• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಗುಹಾಗೆ ನೋಟಿಸ್ ಗುಮ್ಮಿದ ಬಿಜೆಪಿ ಯುವ ಮೋರ್ಚಾ

TNN Correspondent Posted On September 12, 2017
0


0
Shares
  • Share On Facebook
  • Tweet It

ಬಾಯಿಚಪಲಕ್ಕೆ ದೂಷಿಸಿ ನಂತರ ವಾಜಪೇಯಿ ಹೆಸರ ಹಿಂದೆ ಅವಿತ ಇತಿಹಾಸ ತಜ್ಞ

ದೆಹಲಿ : ಪತ್ರಕರ್ತ ಗೌರಿ ಲಂಕೇಶ್ ಹತ್ಯೆಯಾಗುತ್ತಿದ್ದಂತೆ ಪ್ರಗತಿ ಪರ ಚಿಂತಕರು, ವಿಚಾರವಾದಿಗಳು ಹಾಗೂ ಎಡಪಂಥೀಯರಿಗೆ ಯಾರೇ ಮೈಕ್ ಹಿಡಿಯಲಿ ಬಿಡಲಿ ತಾವೇ ಖುದ್ದಾಗಿ ಹೋಗಿ ನಿಂತು ಮೈಕ್ ಹಿಡಿದು ಕೂಗಿದ್ದು”ಇದು ಬಿಜೆಪಿ ಕೆಲಸ’ ಎಂದು. ತಾವೇ ನಿರ್ಣಾಯಕರಾಗಿ, ತನಿಖೆ ಮಾಡಲು ಆರಂಭಿಸಿದ ಪೊಲೀಸರನ್ನು ನಾಚಿಸುವಂತೆ ತೀರ್ಪು ನೀಡಿಯೇ ಬಿಟ್ಟಿದ್ದರು. ಕೆಲವರು ಆರೆಸ್ಸೆಸ್ ಕಡೆ ಬೆರಳು ಮಾಡಿ ತಮ್ಮ ಹುದುಗಿದ್ದ ಬಾಯಹರುಕು ಚಪಲತನ ತೀರಿಸಿಕೊಳ್ಳಲು ತಡಮಾಡಲಿಲ್ಲ. ಅಂಥವರಲ್ಲಿ ಮುಂಚೂಣಿಯಲ್ಲಿ ನಿಂತಿದ್ದು ಸದಾ ಇತಿಹಾಸದ ಬೇರೊಂದು ಮಗ್ಗುಲನ್ನು ಹೇಳುತ್ತಾ ಪ್ರಚಾರದಲ್ಲಿರಲು ಬಯಸುವ ರಾಮಚಂದ್ರ ಗುಹಾ.

ಕಳೆದ ವಾರ ವರದಿಗಾರರನ್ನು ಕರೆಸಿ, ಮಹಾರಾಷ್ಟ್ರದಲ್ಲಿ ದಾಬೋಲ್ಕರ್, ಪನ್ಸಾರೆ ಹಾಗೂ ಕರ್ನಾಟಕದಲ್ಲಿ ಎಂ.ಎಂ.ಕಲ್ಬುರ್ಗಿ ಹತ್ಯೆ ಹಿಂದೆ ಯಾವ ಸಂಘ ಪರಿವಾರದವರ ಕೈವಾಡವಿದೆಯೋ, ಅವರೇ ಗೌರಿ ಹತ್ಯೆ ಮಾಡಿರುವ ಸಾಧ್ಯತೆಯಿದೆ ಎಂದು ಗುಹಾ ಸಂದರ್ಶನವೊಂದರಲ್ಲಿ ಹೇಳಿಯೇ ಬಿಟ್ಟರು.
ಈಗ ಕರ್ನಾಟಕದ ಬಿಜೆಪಿ ಯುವ ಮೋರ್ಚಾ ಗುಹಾ ಹೇಳಿಕೆ ವಿರುದ್ಧ ಲೀಗಲ್ ನೋಟಿಸ್ ಜಾರಿ ಮಾಡಿದೆ. ಮೂರು ದಿನದೊಳಗೆ ಒಂದು ವೇಳೆ ಷರತ್ತುಗಳಿಲ್ಲದೆ ಕ್ಷಮಾಪಣೆ ಕೇಳದಿದ್ದರೆ, ಕಾನೂನ ಹೋರಾಟಕ್ಕೆ ಸಜ್ಜಾಗಿ ಎಂಬ ಖಡಕ್ ಸಂದೇಶ ರವಾನಿಸಿದೆ.

ಆರೆಸ್ಸೆಸ್, ಬಿಜೆಪಿ ವಿರುದ್ಧ ಇಲ್ಲ ಸಲ್ಲದ ಆರೋಪ ಮಾಡುತ್ತಾ ಓಡಾಡುವುದು ಫ್ಯಾಷನ್ ಆಗಿದೆ. ತಮ್ಮ ಪಾಂಡಿತ್ಯ ಪ್ರದರ್ಶನಕ್ಕೆ ಬಾಯಿಬಂದಂತೆ ಹರಟುವುದೇ ಶೋಕಿಯಾಗುತ್ತಿದೆ. ಇದಕ್ಕೆ ಕಾನೂನಾತ್ಮಕ ಹೋರಾಟವೇ ಪರಿಹಾರ ಎಂದು ಬಿಜೆಪಿ ತನ್ನ ಈ ಕ್ರಮದಿಂದ ಸಾರಿದೆ.

