• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಅತ್ಯಂತ ಕ್ಲಿಷ್ಟಕರ ಯುದ್ಧದ ಗೆಲುವಿಗೆ 18 ವರ್ಷ ತುಂಬಿತು!

TNN Correspondent Posted On July 26, 2017
0


0
Shares
  • Share On Facebook
  • Tweet It

ಬಹುಶ: ಒಂದು ತಲೆಮಾರಿಗೆ ಆ ದಿನದ ರೋಮಾಂಚನದ ಅನುಭವ ಆಗಿರಲಿಕ್ಕಿಲ್ಲ. ಭರ್ತಿ 18 ವರ್ಷ. ನಮ್ಮ ವೀರ ಯೋಧರಲ್ಲಿ 490 ಜನ ತಮ್ಮ ಪ್ರಾಣವನ್ನು ಭಾರತಾಂಬೆಯ ಚರಣಕಮಲದಲ್ಲಿ ಅರ್ಪಿಸಿಬಿಟ್ಟಿದ್ದರು. ಯಾಕೆ ಈ ಯುದ್ಧ ತುಂಬಾ ಪ್ರಾಮುಖ್ಯತೆ ಪಡೆಯುತ್ತೆ ಎಂದರೆ ಅಲ್ಲಿನ ಪ್ರತಿಕೂಲ ಪರಿಸ್ಥಿತಿಯ ಕಾರಣದಿಂದ. ಕಾರ್ಗಿಲ್ ಯುದ್ಧ ನಡೆದದ್ದು ಒಂದು ಸಮತಟ್ಟಾದ ರಣಭೂಮಿಯಲ್ಲಿ ಅಲ್ಲ. ನಾವು ಸಾಮಾನ್ಯವಾಗಿ ಈ ಬಾಹುಬಲಿ ಅಥವಾ ರಾಜ ಮಹಾರಾಜರ ಆಧಾರಿತ ಸಿನೆಮಾಗಳನ್ನು ನೋಡುವಾಗ ಯುದ್ಧಗಳಾಗುತ್ತಲ್ಲ, ಆ ಶೈಲಿಯಲ್ಲಿ ಇಲ್ಲಿ ಯುದ್ಧ ಆಗಿಲ್ಲ. ಬಹುಶ: ಈ ಕಾರ್ಗಿಲ್ ಪ್ರದೇಶವನ್ನು ನಾವು ಹತ್ತಿರದಿಂದ ನೋಡಿದರೆ ಅದರ ಗಂಭಿರತೆ ಅರ್ಥವಾಗುತ್ತದೆ. ಬೇಕಾದರೆ ನಿಮಗೆ ಒಂದು ಕಾಲ್ಪನಿಕ ಚಿತ್ರವನ್ನು ಕಟ್ಟಿಕೊಡುವ ಪ್ರಯತ್ನ ಮಾಡುತ್ತೇನೆ.

ಒಬ್ಬ ವ್ಯಕ್ತಿ ಹತ್ತನೆ ಮಹಡಿಯ ಬಾಲ್ಕನಿಯಲ್ಲಿ ನಿಂತಿದ್ದಾನೆ ಎಂದು ಅಂದುಕೊಳ್ಳಿ. ಇನ್ನೊಬ್ಬ ವ್ಯಕ್ತಿ ಅದೇ ಕಟ್ಟಡದ ಒಂದನೇ ಮಹಡಿಯ ಬಾಲ್ಕನಿಯಲ್ಲಿ ನಿಂತಿದ್ದಾನೆ ಎಂದು ಅಂದುಕೊಳ್ಳಿ. ಇಬ್ಬರ ಕೈಯಲ್ಲಿ ಮಿಶಿನ್ ಗನ್ ಇದೆ. ಪರಸ್ಪರ ಶೂಟೌಟ್ ಮಾಡುತ್ತಿದ್ದಾರೆ ಎಂದು ಅಂದುಕೊಳ್ಳಿ. ಆಗ ಯಾರಿಗೆ ಗೆಲ್ಲುವು ಸಿಗುತ್ತದೆ, ಯಾರು ಸೋತು ಹತರಾಗುತ್ತಾರೆ ಎಂದು ನಿಮಗೆ ಅನಿಸುತ್ತದೆ. ಸಂಶಯವೇ ಇಲ್ಲ, ಮೇಲಿನ ಮಹಡಿಯವ ಸುಲಭವಾಗಿ ಗೆದ್ದುಬಿಡುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ ನಡೆದಿತ್ತು ಕಾರ್ಗಿಲ್ ವಾರ್. ಪಾಕಿಸ್ತಾನ ಹತ್ತನೆ ಮಹಡಿಯಲ್ಲಿ ಇತ್ತು. ನಮ್ಮವರು ಒಂದನೇ ಮಹಡಿಯಲ್ಲಿ. ನಾವು ಕೆಳಗಿನಿಂದ ಮೇಲೆ ಹೋಗಿ ಅವರನ್ನು ಹೊಡೆದು ಆ ಜಾಗದಿಂದ ಅವರನ್ನು ಓಡಿಸಿ ನಂತರ ಅಲ್ಲಿ ವಿಜಯ ಪತಾಕೆ ಹಾರಿಸಬೇಕು. ಅದೇ ಪಾಕಿಸ್ತಾನಕ್ಕಾದರೆ ಭಾರತೀಯ ಯೋಧರು ಹತ್ತಿ ಮೇಲೆ ಬರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಆದ್ದರಿಂದ ಪಾಕಿಗಳಿಗೆ ಮೇಲೆ ನಿಂತು ನಮ್ಮೆಡೆ ಶೂಟ್ ಮಾಡುವುದು ಸುಲಭ.

ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ ಓರ್ವ ಯೋಧ ಹೇಳಿದ ಪ್ರಕಾರ ಭಾರತೀಯ ಸೈನಿಕರು ಪ್ರತಿ ದಿನ ಕತ್ತಲು ಆಗುವುದನ್ನೇ ಕಾಯುತ್ತಿದ್ದರು. ಕತ್ತಲಾಗುತ್ತಿದ್ದಂತೆ ತೆವಳಿಕೊಂಡು ಆದಷ್ಟು ಮೇಲೆ ಹೋಗಲು ಪ್ರಯತ್ನಿಸುತ್ತಿದ್ದರು. ಒಂದಿಷ್ಟು ಚಲನಕ್ರಿಯೆ ಜೋರಾಗಿ ನಡೆದರೆ ಮೇಲಿನಿಂದ ಪಾಕಿಗಳಿಗೆ ಸಂಶಯ ಬಂದು ನಮ್ಮತ್ತ ಗುಂಡು ಹಾರಿಸುತ್ತಿದ್ದರು. ಅಂತಹ ಹೊತ್ತಿನಲ್ಲಿ ಪಕ್ಕದ ಯೋಧ ಚೀರುತ್ತಾ ಪ್ರಾಣ ಬಿಟ್ಟದ್ದನ್ನು ನೋಡಿಯೂ ಏನು ಮಾಡಲಾಗದ ಸ್ಥಿತಿ. ಯಾಕೆಂದರೆ ಗುರಿ, ಪಕ್ಕದವನನ್ನು ಉಳಿಸುವುದಕ್ಕಿಂತ ದೇಶವನ್ನು ಕಾಪಾಡುವುದು. ಅದು ಸೈನಿಕನೊಬ್ಬನ ಕೆಚ್ಚು. ಕೇಳುತ್ತಾ ಇದ್ದರೆ ಮೈ ರೋಮಾಂಚನವಾಗಲ್ವಾ?

ಕಾರ್ಗಿಲ್ ಯುದ್ಧವನ್ನು “ಲಿಮಿಟೆಡ್ ವಾರ್” ಎಂದು ಉಲ್ಲೇಖಿಸಲಾಗುತ್ತದೆ. ಒಟ್ಟು 60 ದಿನಗಳ ತನಕ ನಡೆದ ಕದನವಿದು. ಅದರ ನಂತರ ಆಗಾಗ ಪಾಕಿಸ್ತಾನ ತನ್ನ ಸೋಲಿನ ನೋವನ್ನು ಮರೆಯಲು ಭಯೋತ್ಪಾದಕರನ್ನು ಗಡಿಯಾಚೆ ಕಳುಹಿಸಿ ನಮ್ಮ ದೇಶದ ಮೇಲೆ ಪರೋಕ್ಷ ಯುದ್ಧ ಸಾರುತ್ತಿದೆ. ಇದನ್ನು ಪ್ರಾಕ್ಸಿ ವಾರ್ ಎನ್ನುತ್ತೇವೆ. ಈಗಂತೂ ಅಮೇರಿಕಾ ನೇರವಾಗಿ ಪಾಕಿಸ್ತಾನವನ್ನು ಭಯೋತ್ಪಾದಕರ ಸ್ವರ್ಗ ಎನ್ನುವ ಮೂಲಕ ಜಾಗತಿಕವಾಗಿ ಪಾಕಿಸ್ತಾನದ ಮುಖವಾಡವನ್ನು ಕಳಚಿದೆ. ಈಗ ಒಂದು ವೇಳೆ ಯುದ್ಧ ನಡೆದರೂ ಚೀನಾ ಬಿಟ್ಟು ಬೇರೆ ದೇಶಗಳು ನಮ್ಮ ಬೆಂಬಲಕ್ಕೆ ನಿಲ್ಲಲಿವೆ. ಆದರೆ ಅದೇ ಹೊತ್ತಿನಲ್ಲಿ ಚೀನಾ ಇನ್ನೊಂದು ಭಾಗದಿಂದ ಆಕ್ರಮಣ ಮಾಡಿದರೆ ಏನು ಎನ್ನುವ ಚಿಂತನೆ ನಡೆಯುತ್ತಿದೆ. ಒಟ್ಟಿನಲ್ಲಿ ಕೇಂದ್ರ ಸರಕಾರ ಸಮರ್ಥ ಬೆಂಬಲ ನೀಡಿದರೆ ನಮ್ಮ ಯೋಧರು ಯಾವುದೇ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಶರಣಾಗುವುದಿಲ್ಲ ಎನ್ನುವುದು ನೂರಕ್ಕೆ ನೂರು ನಿಜ

0
Shares
  • Share On Facebook
  • Tweet It




Trending Now
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
Tulunadu News December 23, 2025
ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
Tulunadu News December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
    • ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
  • Popular Posts

    • 1
      ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • 2
      ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • 3
      ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • 4
      ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • 5
      ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!

  • Privacy Policy
  • Contact
© Tulunadu Infomedia.

Press enter/return to begin your search