• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಸುದ್ದಿ 

ಐಸಿಸ್ ನೆಂಟರಿದಂದ ಲಂಡನ್ ರೈಲು ಸುರಂಗಮಾರ್ಗದಲ್ಲಿ ಸ್ಫೋಟ!

TNN Correspondent Posted On September 16, 2017
0


0
Shares
  • Share On Facebook
  • Tweet It

ಲಂಡನ್ : ಸುರಂಗಮಾರ್ಗವಾಗಿ ಸಂಚರಿಸುತ್ತಿದ್ದ ರೈಲೊಂದರಲ್ಲಿ ಶುಕ್ರವಾರ ಬೆಳಗ್ಗೆ 8.30ಕ್ಕೆ ಹಠಾತ್ತನೆ ಬೆಂಕಿ ಕಾಣಿಸಿಕೊಂಡು 29ಕ್ಕೂ ಅಧಿಕ ಪ್ರಯಾಣಿಕರಿಗೆ ಸುಟ್ಟ ಗಾಯಗಳಾಗಿರುವ ಘಟನೆ ಲಂಡನ್ ನಗರದ ಪಾರ್ಸನ್ಸ್ ಗ್ರೀನ್ ಅಂಡರ್‍ಗ್ರೌಂಡ್ ಸ್ಟೇಷನ್‍ನಲ್ಲಿ ಸಂಭವಿಸಿದೆ. ಅಗ್ನಿ ದುರಂತವೆಂದೇ ಭಾವಿಸಾಲಗಿದ್ದ ಘಟನೆಯ ಪ್ರಾಥಮಿಕ ತನಿಖೆಯಲ್ಲಿ ಪ್ರಾಯೋಗಿಕ ಬಾಂಬ್‍ನಿಂದ ಸ್ಫೋಟಕ್ಕೆ ಯತ್ನಿಸಲಾಗಿತ್ತು ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಲಂಡನ್ ಪೊಲೀಸರಿಗೆ ಹೊಗೆಯ ಹರಡುವಿಕೆಗೆ ಕಾರಣವಾದ ಸುಟ್ಟ ವಸ್ತುಗಳ ಜಾಗದಲ್ಲಿ ದೊರೆತ ಟೈಮರ್ ದೊರೆತಿದ್ದು ಇದು ಬಾಂಬ್ ಸ್ಫೋಟದ ಸಂಚು ಎಂದು ದೃಢಪಡಿಸಿದೆ. ಇಡೀ ದಿನ ಲಂಡನ್ ನಗರದಾದ್ಯಂತ ಆತಂಕದ ಛಾಯೆ ಕವಿದಿತ್ತು. ಬ್ರಿಟನ್ ಪ್ರಧಾನಿ ತೆರೇಸಾ ಮೇ ಘಟನೆಯನ್ನು ಖಂಡಿಸಿದ್ದು, “ಈ ಪ್ರಯತ್ನವನ್ನು ಗಂಭೀರವಾಗಿ ಪರಿಗಣಿಸಲೇಬೇಕು’ ಎಂದು ಎಚ್ಚರಿಸಿದ್ದಾರೆ. ಐಸಿಸ್ ಸಂಘಟನೆ ಶುಕ್ರವಾರ ಸಂಜೆ ವೇಳೆಗೆ ತನ್ನ ಮುಖವಾಣಿ ಅಮಾಕ್‍ನಲ್ಲಿ “ಲಂಡನ್ ಸ್ಫೋಟಕ್ಕೆ ಕಾರಣವಾದವರು ಐಸಿಸ್‍ನೊಂದಿಗೆ ನಂಟು ಹೊಂದಿರುವವರು’ ಎಂದು ಘೋಷಿಸಿದೆ. ಜನಸಂದಣಿ ಹೆಚ್ಚಿರುವ ಸಂದರ್ಭವನ್ನೇ ಗುರಿಯಾಗಿಸಿ ಬೆಂಕಿಯ ಉಂಡೆಯನ್ನು ರೈಲಿನೊಳಗೆ ಹಾದುಹೋಗುವ ಟ್ಯೂಬ್‍ನೊಳಗೆ ಉರುಳಿ ಬಿಡಲಾಗಿದೆ. ಇದರಿಂದ ಹಬ್ಬಿದ ದಟ್ಟ ಹೊಗೆಯಿಂದಾಗಿ ಪ್ರಯಾಣಿಕರು ಉಸಿರಾಡಲು ಸಂಕಷ್ಟ ಪಡುವಂತಾಗಿದೆ. ಜತೆಗೆ ಬೋಗಿ ತುಂಬಾ ಶಾಖದ ಝಳಕ್ಕೆ ಮುಖವೆಲ್ಲಾ ಸುಟ್ಟಂತಾಗಿದೆ.

ಅಮೆರಿಕ ಅಧ್ಯಕ್ಷ ಟ್ರಂಪ್ ಘಟನೆ ಕುರಿತು ಆತುರದಲ್ಲಿ ಟ್ವೀಟ್ ಮಾಡಿ ಬ್ರಿಟಿಷರ ಕೆಂಗಣ್ಣಿಗೆ ಗುರಯಾಗಿದ್ದಾರೆ. ಟ್ವಿಟ್‍ನಲ್ಲಿ ಅವರು ” ಕಾನೂನು ಪಾಲಕರ ಎದುರಿಗೇ ಸ್ಫೋಟದ ರೂವಾರಿಗಳು ಓಡಾಡಿಕೊಂಡಿದರೂ ಮುನ್ನೆಚ್ಚರಿಕೆ ವಹಿಸದ ಫಲ ಈಗ ಲಂಡನ್ ಜನತೆ ಅನುಭವಿಸುವಂತಾಗಿದೆ’ ಎಂದು ನಿರ್ಣಯಕೊಟ್ಟಿದ್ದಾರೆ.

ಇದಕ್ಕೆ ಲಂಡನ್ ಪ್ರಧಾನಿ ಮೇ ಖಾರವಾಗಿಯೇ ಪ್ರತಿಕ್ರಿಯಿಸಿ, ” ತನಿಖೆ ಆರಂಭವಾಗಿರುವಾಗ ಅದರಲ್ಲಿ ಮೂಗು ತೂರಿಸಿ ತೀರ್ಪು ಕೊಡುವುದು ಯಾರಿಗೂ ಭೂಷಣವಲ್ಲ. ಈ ಹೇಡಿ ಕೃತ್ಯದ ತನಿಖೆಯನ್ನು ಶೀಘ್ರವಾಗಿ ಮುಗಿಸಿ ಆರೋಪಿಗಳನ್ನು ಪತ್ತೆಹಚ್ಚುತ್ತಾರೆ ಎಂಬ ನಂಬಿಕೆ ನನಗಿದೆ ” ಎಂದಿದ್ದಾರೆ.

0
Shares
  • Share On Facebook
  • Tweet It


attackbombiedisislondonmetrosubwaytrainunderground


Trending Now
ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
Tulunadu News September 17, 2025
ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
Tulunadu News September 17, 2025
You may also like
ಕಣ್ಣೂರಿನಲ್ಲಿ ಬಾಂಬ್ ಸದ್ದು, ಜನರಕ್ಷಾ ಯಾತ್ರೆಗೆ ಬ್ರೇಕ್ ಹಾಕುವ ಪ್ಲಾನ್ !
October 9, 2017
ಅಮೆರಿಕ ಇತಿಹಾಸದಲ್ಲಿಯೇ ಭೀಕರ ಸಾಮೂಹಿಕ ನರಹತ್ಯೆ!
October 3, 2017
ಮಂಗಳೂರು ವಿಮಾನ ನಿಲ್ದಾಣದಲ್ಲಿ ಶಂಕಿತ ಬಾಂಬ್ ಪತ್ತೆ!
September 20, 2017
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
  • Popular Posts

    • 1
      ಮೋದಿ ತೆಗಳಿ, ರಾಹುಲ್ ಮೆಚ್ಚಿದ ಪಾಕ್ ಕ್ರಿಕೆಟಿಗ!
    • 2
      ಜಿಮಿನಿಯಿಂದ ಸೀರೆ ಉಡಿಸಿಕೊಳ್ಳುವ ಮುನ್ನ.. ಒಂದಿಷ್ಟು ಎಚ್ಚರಿಕೆ ಅಗತ್ಯ!
    • 3
      ಮುಗಿಯದ ಕೆಂಪುಕಲ್ಲು ಮತ್ತು ಮರಳು ಸಮಸ್ಯೆ; ಬಿಜೆಪಿಯಿಂದ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಧರಣಿ
    • 4
      ಎರಡು ಬಾರಿ ಕಚ್ಚುವ ನಾಯಿಗೆ ಜೀವಾವಧಿ ಶಿಕ್ಷೆ ನೀಡಲು ಯುಪಿ ಪ್ಲಾನ್!
    • 5
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!

  • Privacy Policy
  • Contact
© Tulunadu Infomedia.

Press enter/return to begin your search