• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಮಂಗಳೂರಿನಲ್ಲಿ ನಾಪತ್ತೆಯಾದ ಕೆರೆಗಳನ್ನು ಮೊದಲು ಹುಡುಕೋಣ, ನಂತರ ಅಭಿವೃದ್ಧಿ!!

Hanumantha Kamath Posted On January 21, 2022
0


0
Shares
  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಇರುವ ಕೆರೆಗಳಲ್ಲಿ ಕೆಲವು ಅಭಿವೃದ್ಧಿಯಾಗುತ್ತಿವೆ. ಆದರೆ ವಾಸ್ತವವಾಗಿ ಒಂದೆರಡು ಕೆರೆಗಳು ಅಭಿವೃದ್ಧಿಯಾಗುತ್ತಿರಬಹುದು. ಆದರೆ ಕೆಲವು ಕೆರೆಗಳು ಈ ಭೂಪಟದಿಂದಲೇ ಮಾಯವೂ ಆಗಿದೆ. ಒಂದು ಅಂದಾಜಿನ ಪ್ರಕಾರ ಮಂಗಳೂರಿನಲ್ಲಿ ಸುಮಾರು 750 ಕೆರೆಗಳು ಇದ್ದವು ಎಂದು ದಾಖಲೆಗಳು ಹೇಳುತ್ತವೆ. ಸಂತೋಷದ ವಿಷಯ. ಆದರೆ ಇವತ್ತಿಗೂ ಅಷ್ಟು ಕೆರೆಗಳು ಅಸ್ತಿತ್ವದಲ್ಲಿ ಎಲ್ಲಿ ಇವೆ ಎಂದು ಕೇಳಿದರೆ ದುರ್ಬೀನು ಹಿಡಿದು ಹುಡುಕಬೇಕಾಗುತ್ತವೆ. ಹಾಗಾದರೆ ಆ ಕೆರೆಗಳು ಎಲ್ಲಿ ಹೋದವು ಎಂದು ನೀವು ಕೇಳಿದರೆ ಅವು ಇದ್ದ ಜಾಗದಲ್ಲಿ ಈಗ ವಸತಿ ಸಮುಚ್ಚಯಗಳು ಎದ್ದು ನಿಂತಿವೆ. ಬೃಹತ್ ಕಟ್ಟಡಗಳು ಬೆಳೆದು ಕಾಂಕ್ರೀಟ್ ಕಾಡಾಗಿವೆ. ಆದರೆ ಪಾಲಿಕೆಯ ದಾಖಲೆಗಳಲ್ಲಿ ಅವು ಕೆರೆಗಳು ಇದ್ದ ಪ್ರದೇಶ. ಹಾಗಾದರೆ ಈ ವಿಷಯ ಹೇಗೆ ಹೊರಗೆ ಬಂತು. ಈಗ ಕೆರೆಗಳ ಸಂಗತಿ ಯಾಕೆ ನಾವು ಈ ಜಾಗೃತಿ ಅಂಕಣದಲ್ಲಿ ಬರೆಯಬೇಕಾಯಿತು ಎಂದರೆ ರಾಜ್ಯ ಸರಕಾರ ತಕ್ಷಣದಲ್ಲಿ ಕೆರೆಗಳ ಸರ್ವೆ ಮಾಡಲು ಸ್ಥಳೀಯ ಸಂಸ್ಥೆಗಳ ಆಡಳಿತಕ್ಕೆ ಸೂಚನೆ ನೀಡಿದೆ.

