• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ವಕ್ಫ್ ಭೂಮಿಗೆ ಕೈ ಹಾಕಲು ಗಂಡಸುತನ ಇಲ್ಲದವರು ಹಿಂದೂ ದೇವಾಲಯ ಕೆಡವುತ್ತಿದ್ದಾರೆ!!

Hanumantha Kamath Posted On September 15, 2021


  • Share On Facebook
  • Tweet It

ಕರ್ನಾಟಕದಲ್ಲಿ ಕಟ್ಟಲ್ಪಟ್ಟಿರುವ ಪುರಾತನ ದೇವಾಲಯಗಳನ್ನು ಕೆಡವಿ ಎಂಬ ಆದೇಶವನ್ನು ಹೊರಡಿಸಿದ್ದು ಯಾರು ಎಂದು ಹಿಂದೆ ನಾವು ಚಿಕ್ಕದಿರುವಾಗ ಪ್ರಶ್ನೆಪತ್ರಿಕೆಯಲ್ಲಿ ಕೇಳಿದಿದ್ದರೆ ಟಿಪ್ಪು ಸುಲ್ತಾನ್ ಅಥವಾ ಮೊಹಮ್ಮದ್ ಘಜ್ನಿ ಅಥವಾ ಇನ್ಯಾವುದೋ ಅರಸನ ಹೆಸರನ್ನು ನೀವು ಬರೆದಿರಬಹುದು. ಈಗ ಪಠ್ಯ ನವೀಕರಣ ಸಮಿತಿಯವರು ಆ ಹಳೆ ರಾಜರುಗಳ ಜೊತೆಯಲ್ಲಿ ಇನ್ನೊಂದು ಹೆಸರನ್ನು ಸೇರಿಸಬೇಕು. ಅದೇನೆಂದರೆ ಕರ್ನಾಟಕದ ದೇವಾಲಯಗಳನ್ನು ಕೆಡವಲು ಆದೇಶ ಕೊಟ್ಟಿದ್ದು 2021 ರಲ್ಲಿ ಇದ್ದ ಭಾರತೀಯ ಜನತಾ ಪಾರ್ಟಿಯ ಸರಕಾರ ಎಂದು ಮುಂದಿನ ಪೀಳಿಗೆ ಬರೆಯಬೇಕಾಗಬಹುದು. ಎರಡು ದಿನಗಳ ಹಿಂದಿನ ತನಕ ಈ ದೇವಸ್ಥಾನಗಳನ್ನು ಕೆಡವುತ್ತಿರುವುದು ಯಾರೆಂದು ನಮಗೆ ಗೊತ್ತೆ ಇಲ್ಲಪ್ಪ ಎಂದು ಬಿಜೆಪಿಯ ಮುಖಂಡರು ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡುತ್ತಿದ್ದರು. ಪ್ರತಾಪು ಅಲ್ಲಿ ಪ್ರತಿಭಟನೆ, ಸುದ್ದಿಗೋಷ್ಟಿ ಮಾಡುತ್ತಾ ಗಾಳಿಯಲ್ಲಿ ಆಯುಧ ಬೀಸುವ ವ್ಯರ್ಥ ಶ್ರಮ ಮಾಡುತ್ತಿದ್ದರು. ಸದ್ಯ ಈಗ ಕರ್ನಾಟಕದ ಘಜ್ನಿ ಯಾರೆಂದು ಗೊತ್ತಾಗಿದೆ. ಅದು ರಾಜ್ಯ ಮುಖ್ಯ ಕಾರ್ಯದರ್ಶಿ. ಸರಕಾರದ ಯಾವುದೇ ಮುಖ್ಯ ಕಾರ್ಯದರ್ಶಿಗಳು ಹೀಗೆ ಒಂದು ಕ್ರಮ ತೆಗೆದುಕೊಳ್ಳುವಾಗ ಅದನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರದೇ ಮಾಡುತ್ತಾರೆ ಎನ್ನುವುದನ್ನು ಯಾರಾದರೂ ನಂಬುತ್ತಾರೆ ಎಂದರೆ ಅವರಿಗೆ ರಾಜಕೀಯದ ಅ, ಆ, ಇ, ಈ ಗೊತ್ತಿಲ್ಲ ಎಂದೇ ಅರ್ಥ. ಒಂದು ವೇಳೆ ಸ್ವತ: ಮುಖ್ಯಮಂತ್ರಿಗಳೇ “ಪಾಪಾರಿ, ಮುಖ್ಯ ಕಾರ್ಯದರ್ಶಿಗಳು ಗೊತ್ತಿಲ್ಲದೇ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟುಬಿಟ್ಟಿದ್ದರು” ಎಂದು ಹೇಳಿದರೂ ಅದನ್ನು ಅವರ ಹತ್ತಿರ ನಿಂತವರೇ ನಂಬದೇ ಕಿಸಕ್ಕನೇ ನಕ್ಕುಬಿಡಬಹುದು. ಆದ್ದರಿಂದ ಇಂತಹ ಹೇಳಿಕೆಗಳನ್ನು ಹೇಳಿ ಆಸ್ತಿಕಬಂಧುಗಳ ತಾಳ್ಮೆಯನ್ನು ಬಿಜೆಪಿ ಸರಕಾರ ಪರೀಕ್ಷಿಸಲು ಹೊರಟಿರುವುದೇ ಒಂದು ಪರಮ ಅಸಹ್ಯ. ಒಂದು ವೇಳೆ ಇದನ್ನು ಕಾಂಗ್ರೆಸ್ ಮಾಡಿದಿದ್ದರೆ ಇಷ್ಟೊತ್ತಿಗಾಗಲೇ ಕರ್ನಾಟಕ ಬಂದ್ ಗೆ ಬಿಜೆಪಿಯ ಸೋದರ ಸಂಘಟನೆಗಳು ಬಂದ್ ಗೆ ಕರೆಕೊಟ್ಟಾಗುತ್ತಿತ್ತು. ಸಿದ್ಧರಾಮಯ್ಯನವರ ಮೀನು ತಿನ್ನುವ ವಿಷಯವನ್ನೇ ಹಿಡಿದು ಅನೇಕ ಕಡೆ ಕಾಂಗ್ರೆಸ್ಸಿಗೆ ಪ್ರಬಲ ಟಕ್ಕರ್ ಕೊಟ್ಟ ಬಿಜೆಪಿಗೆ ದೇವಾಲಯ ಕೆಡವಲು ಕಾಂಗ್ರೆಸ್ ಹೊರಟಿದ್ದರೆ ಅದು ಹಬ್ಬವಾಗುತ್ತಿತ್ತು. ಒಂದೊಂದು ದೇವಸ್ಥಾನ ಬೀಳುತ್ತಿದ್ದಂತೆ ಒಂದೊಂದು ಸೀಟು ಜಾಸ್ತಿಯಾದಂತೆ ಬಿಜೆಪಿಗೆ ಕನಸು ಬೀಳುತ್ತಿತ್ತು. ಆದರೆ ಈಗ ಕೆಡವುತ್ತಿರುವುದೇ ಬಿಜೆಪಿ ಸರಕಾರ.
ಅದು ಬಿಡಿ, ವಕ್ಫ್ ಬೋರ್ಡಿನ ನಾಲ್ಕು ಲಕ್ಷ ಕೋಟಿ ಮೌಲ್ಯದ ಭೂಮಿಯನ್ನು ಅವರದೇ ಧರ್ಮದ ಮುಖಂಡರು ನುಂಗಿ ನೀರು ಕುಡಿದ ವರದಿಯನ್ನು ಇದೇ ಬಿಜೆಪಿ ಪಕ್ಷದ ಅನ್ವರ್ ಮಾಣಿಪ್ಪಾಡಿ ತಯಾರಿಸಿ ಕೊಟ್ಟಾಗ ಅದನ್ನು ಹಿಡಿದೇ ಪ್ರತಿಭಟನೆ ಮಾಡಿದ್ದ ಬಿಜೆಪಿ ಅಧಿಕಾರಕ್ಕೆ ಬಂದರೆ ಈ ಬಗ್ಗೆ ತನಿಖೆ ಮಾಡಿ ಸಂಬಂಧಪಟ್ಟವರನ್ನು ಜೈಲಿಗೆ ಕಳುಹಿಸುತ್ತೇವೆ ಎಂದಿತ್ತು. ಆದರೆ ಅಧಿಕಾರಕ್ಕೆ ಬಂದ ಮೇಲೆ ಕೋಟ್ಯಾಂತರ ರೂಪಾಯಿ ಆಮಿಷವನ್ನು ಇದೇ ಅನ್ವರ್ ಮಾಣಿಪ್ಪಾಡಿಯವರಿಗೆ ಒಡ್ಡಿದ್ದು ಇದೇ ರಾಜ್ಯದ ಬಿಜೆಪಿ ಬಾಸ್ ಎನಿಸಿಕೊಂಡವರು ಎಂದು ಸ್ಪಷ್ಟವಾಗಿ ಹೆಸರು ಹೇಳಿಯೇ ಅನ್ವರ್ ಮಾಣಿಪ್ಪಾಡಿ ಹೇಳಿದ್ದಾರೆ. ಅತ್ತ ಅಲ್ಪಸಂಖ್ಯಾತರ ಭೂಮಿಯನ್ನು ಅತಿಕ್ರಮಣಕಾರರಿಂದ ವಶಪಡಿಸಿಕೊಳ್ಳಬೇಕಾದ ಬಿಜೆಪಿ ಸರಕಾರ ಈಗ ಹಿಂದೂ ದೇವಾಲಯಗಳನ್ನು ಕೆಡವಿ ಅಲ್ಲಿ ಏನು ಮಾಡಲು ಹೊರಟಿದೆ ಎನ್ನುವುದನ್ನು ಅವರೇ ಹೇಳಬೇಕು. ಈ ದೇವಸ್ಥಾನಗಳನ್ನು ಕೆಡವುಹುದು ನಮ್ಮಲ್ಲಿ ಯಾವಾಗ ಬೇಕಾದರೂ ಆಗಬಹುದು ಎನ್ನುವುದು ಮಂಗಳೂರಿನವರಿಗೂ ಗೊತ್ತೆ ಇದೆ. ಯಾಕೆಂದರೆ ವೈದ್ಯನಾಥ ದೇವಸ್ಥಾನ ಕೂಡ ಈ ಘಜ್ನಿಗಳ ಲಿಸ್ಟ್ ನಲ್ಲಿದೆ. ಇವರಿಗೆ ನಿಜವಾಗಿಯೂ ಧಮ್ ಇದ್ದರೆ, ಅಂತರ್ಜಲದ ಬಗ್ಗೆ ಕಾಳಜಿ ಇದ್ದರೆ ಪಾಲಿಕೆ ವ್ಯಾಪ್ತಿಯ ಎಮ್ಮೆಕೆರೆ, ಬೈರಾಡಿ ಕೆರೆ ಮತ್ತು ಕಾವೂರು ಕೆರೆಯ ಆಸುಪಾಸಿನ ಪ್ರದೇಶವನ್ನು ಯಾರು ಅತಿಕ್ರಮಣ ಮಾಡಿ ತಮ್ಮ ಮಹಲು ಕಟ್ಟಿಕೊಂಡಿದ್ದಾರೋ ಅವರಿಂದ ಭೂಮಿಯನ್ನು ಮತ್ತೆ ಸ್ವಾಧೀನಪಡಿಸಿಕೊಳ್ಳಲು ಆಗುತ್ತಾ ಎನ್ನುವ ಪ್ರಶ್ನೆ ನನ್ನದು. ಯಾವುದೇ ಒಂದು ಖಾಲಿ ಜಾಗದಲ್ಲಿ ಒಂದು ಬಾವಿ ಇದ್ದರೆ ಅದನ್ನು ಮುಚ್ಚಿ ವಸತಿ ಸಮುಚ್ಚಯ ಕಟ್ಟುವ ಬಿಲ್ಡರ್ ಗಳನ್ನು ಎಚ್ಚರಿಸುವ ಗಂಡಸುತನ ಇಲ್ಲದ ಸರಕಾರ ಯಾರೂ ಕೇಳುವವರಿಲ್ಲ ಎನ್ನುವ ಕಾರಣಕ್ಕೆ ಹಿಂದೂ ದೇವಾಲಯಗಳನ್ನು ನೆಲಸಮ ಮಾಡುತ್ತಿದೆ.
ಹಾಗಾದ್ರೆ ಹಿಂದೂ ಧರ್ಮದ ಗುತ್ತಿಗೆ ವಹಿಸಿಕೊಂಡಂತೆ ಮಾತನಾಡುತ್ತಿದ್ದವರು ಎಲ್ಲಿ ಹೋದರು ಎನ್ನುವುದು ಈಗ ಉಳಿದಿರುವ ಪ್ರಶ್ನೆ. ಮತಾಂತರ, ಲವ್ ಜಿಹಾದ್, ಗೋಹತ್ಯೆ ವಿಷಯದಲ್ಲಿ ಮಾತ್ರ ಮಾತನಾಡಬೇಕು ಎನ್ನುವ ಸಿಲೆಬಸ್ ನಿಂದ ಹೊರಗೆ ಇಣುಕಬಾರದು ಎಂದು ನಿಮಗೆ ಯಾರಾದರೂ ಹೇಳಿದ್ದಾರಾ ಎನ್ನುವ ಪ್ರಶ್ನೆ ಈಗ ಉದ್ಭವಿಸುತ್ತದೆ. ಕೆಲವು ತಿಂಗಳ ಹಿಂದೆ ಸರಕಾರ ಖಾಸಗಿಯವರ ದೇವಸ್ಥಾನಗಳ ಲೆಕ್ಕ ಕೇಳಿತು ಎಂದ ಕೂಡಲೇ ಸುದ್ದಿಗೋಷ್ಟಿ ಮಾಡಿದವರಿಗೆ ಆಗ ಆ ಶ್ರೀಮಂತ ಖಾಸಗಿ ದೇವಸ್ಥಾನಗಳ ಪರ ಮಾತನಾಡುವ ಶಕ್ತಿ ಇತ್ತು. ಈಗ ಬಡ ದೇವಾಲಯಗಳನ್ನು ಸರಕಾರ ಕೆಡವಲು ಟೊಂಕ ಕಟ್ಟಿ ನಿಂತಿದೆ, ಎಲ್ಲರೂ ಬಾಯಿಗೆ ಅವಲಕ್ಕಿ ಹಾಕಿ ಕುಳಿತುಕೊಂಡಿದ್ದಾರಾ ಎನ್ನುವುದು ಸಾಮಾನ್ಯ ಭಕ್ತರ ಪ್ರಶ್ನೆ!
  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search