• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಮೋದಿಯವರೇ ಇವರಿಗೆ ಹಣದ ಜೊತೆ ಬುದ್ಧಿಯೂ ಕಳುಹಿಸಿಕೊಡಿ!!

Tulunadu News Posted On August 16, 2021


  • Share On Facebook
  • Tweet It

ಒಂದು ಆಡಳಿತ ಮಾಡಲು ಅಧಿಕಾರ ವಹಿಸಿಕೊಂಡ ವ್ಯಕ್ತಿ ದೂರದೃಷ್ಟಿಯಿಂದ ಯೋಜನೆಗಳನ್ನು ಹಾಕಿಕೊಳ್ಳಬೇಕೆ ವಿನ: ಆತ ತನಗಾಗಿ, ತನ್ನ ಸುತ್ತಮುತ್ತಲಿನಲ್ಲಿ ಇರುವವರ ಹಿತಕ್ಕಾಗಿ ಮತ್ತು ತನಗೆ ಆರ್ಥಿಕ ಸಂಪನ್ಮೂಲ ಪೂರೈಸುವ ಗುತ್ತಿಗೆದಾರರ ಭವಿಷ್ಯವನ್ನು ಇಟ್ಟುಕೊಂಡು ಯೋಜನೆಗಳನ್ನು ಹಂಚಿಕೊಂಡರೆ ಆತ ಬಾವಿಯೊಳಗಿನ ಕಪ್ಪೆಯೇ ಆಗುತ್ತಾನೆ. ಒಂದು ದಿನ ಹಾವು ನುಂಗಿದಾಗಲೇ ಗೊತ್ತಾಗುವುದು, ತಾನು ಎಲ್ಲಿ ತಪ್ಪು ಮಾಡಿದ್ದೇನೆ ಎಂಬುದಾಗಿ. ಮಂಗಳೂರಿನ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಹಣೆಬರಹವನ್ನು ನೋಡಬೇಕಾದರೆ ನೀವು ಪಚ್ಚನಾಡಿಗೆ ಹೋಗಬೇಕು. ಅಲ್ಲಿ ತ್ಯಾಜ್ಯದ ಬೃಹತ್ ನದಿ ನಿರ್ಮಾಣವಾಗಿ ವರ್ಷವೇ ಕಳೆದುಹೋಗಿದೆ. ಮೊದಲು ಅದನ್ನು ವೈಜ್ಞಾನಿಕವಾಗಿ ಸರಿ ಮಾಡಬೇಕು. ಇಲ್ಲದೇ ಹೋದರೆ ಮುಂದಿನ ಚುನಾವಣೆಯ ಹೊತ್ತಿನಲ್ಲಿ ಅದರ ಫೋಟೋ, ವಿಡಿಯೋವನ್ನು ತೋರಿಸಿಯೇ ವಿಪಕ್ಷಗಳು ಈಗಿನ ಆಡಳಿತ ಪಕ್ಷವನ್ನು ಅಡ್ಡಡ್ಡ ಮಲಗಿಸಿಬಿಡಲಿವೆ. ಹಾಗಾದರೆ ಇವರು ಏನು ಮಾಡಬೇಕು? ಸಂಶಯವೇ ಬೇಡಾ, ನಾನು ಇದರ ಹಿಂದಿನ ಜಾಗೃತಿ ಅಂಕಣದಲ್ಲಿ ಹೇಳಿದ ಹಾಗೆ ಮೋದಿ ಕಳುಹಿಸಿಕೊಟ್ಟಿರುವ 800 ಕೋಟಿ ರೂಪಾಯಿ ಇದೆಯಲ್ಲ, ಅದನ್ನು ಸಮರ್ಪಕವಾಗಿ ಬಳಸಬೇಕು. ಇವರು ಏನು ಪ್ಲಾನ್ ಮಾಡಿದ್ದಾರೆ ಎನ್ನುವುದನ್ನು ಅದರಲ್ಲಿಯೇ ಬರೆದಿದ್ದೇನೆ. ಈಗ ಅದನ್ನೇ ಮತ್ತೆ ಬರೆಯದೇ ನೇರ ವಿಷಯಕ್ಕೆ ಬರುತ್ತೇನೆ.

