• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ಐಸಿಸ್ ನೆಂಟರಿದಂದ ಲಂಡನ್ ರೈಲು ಸುರಂಗಮಾರ್ಗದಲ್ಲಿ ಸ್ಫೋಟ!

TNN Correspondent Posted On September 16, 2017
0


0
Shares
  • Share On Facebook
  • Tweet It

ಲಂಡನ್ : ಸುರಂಗಮಾರ್ಗವಾಗಿ ಸಂಚರಿಸುತ್ತಿದ್ದ ರೈಲೊಂದರಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಹಠಾತ್ತನೆ ಬೆಂಕಿ ಕಾಣಿಸಿಕೊಂಡು 29ಕ್ಕೂ ಅಧಿಕ ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿರುವ ಘಟನೆ ಲಂಡನ್ ನಗರದ ಪಾರ್ಸನ್ಸ್ ಗ್ರೀನ್ ಅಂಡರ್‍ಗ್ರೌಂಡ್ ಸ್ಟೇಷನ್‍ನಲ್ಲಿ ಸಂಭವಿಸಿದೆ. ಅಗ್ನಿ ದುರಂತವೆಂದೇ ಭಾವಿಸಾಲಗಿದ್ದ ಘಟನೆಯ ಪ್ರಾಥಮಿಕ ತನಿಖೆಯಲ್ಲಿ ಪ್ರಾಯೋಗಿಕ ಬಾಂಬ್‍ನಿಂದ ಸ್ಫೋಟಕ್ಕೆ ಯತ್ನಿಸಲಾಗಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಲಂಡನ್ ಪೊಲೀಸರಿಗೆ ಹೊಗೆಯ ಹರಡುವಿಕೆಗೆ ಕಾರಣವಾದ ಸುಟ್ಟ ವಸ್ತುಗಳ ಜಾಗದಲ್ಲಿ ದೊರೆತ ಟೈಮರ್ ದೊರೆತಿದ್ದು ಇದು ಬಾಂಬ್ ಸ್ಫೋಟದ ಸಂಚು ಎಂದು ದೃಢಪಡಿಸಿದೆ. ಇಡೀ ದಿನ ಲಂಡನ್ ನಗರದಾದ್ಯಂತ ಆತಂಕದ ಛಾಯೆ ಕವಿದಿತ್ತು. ಬ್ರಿಟನ್ ಪ್ರಧಾನಿ ತೆರೇಸಾ ಮೇ ಘಟನೆಯನ್ನು ಖಂಡಿಸಿದ್ದು, “ಈ ಪ್ರಯತ್ನವನ್ನು ಗಂಭೀರವಾಗಿ ಪರಿಗಣಿಸಲೇಬೇಕು’ ಎಂದು ಎಚ್ಚರಿಸಿದ್ದಾರೆ. ಐಸಿಸ್ ಸಂಘಟನೆ ಶುಕ್ರವಾರ ಸಂಜೆ ವೇಳೆಗೆ ತನ್ನ ಮುಖವಾಣಿ ಅಮಾಕ್‍ನಲ್ಲಿ “ಲಂಡನ್ ಸ್ಫೋಟಕ್ಕೆ ಕಾರಣವಾದವರು ಐಸಿಸ್‍ನೊಂದಿಗೆ ನಂಟು ಹೊಂದಿರುವವರು’ ಎಂದು ಘೋಷಿಸಿದೆ. ಜನಸಂದಣಿ ಹೆಚ್ಚಿರುವ ಸಂದರ್ಭವನ್ನೇ ಗುರಿಯಾಗಿಸಿ ಬೆಂಕಿಯ ಉಂಡೆಯನ್ನು ರೈಲಿನೊಳಗೆ ಹಾದುಹೋಗುವ ಟ್ಯೂಬ್‍ನೊಳಗೆ ಉರುಳಿ ಬಿಡಲಾಗಿದೆ. ಇದರಿಂದ ಹಬ್ಬಿದ ದಟ್ಟ ಹೊಗೆಯಿಂದಾಗಿ ಪ್ರಯಾಣಿಕರು ಉಸಿರಾಡಲು ಸಂಕಷ್ಟ ಪಡುವಂತಾಗಿದೆ. ಜತೆಗೆ ಬೋಗಿ ತುಂಬಾ ಶಾಖದ ಝಳಕ್ಕೆ ಮುಖವೆಲ್ಲಾ ಸುಟ್ಟಂತಾಗಿದೆ.

