• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಇ-ಖಾತಾ ಮಾಡಿಸಲು ಮಂಗಳೂರಿನಲ್ಲಿ 50% ಪ್ರಾಪರ್ಟಿ ಐಡಿಗೆ ಆಗಿಲ್ಲ!!

Hanumantha Kamath Posted On June 19, 2020


  • Share On Facebook
  • Tweet It

ಹಿಂದೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಖಾತಾ ಪಡೆದುಕೊಳ್ಳಲು ಜಮೀನು ನೊಂದಾವಣೆ ಪತ್ರ, ಜಮೀನಿನಲ್ಲಿ ಕಟ್ಟಡ ಇದೆ ಎಂದಾದರೆ ಕಟ್ಟಡ ತೆರಿಗೆ ಶುಲ್ಕ ಪಾವತಿಸಿದ ರಸೀದಿ ಕೊಟ್ಟರೆ ನನ್ನ ಹೆಸರಿನಲ್ಲಿ ಇದ್ದ ಮನೆ ಅಥವಾ ಜಾಗವನ್ನು ಇನ್ನೊಬ್ಬನ ಹೆಸರಿನಲ್ಲಿ ನಾನು ಮಾಡಬಹುದಿತ್ತು. ಆದರೆ ಈಗ ಹಾಗೆ ಮಾಡಲಾಗುವುದಿಲ್ಲ. ಪ್ರಸ್ತುತ ಇ-ಖಾತಾ ಚಾಲ್ತಿಯಲ್ಲಿದೆ. ನಾನು ಆಧುನೀಕರಣಕ್ಕೆ ವಿರೋಧಿಯಲ್ಲ. ಡಿಜಿಟಲ್ ವ್ಯವಸ್ಥೆ ಆಗಬೇಕು. ಆದರೆ ಪಾಲಿಕೆಯ ಕಂದಾಯ ವಿಭಾಗದಲ್ಲಿ ಸೂಕ್ತ ವ್ಯವಸ್ಥೆ ಆಗದೇ ಇದ್ದರೆ ಈ ಹೊಸ ಯೋಜನೆ ಜನರಿಗೆ ಮತ್ತು ಅಲ್ಲಿನ ಸಿಬ್ಬಂದಿಗಳಿಗೆ ಎಷ್ಟರಮಟ್ಟಿಗೆ ತಲೆನೋವು ಎಂದು ಈಗ ವಿವರಿಸುತ್ತೇನೆ.
ಮೊದಲನೇಯದಾಗಿ ಪಾಲಿಕೆಯ ಕಂದಾಯ ವಿಭಾಗದಲ್ಲಿ ಅಗತ್ಯಕ್ಕೆ ಬೇಕಾದಷ್ಟು ಸ್ಟಾಫ್ ಇಲ್ಲ. ಇ-ಖಾತಾ ಆಗಬೇಕಾದರೆ ಇದಕ್ಕೆ ಬೇಕಾದ ದಾಖಲೆಗಳು ಸ್ಕ್ಯಾನ್ ಆಗಬೇಕು. ಸ್ಕ್ಯಾನ್ ಮಾಡಲು ಅಲ್ಲಿ ಒಬ್ಬರೇ ಇರುವುದು. ದಿನಕ್ಕೆ ಐವತ್ತು ಜನರು ಇ-ಖಾತಾ ಮಾಡಿಸಲು ಬಂದರೆ ಅಲ್ಲಿ ಒಬ್ಬನಿಂದ ಸಾಧ್ಯವಿಲ್ಲ. ಹಳೇ ದಾಖಲೆಗಳನ್ನು ಇ-ಖಾತಾ ಮಾಡಿಸುವಾಗ ಅದರಲ್ಲಿ ಪೇಪರ್ಸ್ ಜಾಸ್ತಿ ಇರುತ್ತದೆ. ಎಲ್ಲರದ್ದೂ ಇ-ಖಾತಾ ಆದ್ದಲ್ಲಿ ಆಗ ಭವಿಷ್ಯದಲ್ಲಿ ಕಂದಾಯ ವಿಭಾಗ ಪೇಪರ್ ಲೆಸ್ ಆಗಬಹುದು. ಆದರೆ ಅದಕ್ಕಿಂತ ಮೊದಲು ಪ್ರತಿಯೊಂದು ಖಾತಾ ಡಿಜಿಟಲ್ ಆಗಬೇಕಾದರೆ ಏನೇನೂ ಆಗಬೇಕು, ಹೇಳುತ್ತೇನೆ. ಕೇಳಿ. ಸ್ಕ್ಯಾನ್ ಮಾಡಿದ ನಂತರ ಅದು ಕೇಸ್ ವರ್ಕರ್ ಅವರ ಬಳಿ ಬರುತ್ತದೆ. ಕೇಸ್ ವರ್ಕರ್ ನಿಂದ ಅದು ಸೂಪರಿಟೆಂಡೆಂಟ್ ಅವರ ಕೈಗೆ ಹೋಗುತ್ತದೆ. ಸೂಪರ್ ಟೆಂಡೆಂಟ್ ನವರಿಂದ ಅದು ಎಆರ್ ಒ ಅವರಿಗೆ ಹೋಗುತ್ತದೆ. ಎಆರ್ ಒ ಅವರಿಂದ ಆರ್ ಒ ಅವರಿಗೆ ಕೊನೆಯದಾಗಿ ಬಂದು ತಲುಪುತ್ತದೆ. ಈಗ ಹೊಸದಾಗಿ ಇ-ಖಾತಾ ಮಾಡಿಸುವುದು ಒಕೆ. ಆದರೆ ಈಗಾಗಲೇ ಮನಪಾದ ಲಾಲ್ ಭಾಗ್, ಕದ್ರಿ, ಸುರತ್ಕಲ್ ಕಚೇರಿಗಳಲ್ಲಿ ಈಗಾಗಲೇ 500 ಕ್ಕೂ ಮಿಕ್ಕಿ ಖಾತಾ ಮಾಡಿಸಲು ದಾಖಲೆಗಳು ಕಾಯುತ್ತಾ ಕುಳಿತಿವೆ. ಹಾಗಾದರೆ ಅವುಗಳನೇ ಇ-ಖಾತಾ ಮಾಡಿಸಬಹುದಲ್ಲ. ಇಲ್ಲ, ಇ-ಖಾತಾ ಮಾಡಿಸುವ ಪ್ರಕ್ರಿಯೆನೆ ಬೇರೆ ಇದೆ. ಇ-ಖಾತಾದಲ್ಲಿ ಮಾಡಿಸುವಾಗ ಜಾಗ ಅಥವಾ ಮನೆಯ ಫೋಟೋ ನೀಡಬೇಕು. ನೀವು ನಿಮ್ಮ ಜಾಗ ಅಥವಾ ಮನೆಯ ಬಳಿ ನಿಂತು ಸ್ವತ್ತು ಕಾಣಿಸುವಂತೆ ಫೋಟೋ ಮತ್ತು ನಿಮ್ಮ ಪಾಸ್ ಪೋರ್ಟ್ ಸೈಜ್ ಫೋಟೋ ಕೂಡ ನೀಡಬೇಕು. ಆದರೆ ಈಗಾಗಲೇ ಖಾತಾ ಮಾಡಿಸಲು ಕೊಟ್ಟವರು ಈ ಫೋಟೋಗಳ ವಹಿವಾಟಿಗೆ ಹೋಗಿಯೇ ಇಲ್ಲ. ಏಕೆಂದರೆ ಅಗತ್ಯವಿರಲಿಲ್ಲ.
