ಉರಿ ದಾಳಿ ಥರದ ಸಂಚು ರೂಪಿಸಿದ್ದ ಉಗ್ರರು ಖತಂ
Posted On September 25, 2017
0
ಶ್ರೀನಗರ : ಕಳೆದ ವರ್ಷ ಕಾಶ್ಮೀರದ ಉರಿಯಲ್ಲಿ ಸೇನಾ ನೆಲೆ ಗುರಿಯಾಗಿಸಿ ಪಾಕ್ ಪೋಷಿತ ಉಗ್ರರು ನಡೆಸಿದ್ದ ದಾಳಿ ಮಾದರಿಯಲ್ಲಿಯೇ ದಾಳಿಗೆ ಸಂಚು ರೂಪಿಸಿದ್ದ ಮೂವರು ಭಯೋತ್ಪಾದಕರನ್ನು ಸೇನಾ ಕಾರ್ಯಾಚರಣೆಯಲ್ಲಿ ಭಾನುವಾರ ಹೊಡೆದುರುಳಿಸಲಾಗಿದೆ. ಲಷ್ಕರೆ ತಯ್ಯಬಾ ಉಗ್ರ ಸಂಘಟನೆ ಸೇರಿದವರಿವರು ಎಂದು ತಿಳಿದುಬಂದಿದೆ.

ಸೇನೆ ಮತ್ತು ಪೊಲೀಸರು ಜಂಟಿಯಾಗಿ ಕಲ್ಗಾಯಿ ಪ್ರದೇಶದಲ್ಲಿ ಉಗ್ರರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾಗ ದಾಳಿ -ಪ್ರತಿದಾಳಿ ನಡೆದಿದೆ. ಒಬ್ಬ ಸೈನಿಕ ಮತ್ತು ಇಬ್ಬರು ಸ್ಥಳೀಯ ನಿವಾಸಗಿಗಳಿಗೆ ಕಾರ್ಯಾಚರಣೆಯಲ್ಲಿ ಗಾಯಗಳಾಗಿದೆ. ಕಳೆದ ವರ್ಷ ಉರಿಯಲಲಿ ನಡೆದ ಆತ್ಮಹತ್ಯಾ ದಾಳಿಗೆ 19 ಯೋಧರು ಹುತಾತ್ಮರಾಗಿದ್ದರು.
Trending Now
ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
December 10, 2025
ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
December 9, 2025









