• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ಐಸಿಸ್ ನೆಂಟರಿದಂದ ಲಂಡನ್ ರೈಲು ಸುರಂಗಮಾರ್ಗದಲ್ಲಿ ಸ್ಫೋಟ!

TNN Correspondent Posted On September 16, 2017
0


0
Shares
  • Share On Facebook
  • Tweet It

ಲಂಡನ್ : ಸುರಂಗಮಾರ್ಗವಾಗಿ ಸಂಚರಿಸುತ್ತಿದ್ದ ರೈಲೊಂದರಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಹಠಾತ್ತನೆ ಬೆಂಕಿ ಕಾಣಿಸಿಕೊಂಡು 29ಕ್ಕೂ ಅಧಿಕ ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿರುವ ಘಟನೆ ಲಂಡನ್ ನಗರದ ಪಾರ್ಸನ್ಸ್ ಗ್ರೀನ್ ಅಂಡರ್‍ಗ್ರೌಂಡ್ ಸ್ಟೇಷನ್‍ನಲ್ಲಿ ಸಂಭವಿಸಿದೆ. ಅಗ್ನಿ ದುರಂತವೆಂದೇ ಭಾವಿಸಾಲಗಿದ್ದ ಘಟನೆಯ ಪ್ರಾಥಮಿಕ ತನಿಖೆಯಲ್ಲಿ ಪ್ರಾಯೋಗಿಕ ಬಾಂಬ್‍ನಿಂದ ಸ್ಫೋಟಕ್ಕೆ ಯತ್ನಿಸಲಾಗಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಲಂಡನ್ ಪೊಲೀಸರಿಗೆ ಹೊಗೆಯ ಹರಡುವಿಕೆಗೆ ಕಾರಣವಾದ ಸುಟ್ಟ ವಸ್ತುಗಳ ಜಾಗದಲ್ಲಿ ದೊರೆತ ಟೈಮರ್ ದೊರೆತಿದ್ದು ಇದು ಬಾಂಬ್ ಸ್ಫೋಟದ ಸಂಚು ಎಂದು ದೃಢಪಡಿಸಿದೆ. ಇಡೀ ದಿನ ಲಂಡನ್ ನಗರದಾದ್ಯಂತ ಆತಂಕದ ಛಾಯೆ ಕವಿದಿತ್ತು. ಬ್ರಿಟನ್ ಪ್ರಧಾನಿ ತೆರೇಸಾ ಮೇ ಘಟನೆಯನ್ನು ಖಂಡಿಸಿದ್ದು, “ಈ ಪ್ರಯತ್ನವನ್ನು ಗಂಭೀರವಾಗಿ ಪರಿಗಣಿಸಲೇಬೇಕು’ ಎಂದು ಎಚ್ಚರಿಸಿದ್ದಾರೆ. ಐಸಿಸ್ ಸಂಘಟನೆ ಶುಕ್ರವಾರ ಸಂಜೆ ವೇಳೆಗೆ ತನ್ನ ಮುಖವಾಣಿ ಅಮಾಕ್‍ನಲ್ಲಿ “ಲಂಡನ್ ಸ್ಫೋಟಕ್ಕೆ ಕಾರಣವಾದವರು ಐಸಿಸ್‍ನೊಂದಿಗೆ ನಂಟು ಹೊಂದಿರುವವರು’ ಎಂದು ಘೋಷಿಸಿದೆ. ಜನಸಂದಣಿ ಹೆಚ್ಚಿರುವ ಸಂದರ್ಭವನ್ನೇ ಗುರಿಯಾಗಿಸಿ ಬೆಂಕಿಯ ಉಂಡೆಯನ್ನು ರೈಲಿನೊಳಗೆ ಹಾದುಹೋಗುವ ಟ್ಯೂಬ್‍ನೊಳಗೆ ಉರುಳಿ ಬಿಡಲಾಗಿದೆ. ಇದರಿಂದ ಹಬ್ಬಿದ ದಟ್ಟ ಹೊಗೆಯಿಂದಾಗಿ ಪ್ರಯಾಣಿಕರು ಉಸಿರಾಡಲು ಸಂಕಷ್ಟ ಪಡುವಂತಾಗಿದೆ. ಜತೆಗೆ ಬೋಗಿ ತುಂಬಾ ಶಾಖದ ಝಳಕ್ಕೆ ಮುಖವೆಲ್ಲಾ ಸುಟ್ಟಂತಾಗಿದೆ.

