• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ರಾಜ್ಯದಲ್ಲಿ ಬಿಜೆಪಿ ಬಂದು 9 ತಿಂಗಳಾಯಿತು, ಗುಡ್ ನ್ಯೂಸ್ ಇಲ್ಲ!!

Hanumantha Kamath Posted On February 22, 2020
0


0
Shares
  • Share On Facebook
  • Tweet It

ಕರ್ನಾಟಕದಲ್ಲಿ ಸರಕಾರ ಬದಲಾಗಿ ಒಂಭತ್ತು ತಿಂಗಳು ಆಗುತ್ತಾ ಬಂದಿದೆ. ಸಾಮಾನ್ಯವಾಗಿ ಒಂಭತ್ತು ತಿಂಗಳು ಆಗುತ್ತಾ ಬಂದರೆ ಗುಡ್ ನ್ಯೂಸ್ ಯಾವಾಗ ಎಂದು ನೋಡಿದವರು ಕೇಳುತ್ತಾರೆ. ಆದರೆ ಸದ್ಯದ ನಮ್ಮ ರಾಜ್ಯ ಸರಕಾರವನ್ನು ನೋಡಿದರೆ ಗುಡ್ ಕೂಡ ಇಲ್ಲ, ನ್ಯೂಸ್ ಕೂಡ ಇಲ್ಲ ಎನ್ನುವ ಪರಿಸ್ಥಿತಿ. ನಾನೇಕೆ ಹಾಗೆ ಹೇಳುತ್ತಿದ್ದೇನೆ ಎಂದು ನೀವು ಕೇಳಬಹುದು. ಬೇಕಾದರೆ ನೀವೆ ನೋಡಿ. ಇದು ನಿಮ್ಮ ಅನುಭವಕ್ಕೂ ಬಂದಿರಬಹುದು. ಸಿಂಪಲ್ ಉದಾಹರಣೆಗಳನ್ನು ತೆಗೆದುಕೊಳ್ಳೋಣ. ಆರ್ ಟಿಒ ಕಚೇರಿಯಲ್ಲಿ ನಿಮ್ಮ ಹಳೆ ಡ್ರೈವಿಂಗ್ ಲೈಸೆನ್ಸ್ ಅನ್ನು ಸ್ಮಾರ್ಟ್ ಕಾರ್ಡ್ ಗೆ ಬದಲಾಯಿಸಲು ನೀವು ನಿರ್ಧರಿಸಿದ್ದಿರಿ ಎಂದು ಇಟ್ಟುಕೊಳ್ಳೋಣ. ಅಲ್ಲಿ ಆರ್ ಟಿಒ ಕಚೇರಿಯಲ್ಲಿ ಸ್ಮಾರ್ಟ್ ಕಾರ್ಡ್ ಮಾಡುವ ಕೆಲಸವನ್ನು ಹೊರಗುತ್ತಿಗೆಗೆ ಕೊಟ್ಟಿದ್ದಾರೆ. ನೀವು ನೇರ ದಾರಿಯಲ್ಲಿ ಹೋದರೆ ಕನಿಷ್ಟ 2-3 ತಿಂಗಳು ಆದರೂ ಅವರು ತೆಗೆದುಕೊಳ್ಳುತ್ತಾರೆ. ಅದೇ ನೀವು ಬ್ರೋಕರ್ ಅವರನ್ನು ಹಿಡಿದುಕೊಂಡು ಹೋದರೆ 2-3 ದಿನಗಳು ಕೂಡ ಬೇಕಂತಿಲ್ಲ. ಇದು ಹೇಗೆ ಸಾಧ್ಯ. ಬ್ರೋಕರ್ ಗಳು ಹೋದ ಕೂಡಲೇ ಆರ್ ಟಿಒ ಕಚೇರಿಯವರೆಗೆ ಎರಡು ಇದ್ದ ಕೈಗಳು ನಾಲ್ಕು ಆಗುತ್ತಾ?