ಅದರ ಪ್ರಕಾರ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸರ್ವೆ ಆರಂಭವಾಗಿದೆ. ಗ್ರಾಮ ಕರಣೀಕರು ಅಂದರೆ ವಿಎಗಳು ಸರ್ವೇ ಮಾಡಿದ್ದಾರೆ. ಅದರ ವರದಿಯನ್ನು ತಹಶೀಲ್ದಾರ್, ಪಾಲಿಕೆ ಆಯುಕ್ತರಿಗೆ ಮತ್ತು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಈಗ ವರದಿ ನೋಡಿದರೆ ಬಹುತೇಕ ಎಲ್ಲಾ ಕೆರೆಗಳ ಜಾಗಗಳನ್ನು ಅತಿಕ್ರಮಣ ಮಾಡಲಾಗಿದೆ. ಕೆಲವು ಕಡೆ ವರದಿಯಲ್ಲಿ ಹೇಳಿರುವಂತೆ ಕೆರೆಗಳ ಅಸ್ತಿತ್ವವೇ ಇಲ್ಲ ಎನ್ನುವಂತಹ ಮಾಹಿತಿ ಇದೆ. ಕೆರೆಗಳ ಕುರುಹುಗಳು ಕಾಣಿಸುತ್ತಿಲ್ಲ ಎಂದು ಬರೆಯಲಾಗಿದೆ. ಅನೇಕ ಕಡೆ ಆಸುಪಾಸಿನವರು ತಮ್ಮ ಜಾಗಗಳನ್ನು ವಿಸ್ತರಿಸಿ ಗೋಡೆ ಕಟ್ಟಿದ್ದಾರೆ. ಹಲವು ಕಡೆ ರಸ್ತೆ ನಿರ್ಮಿಸಲಾಗಿದೆ. ತಡೆಗೋಡೆ ನಿರ್ಮಿಸಲಾಗಿದೆ. ಒತ್ತುವರಿ ಮಾಡಲಾಗಿದೆ. ಅತಿಕ್ರಮಣ ಹೀಗೆ ಎಲ್ಲಾ ಕೆರೆಗಳ ಪರಿಸ್ಥಿತಿಗಳು ಬಹುತೇಕ ಒಂದೇ ಲೆಕ್ಕ ಇದೆ. ಈಗ ಕೆರೆಗಳ ಕುರುಹಗಳೇ ಉಳಿಯದಂತೆ ಮಾಡಿದವರು ಅದರ ಮೇಲೆ ಯಾವ ಧೈರ್ಯದಿಂದ ಮನೆ ಕಟ್ಟಿದರು ಎನ್ನುವುದು ಪ್ರಶ್ನೆ. ಮನೆ ಕಟ್ಟುವ ಮೊದಲು ಪಾಲಿಕೆಯಿಂದ ಅನುಮತಿ ತೆಗೆದುಕೊಳ್ಳಲಾಗಿದೆಯಾ ಎನ್ನುವ ಸಣ್ಣ ಐಡಿಯಾ ಯಾರ ಮನಸ್ಸಿಗಾದರೂ ಬರಬಹುದು. ಒಂದು ವೇಳೆ ಪಾಲಿಕೆ ಕಡೆಯಿಂದ ಲಿಖಿತವಾಗಿ ಅನುಮತಿ ನೀಡಲಾಗಿದೆ ಎಂದರೆ ಹಾಗೆ ನೀಡಿದವರನ್ನು ಮೊದಲು ಒದ್ದು ಒಳಗೆ ಹಾಕಬೇಕು. ಯಾಕೆಂದರೆ ಕೆರೆಗಳ ಮೇಲೆ ಮನೆ ಕಟ್ಟಲು ಅನುಮತಿ ನೀಡುವುದೇ ಅಕ್ಷಮ್ಯ ಅಪರಾಧ. ಹಾಗೆ ಮನೆ ಕಟ್ಟಿದವರ ಹೆಸರಿನಲ್ಲಿ ಜಾಗ ಇದೆಯಾ, ಖಾತಾ ಇದೆಯಾ ಎಂದು ಯಾರಾದರೂ ನೋಡಿದ್ದಾರಾ? ನೋಡದೆ ಹಾಗೆ ಕೊಟ್ಟುಬಿಟ್ಟಿದ್ದಾರಾ? ಇನ್ನು ಒಂದು ವೇಳೆ ಅನುಮತಿ ಕೇಳದೇ ಮನೆ ಕಟ್ಟಿದರು ಎಂದೇ ಇಟ್ಟುಕೊಳ್ಳೋಣ. ಅಂತಹ ಮನೆಗಳ ಕಟ್ಟಡಕ್ಕೆ ಡೋರ್ ನಂಬರ್ ಎಲ್ಲಿಂದ ಬಂತು? ಹಾಗಾದರೆ ಎರಡನೇ ಅಪರಾಧಿ ಯಾರು? ಇನ್ನು ಇಂತಹ ಮನೆಗಳಿಗೆ ವಿದ್ಯುತ್ ಸಂಪರ್ಕ ಎಲ್ಲಿಂದ ಬಂತು? ಮೂರನೇ ಅಪರಾಧಿ ಯಾರು? ಇನ್ನು ನೀರಿನ ಸಂಪರ್ಕ ಎಲ್ಲಿಂದ ಬಂತು? ಹಾಗಾದರೆ ನಾಲ್ಕನೇ ಅಪರಾಧಿ ಯಾರು? ಕೆಲವು ಕಡೆ ಪಾಲಿಕೆ ಕಡೆಯಿಂದ ಆ ಮನೆಯವರಿಗೆ ಹೋಗಿ ಬರಲು ಸುಲಭವಾಗುವಂತೆ ರಸ್ತೆ ಕೂಡ ನಿರ್ಮಿಸಲಾಗಿದೆ.

