• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ವಾಟ್ಸ್ ಅಪ್ ಎಡ್ಮಿನ್ ಗಳೇ ನಿಮಗಿನ್ನೂ ಬಂಧನದ ಭಯ ಬೇಡಾ!

TNN Correspondent Posted On July 21, 2017


  • Share On Facebook
  • Tweet It

ನೀವು ಸಾಮಾಜಿಕ ತಾಣಗಳಲ್ಲಿ ಬರೆಯುವ ಮೊದಲು ಯೋಚಿಸಿ, ನಿಮ್ಮ ಬರಹಗಳು ನಿಮ್ಮನ್ನು ಜೈಲಿನ ಕಂಬಿಗಳ ಹಿಂದೆ ನಿಲ್ಲಿಸಬಹುದು ಎಂದು ಐಟಿ ಆಕ್ಟ್ ಸೆಕ್ಷನ್ 66-ಎ ನಲ್ಲಿ ಇದೆ ಎಂದು ಯಾರಾದರೂ ಹೇಳಿದ್ದನ್ನು ನೀವು ಕೇಳಿಸಿರಬಹುದು ಅಥವಾ ಇತ್ತೀಚೆಗೆ ಇದೇ ವಿಷಯದ ಮೇಲೆ ಪೊಲೀಸರು ಕೆಲವರನ್ನು ಬಂಧಿಸಿದ್ದನ್ನು ನೀವು ಮಾಧ್ಯಮಗಳ ಮೂಲಕ ಗಮನಿಸಿರಬಹುದು. ಆದರೆ ಭಾರತದ ಸರ್ವೋಚ್ಚ ನ್ಯಾಯಾಲಯ 2015 ರಲ್ಲಿಯೇ ಒಂದು ತೀರ್ಪು ನೀಡಿ ಈ ಸೆಕ್ಷನ್ ಉಪಯೋಗಿಸಿ ಯಾರನ್ನು ಕೂಡ ಬಂಧಿಸುವುದು ಸರಿಯಲ್ಲ ಎಂದು ಹೇಳಿದೆ.

ಸುಪ್ರೀಂ ಕೋರ್ಟಿನ ದ್ವಿಸದಸ್ಯ ಪೀಠದ ನ್ಯಾಯಾಧೀಶರಾಗಿದ್ದ ಜಸ್ಟೀಸ್ ಜೆ ಚೆಲ್ಮೇಸ್ವರ್ ಹಾಗೂ ಜಸ್ಟೀಸ್ ಆರ್ ಎಫ್ ನಾರಿಮನ್ ಅವರ ಪೀಠದಿಂದ ಬಂದ ತೀರ್ಪು ಬಹುಶ: ಸಾಮಾಜಿಕ ತಾಣಗಳಲ್ಲಿ ಸಕ್ರಿಯರಾಗಿರುವವರಿಗೆ ಹೊಸ ಹುಮ್ಮಸ್ಸನ್ನು ನೀಡಬಹುದು. ಸಾರ್ವಜನಿಕ ಹಿತಾಸಕ್ತಿ ದಾವೆಯ ವಿಚಾರಣೆಯ ನಂತರ ತಮ್ಮ ತೀರ್ಪು ನೀಡಿದ ನ್ಯಾಯಾಧೀಶರು ಒಬ್ಬ ಪ್ರಜೆಯ ಮೂಲಭೂತ ಹಕ್ಕುಗಳಲ್ಲಿ ಮುಖ್ಯವಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಕೆಲಸವನ್ನು ಯಾವ ಸರಕಾರವೂ ಮಾಡಬಾರದು ಎಂದು ಹೇಳಿದರು. ಭಾರತದಲ್ಲಿ ಪ್ರತಿಯೊಬ್ಬರಿಗೂ ಸ್ವತಂತ್ರವಾಗಿ ಆಲೋಚಿಸುವ ಹಕ್ಕು ಮತ್ತು ಸ್ವಾತಂತ್ರ್ಯ ಎರಡೂ ಇದೆ. ಒಬ್ಬ ವ್ಯಕ್ತಿಗೆ ಒಂದು ವಿಷಯ ತಿಳಿಯುವಲ್ಲಿ ಈ ಸೆಕ್ಷನ್ ಅಡ್ಡ ಬರುತ್ತದೆ ಎಂದರೆ ಅದು ಆತನ ಮೂಲಭೂತ ಹಕ್ಕನ್ನು ಹತ್ತಿಕ್ಕಿದಂತೆ ಎಂದು ಅಭಿಪ್ರಾಯ ಪಟ್ಟಿತು.