ಅಮೆರಿಕ ಅಧ್ಯಕ್ಷ ಟ್ರಂಪ್ ಘಟನೆ ಕುರಿತು ಆತುರದಲ್ಲಿ ಟ್ವೀಟ್ ಮಾಡಿ ಬ್ರಿಟಿಷರ ಕೆಂಗಣ್ಣಿಗೆ ಗುರಯಾಗಿದ್ದಾರೆ. ಟ್ವಿಟ್‍ನಲ್ಲಿ ಅವರು ” ಕಾನೂನು ಪಾಲಕರ ಎದುರಿಗೇ ಸ್ಫೋಟದ ರೂವಾರಿಗಳು ಓಡಾಡಿಕೊಂಡಿದರೂ ಮುನ್ನೆಚ್ಚರಿಕೆ ವಹಿಸದ ಫಲ ಈಗ ಲಂಡನ್ ಜನತೆ ಅನುಭವಿಸುವಂತಾಗಿದೆ’ ಎಂದು ನಿರ್ಣಯಕೊಟ್ಟಿದ್ದಾರೆ.

ಇದಕ್ಕೆ ಲಂಡನ್ ಪ್ರಧಾನಿ ಮೇ ಖಾರವಾಗಿಯೇ ಪ್ರತಿಕ್ರಿಯಿಸಿ, ” ತನಿಖೆ ಆರಂಭವಾಗಿರುವಾಗ ಅದರಲ್ಲಿ ಮೂಗು ತೂರಿಸಿ ತೀರ್ಪು ಕೊಡುವುದು ಯಾರಿಗೂ ಭೂಷಣವಲ್ಲ. ಈ ಹೇಡಿ ಕೃತ್ಯದ ತನಿಖೆಯನ್ನು ಶೀಘ್ರವಾಗಿ ಮುಗಿಸಿ ಆರೋಪಿಗಳನ್ನು ಪತ್ತೆಹಚ್ಚುತ್ತಾರೆ ಎಂಬ ನಂಬಿಕೆ ನನಗಿದೆ ” ಎಂದಿದ್ದಾರೆ.

0
Shares
  • Share On Facebook
  • Tweet It


attackbombiedisislondonmetrosubwaytrainunderground


Trending Now
ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
Tulunadu News October 22, 2025
ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
Tulunadu News October 22, 2025
You may also like
ಕಣ್ಣೂರಿನಲ್ಲಿ ಬಾಂಬ್ ಸದ್ದು, ಜನರಕ್ಷಾ ಯಾತ್ರೆಗೆ ಬ್ರೇಕ್ ಹಾಕುವ ಪ್ಲಾನ್ !
October 9, 2017
ಅಮೆರಿಕ ಇತಿಹಾಸದಲ್ಲಿಯೇ ಭೀಕರ ಸಾಮೂಹಿಕ ನರಹತ್ಯೆ!
October 3, 2017
ಮಂಗಳೂರು ವಿಮಾನ ನಿಲ್ದಾಣದಲ್ಲಿ ಶಂಕಿತ ಬಾಂಬ್ ಪತ್ತೆ!
September 20, 2017
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
  • Popular Posts

    • 1
      ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • 2
      ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • 3
      ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?

  • Privacy Policy
  • Contact
© Tulunadu Infomedia.

Press enter/return to begin your search