ಪಚ್ಚನಾಡಿ ತ್ಯಾಜ್ಯ ಘಟಕಕ್ಕೆ ನಿತ್ಯ 330 ಟನ್ ತ್ಯಾಜ್ಯ ಬಂದು ಬೀಳುತ್ತಿದೆ. ಆದರೆ ಅಲ್ಲಿ ಇರುವ ಯಂತ್ರೋಪಕರಣಗಳಿಂದ ತ್ಯಾಜ್ಯದಿಂದ ಗೊಬ್ಬರ ಮಾಡುವ ಗರಿಷ್ಟ ಸಾಮರ್ತ್ಯ 100 ಟನ್ ಮಾತ್ರ. ಆದ್ದರಿಂದ ಬರುವ ಉಳಿದ ತ್ಯಾಜ್ಯ ಅಲ್ಲಿಯೇ ಶೇಖರಣೆ ಆಗುತ್ತಾ ಹೋಗುತ್ತದೆ. ಹೀಗೆ ಬಿದ್ದಿರುವ ತ್ಯಾಜ್ಯದಿಂದಲೇ ಈಗ ಅಲ್ಲಿ ಸಮಸ್ಯೆ ಉದ್ಭವಿಸಿರುವುದು. ನೀವೆ ಲೆಕ್ಕ ಹಾಕಿ, ನಿತ್ಯ 220 ಟನ್ ಹೆಚ್ಚು ಒಂದು ಕಡೆ ರಾಶಿಯಾದರೆ ಏನಾಗುತ್ತದೆ. ಅಲ್ಲಿ ಆಗಾಗ ಬೆಂಕಿ ಬೀಳುತ್ತದೆ. ಬೆಂಕಿ ಬಿದ್ದರೆ ಯಾರಿಗೆ ಲಾಭ? ಇದೆ, ಕೆಲವರಿಗೆ ಲಾಭ ಇದೆ. ಇನ್ನು ಹೀಗೆ ತ್ಯಾಜ್ಯದ ಗುಡ್ಡ ಬೆಳೆಯುತ್ತಾ ಹೋಗುತ್ತಿದ್ದಂತೆ ಜೆಸಿಬಿಗಳು ಬಂದು ಅದನ್ನು ಸಮತಟ್ಟು ಮಾಡಬೇಕಾಗುತ್ತದೆ. ಅದರ ಬಿಲ್ ವರ್ಷಕ್ಕೆ 12 ರಿಂದ 15 ಲಕ್ಷ ರೂಪಾಯಿಗಳು ಆಗುತ್ತದೆ. ಇದರಿಂದ ಯಾರಿಗೆ ಲಾಭ? ಇದೆ. ಲಾಭ ಇದೆ. ಇಲ್ಲದಿದ್ದರೆ ಬೆಂಕಿ, ನೀರು, ಜೆಸಿಬಿ ಸುಮ್ಮನೆ ಓಡಾಡುತ್ತಾ? ಅವು ಚಿನ್ನದ ಮೊಟ್ಟೆ ಇಡುವ ಕೋಳಿಗಳು ಆಗಿರುವುದರಿಂದ ಯಾರಿಗೂ ಪಚ್ಚನಾಡಿಗೆ ಶಾಶ್ವತ ಪರಿಹಾರ ಮಾಡುವ ಮನಸ್ಸು ಇಲ್ಲವೇ ಇಲ್ಲ. ಈಗ ನಾನು ಹೇಳುವುದೇನೆಂದರೆ 500 ಟನ್ ಗೊಬ್ಬರ ಮಾಡುವ ಬೃಹತ್ ಯಂತ್ರೋಪಕರಣಗಳನ್ನು ಖರೀದಿಸಿ. ಈಗಿನ ಆಧುನಿಕ ತಂತ್ರಜ್ಞಾನ ಎಷ್ಟರಮಟ್ಟಿಗೆ ಬೆಳೆದಿದೆ ಎಂದರೆ ನೀವು ಅದರಲ್ಲಿ ನೀವು ಗ್ಲಾಸು, ಪೈಪು ಅಂತದ್ದೇಲ್ಲ ಏನೇನು ಇದೆಯೋ ಅದನ್ನೆಲ್ಲಾ ಹಾಕಿದರೂ ಅದು ಒಳಗೆ ವಿಂಗಡಿಸಲ್ಪಟ್ಟು ಗೊಬ್ಬರ ಆಗಿ ಹೊರಬರುತ್ತದೆ. ಆ ಬಗ್ಗೆ ಒಂದಿಷ್ಟು ಸಂಶೋಧನೆ ಮಾಡಿ ಉತ್ತಮ ಕಂಪೆನಿಯ ದೀರ್ಘ ಬಾಳ್ವಿಕೆಯ ಯಂತ್ರವನ್ನು ಖರೀದಿಸುವುದು ಒಳ್ಳೆಯದು. ಒಂದು ವೇಳೆ ಹಾಳಾದರೂ ಅದರ ರಿಪೇರಿ ಇಲ್ಲಿಯೇ ಕಡಿಮೆ ಖರ್ಚಿನಲ್ಲಿ ಆಗುವ ಹಾಗೆ ನೋಡಿಕೊಳ್ಳುವುದು ಉತ್ತಮ. ಯಾಕೆಂದರೆ ರಿಪೇರಿಯವರು ಚೆನೈನಿಂದಲೇ ಬರಬೇಕು ಎಂದು ಕಂಡೀಶನ್ ಇದ್ದರೆ ಪುನ: ಅದು ಕೂಡ ಬಿಳಿಯಾನೆಯಾದೀತು. ಹೀಗೆ ಮಾಡಿದರೆ ಏನಾಗುತ್ತದೆ ಎಂದರೆ ತ್ಯಾಜ ಘಟಕದಲ್ಲಿ ನಿತ್ಯ ಬರುವ 330 ಟನ್ ಜೊತೆಗೆ ಒಂದು ಕಡೆ ರಾಶಿ ಬಿದ್ದಿರುವ ತ್ಯಾಜ್ಯವನ್ನು ಕೂಡ ನಿಧಾನವಾಗಿ ಗೊಬ್ಬರ ಮಾಡುತ್ತಾ ಹೋಗಬಹುದು. ಅದರೊಂದಿಗೆ ಘಟಕದ ಇನ್ನೊಂದು ಭಾಗದಲ್ಲಿ ಸಾಗರದಂತೆ ಬಿದ್ದಿರುವ ತ್ಯಾಜ್ಯವನ್ನು ಕೂಡ ಹಂತಹಂತವಾಗಿ ಕಡಿಮೆ ಮಾಡುತ್ತಾ ಹೋಗಬಹುದು. ಆಗ ಜಾಗವೂ ಖಾಲಿಯಾಗುತ್ತಾ ಹೋಗುತ್ತದೆ. ಅಲ್ಲಿನ ಪರಿಸರ ಕೂಡ ಸಹ್ಯವಾಗುತ್ತದೆ.