ಸಂವಿಧಾನದಲ್ಲಿ ಸ್ಪಷ್ಟವಾಗಿ ಒಬ್ಬ ನಾಗರಿಕನ ಹಕ್ಕಿನ ಬಗ್ಗೆ ಉಲ್ಲೇಖಗಳಿರುವಾಗ ಅದನ್ನು ಪ್ರತಿಭಂದಿಸುವುದು ಹೇಗೆ ಸಾಧ್ಯ ಎಂದು ನ್ಯಾಯಾಮೂರ್ತಿಗಳಾದ ಜೆ ಚೆಲ್ಮೇಸ್ವರ್ ಹಾಗೂ ನಾರಿಮನ್ ಪ್ರಶ್ನಿಸಿದರು. ಸಾರ್ವಜನಿಕ ಆದೇಶ ಮತ್ತು ಆ ಬಗ್ಗೆ ಚರ್ಚೆಗಳು ನಡೆದಾಗ ಪ್ರತಿಯೊಬ್ಬರಿಗೆ ತಮ್ಮ ಅಭಿಪ್ರಾಯಗಳನ್ನು ಮಂಡಿಸುವ ಸ್ವಾತಂತ್ರ್ಯ ಇದೆ. ನೀವು ಸೆಕ್ಷನ್ ಉಪಯೋಗಿಸಿ ಆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಕ್ಕೆ ತಂದರೆ ಅದರಿಂದ ಜನ ಏನಾದರೂ ಹೇಳುವುದನ್ನು ನಿಲ್ಲಿಸುತ್ತಾರೆ. ಇದು ಪ್ರಜಾಪ್ರಭುತ್ವ ರಾಷ್ಟ್ರದ ಮಟ್ಟಿಗೆ ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಪೀಠ ಅಭಿಪ್ರಾಯ ಪಟ್ಟಿತು. ಇನ್ನೂ ಆ ಸೆಕ್ಷನ್ ನಲ್ಲಿ ಉಲ್ಲೇಖಿಸಿರುವ ” ಪೀಡನೆ”, ” ತೊಂದರೆ” ಮತ್ತು ” ಕೆಣಕುವ” ಶಬ್ದಗಳ ಬಗ್ಗೆ ಹೇಳಿದ ನ್ಯಾಯಾಧೀಶರು ” ಒಬ್ಬ ಮನುಷ್ಯನಿಗೆ ತೊಂದರೆ ಎಂದು ಅನಿಸಿದ್ದು ಇನ್ನೊಬ್ಬನಿಗೆ ಅಲ್ಲ ಎಂದು ಅನಿಸಬಹುದಲ್ಲ?” ಎಂದು ಪ್ರಶ್ನಿಸಿತು. ಅದಲ್ಲದೆ ಒಂದು ಸರಕಾರ ಜಾರಿಗೆ ತಂದಿದ್ದು ಅದರ ಮುಂದಿನ ಸರಕಾರಕ್ಕೂ ಅನ್ವಯವಾಗುತ್ತದೆ ಎಂದಲ್ಲ. ಸರಕಾರಗಳು ಬರುತ್ತವೆ, ಹೋಗುತ್ತವೆ, ಆದರೆ ಸೆಕ್ಷನ್ ಗಳು ಹಾಗೆ ಇರುತ್ತವೆ ಎಂದಿದೆ. ಆದರೆ ಐಟಿ ಆಕ್ಟ್ ನಲ್ಲಿ ಇರುವ ಮತ್ತೊಂದು ಸೆಕ್ಷನ್ ಅಡಿಯಲ್ಲಿ ವೆಬ್ ಸೈಟ್ ಗಳನ್ನು ನಿರ್ಭಂದಿಸುವ ಸರಕಾರದ ಹಕ್ಕಿಗೆ ನ್ಯಾಯಪೀಠ ತಡೆ ಒಡ್ಡಿಲ್ಲ.

ಹಾಗಂತ ಇನ್ನು ಮುಂದೆ ಮನಸ್ಸು ಬಂದಂತೆ ಸಾಮಾಜಿಕ ತಾಣಗಳಲ್ಲಿ ಬರೆಯಬಹುದು ಎಂದು ನ್ಯಾಯಾಲಯ ಹೇಳಿಲ್ಲ ಎನ್ನುವುದು ಕೂಡ ನಿಮ್ಮ ಗಮನಕ್ಕೆ ಇರಲಿ. ಒಟ್ಟಿನಲ್ಲಿ ಒಂದು ಸೆಕ್ಷನ್ ಉಪಯೋಗಿಸಿ ಸರಕಾರಗಳು ತಮ್ಮ ವಿರುದ್ಧ ಜನರ ಆಕ್ರೋಶ ಸಾಮಾಜಿಕ ತಾಣಗಳಲ್ಲಿ ಹೊರಬರದಂತೆ ತಡೆ ಒಡ್ಡಿದರೆ ಆಗ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅದು ದಕ್ಕೆ ಎಂದು ಹೇಳಿದೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Tulunadu News May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Tulunadu News May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search