• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ವಿಮಾನ ನಿಲ್ದಾಣದಲ್ಲಿ ಸಮೋಸಕ್ಕೆ 350 ರೂಪಾಯಿ ಆದ್ರೆ ಹೇಗೆ ಎಂದ ಸಂಸದ!

Tulunadu News Posted On December 6, 2024
0


0
Shares
  • Share On Facebook
  • Tweet It

ದೇಶದ ಸಂಸತ್ತಿನಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಇಪ್ಪತ್ತು ರೂಪಾಯಿಯ ನೀರಿನ ಬಾಟಲಿಯಿಂದ ಹಿಡಿದು ಸಾವಿರಾರು ಕೋಟಿ ರೂಪಾಯಿಗಳ ಭದ್ರತಾ ವ್ಯವಸ್ಥೆಗಳ ಬಗ್ಗೆಯೂ ಸಂಸದರು ಚರ್ಚೆ ಮಾಡುತ್ತಾರೆ. ಈ ಬಾರಿಯ ಸಂಸತ್ತಿನ ರಾಜ್ಯ ಸಭೆಯಲ್ಲಿ ಆಮ್ ಆದ್ಮಿ ಪಕ್ಷದ ಸಂಸದ, ನಟಿ ಪರಿಣಿತಿ ಚೋಪ್ರಾ ಪತಿ ರಾಘವ್ ಚಡ್ಡಾ ವಿಮಾನ ನಿಲ್ದಾಣದಲ್ಲಿ ಆಹಾರ ಮತ್ತು ಪಾನೀಯಗಳ ಬೆಲೆಗಳ ಬಗ್ಗೆ ಧ್ವನಿ ಎತ್ತಿದ್ದಾರೆ.

ಹೊರಗೆ 20 ರೂಪಾಯಿಗಳಿಗೆ ಸಿಗುವ ನೀರಿನ ಬಾಟಲಿಗೆ ವಿಮಾನ ನಿಲ್ದಾಣದಲ್ಲಿ ನೂರು ರೂಪಾಯಿ ಮೌಲ್ಯ ಹಾಕಲಾಗುತ್ತದೆ. ಇನ್ನು ಒಂದು ಕಪ್ ಟೀ ಬೇಕಾದರೆ 250 ರೂಪಾಯಿ ನೀಡಬೇಕು, ಒಂದು ಸಮೋಸಕ್ಕೆ 350 ರೂಪಾಯಿ ಚಾರ್ಜ್ ಮಾಡುತ್ತಾರೆ. ಹೀಗಿರುವಾಗ ವಿಮಾನ ನಿಲ್ದಾಣದಲ್ಲಿ ವಿಮಾನಕ್ಕೆ ಕಾಯುವ ಪ್ರಯಾಣಿಗ ಇಷ್ಟು ದುಬಾರಿ ಬೆಲೆಯನ್ನು ಆಹಾರ ಸೇವಿಸಲು ಹಿಂದೇಟು ಹಾಕುತ್ತಾನೆ. ಇನ್ನು ಆತ ಕೇವಲ ಅಲ್ಲಿ ಸಿಗುವ ನೀರನ್ನು ಮಾತ್ರ ಕುಡಿದು ಸಮಯ ಕಳೆಯಬೇಕಾಗುತ್ತದೆ. ಇದನ್ನು ಸರಕಾರ ಗಮನಿಸಬೇಕು. ಈ ಮೂಲಕ ಜನಸಾಮಾನ್ಯರಿಗೆ ಈ ಹೊರೆ ಆಗದ ರೀತಿಯಲ್ಲಿ ನೋಡಬೇಕು ಎಂದು ಆಗ್ರಹಿಸಿದ್ದಾರೆ.

ಸಾಮಾನ್ಯವಾಗಿ ವಿಮಾನದಲ್ಲಿ ಪ್ರಯಾಣಿಸುವವರೆಲ್ಲರೂ ಶ್ರೀಮಂತರು ಎಂಬ ಭಾವನೆ ಎಲ್ಲರಲ್ಲಿಯೂ ಇದೆ. ಅದು ಪೂರ್ಣ ಸುಳ್ಳಲ್ಲ, ಹಾಗಂತ ಎಲ್ಲರೂ ಶ್ರೀಮಂತರೂ ಅಲ್ಲ. ಇನ್ನು ವಿಮಾನ ನಿಲ್ದಾಣದಲ್ಲಿ ಸಿಗುವ ಟೀ, ಸಮೂಸಕ್ಕೆ ಅಷ್ಟು ಬೆಲೆ ಕೊಡುವಷ್ಟು ಅದು ಶ್ರೇಷ್ಟವೂ ಅಲ್ಲ. ಆದ್ದರಿಂದ ಈ ಬೆಲೆ ನಿಗದಿಗೆ ಒಂದು ಮಾನದಂಡ ಅನುಸರಿಸಬೇಕಾಗಿದೆ. ಒಂದು ನಿರ್ದಿಷ್ಟ ಬೆಲೆಗಿಂತ ಜಾಸ್ತಿ ವಸೂಲಿ ಮಾಡಬಾರದು ಎಂದು ನಿಯಮ ತಂದರೆ ಆಗ ಮಧ್ಯಮ ವರ್ಗದವರು ಕೂಡ ಅನಿವಾರ್ಯವಾದ್ದಲ್ಲಿ ವಿಮಾನ ನಿಲ್ದಾಣದಲ್ಲಿ ಸಿಗುವ ಆಹಾರ ವಸ್ತುಗಳನ್ನು ಸೇವಿಸಲು ಸಾಧ್ಯವಾಗುತ್ತದೆ. ಇನ್ನು ಈ ಮಾನದಂಡವನ್ನು ಮಲ್ಟಿಫ್ಲೆಕ್ಸ್ ನಲ್ಲಿಯೂ ಅಳವಡಿಸಿದರೆ ಅಲ್ಲಿಯೂ ಪಾಪ್ ಕಾರ್ನ್ , ಕೋಲ್ಡ್ ಡಿಂಕ್ರ್ಸ್ ಬೆಲೆಯೂ ಕೈಗೆಟಕಲು ಸಾಧ್ಯವಿದೆ.

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?

  • Privacy Policy
  • Contact
© Tulunadu Infomedia.

Press enter/return to begin your search