ಈ ಹಳೆ ಗುತ್ತಿಗೆದಾರರಿಗೆ ಕೊಟ್ಟರೆ ಮಂಗಳೂರು ಸ್ವಚ್ಚವಾಗುತ್ತಾ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ನಾನು ಹೇಳಬೇಕಾಗಿಲ್ಲ. ಈಗ ಮೇಯರ್ ಆಗಿರುವ ಪ್ರೇಮಾನಂದ ಶೆಟ್ಟಿಯವರೇ ಹೇಳಲಿ. ಇಬ್ಬರೂ ಶಾಸಕರನ್ನು ಸೇರಿಸಿಕೊಂಡು ಇಡೀ ಪಾಲಿಕೆಯ ಒಳಗೆ ಭಾರತೀಯ ಜನತಾ ಪಾರ್ಟಿಯಲ್ಲಿ ಅತ್ಯಂತ ಹಿರಿಯರು ಯಾರಾದರೂ ಇದ್ದರೆ ಅದು ಪ್ರೇಮಾನಂದ ಶೆಟ್ಟಿಯವರು ಮಾತ್ರ. ಅವರಿಗೆ ಗೊತ್ತಿಲ್ವಾ? ಖಾಸಗಿ ತ್ಯಾಜ್ಯ ಸಂಗ್ರಹ ಗುತ್ತಿಗೆದಾರರ ಹಣೆಬರಹ. ಇನ್ನು ವಿಪಕ್ಷಗಳ ಬಳಿ ಕೇಳಿದರೆ ಶಶಿಧರ್ ಹೆಗ್ಡೆ ಇದ್ದಾರೆ, ಭಾಸ್ಕರ್ ಮೊಯಿಲಿ, ಲ್ಯಾನ್ಸ್ ಪಿಂಟೋ ಇದ್ದಾರೆ ಅವರನ್ನು ಕೇಳಿ ನೋಡಲಿ. ಆಂಟೋನಿ ವೇಸ್ಟ್ ಮ್ಯಾನೇಜಿಮೆಂಟಿನವರು ಮುಂಬೈ, ಪುಣೆಯಲ್ಲಿ ಯಶಸ್ವಿಯಾಗಿ ಈ ತ್ಯಾಜ್ಯ ಸಂಗ್ರಹದ ಕೆಲಸ ಮಾಡುತ್ತಿದ್ದರು ಎಂದೇ ಅವರನ್ನು ಇಲ್ಲಿ ಕೆಂಪು ಹಾಸು ಹಾಕಿ ಸ್ವಾಗತಿಸಲಾಗಿತ್ತು. ಆದರೆ ಇಲ್ಲಿನ ಪಾಲಿಕೆಯನ್ನು ಸುಲಭವಾಗಿ ಬಗ್ಗಿಸಬಹುದು ಎಂದು ಅವರಿಗೆ ಅನಿಸಿತು. ಮುಂಬೈ, ಪುಣೆಯಲ್ಲಿ ಸರಿಯಾಗಿ ಕೆಲಸ ಮಾಡದಿದ್ದರೆ ಶಿವಸೇನೆ, ಇನ್ನೊಂದು ಸೇನೆ ಬಂದು ಇವರನ್ನು ತ್ಯಾಜ್ಯದಂತೆ ಎತ್ತಿ ಬಿಸಾಡುತ್ತದೆ. ನಮ್ಮಲ್ಲಿ ಜನರು ಮಾತನಾಡುವುದಿಲ್ಲ. ಕಾರ್ಪೋರೇಟರ್ಸ್ ಅದಕ್ಕಿಂತ ಮೊದಲು ಮಾತನಾಡುವುದಿಲ್ಲ. ಇನ್ನು ಪಾಲಿಕೆಯ ಕಮೀಷನರ್ ಮಾತನಾಡುತ್ತಾರೋ ಎಂದು ನೋಡಿದರೆ ಅವರಿಗೆ ಹಿರಿಯ ಅಧಿಕಾರಿಗಳು ಹೆದರಿಸಿ ಇಟ್ಟಿದ್ದಾರೆ ” ಸರ್, ಆಂಟೋನಿಯವರನ್ನು ಹೆಚ್ಚು ಟೈಟ್ ಮಾಡಿದರೆ ನಾಳೆ ಅವರು ಕೆಲಸ ನಿಲ್ಲಿಸಿಬಿಟ್ಟರೆ ಜನ ಬೀದಿಗೆ ಬರುತ್ತಾರೆ, ಮುತ್ತಿಗೆ ಹಾಕುತ್ತಾರೆ, ನಿಮಗೆ ಕೆಟ್ಟ ಹೆಸರು ಬರುತ್ತದೆ” ಅಲ್ಲಿಗೆ ಅವರು ಕೂಡ ಸೈಲೆಂಟ್!