ಇನ್ನು ಇ-ಖಾತಾ ಡಿಜಿಟಲ್ ಫಾರಂ ತುಂಬುವಾಗ ಪ್ರಾಪರ್ಟಿ ಐಡಿ ಕಾಲಂ ಫೀಲ್ ಮಾಡಬೇಕು. ಪಾಲಿಕೆಯ ವ್ಯಾಪ್ತಿಯಲ್ಲಿ ಎಲ್ಲಾ ಆಸ್ತಿಗೆ ನಂಬರ್ ಕೊಟ್ಟಿದ್ದಾರೆ. 10 ಮನೆಗೆ 10 ನಂಬರ್ ಇರುತ್ತದೆ. ಆದರೆ ಮಂಗಳೂರಿನಲ್ಲಿ 50% ಪ್ರಾಪರ್ಟಿ ಐಡಿ ಆಗಿಲ್ಲ. ಆ ಕಾಲಂ ತುಂಬದಿದ್ದರೆ ಫಾರಂ ಮುಂದೆ ಹೋಗುವುದಿಲ್ಲ. ಸದ್ಯ ಯಾವುದೋ ಒಂದು ನಂಬರ್ ಹಾಕಿ ಫಾರಂ ತುಂಬಿಸಿದ್ದಾರೆ ಎಂದೇ ಇಟ್ಟುಕೊಳ್ಳೋಣ. ಆಗ ಮುಂದೆ ಆ ಜಾಗ ಸರ್ವೆಗೆ ಒಳಪಟ್ಟು ಹೊಸ ನಂಬ್ರ ನೀಡಿದಾಗ ಹಿಂದೆ ಸಿಕ್ಕಿದ ನಂಬ್ರ ಮ್ಯಾಚ್ ಆಗುವುದಿಲ್ಲ. ಆಗ ಮಾಲೀಕರು ಮತ್ತೆ ಸಮಸ್ಯೆಗೆ ಬೀಳುತ್ತಾರೆ. ಈಗ ಅರ್ಜೆಂಟಲ್ಲಿ ಯಾವುದೋ ನಂಬ್ರ ಕೊಟ್ಟು ಮುಗಿಸಿದರೆ ನಂತರ ನಿಜವಾಗಿಯೂ ಸರ್ವೆ ಆಗಿ ನಂಬ್ರ ಬಂದಾಗ ಆಗುವ ಎಡವಟ್ಟು ಊಹಿಸಿ. ಇದೆಲ್ಲಾ ಒಂದು ಸಮಸ್ಯೆಯಾದರೆ ಇ-ವ್ಯಾಪಾರ್ ಮತ್ತು ಇ-ನಿರ್ಮಾಣ್ ಎನ್ನುವ ಎರಡು ಸಾಫ್ಟ್ ವೇರ್ ಅನುಷ್ಠಾನಕ್ಕೆ ಬಂದಿದೆ. ಇ-ವ್ಯಾಪಾರ್ ನಲ್ಲಿ ಟ್ರೇಡ್ ಲೈಸೆನ್ಸ್ ಗೆ ಸಂಬಂಧಪಟ್ಟ ಕೆಲಸಗಳಾದರೆ, ಇ-ನಿರ್ಮಾಣದಲ್ಲಿ ಕಟ್ಟಡ ಕಟ್ಟಲು ಬೇಕಾಗುವ ಲೈಸೆನ್ಸ್ ಬಗ್ಗೆ ಪ್ರಕ್ರಿಯೆ ನಡೆಸಬಹುದು. ಆದರೆ ಅದು ನಮ್ಮ ಪಾಲಿಕೆಯಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ಬಂದಿಲ್ಲ. ಆದರೆ ಸುಳ್ಯ, ಪುತ್ತೂರಿನಲ್ಲಿ ಇ-ನಿರ್ಮಾಣ್ ಮತ್ತು ಇ-ವ್ಯಾಪಾರ್ ಮೂಲಕವೇ ಕೆಲಸ ನಡೆಯುತ್ತಿದೆ. ಯಾವುದು ಕಟ್ಟುನಿಟ್ಟಾಗಿ ನಡೆಯಬೇಕೋ ಅದು ನಮ್ಮ ಪಾಲಿಕೆಯಲ್ಲಿ ನಡೆಯುವುದಿಲ್ಲ. ಏಕೆಂದರೆ ಕಟ್ಟಡ ಕಟ್ಟುವ ಬಿಲ್ಡರ್ ಗಳ ಪರವಾಗಿ ಇರಬೇಕಾಗಿರುವುದರಿಂದ ಇಲ್ಲಿಯ ತನಕ ಪಾಲಿಕೆಯಲ್ಲಿ ಬಿಲ್ಡರ್ ಗಳಿಗೆ ಕಿರಿಕಿರಿಯಾಗುವಂತಹ  ಯಾವುದೇ ಯೋಜನೆಗಳು ಬರುತ್ತಿರಲಿಲ್ಲ. ಆದರೆ ಇನ್ನು ಮುಂದೆ ಹಾಗೆ ಆಗಲಾರದು. ಬಿಲ್ಡರ್ ಗಳು ಕೂಡ ಕಾನೂನಿನ ಪ್ರಕ್ರಿಯೆ ಒಳಗೆ ಬರಲೇಬೇಕು. ಸೂಕ್ತ ನಿಯಮಗಳನ್ನು ಪಾಲಿಸುವಂತಾಗಲೇಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅಧಿಕಾರಿಗಳಿಗೆ ಸಭೆ ನಡೆಸಿ ಸೂಕ್ತ ಎಚ್ಚರಿಕೆ ನೀಡಿದ್ದಾರೆ!
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search