ವಾಕ್ಯ ಬರೆದಿದ್ದೆ. ಅದೇನೆಂದರೆ ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎನ್ನುವ ಗಾದೆಯಂತೆ ಮಂಗಳೂರು ಮಹಾನಗರ ಪಾಲಿಕೆಯವರು ವರ್ತಿಸುತ್ತಿದ್ದಾರೆ ಎಂದು ಬರೆದಿದ್ದೆ. ಅದನ್ನು ಇವತ್ತು ಮತ್ತೆ ಬರೆಯಬೇಕಿದೆ. ಅಂತಹ ಒಂದು ಘನಂದಾರಿ ಕೆಲಸವನ್ನು ಪಾಲಿಕೆಯವರು ಮಾಡಿದ್ದಾರೆ. ಅದೇನು ಎನ್ನುವುದೇ ಇವತ್ತಿನ ಜಾಗೃತ ಅಂಕಣದ ವಿಶೇಷ.

ತುಂಬೆ ವೆಂಟೆಂಡ್ ಡ್ಯಾಂನಲ್ಲಿ ದಿನಕ್ಕೆ 21 ಎಂಜಿಡಿ ನೀರು ಪಂಪ್ ಮಾಡಲಾಗುತ್ತದೆ. ಅದರಲ್ಲಿ 19 ಎಂಜಿಡಿ ನೀರು ನಮಗೆ ಸಾಕಾಗುತ್ತದೆ. ಹೇಗೆ ಎನ್ನುವುದನ್ನು ನಾನು ಮೊನ್ನೆಯ ಜಾಗೃತ ಅಂಕಣದಲ್ಲಿ ವಿವರಿಸಿದ್ದೇನೆ. ವಿಷಯ ಇರುವುದು ಅದಲ್ಲ. ತುಂಬೆಯಲ್ಲಿ ಪಂಪ್ ಆಗುವ ಹೆಚ್ಚುವರಿ ಎರಡು ಎಂಜಿಡಿ ನೀರು ಎಲ್ಲಿಗೆ ಹೋಗುತ್ತೆ ಎನ್ನುವುದು ಯಾರಿಗಾದರೂ ಗೊತ್ತಿದೆಯಾ ಎನ್ನುವ ಪ್ರಶ್ನೆಯನ್ನು ಕೂಡ ಎತ್ತಿದೆ. ನೀರು ಎಲ್ಲಿ ಪೋಲಾಗುತ್ತಿದೆ ಎನ್ನುವುದಕ್ಕೆ ಹಲವು ದಾರಿಗಳಿರಬಹುದು. ಅದರಲ್ಲಿ ಒಂದು ಕಾರಣ ಇವತ್ತು ಹೇಳುತ್ತಿದ್ದೇನೆ. ತುಂಬೆಯಿಂದ ಮಂಗಳೂರಿಗೆ ಬರುವ ನೀರು ಮಂಗಳೂರಿನ ಕೆಲವು ಕಡೆ ನಿರ್ಮಿಸಿರುವ ಬೃಹತ್ ಟ್ಯಾಂಕ್ ಗಳಲ್ಲಿ ಸಂಗ್ರಹವಾಗುತ್ತದೆ. ಅದರಲ್ಲಿ ಒಂದು ಟ್ಯಾಂಕ್ ಬೆಂದೂರ್ ವೆಲ್ ನಲ್ಲಿ ಇದೆ. ಹದಿನೈದು ದಿನಗಳ ಹಿಂದೆ ಆ ನೀರಿನ ಟಾಂಕಿಯನ್ನು ರಿಪೇರಿ ಮಾಡಲಾಗಿತ್ತು. ಏಕೆಂದರೆ ಅದರಲ್ಲಿ ಲಿಕೇಜ್ ಇತ್ತು. ಲಿಕೇಜ್ ಇದ್ರೆ ರಿಪೇರಿ ಮಾಡುವುದರಲ್ಲಿ ತಪ್ಪೇನು ಎಂದು ನೀವು ಕೇಳಬಹುದು. ವಿಷಯ ಇರುವುದು ರಿಪೇರಿ ಮಾಡಿದ್ದರಲ್ಲಿ ಅಲ್ಲ. ಲಿಕೇಜ್ ಏಳು ತಿಂಗಳ ಹಿಂದೆಯೇ ಇತ್ತು ಎನ್ನುವುದರಲ್ಲಿ. ಹಾಗಾದರೆ ಏಳು ತಿಂಗಳಿನಿಂದ ಎಷ್ಟು ನೀರು ಹೋಗುತ್ತಿತ್ತು ಎನ್ನುವುದು ನೀವು ಅರ್ಥ ಮಾಡಿಕೊಳ್ಳಿ. ಟ್ಯಾಂಕ್ ಗಳಲ್ಲಿ ರಂಧ್ರ ಇದ್ದು ಅದರಿಂದ ನೀರು ಏಳು ತಿಂಗಳುಗಳಿಂದ ಎಷ್ಟು ಹೋಗುತ್ತಿದೆ ಎನ್ನುವುದು ಪಾಲಿಕೆಯ ನೀರಿನ ವಿಭಾಗದವರಿಗೆ ಗೊತ್ತೆ ಇಲ್ಲ. ಅವರಿಗೆ ಗೊತ್ತಾಗುವಾಗ ನೀರು ತುಂಬಾ ಪೋಲಾಗಿ ಹೋಗಿತ್ತು. ಕೊನೆಗೆ ನಮ್ಮ ಪುಣ್ಯ. ಯಾರೋ ಆ ಟ್ಯಾಂಕ್ ರಿಪೇರಿ ಮಾಡಿಸುವ ಯೋಜನೆ ಹಾಕಿ ಸರಿ ಮಾಡಿದ್ದಾರೆ. ಅದರಿಂದ ನೀರು ಪೋಲಾಗುವುದು ನಿಂತಿದೆ. ಹಾಗಾದರೆ ಇಷ್ಟು ದಿನ ಎಷ್ಟು ಪ್ರಮಾಣದಲ್ಲಿ ನೀರು ಹೋಗ್ತಾ ಇತ್ತಲ್ಲ, ಅದನ್ನು ತಂದು ಕೊಡುವವರು ಯಾರು? ಒಂದು ವೇಳೆ ತಂದು ಕೊಡಲು ಆಗದಿದ್ದರೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ದಂಡ ಕೊಡಲು ತಯಾರಿದ್ದಾರಾ? ಈ ಪ್ರಶ್ನೆಗೆ ಉತ್ತರ ಬೇಕು. ಮಂಗಳೂರಿನಲ್ಲಿ ಎರಡೂ ಕ್ಷೇತ್ರಗಳ ಶಾಸಕರು ನೀರಿನ ಸಮಸ್ಯೆಯ ಬಗ್ಗೆ ಸಾಕಷ್ಟು ಟೆನ್ಷನ್ ಮಾಡುತ್ತಿರುವಾಗ ಇಷ್ಟು ತಿಂಗಳು ನೀರು ಪೋಲು ಆಗ್ತಾ ಇರಲು ಕಾರಣ ಯಾರು?

