• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಅತ್ಯಂತ ಕ್ಲಿಷ್ಟಕರ ಯುದ್ಧದ ಗೆಲುವಿಗೆ 18 ವರ್ಷ ತುಂಬಿತು!

TNN Correspondent Posted On July 26, 2017
0


0
Shares
  • Share On Facebook
  • Tweet It

ಬಹುಶ: ಒಂದು ತಲೆಮಾರಿಗೆ ಆ ದಿನದ ರೋಮಾಂಚನದ ಅನುಭವ ಆಗಿರಲಿಕ್ಕಿಲ್ಲ. ಭರ್ತಿ 18 ವರ್ಷ. ನಮ್ಮ ವೀರ ಯೋಧರಲ್ಲಿ 490 ಜನ ತಮ್ಮ ಪ್ರಾಣವನ್ನು ಭಾರತಾಂಬೆಯ ಚರಣಕಮಲದಲ್ಲಿ ಅರ್ಪಿಸಿಬಿಟ್ಟಿದ್ದರು. ಯಾಕೆ ಈ ಯುದ್ಧ ತುಂಬಾ ಪ್ರಾಮುಖ್ಯತೆ ಪಡೆಯುತ್ತೆ ಎಂದರೆ ಅಲ್ಲಿನ ಪ್ರತಿಕೂಲ ಪರಿಸ್ಥಿತಿಯ ಕಾರಣದಿಂದ. ಕಾರ್ಗಿಲ್ ಯುದ್ಧ ನಡೆದದ್ದು ಒಂದು ಸಮತಟ್ಟಾದ ರಣಭೂಮಿಯಲ್ಲಿ ಅಲ್ಲ. ನಾವು ಸಾಮಾನ್ಯವಾಗಿ ಈ ಬಾಹುಬಲಿ ಅಥವಾ ರಾಜ ಮಹಾರಾಜರ ಆಧಾರಿತ ಸಿನೆಮಾಗಳನ್ನು ನೋಡುವಾಗ ಯುದ್ಧಗಳಾಗುತ್ತಲ್ಲ, ಆ ಶೈಲಿಯಲ್ಲಿ ಇಲ್ಲಿ ಯುದ್ಧ ಆಗಿಲ್ಲ. ಬಹುಶ: ಈ ಕಾರ್ಗಿಲ್ ಪ್ರದೇಶವನ್ನು ನಾವು ಹತ್ತಿರದಿಂದ ನೋಡಿದರೆ ಅದರ ಗಂಭಿರತೆ ಅರ್ಥವಾಗುತ್ತದೆ. ಬೇಕಾದರೆ ನಿಮಗೆ ಒಂದು ಕಾಲ್ಪನಿಕ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತೇನೆ.

ಒಬ್ಬ ವ್ಯಕ್ತಿ ಹತ್ತನೆ ಮಹಡಿಯ ಬಾಲ್ಕನಿಯಲ್ಲಿ ನಿಂತಿದ್ದಾನೆ ಎಂದು ಅಂದುಕೊಳ್ಳಿ. ಇನ್ನೊಬ್ಬ ವ್ಯಕ್ತಿ ಅದೇ ಕಟ್ಟಡದ ಒಂದನೇ ಮಹಡಿಯ ಬಾಲ್ಕನಿಯಲ್ಲಿ ನಿಂತಿದ್ದಾನೆ ಎಂದು ಅಂದುಕೊಳ್ಳಿ. ಇಬ್ಬರ ಕೈಯಲ್ಲಿ ಮಿಶಿನ್ ಗನ್ ಇದೆ. ಪರಸ್ಪರ ಶೂಟೌಟ್ ಮಾಡುತ್ತಿದ್ದಾರೆ ಎಂದು ಅಂದುಕೊಳ್ಳಿ. ಆಗ ಯಾರಿಗೆ ಗೆಲ್ಲುವು ಸಿಗುತ್ತದೆ, ಯಾರು ಸೋತು ಹತರಾಗುತ್ತಾರೆ ಎಂದು ನಿಮಗೆ ಅನಿಸುತ್ತದೆ. ಸಂಶಯವೇ ಇಲ್ಲ, ಮೇಲಿನ ಮಹಡಿಯವ ಸುಲಭವಾಗಿ ಗೆದ್ದುಬಿಡುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ ನಡೆದಿತ್ತು ಕಾರ್ಗಿಲ್ ವಾರ್. ಪಾಕಿಸ್ತಾನ ಹತ್ತನೆ ಮಹಡಿಯಲ್ಲಿ ಇತ್ತು. ನಮ್ಮವರು ಒಂದನೇ ಮಹಡಿಯಲ್ಲಿ. ನಾವು ಕೆಳಗಿನಿಂದ ಮೇಲೆ ಹೋಗಿ ಅವರನ್ನು ಹೊಡೆದು ಆ ಜಾಗದಿಂದ ಅವರನ್ನು ಓಡಿಸಿ ನಂತರ ಅಲ್ಲಿ ವಿಜಯ ಪತಾಕೆ ಹಾರಿಸಬೇಕು. ಅದೇ ಪಾಕಿಸ್ತಾನಕ್ಕಾದರೆ ಭಾರತೀಯ ಯೋಧರು ಹತ್ತಿ ಮೇಲೆ ಬರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಆದ್ದರಿಂದ ಪಾಕಿಗಳಿಗೆ ಮೇಲೆ ನಿಂತು ನಮ್ಮೆಡೆ ಶೂಟ್ ಮಾಡುವುದು ಸುಲಭ.

ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಓರ್ವ ಯೋಧ ಹೇಳಿದ ಪ್ರಕಾರ ಭಾರತೀಯ ಸೈನಿಕರು ಪ್ರತಿ ದಿನ ಕತ್ತಲು ಆಗುವುದನ್ನೇ ಕಾಯುತ್ತಿದ್ದರು. ಕತ್ತಲಾಗುತ್ತಿದ್ದಂತೆ ತೆವಳಿಕೊಂಡು ಆದಷ್ಟು ಮೇಲೆ ಹೋಗಲು ಪ್ರಯತ್ನಿಸುತ್ತಿದ್ದರು. ಒಂದಿಷ್ಟು ಚಲನಕ್ರಿಯೆ ಜೋರಾಗಿ ನಡೆದರೆ ಮೇಲಿನಿಂದ ಪಾಕಿಗಳಿಗೆ ಸಂಶಯ ಬಂದು ನಮ್ಮತ್ತ ಗುಂಡು ಹಾರಿಸುತ್ತಿದ್ದರು. ಅಂತಹ ಹೊತ್ತಿನಲ್ಲಿ ಪಕ್ಕದ ಯೋಧ ಚೀರುತ್ತಾ ಪ್ರಾಣ ಬಿಟ್ಟದ್ದನ್ನು ನೋಡಿಯೂ ಏನು ಮಾಡಲಾಗದ ಸ್ಥಿತಿ. ಯಾಕೆಂದರೆ ಗುರಿ, ಪಕ್ಕದವನನ್ನು ಉಳಿಸುವುದಕ್ಕಿಂತ ದೇಶವನ್ನು ಕಾಪಾಡುವುದು. ಅದು ಸೈನಿಕನೊಬ್ಬನ ಕೆಚ್ಚು. ಕೇಳುತ್ತಾ ಇದ್ದರೆ ಮೈ ರೋಮಾಂಚನವಾಗಲ್ವಾ?

ಕಾರ್ಗಿಲ್ ಯುದ್ಧವನ್ನು “ಲಿಮಿಟೆಡ್ ವಾರ್” ಎಂದು ಉಲ್ಲೇಖಿಸಲಾಗುತ್ತದೆ. ಒಟ್ಟು 60 ದಿನಗಳ ತನಕ ನಡೆದ ಕದನವಿದು. ಅದರ ನಂತರ ಆಗಾಗ ಪಾಕಿಸ್ತಾನ ತನ್ನ ಸೋಲಿನ ನೋವನ್ನು ಮರೆಯಲು ಭಯೋತ್ಪಾದಕರನ್ನು ಗಡಿಯಾಚೆ ಕಳುಹಿಸಿ ನಮ್ಮ ದೇಶದ ಮೇಲೆ ಪರೋಕ್ಷ ಯುದ್ಧ ಸಾರುತ್ತಿದೆ. ಇದನ್ನು ಪ್ರಾಕ್ಸಿ ವಾರ್ ಎನ್ನುತ್ತೇವೆ. ಈಗಂತೂ ಅಮೇರಿಕಾ ನೇರವಾಗಿ ಪಾಕಿಸ್ತಾನವನ್ನು ಭಯೋತ್ಪಾದಕರ ಸ್ವರ್ಗ ಎನ್ನುವ ಮೂಲಕ ಜಾಗತಿಕವಾಗಿ ಪಾಕಿಸ್ತಾನದ ಮುಖವಾಡವನ್ನು ಕಳಚಿದೆ. ಈಗ ಒಂದು ವೇಳೆ ಯುದ್ಧ ನಡೆದರೂ ಚೀನಾ ಬಿಟ್ಟು ಬೇರೆ ದೇಶಗಳು ನಮ್ಮ ಬೆಂಬಲಕ್ಕೆ ನಿಲ್ಲಲಿವೆ. ಆದರೆ ಅದೇ ಹೊತ್ತಿನಲ್ಲಿ ಚೀನಾ ಇನ್ನೊಂದು ಭಾಗದಿಂದ ಆಕ್ರಮಣ ಮಾಡಿದರೆ ಏನು ಎನ್ನುವ ಚಿಂತನೆ ನಡೆಯುತ್ತಿದೆ. ಒಟ್ಟಿನಲ್ಲಿ ಕೇಂದ್ರ ಸರಕಾರ ಸಮರ್ಥ ಬೆಂಬಲ ನೀಡಿದರೆ ನಮ್ಮ ಯೋಧರು ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಶರಣಾಗುವುದಿಲ್ಲ ಎನ್ನುವುದು ನೂರಕ್ಕೆ ನೂರು ನಿಜ

