• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ

“71” ರ ಸ್ವಾತಂತ್ರ್ಯದಿನದಂದು “21” ಕೋಟಿಯ ಲೆಕ್ಕ ಕೇಳುತ್ತಿದ್ದೇನೆ!

TNN Correspondent Posted On August 16, 2017
0


0
Shares
  • Share On Facebook
  • Tweet It

ನಮಗೆ ಸ್ವಾತಂತ್ರ್ಯ ಇದೆ ನಿಜ, 70 ವರುಷಗಳಿಂದ ಅದನ್ನು ಅನುಭವಿಸುತ್ತಿದ್ದೇವೆ. 71 ಕ್ಕೆ ಕಾಲಿಟ್ಟಿದ್ದೇವೆ. ಲಂಚ ಕೊಡದೇ ಕೆಲಸ ಆಗುತ್ತದೆ ಎನ್ನುವ ಸ್ವಾತಂತ್ರ್ಯ ನಮಗೆ ಸಿಕ್ಕಿದೆಯಾ? ನಮ್ಮ ತೆರಿಗೆಯ ಹಣವನ್ನು ತಮ್ಮ ಮಜಾಗೆ ಉಡಾಯಿಸುವ ಜನಪ್ರತಿನಿಧಿಗಳಿಂದ ಮತ್ತು ಅಧಿಕಾರಿಗಳಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆಯಾ? ಜನರ ತೆರಿಗೆಯ ಹಣ ಎಂದರೆ ಅದು ತಮ್ಮ ಸಂಪತ್ತನ್ನು ಹೆಚ್ಚಿಸಲು ಇರುವ ಖಜಾನೆ ಎಂದು ರಾಜಕಾರಣಿಗಳು ಅಂದುಕೊಂಡಿರುವ ಆಡಳಿತ ವ್ಯವಸ್ಥೆಯಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆಯಾ? ನಮಗೆ ಸ್ವಾತಂತ್ರ್ಯ ಸಿಕ್ಕಿರುವುದು ಬ್ರಿಟಿಷರ ದಾಸ್ಯದಿಂದ ಮಾತ್ರ. ಆದರೆ ಚೀನಾ ವಸ್ತುಗಳನ್ನು ವಿಪರೀತ ಅವಲಂಬಿಸಿರುವ ನಾವು ಪರೋಕ್ಷವಾಗಿ ಚೀನಿಯರ ದಾಸ್ಯದಲ್ಲಿ ಇದ್ದೇವೆ ಎನ್ನುವುದು ನಮಗೆ ಗೊತ್ತಿದೆಯಾ? ಆ ದಾಸ್ಯದಿಂದ ಮುಕ್ತರಾಗುವುದು ಯಾವಾಗ?

1980 ರಿಂದ 2011-12 ರ ತನಕ ಮಂಗಳೂರು ಮಹಾನಗರ ಪಾಲಿಕೆ ಮುಂಗಡವಾಗಿ ತೆಗೆದುಕೊಂಡಿರುವ ಹಣದ ಒಟ್ಟು ಮೌಲ್ಯವೇ 21 ಕೋಟಿ ರೂಪಾಯಿ ಇದೆ ಎಂದು ಅಡಿಟ್ ವರದಿ ಹೇಳಿದೆ. ಅದರ ಲೆಕ್ಕ ಕೊಡುವವರ್ಯಾರು? ಒಂದು ಕಡೆ ನಾಗರಿಕರು ಕಷ್ಟಪಟ್ಟು ದುಡಿದು ತೆರಿಗೆ ಕಟ್ಟುತ್ತಿರುತ್ತಾರೆ. ತೆರಿಗೆ ಅಂದರೆ ಕೇವಲ ಆದಾಯ ತೆರಿಗೆ ಅಲ್ಲ, ನೀವು ಪ್ರತಿಯೊಂದು ಸೌಲಭ್ಯ ಮತ್ತು ಅನುಕೂಲತೆಯನ್ನು ಅನುಭವಿಸುವಾಗ ಪರೋಕ್ಷವಾಗಿ ತೆರಿಗೆ ಕಟ್ಟುತ್ತಾ ಇರುತ್ತೀರಿ. ಅದನ್ನು ನಮ್ಮ ಪಾಲಿಕೆಯ ಜನಪ್ರತಿನಿಧಿಗಳು, ಅಧಿಕಾರಿಗಳು ಉಪಯೋಗಿಸುತ್ತಾ ಇರುತ್ತಾರೆ. ಅದಕ್ಕೆ ಇವರು ಲೆಕ್ಕ ಕೊಟ್ಟಿಲ್ಲ. ಐನೂರೋ, ಸಾವಿರನೋ ಆಗಿದ್ದರೆ ಕೃಷ್ಣಾರ್ಪಣ ಎನ್ನಬಹುದಿತ್ತು. ಆದರೆ 21 ಕೋಟಿ ಎಂದರೆ ಅದಕ್ಕೆ ಲೆಕ್ಕ ಬೇಡ್ವಾ?