ಆರ್ ಟಿಒ ಕಚೇರಿಯಿಂದ ಸ್ವಲ್ಪ ದೂರ ನಡೆದುಕೊಂಡು ಬಂದರೆ ಅಲ್ಲಿ ನಿಮಗೆ ತಾಲೂಕು ಪಂಚಾಯತ್ ಕಚೇರಿ ಸಿಗುತ್ತದೆ. ಅಲ್ಲಿ ಜನಸಾಮಾನ್ಯರಿಗೆ ಅತ್ಯವಶ್ಯಕವಾಗಿ ಬೇಕಾಗಿರುವ ಆದಾಯ ಪ್ರಮಾಣಪತ್ರ, ಜಾತಿ ಪ್ರಮಾಣಪತ್ರ ಸಹಿತ ಇತರ ಅನೇಕ ಉಪಯುಕ್ತ ಪ್ರಮಾಣಪತ್ರಗಳನ್ನು ಮಾಡಿಕೊಡಲಾಗುತ್ತದೆ. ಆದರೆ ಯಾವಾಗ? ನೀವು ಗಾಂಧಿಮಾರ್ಗದಲ್ಲಿ ಹೋದರೆ ಯಾವಾಗ ಸಿಗುತ್ತದೆ ಎನ್ನುವುದು ಯಾವ ಜ್ಯೋತಿಷ್ಯಿಗೂ ಹೇಳುವುದು ಕಷ್ಟ. ಅದೇ ಬ್ರೋಕರ್ ಮೂಲಕ ಹೋದರೆ ನೀವು ನಿಮ್ಮ ಆದಾಯವನ್ನು ಲೆಕ್ಕ ಹಾಕುವಷ್ಟರ ಒಳಗೆ ಪ್ರಮಾಣಪತ್ರ ಕೈಯಲ್ಲಿ ಇರುತ್ತದೆ. ನಮ್ಮ ಸರಕಾರಿ ಕಚೇರಿಗಳಲ್ಲಿ ನೀವು ಕೆಲಸ ಮಾಡಿಸಲು ಹೋದರೆ ಅಲ್ಲಿ ತ್ರೀ ಟೈಯರ್ ಸಿಸ್ಟಮ್ ಇದೆ. ಒಂದು ಬಸ್ಸಿನ
ವೇಗದಲ್ಲಿ ಮಾಡಿಸುವುದು. ಇನ್ನೊಂದು ರೈಲಿನ ವೇಗದಲ್ಲಿ ಮಾಡಿಸುವುದು. ಮತ್ತೊಂದು ವಿಮಾನದ ವೇಗದಲ್ಲಿ ಮಾಡಿಸುವುದು. ಬಸ್ಸಿನ ವೇಗ ಎಂದರೆ ನ್ಯಾಯದ ಮಾರ್ಗ. ಅದು ಎಷ್ಟು ದಿನದಲ್ಲಿ ಕೆಲಸ ಆಗುತ್ತದೆ ಎಂದು ಹೇಳುವುದು ಕಷ್ಟ. ರೈಲಿನ ವೇಗ ಎಂದರೆ ಬಸ್ಸಿಗಿಂತ ಉತ್ತಮ, ಆರಾಮದಾಯಕ ಮತ್ತು ಎಸಿ ಆದರೆ ಖರ್ಚು ಸ್ವಲ್ಪ ಜಾಸ್ತಿ. ವಿಮಾನದ ವೇಗ ಎಂದರೆ ನಿಮಗೆ ಇಂತಿಷ್ಟೇ ಸಮಯದ ಒಳಗೆ ವೇಗವಾಗಿ ಆಗಬೇಕು, ಹಣ ಎಷ್ಟು ಖರ್ಚಾದರೂ ಪರವಾಗಿಲ್ಲ ಎನ್ನುವ ದಾರಿ. ಉದಾಹರಣೆಗೆ ಪಾಲಿಕೆಯ ನಗರ ಯೋಜನಾ ವಿಭಾಗಕ್ಕೆ ನೀವು ಹೋಗುತ್ತೀರಿ. ನೀವು ಬಸ್ಸಿನ ವೇಗದಲ್ಲಿ ಹೋಗಲು ತೀರ್ಮಾನಿಸಿದ್ದೀರಿ ಎಂದರೆ ನಿಮಗೆ ಒಂದು ಕಟ್ಟಡ ಕಟ್ಟಬೇಕಾದರೆ ಕಟ್ಟಡ ನಿರ್ಮಾಣ ಪರವಾನಿಗೆ ಸಿಗಲು ಕನಿಷ್ಟ 2-3 ತಿಂಗಳಾದರೂ ಬೇಕಾಗುತ್ತದೆ. ಅದೇ ನಿಮ್ಮ ಮರುದಿನ ಅರ್ಜಿ ಹಾಕಿದ ಬಿಲ್ಡರ್ ಒಬ್ಬರಿಗೆ ತಮ್ಮ ವಸತಿ ಸಮುಚ್ಚಯ ಕಟ್ಟಲು 10-15 ದಿನಗಳ ಒಳಗೆ ಅದೇ ಲೈಸೆನ್ಸ್ ಸಿಗುತ್ತದೆ. ಹೇಗೆಂದರೆ ಆ ಬಿಲ್ಡರ್ ವಿಮಾನದ ವೇಗಕ್ಕೆ ಒಪ್ಪಿಕೊಂಡಿದ್ದಾರೆ.

ಎಲ್ಲವೂ ಹಾಗೆನೆ. ನೀವು ನೇರವಾಗಿ ಖಾತಾ ಮಾಡಿಸಲು ಹೋದರೆ ನಿಮಗೆ ಕನಿಷ್ಟ 21 ದಿನಗಳು ತಗಲುತ್ತವೆ. ಅದೇ ಬ್ರೋಕರ್ ಮೂಲಕ ಹೋದರೆ ಬೆಳಿಗ್ಗೆ ಹೋಗಿ ಸಂಜೆಯ ಒಳಗೆ ಆಗುತ್ತದೆ. ನೀವು ಹೋದರೆ ಚಲನ್ ಮಾತ್ರ ಕಟ್ಟಬೇಕು. ಉದಾಹರಣೆಗೆ ಹನುಮಂತನ ಹೆಸರಿನಿಂದ ರಾಮನ ಹೆಸರಿಗೆ ಆಸ್ತಿ ನೋಂದಾವಣೆ ಆಗಬೇಕು ಎಂದು ಇಟ್ಟುಕೊಳ್ಳೋಣ. ಒಂದು ವೇಳೆ ಆಸ್ತಿಯ ಮೌಲ್ಯ 37 ಲಕ್ಷ ರೂಪಾಯಿ ಆಗಿದ್ದಲ್ಲಿ ಅದಕ್ಕೆ 2% ನೊಂದಾವಣಿ ಶುಲ್ಕ ಕಟ್ಟಿದರೆ ನಿಮಗೆ 21 ದಿನಗಳಲ್ಲಿ ಕೆಲಸ ಆಗುತ್ತದೆ. ಅದೇ ನೀವು ಒಬ್ಬ ಬ್ರೋಕರ್ ಹಿಡಿದು ಅವರಿಗೆ 6-7 ಸಾವಿರ ರೂಪಾಯಿ ಕೊಟ್ಟರೆ ಕೆಲಸ ಎಷ್ಟು ಬೇಗ ಆಗುತ್ತೆ ಎಂದರೆ ನಿಮಗೆ ನಂಬಲು ಸಾಧ್ಯವಾಗುವುದಿಲ್ಲ. ಈ ಭ್ರಷ್ಟಾಚಾರದ ವ್ಯವಸ್ಥೆ ಕಾಂಗ್ರೆಸ್ ಸರಕಾರದಲ್ಲಿಯೂ ಇತ್ತು. ನಂತರ ಮೈತ್ರಿ ಸರಕಾರದಲ್ಲಿಯೂ ಮುಂದುವರೆದಿತ್ತು. ಬಿಜೆಪಿಯವರು ಇದನ್ನು ಹೊಡೆದು ಹಾಕಿ ಜನಸಾಮಾನ್ಯರಿಗೆ ಭ್ರಷ್ಟ ರಹಿತ ವ್ಯವಸ್ಥೆ ಮಾಡಿಕೊಡುತ್ತಾರೆ ಎಂದು ನಂಬಲಾಗಿತ್ತು. ಆದರೆ ಅವರು ಬಂದು 9 ತಿಂಗಳು ಆದರೂ ಪರಿಸ್ಥಿತಿ ಹಾಗೇ ಇದೆ. ಇದಕ್ಕೇನು ಕಾರಣ?
ವಿಷಯ ಏನೆಂದರೆ ಹಸೆಮಣೆಯಲ್ಲಿ ಕುಳಿತ ಮದುಮಗ ಮಾತ್ರ ಬೇರೆಯಾಗಿದ್ದಾನೆ. ಆದರೆ ವಾಲಗ ಊದುವವರು, ಮಂತ್ರ ಹೇಳುವವರು, ಪೆಂಡಾಲ್ ಹಾಕುವವರು, ಅಡುಗೆಯವರು, ಫೋಟೋ, ವಿಡಿಯೋ ಹಿಂದಿನವರೇ ಆಗಿದ್ದಲ್ಲಿ ಮುಂಚೆ ಹೇಗಿತ್ತೋ ಅದೇ ಮುಂದುವರೆಯುತ್ತದೆ. ಇಚ್ಚಾಶಕ್ತಿ ಮತ್ತು ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಡುವ ಸಾಮರ್ತ್ಯ ಯಾರಿಗೆ ಇರಬೇಕೋ ಅವರು ಎಲ್ಲರನ್ನು ಖುಷಿ ಮಾತ್ರ ಮಾಡುತ್ತಾ ಓಡಾಡುತ್ತಿದ್ದರೆ ಅತ್ತ ಚಪ್ಪರ ಬಿದ್ದು ಹೋದದ್ದು ಗೊತ್ತೆ ಆಗಲಿಕ್ಕಿಲ್ಲ!

0
Shares
  • Share On Facebook
  • Tweet It




Trending Now
ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
Hanumantha Kamath October 29, 2025
ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
Hanumantha Kamath October 28, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
  • Popular Posts

    • 1
      ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • 2
      ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • 3
      ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • 4
      ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!

  • Privacy Policy
  • Contact
© Tulunadu Infomedia.

Press enter/return to begin your search