  • Share On Facebook
  • Tweet It


- Advertisement -


Trending Now
ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
Tulunadu News July 2, 2022
ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
Tulunadu News July 1, 2022
Leave A Reply

  • Recent Posts

    • ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?
    • ಚಕ್ರತೀರ್ಥ ಹೆಗಲ ಮೇಲೆ ಕೋವಿ ಇಟ್ಟು ಹೊಡೆಯಲು ಹೊರಟಿದ್ದು ಯಾರನ್ನಾ?
    • ರೋಹಿತ್ ಸನ್ಮಾನದಿಂದ ಎಡಚರರು ವಿಲವಿಲ!!
    • ರಾಜಕೀಯ ಆತ್ಮಹತ್ಯೆ ಎಂದರೆ ಏನು ಉದ್ಧವ್!
    • ಮಂಗಳೂರಿನಲ್ಲಿ ಐಲ್ಯಾಂಡ್ ಪ್ಲಾನ್ ಹಾಕಿದ ಬುದ್ಧಿವಂತ ಯಾರು?
    • ಉತ್ತರ ಭಾರತದಲ್ಲಿ ಸೇನೆಗೆ ಸೇರಿಸುವುದು ಉದ್ಯಮ!!
  • Popular Posts

    • 1
      ಮೇಲಿನವರು ಏನೂ ಹೇಳಬಹುದು, ಅನುಷ್ಟಾನ ಆಗಬೇಕಲ್ಲ!
    • 2
      ಮಳೆ ಕಥೆ ಅಲ್ಲ ವ್ಯಥೆ! ಅದಕ್ಕಿದೆ ಇಷ್ಟು ಕಾರಣಗಳು?
    • 3
      ಮಾಣಿಪ್ಪಾಡಿ ವರದಿಯ 4 ಲಕ್ಷ ಕೋಟಿಯಲ್ಲಿ ಬಿಜೆಪಿಗೆ ಸಿಕ್ಕಿದ ಸೊನ್ನೆ ಎಷ್ಟು?
    • 4
      ಕನ್ನಯ್ಯ ಹತ್ಯೆ ಮಾಡಿದವರಿಗೆ ಮೂರೇ ತಿಂಗಳಲ್ಲಿ ಗಲ್ಲಾಗಬಹುದಾ?
    • 5
      ರಾಹುಲ್ ಕಚೇರಿ ಧ್ವಂಸವಾದರೂ ಕಾಂಗ್ರೆಸ್ ಪ್ರತಿಭಟಿಸಲಿಲ್ಲ, ಯಾಕೆ?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search