0
Shares
  • Share On Facebook
  • Tweet It




Trending Now
ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
Tulunadu News September 15, 2025
ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
Tulunadu News September 15, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ
    • ಹೆದ್ದಾರಿ ಸಮಸ್ಯೆ ನೋಡಬೇಕಾದ ಸಂಸದರು, ಶಾಸಕರು ಏನು ಮಾಡುತ್ತಿದ್ದಾರೆ- ಹೆಗ್ಡೆ
    • ಮೋದಿಯಂತಹ ಪ್ರಧಾನಿ ನಮಗೆ ಸಿಕ್ಕಿದ್ರೆ ನಾವು ಅಭಿವೃದ್ಧಿಯಾಗುತ್ತಿದ್ವಿ - ನೇಪಾಳಿ ಪ್ರತಿಭಟನಾಕಾರ
    • ನಂಗೆ ಸ್ವಲ್ಪ ವಿಷ ಕೊಡಿ ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟ ದರ್ಶನ್ ಗೆ ಅಗತ್ಯ ಸೌಕರ್ಯ ನೀಡುವಂತೆ ನ್ಯಾಯಾಲಯ ಆದೇಶ!
    • ಮುಂದಿನ ಜನ್ಮದಲ್ಲಿ ಮುಸ್ಲಿಮನಾಗಿ ಹುಟ್ಟಲು ಆಸೆ- ಕೈ ಶಾಸಕ ಬಿ.ಕೆ.ಸಂಗಮೇಶ್ವರ್
    • ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ರಾಜೀನಾಮೆ!
  • Popular Posts

    • 1
      ಪಾಕ್ ವಿರುದ್ಧದ ಗೆಲುವನ್ನು ಭಾರತದ ಯೋಧರಿಗೆ ಅರ್ಪಿಸಿದ ಸೂರ್ಯ ಕುಮಾರ್ ಯಾದವ್!
    • 2
      ಹಿಮಾಚಲ ಪ್ರವಾಹ ಪೀಡಿತರಿಗೆ 5 ಕೋಟಿ ನೆರವು – ಸಿಎಂ ಸಿದ್ದರಾಮಯ್ಯ ನಿರ್ಧಾರಕ್ಕೆ ಬಿಜೆಪಿ ಆಕ್ರೋಶ
    • 3
      ವಿಷ್ಣುವರ್ಧನ್ ಹಾಗೂ ಬಿ ಸರೋಜಾ ದೇವಿಯವರಿಗೆ ಮರಣೋತ್ತರ "ಕರ್ನಾಟಕ ರತ್ನ" ಪ್ರಶಸ್ತಿ ಘೋಷಣೆ!
    • 4
      ಬಸ್ಸಿನಲ್ಲಿ ಮಗಳಿಗೆ ಲೈಂಗಿಕ ಕಿರುಕುಳ: ಬೆಂಗಳೂರಿನಲ್ಲಿ ಚಾಲಕನ ಬಟ್ಟೆ ಬಿಚ್ಚಿ ಥಳಿಸಿದ ತಾಯಿ
    • 5
      ಮದ್ದೂರು ಗಣೇಶ ಗಲಾಟೆಗೆ ಪೂರ್ತಿ ಮುಸ್ಲಿಮರೇ ಕಾರಣ: ಸಚಿವ ಚೆಲುವರಾಯ ಸ್ವಾಮಿ

  • Privacy Policy
  • Contact
© Tulunadu Infomedia.

Press enter/return to begin your search