ಇನ್ನು ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡಗಳ ನಿರ್ಮಾಣಕ್ಕೆ ಲೈಸೆನ್ಸ್ ಕೊಡುವಾಗ ಮಳೆಕೊಯ್ಲು ಪ್ರಾಜೆಕ್ಟ್ ಅಳವಡಿಸಲೇಬೇಕು ಎನ್ನುವ ನಿಯಮ ಇದೆ. ಅದು ಲೈಸೆನ್ಸ್ ಪಡೆದುಕೊಂಡ ಎಷ್ಟು ಕಟ್ಟಡಗಳಲ್ಲಿ ಅಳವಡಿಕೆಯಾಗಿದೆ ಎನ್ನುವುದನ್ನು ಪಾಲಿಕೆಯ ಅಧಿಕಾರಿಗಳು ನೋಡಿದ್ದಾರಾ? ಇನ್ನು ಮಂಗಳೂರು ಮಹಾನಗರದಲ್ಲಿ ವರ್ಷಕ್ಕೆ ಎಷ್ಟೋ ಹೊಸ ಕಟ್ಟಡಗಳಿಗೆ ಗುದ್ದಲಿಪೂಜೆ ನಡೆಯುತ್ತಾ ಇರುತ್ತದೆ. ಪ್ರತಿ ಕಟ್ಟಡ ನಿರ್ಮಾಣವಾಗುವಾಗ ಆ ಜಾಗದಲ್ಲಿರುವ ಅಸಂಖ್ಯಾತ ಮರಗಳು ಧರೆಗೆ ಉರುಳುತ್ತವೆ. ನಿಯಮ ಏನೆಂದರೆ ಪ್ರತಿ ಕಟ್ಟಡ ನಿರ್ಮಾಣವಾಗುವಾಗ ಅಲ್ಲಿ ಕನಿಷ್ಟ ಎರಡು ಗಿಡಗಳನ್ನು ನೆಟ್ಟು ಅದು ಮರಗಳಾಗುವ ಹಾಗೆ ಕಟ್ಟಡಗಳ ಮಾಲೀಕರು ನೋಡಬೇಕು ಎನ್ನುವ ನಿಯಮ ಇದೆ. ಇವತ್ತಿನ ದಿನಗಳಲ್ಲಿ ಎಷ್ಟು ಕಟ್ಟಡಗಳ ಮಾಲೀಕರು ಗಿಡ ನೆಡುವ ಬಗ್ಗೆ ಆಸಕ್ತಿ ತೋರಿಸಿದ್ದಾರೆ ಎನ್ನುವುದನ್ನು ಪಾಲಿಕೆಯ ನಗರ ಯೋಜನಾ ಅಧಿಕಾರಿಗಳು ನೋಡಿದ್ದಾರಾ? ಇಲ್ಲ, ಯಾವ ಅಧಿಕಾರಿಯೂ ನೋಡುವುದಿಲ್ಲ. ಯಾಕೆಂದರೆ ಎಲ್ಲಾ ಅಧಿಕಾರಿಗಳು ಬಿಲ್ಡರ್ ಗಳ ಜೇಬಿನಲ್ಲಿ ಬೆಚ್ಚಗೆ ಮಲಗಿದ್ದಾರೆ. ಇನ್ನು ಅಧಿಕಾರಿಗಳ ಇನ್ನೊಂದು ನಿರ್ಲಕ್ಷ್ಯ. ಹೇಳಿ ಇವತ್ತಿನ ಜಾಗೃತ ಅಂಕಣವನ್ನು ಮುಗಿಸುತ್ತಿದ್ದೇನೆ. ಅದೇನೆಂದರೆ ಮಂಗಳೂರಿನಲ್ಲಿ ಒಂದು ಕಾಲದಲ್ಲಿ ಸಾಕಷ್ಟು ಮರಗಳಿದ್ದವು. ಅದರಿಂದ ಸಾಕಷ್ಟು ನೆರಳು ನಮಗೆಲ್ಲಾ ಸಿಗುತ್ತಿತ್ತು. ನಂತರ ಏನಾಯಿತು ಎಂದರೆ ರಸ್ತೆಗಳು ಅಗಲವಾಗುವ ಅನಿವಾರ್ಯತೆ ಉಂಟಾಯಿತು. ಅದರಿಂದ ಆಕಾಶದೆತ್ತರಕ್ಕೆ ಬೆಳೆದು ನಿಂತ ಮರಗಳನ್ನು ಕಡಿಯಲೇಬೇಕಾಯಿತು. ಯಾವಾಗ ಮರಗಳನ್ನು ಕಡಿಯುವಾಗ ಅರಣ್ಯ ಇಲಾಖೆ ಅನುಮತಿ ಕೊಟ್ಟಿತ್ತೋ ಆಗಲೇ ಒಂದು ಷರತ್ತು ಹಾಕಿತ್ತು. ಅದೇನೆಂದರೆ ಒಂದು ಮರ ಕಡಿದರೆ ಎರಡು ಗಿಡಗಳನ್ನು ನೆಡಬೇಕು. ಆದರೆ ಎಷ್ಟು ಗಿಡಗಳನ್ನು ಇಲ್ಲಿಯ ಪಾಲಿಕೆ ಅಧಿಕಾರಿಗಳು ನೆಟ್ಟಿದ್ದಾರೆ. ಒಟ್ಟಿನಲ್ಲಿ ಬಿಸಿಲು ಮಂಗಳೂರನ್ನು ಕಾದ ಕಾವಲಿ ಮಾಡಿದೆ. ನಮ್ಮ ಪಾಲಿಕೆ ಅಧಿಕಾರಿಗಳು ಕಾವಲಿಗೆ ಎಣ್ಣೆ ಸುರಿಯುತ್ತಿದ್ದಾರೆ.

0
Shares
  • Share On Facebook
  • Tweet It




Trending Now
ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
Hanumantha Kamath January 1, 2026
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
Hanumantha Kamath December 27, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
  • Popular Posts

    • 1
      ಶಿಕ್ಷಣ, ಕೈಗಾರಿಕಾ ಕ್ಷೇತ್ರದಲ್ಲಿ ಅಳಿಸಲಾರದ ಹೆಜ್ಜೆ ಗುರುತನ್ನು ಸ್ಥಾಪಿಸಿದ ನಿಟ್ಟೆ ವಿನಯ್ ಹೆಗ್ಡೆ ಎಂಬ ಮಹಾಚೇತನ ಅಸ್ತಂಗತ
    • 2
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search