ವಾಜಪೇಯಿ ಜಪ ಮಾಡುತ್ತಾ ಅವಿತ ಗುಹಾ!
ನೋಟಿಸ್ ಸುದ್ದಿ ತಿಳಿಯುತ್ತಿದಂತೆ ಗುಹಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ” ಪುಸ್ತಕಕ್ಕೆ ಪುಸ್ತಕದಿಂದ, ಹೇಳಿಕೆಗೆ ಮಾತಿನಿಂದಲೇ ತಿರುಗೇಟು ನೀಡಬೇಕು ಎಂದು ಅಜಾತಶತ್ರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೇಳುತ್ತಿದ್ದರು. ಆದರೆ ನಾವು ಈಗ ವಾಜಪೇಯಿ ಅವರ ಭಾರತದಲ್ಲಿಲ್ಲ ” ಎಂದು ಕೇಂದ್ರ ಸರಕಾರದ ಕಡೆ ಬೆರಳು ಮಾಡಿದ್ದಾರೆ.

0
Shares
  • Share On Facebook
  • Tweet It


bjpcourtdabolkargaurigowriguhaguhaakalburgikarnatakalankeshlawyerlegallegallymodimorchamurder\noticeramachandrashahstatesupremeyuva


Trending Now
ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
Tulunadu News January 30, 2026
ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
Tulunadu News January 28, 2026
You may also like
ಮುಸ್ಲಿಂ ಅಭ್ಯರ್ಥಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಎನ್ನುವ ಹಿಂದಿರುವ ರಹಸ್ಯ ಏನು?
October 31, 2018
ಮಂಗಳೂರಿನಲ್ಲಿ ದಸರಾ ರಜೆ ಕಡಿಮೆ ಮಾಡುವುದು ಸರಿಯಲ್ಲ- ಶಾಸಕ ಕಾಮತ್
September 22, 2018
ಉನ್ನತ ಶಿಕ್ಷಣದ ಉತ್ತೇಜನಕ್ಕೆ ಕೇಂದ್ರ ಸರ್ಕಾರದ ಭರ್ಜರಿ ಕೊಡುಗೆ, 1 ಲಕ್ಷ ಕೋಟಿ ಅನುದಾನ ಬಿಡುಗಡೆ
June 19, 2018
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ
    • ಕ್ರಿಕೆಟ್ ಪಂದ್ಯಾಟದ ಮೇಲೆ ಗುಂಪು ದಾಳಿಯಿಂದ ಸಾವು: ಆರೋಪಿಗೆ ಜಾಮೀನು ಮಂಜೂರು
    • ನಾನು ಸಾಮಾನ್ಯ ಕಾರ್ಯಕರ್ತ, ಅವರು ನನ್ನ ಬಾಸ್ ಎಂದು ಮೋದಿ ಹೇಳಿದ್ದು ಯಾರನ್ನ!
    • ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ನಡೆದಿತ್ತೇ ಕಿರುಕುಳ? ವೈರಲ್ ವೀಡಿಯೋ ಬಳಿಕ ಆರೋಪಿತ ವ್ಯಕ್ತಿಯ ಆತ್ಮಹತ್ಯೆ
    • ಕರ್ನಾಟಕದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಈ ಬಾರಿ ಬ್ಯಾಲೆಟ್ ಪೇಪರ್ ಬಳಕೆ!
    • ಕೆಲಸ ಇದೆ ಎಂದು ನಂಬಿ ಬಂದ ಉದ್ಯೋಗಾಂಕ್ಷಿಗಳು! ಬೇಸ್ತುಬಿದ್ದು ವಾಪಾಸ್..
    • ಟೊಮೆಟೋ ತಿನ್ನಲು ಬಂದ ದನದ ಮುಖಕ್ಕೆ ಚೂರಿ ಇರಿತ!
    • ಶಾಲೆಗಳಲ್ಲಿ ಪ್ರಥಮ ಭಾಷೆಯಾಗಿ ಮಲಯಾಳಂ ಕಡ್ಡಾಯ: ಕೇರಳ ಸರಕಾರದ ಹೊಸ ನೀತಿಗೆ ಕರ್ನಾಟಕ ವಿರೋಧ!
    • ಸುಳ್ಯ ಶಾಸಕಿ ಪೋಟೋ ಬಳಸಿ ಶ್ರದ್ಧಾಂಜಲಿ ಪೋಸ್ಟ್! ಭಾರೀ ಆಕ್ರೋಶ..
  • Popular Posts

    • 1
      ಐಟಿ ದಾಳಿ- ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿಜೆ ರಾಯ್ ಆತ್ಮಹತ್ಯೆ!
    • 2
      ಓಡಿಲ್ನಾಳ ಸುಮಂತ್ ಅನುಮಾನಾಸ್ಪದ ಸಾವು – ಕೂಲಂಕುಷ ತನಿಖೆಗೆ ಗೃಹಸಚಿವರಿಗೆ ಮನವಿ

  • Privacy Policy
  • Contact
© Tulunadu Infomedia.

Press enter/return to begin your search