ಅಷ್ಟಕ್ಕೂ ಈ 21 ಕೋಟಿ ಯಾವ ಖರ್ಚು ಎಂದು ನಿಮಗೆ ಅನಿಸಬಹುದು. ಇದೊಂದು ರೀತಿಯ ಬೇರೆಯದ್ದೇ ಖರ್ಚು. ಇದನ್ನು “ಮುಂಗಡ ಪಾವತಿ” ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಮೇಯರ್ ಸರಕಾರಿ ಸಭೆ ಎಂದು ಬೆಂಗಳೂರಿಗೆ ಹೋಗಲಿಕ್ಕೆ ಇರುತ್ತದೆ ಎಂದು ಇದ್ದರೆ ಆಗ ಪಾಲಿಕೆಯ ಕಡೆಯಿಂದ ಅದಕ್ಕೆ ಇಂತಿಂಷ್ಟು ದುಡ್ಡು ಎಂದು ಮುಂಗಡವಾಗಿ ಕೊಡಲಾಗುತ್ತದೆ. ಅದು ಅಂದಾಜು 5 ಸಾವಿರ ಎಂದೇ ಬೇಕಾದರೆ ಇಟ್ಟುಕೊಳ್ಳಿ. ಈ ಎಂಭತ್ತರ ದಶಕದಲ್ಲಿ ಅಥವಾ ತೊಂಭತ್ತರ ದಶಕದಲ್ಲಿ ಪಾಲಿಕೆಯಲ್ಲಿ ಮೇಯರ್ ಆದವರಿಗೆ ಇದರ ಅಗತ್ಯ ಇದ್ದಿರಬಹುದು. ಅಷ್ಟು ದೂರ ಹೋಗಬೇಕು, ಖರ್ಚಿಗೆ ಏನು ಮಾಡಬೇಕು ಎಂದು ಬಂದಾಗ ಹೀಗೆ ಮುಂಗಡ ಎಂದು ಕೊಡುವ ವ್ಯವಸ್ಥೆ ಇತ್ತು. ಈಗ ಅದರ ಅಗತ್ಯ ಯಾವುದೇ ಮೇಯರ್ ಗೆ ಇಲ್ಲ ಬಿಡಿ. ಆದರೂ ಅದನ್ನು ಕೊಡಲಾಗುತ್ತೆ. ಇನ್ನು ಎರಡನೇಯದಾಗಿ ಕೆಲವು ಅಗತ್ಯ ಖರ್ಚು ಇರುತ್ತದೆ. ಉದಾಹರಣೆಗೆ ಪಾಲಿಕೆಯ ಸ್ವಂತ ವಾಹನವೊಂದರ ಟಯರ್ ಹೋಯಿತು ಎಂದು ಇಟ್ಟುಕೊಳ್ಳಿ, ಆಗ ಟಯರ್ ಹಾಕಿಸಬೇಕಾಗುತ್ತದೆ. ಆಗ ಈ ಮುಂಗಡದ ಅವಶ್ಯಕತೆ ಇರುತ್ತದೆ. ಇನ್ನು ನಿರ್ಮಿತಿ ಕೇಂದ್ರದಿಂದ ಕೆಲಸ ಮಾಡಿಸುವುದಾಗಿರಬಹುದು ಅಥವಾ ಯಾವುದೇ ಹಬ್ಬ ಬಂದಾಗ ಅಧಿಕಾರಿಗೆ ಮುಂಗಡ ಖರ್ಚಿಗೆ ಕೊಡುವ ವಿಷಯ ಇರಬಹುದು, ಇದೆಲ್ಲಾ ಮುಂಗಡ ಪಾವತಿಯಾಗಿರುತ್ತದೆ. ಇದಕ್ಕೆ ನಂತರ ಸಂಬಂಧಿತರು ಲೆಕ್ಕ ಕೊಡಬೇಕಾಗುತ್ತದೆ.