ಅಮೆರಿಕ ಅಧ್ಯಕ್ಷ ಟ್ರಂಪ್ ಘಟನೆ ಕುರಿತು ಆತುರದಲ್ಲಿ ಟ್ವೀಟ್ ಮಾಡಿ ಬ್ರಿಟಿಷರ ಕೆಂಗಣ್ಣಿಗೆ ಗುರಯಾಗಿದ್ದಾರೆ. ಟ್ವಿಟ್‍ನಲ್ಲಿ ಅವರು ” ಕಾನೂನು ಪಾಲಕರ ಎದುರಿಗೇ ಸ್ಫೋಟದ ರೂವಾರಿಗಳು ಓಡಾಡಿಕೊಂಡಿದರೂ ಮುನ್ನೆಚ್ಚರಿಕೆ ವಹಿಸದ ಫಲ ಈಗ ಲಂಡನ್ ಜನತೆ ಅನುಭವಿಸುವಂತಾಗಿದೆ’ ಎಂದು ನಿರ್ಣಯಕೊಟ್ಟಿದ್ದಾರೆ.

ಇದಕ್ಕೆ ಲಂಡನ್ ಪ್ರಧಾನಿ ಮೇ ಖಾರವಾಗಿಯೇ ಪ್ರತಿಕ್ರಿಯಿಸಿ, ” ತನಿಖೆ ಆರಂಭವಾಗಿರುವಾಗ ಅದರಲ್ಲಿ ಮೂಗು ತೂರಿಸಿ ತೀರ್ಪು ಕೊಡುವುದು ಯಾರಿಗೂ ಭೂಷಣವಲ್ಲ. ಈ ಹೇಡಿ ಕೃತ್ಯದ ತನಿಖೆಯನ್ನು ಶೀಘ್ರವಾಗಿ ಮುಗಿಸಿ ಆರೋಪಿಗಳನ್ನು ಪತ್ತೆಹಚ್ಚುತ್ತಾರೆ ಎಂಬ ನಂಬಿಕೆ ನನಗಿದೆ ” ಎಂದಿದ್ದಾರೆ.

0
Shares
  • Share On Facebook
  • Tweet It


- Advertisement -
attackbombiedisislondonmetrosubwaytrainunderground


Trending Now
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Tulunadu News June 18, 2025
ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
Tulunadu News June 18, 2025
You may also like
ಕಣ್ಣೂರಿನಲ್ಲಿ ಬಾಂಬ್ ಸದ್ದು, ಜನರಕ್ಷಾ ಯಾತ್ರೆಗೆ ಬ್ರೇಕ್ ಹಾಕುವ ಪ್ಲಾನ್ !
October 9, 2017
ಅಮೆರಿಕ ಇತಿಹಾಸದಲ್ಲಿಯೇ ಭೀಕರ ಸಾಮೂಹಿಕ ನರಹತ್ಯೆ!
October 3, 2017
ಮಂಗಳೂರು ವಿಮಾನ ನಿಲ್ದಾಣದಲ್ಲಿ ಶಂಕಿತ ಬಾಂಬ್ ಪತ್ತೆ!
September 20, 2017
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
    • 114 ಮುಸ್ಲಿಮರು ಸೇರಿ ದೇಗುಲದ 167 ಸಿಬ್ಬಂದಿ ವಜಾ ಮಾಡಿ ಆದೇಶ!
  • Popular Posts

    • 1
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 2
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 3
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 4
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • 5
      ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search