ಭಾರತೀಯ ಜನತಾ ಪಾರ್ಟಿಯ ಸರಕಾರ ಬಂದ ನಂತರ ಕೆರೆಗಳಿಗೆ ಕಾಯಕಲ್ಪ ಕೊಡಬೇಕು ಎನ್ನುವ ಕಾರಣಕ್ಕೆ ಮತ್ತು ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲು ಅಂತರ್ಜಲ ಹೆಚ್ಚಿಸಬೇಕು ಎನ್ನುವ ಕಾರಣಕ್ಕೆ ಕೆರೆಗಳನ್ನು ಅಭಿವೃದ್ಧಿ ಮಾಡಬೇಕು ಎನ್ನುವ ಕೆಲಸಕ್ಕೆ ಮುಂದಾಗಿರುವುದು ಮೆಚ್ಚುವಂತಹ ವಿಷಯ. ಆದರೆ ಹೀಗೆ ಕೆರೆಗಳ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಕುಳಿತಿರುವವರನ್ನು ಎಬ್ಬಿಸಲು ಸಾಧ್ಯವಿದೆಯಾ? ನೀವು ಅಕ್ರಮವಾಗಿ ಕೆರೆ ಪ್ರದೇಶದಲ್ಲಿ ಮನೆ ಕಟ್ಟಿದ್ದೀರಿ. ಎದ್ದು ನಡೆಯಿರಿ. ನಾವು ಮನೆಗಳನ್ನು ಕೆಡವಬೇಕಾಗುತ್ತದೆ ಎಂದು ಹೇಳುವವರು ಯಾರು? ಹಾಗೆ ಹೇಳಲು ಆಗದಿದ್ದರೆ ಕೆರೆಗಳ ಸರ್ವೇ ಮಾಡಿದ ಪ್ರಯೋಜನವಾದರೂ ಏನು? ಹೆಚ್ಚೆಂದರೆ ಅತಿಕ್ರಮಣ ಮಾಡಿದವರಿಗೆ ನೋಟಿಸು ಕೊಡಬಹುದು. ಅಂತವರು ನೋಟಿಸು ಸಿಕ್ಕಿದ ಕೂಡಲೇ ಜನಪ್ರತಿನಿಧಿಗಳ ಬಳಿ ಓಡಿ ಬರುತ್ತಾರೆ. ಪ್ರಭಾವಿಗಳಿಂದ ಶಿಫಾರಸ್ಸು ಮಾಡಿಸುತ್ತಾರೆ. ಹೆಚ್ಚೆಂದರೆ ಇನ್ನು ಒಂದು ವರ್ಷ ಇರುವುದು. ನೀವು ನೋಟಿಸು ಕೊಟ್ಟು ನಾವು ಕೋರ್ಟಿಗೆ ಹೋದರೆ ವರ್ಷಗಟ್ಟಲೆ ಹಿಡಿಯುತ್ತದೆ. ಅದರ ಮೊದಲು ಚುನಾವಣೆ ಬರುತ್ತದೆ. ನೀವು ನಮಗೆ ಈಗ ಸಹಾಯ ಮಾಡದೇ ಇದ್ದರೆ ಮುಂದಿನ ಚುನಾವಣೆಯಲ್ಲಿ ನೋಡಿಕೊಳ್ಳುತ್ತೇವೆ ಎಂದು ಪರೋಕ್ಷವಾಗಿ ಹಾಗೆ ಅತಿಕ್ರಮಣ ಮಾಡಿದವರು ಧಮ್ಕಿ ಹಾಕುತ್ತಾರೆ. ಜನಪ್ರತಿನಿಧಿಗಳಿಗೆ ಬೇರೆ ದಾರಿ ಇರುವುದಿಲ್ಲ. ತಹಶೀಲ್ದಾರರಿಂದ ಹಿಡಿದು ಪಾಲಿಕೆಯ ಆಯುಕ್ತರನ್ನು ಸೇರಿಸಿ ಜಿಲ್ಲಾಧಿಕಾರಿಯವರ ತನಕ ಒತ್ತಡ ಹಾಕಿಸುತ್ತಾರೆ. ಸರಕಾರ ಕೂಡ ಹೆಚ್ಚೆಂದರೆ ಆರು ತಿಂಗಳು ಇದರ ಹಿಂದೆ ಬೀಳುತ್ತದೆ. ನಾಲ್ಕೈದು ಸಲ ಪತ್ರಿಕೆಯವರು ನ್ಯೂಸ್ ಮಾಡುತ್ತಾರೆ. ಅದರ ನಂತರ ವಿಷಯ ತಣ್ಣಗಾಗುತ್ತದೆ. ಕೆರೆಗಳ ಮೇಲಿನ ಮನೆಗಳು ಶಾಶ್ವತವಾಗಿ ಉಳಿಯುತ್ತವೆ. ಕೆರೆಗಳು ಶಾಶ್ವತವಾಗಿ ಭೂಗರ್ಭ ಸೇರುತ್ತವೆ. ಮುಂದೆ ಯಾವುದಾದರೂ ಸರಕಾರದ ಜಲಸಂಪನ್ಮೂಲ ಸಚಿವರಿಗೋ, ನಗರಾಭಿವೃದ್ಧಿ ಸಚಿವರಿಗೋ ಮನಸ್ಸು ಬಂದರೆ ಪುನ: ಈ ವಿಷಯ ಮುನ್ನಲೆಗೆ ಬರುತ್ತದೆ. ಆಗ ಕೆರೆಗಳು ಮತ್ತೆ ತಮ್ಮೊಳಗೆ ನಗುತ್ತವೆ!!