ಮೇಯರ್ ಸಭೆಗೆ ಹೋಗಿ ಬಂದ ನಂತರ ಅದರ ಬಿಲ್ ಅದು ಇದು ಎಲ್ಲಾ ಕೊಟ್ಟು ಅದನ್ನು ಕ್ಲಿಯರ್ ಮಾಡಿಸಬೇಕಾಗುತ್ತದೆ. ಒಬ್ಬ ಆರೋಗ್ಯ ಅಧಿಕಾರಿ ತಾನು ಒಂದು ಹಬ್ಬಕ್ಕೆ 5000 ಹಣ ತೆಗೆದುಕೊಂಡಿದ್ದರೆ ನಂತರ ಆತನ ಸಂಬಳದಿಂದ ಅದನ್ನು ಕಾಲಕಾಲಕ್ಕೆ ಕಡಿತ ಮಾಡಬೇಕಾಗುತ್ತದೆ. ಆದರೆ 1980 ರಿಂದ ಇಲ್ಲಿಯ ತನಕ ಹೀಗೆ ಮುಂಗಡವಾಗಿ ಪಾವತಿಸಿರುವ ಹಣದ ಯಾವುದೇ ಲೆಕ್ಕ ಇಲ್ಲ. ಅಡಿಟ್ ಮಾಡಿದಾಗ ಇದು 21 ಕೋಟಿ ರೂಪಾಯಿ ಎಂದು ತೋರಿಸಲಾಗುತ್ತಿತ್ತು. ಆವತ್ತಿನಿಂದ ಎಷ್ಟು ಮೇಯರ್ ಆಗಿ ಹೋಗಿದ್ದಾರೆ. ಅವರು ಎಷ್ಟೋ ಸರಕಾರಿ ಸಭೆಗಳಲ್ಲಿ ಭಾಗವಹಿಸಲು ಬೆಂಗಳೂರಿಗೆ ಹೋಗಿರುತ್ತಾರೆ. ಆವತ್ತು ಆರೋಗ್ಯ ಅಧಿಕಾರಿಯಾಗಿದ್ದ ವ್ಯಕ್ತಿ ಇವತ್ತು ಯಾವ ಪೋಸ್ಟಿನಲ್ಲಿದ್ದಾನೆ ಯಾರಿಗೆ ಗೊತ್ತು? ಹೀಗೆ ಇವರಿಗೆಲ್ಲ ಕೊಟ್ಟ ಹಣವನ್ನು ಹಾಗೆ ಬಿಡುವುದಾ? 21 ಕೋಟಿ ಎಂದಾಗ ನಿಮಗಾದರೂ ಮನಸ್ಸಿಗೆ ಬೇಸರವಾಗುವುದಿಲ್ಲವೇ? ದಿನವೀಡಿ ದುಡಿದರೂ ಎಷ್ಟೋ ಜನರಿಗೆ 500 ರೂಪಾಯಿ ಗಳಿಸಲು ಕಷ್ಟವಾಗುತ್ತದೆ. ಹಾಗಿರುವಾಗ ಇವರು 21 ಕೋಟಿಯ ಲೆಕ್ಕ ಇಡುವುದಿಲ್ಲ ಎಂದರೆ ಇವರನ್ನು ಸುಮ್ಮನೆ ಬಿಡಲು ಆಗುತ್ತಾ? ನಾನು ಮಾಹಿತಿ ಹಕ್ಕಿನಲ್ಲಿ ಕೇಳಿದೆ. ಸಮಾಧಾನಕರ ಉತ್ತರ ಬಂದಿಲ್ಲ. ಮೇಲ್ಮನವಿ ಹಾಕಿದ್ದೇನೆ

0
Shares
  • Share On Facebook
  • Tweet It




Trending Now
ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
Tulunadu News December 10, 2025
ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
Tulunadu News December 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
  • Popular Posts

    • 1
      ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • 2
      ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • 3
      ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • 4
      ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!

  • Privacy Policy
  • Contact
© Tulunadu Infomedia.

Press enter/return to begin your search