0
Shares
  • Share On Facebook
  • Tweet It




Trending Now
ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
Hanumantha Kamath July 9, 2025
ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
Hanumantha Kamath July 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
    • ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!
    • ನನಗಾಗಿ ಚಿಂತಿಸಬೇಡಾ, ದೇಶಕ್ಕಾಗಿ ಆಡು.. ಆಕಾಶ್ ದೀಪ್ ತಂಗಿಯ ಭಾವನಾತ್ಮಕ ಮಾತು! ಏನಾಗಿದೆ ಆಕೆಗೆ...
    • ಕನ್ನಯ್ಯ ಲಾಲ್ ಹತ್ಯಾ ಕಥೆಯುಳ್ಳ ಉದಯಪುರ್ ಫೈಲ್ ಸಿನೆಮಾ ಬಿಡುಗಡೆಗೆ ತಡೆ ಕೋರಿ ಜಮಿಯತ್ ಉಲ್ಮಾ ಐ ಹಿಂದ್ ಉಚ್ಚನ್ಯಾಯಾಲಯಕ್ಕೆ!
    • ಕರ್ನಾಟಕದಲ್ಲಿ ಮುಸ್ಲಿಮರಿಲ್ಲದ ಊರಿನಲ್ಲಿ ಹಿಂದೂ ಸಮಾಜದಿಂದ ಮೊಹರಂ ಆಚರಣೆ!
    • ಗ್ಯಾರಂಟಿ ಅಥವಾ ಅಭಿವೃದ್ಧಿ: ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಜನರ ಮುಂದೆ ಆಯ್ಕೆ ಇಟ್ರಾ?
    • 20 ವರ್ಷಗಳ ಬಳಿಕ ರಾಜ್ ಠಾಕ್ರೆ ಹಾಗೂ ಉದ್ದವ್ ಠಾಕ್ರೆ ಸಮ್ಮಿಲನ!
  • Popular Posts

    • 1
      ಯುಕೆ ಪ್ರಧಾನಿ ಪದದಿಂದ ಇಳಿದ ಬಳಿಕ ಖಾಸಗಿ ಉದ್ಯೋಗಕ್ಕೆ ಮರಳಿದ ರಿಶಿ ಸುನಾಕ್!
    • 2
      ಉದಯಪುರ್ ಫೈಲ್ಸ್ ಸಿನೆಮಾಗೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಕಾರ!
    • 3
      ಚರ್ಚಿನಲ್ಲಿ ಪ್ರಾರ್ಥನೆ: ಟಿಟಿಡಿ ಅಧಿಕಾರಿ ಸಸ್ಪೆಂಡ್!
    • 4
      ಹೇರ್ ಪಿನ್ ಹಾಗೂ ಪಾಕೆಟ್ ಚಾಕು ಬಳಸಿ ಪ್ಲಾಟ್ ಫಾರಂನಲ್ಲಿ ಹೆರಿಗೆ ಮಾಡಿದ ವೈದ್ಯ!
    • 5
      ಅನ್ನಭಾಗ್ಯ ಅಕ್ಕಿ ಸಾಗಿಸಿದ ಮಾಲೀಕರಿಗೆ ಹಣ ಬಾಕಿ.. ರಾಜ್ಯ ಸರಕಾರದ ವಿರುದ್ಧ ಅನಿರ್ದಿಷ್ಟಾವಧಿ ಲಾರಿ ಮುಷ್ಕರ!

  • Privacy Policy
  • Contact
© Tulunadu Infomedia.

Press enter/return to begin your search